/newsfirstlive-kannada/media/post_attachments/wp-content/uploads/2024/08/Rohit_Gambhir.jpg)
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಇಂದಿನಿಂದ ಕಿಕ್ ಸ್ಟಾರ್ಟ್ ಸಿಗಲಿದೆ. ಟೀಮ್ ಇಂಡಿಯಾದ ಅಭಿಯಾನ ಇಂದಿನಿಂದ ಆರಂಭವಾಗಲಿದೆ. ಐಸಿಸಿ ಟ್ರೋಫಿ ಗೆಲುವಿನ ಮೇಲೆ ಚಿತ್ತ ನೆಟ್ಟಿರುವ ಬ್ಲೂ ಬಾಯ್ಸ್ ದುಬೈನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿದ್ದಾರೆ. ಅಭಿಮಾನಿಗಳು ಕೂಡ ಟೂರ್ನಿಯಲ್ಲಿ ಭಾರತ ತಂಡದ ಆಟ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಈ ಎಕ್ಸೈಟ್ಮೆಂಟ್ ನಡುವೆ ಆಘಾತದ ಸುದ್ದಿ ಹೊರ ಬಿದ್ದಿದೆ.
ಮನೆಯೊಂದು 2 ಬಾಗಿಲು.. ರೋಹಿತ್-ಗಂಭೀರ್ ಮುನಿಸು.!
ಮಹತ್ವದ ಚಾಂಪಿಯನ್ಸ್ ಟ್ರೋಫಿಗೆ ಕೌಂಟ್ಡೌನ್ ಶುರುವಾಗಿರೋವಾಗ್ಲೇ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಆತಂಕದ ಸುದ್ದಿ ಹೊರಬಿದ್ದಿದೆ. ಆಸ್ಟ್ರೇಲಿಯಾ ಪ್ರವಾಸದ ಬಳಿಕ ನಡೆದ ಸರಣಿ ಮೀಟಿಂಗ್ನಲ್ಲಿ ಎಲ್ಲಾ ಸಮಸ್ಯೆ ಬಗೆಹರಿದಿಲ್ಲ ಅನ್ನೋದು ರಿವೀಲ್ ಆಗಿದೆ. ಟೀಮ್ ಸೆಲೆಕ್ಷನ್ ವಿಚಾರದಲ್ಲಿ ಕೋಚ್ ಗೌತಮ್ ಗಂಭೀರ್, ಕ್ಯಾಪ್ಟನ್ ರೋಹಿತ್ ಶರ್ಮಾ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದು, ಮಾತಿನ ಚಕಮಕಿ ನಡೆದಿದೆ ಅನ್ನೋ ಆತಂಕದ ಸುದ್ದಿ ರಿವೀಲ್ ಆಗಿದೆ.
ಕುಲ್ದೀಪ್ ಯಾದವ್ ಪರ ಕ್ಯಾಪ್ಟನ್ ರೋಹಿತ್ ಬ್ಯಾಟಿಂಗ್.!
ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೇ ಇರದ ವರುಣ್ ಚಕ್ರವರ್ತಿ, ಇದೀಗ ಯಶಸ್ವಿ ಜೈಸ್ವಾಲ್ನ ಸೈಡ್ ಹೊಡೆದು ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಐವರು ಸ್ಪಿನ್ನರ್ಗಳು ತಂಡದಲ್ಲಿದ್ದು, ಇವರಲ್ಲಿ ಯಾರಿಗೆ ಪ್ಲೇಯಿಂಗ್-11 ಟಿಕೆಟ್ ನೀಡಬೇಕು ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡ್ತಿದೆ. ಈ ವಿಚಾರದಲ್ಲಿ ಕ್ಯಾಪ್ಟನ್, ಕೋಚ್ ಭಿನ್ನ ನಿಲುವು ತಳೆದಿದ್ದು ವರುಣ್ ಪರ ಗಂಭೀರ್ ಬ್ಯಾಟ್ ಬೀಸ್ತಾ ಇದ್ರೆ, ಕುಲ್ದೀಪ್ ಆಡಿಸಲು ರೋಹಿತ್ ಶರ್ಮಾ ಮುಂದಾಗಿದ್ದಾರೆ.
ಸೆಲೆಕ್ಷನ್ ಡಿಬೆಟ್ ಅಷ್ಟೇ ನಡೆದಿದ್ರೆ, ಆತಂಕಪಡುವಂತದ್ದು ಏನೂ ಇರಲಿಲ್ಲ. ಆದ್ರೆ, ಈ ಸೆಲೆಕ್ಷನ್ ವಿಚಾರದಲ್ಲಿ ಇಬ್ಬರ ನಡುವೆ ವಾದ ವಿವಾದ ನಡೆದಿದೆ. ಇಬ್ಬರೂ ಕೂಡ ಪಟ್ಟು ಸಡಿಲಿಸಿಲ್ಲ. ಇಬ್ಬರ ನಡುವಿನ ಈ ಭಿನ್ನಾಭಿಪ್ರಾಯ ಡ್ರೆಸ್ಸಿಂಗ್ ರೂಮ್ನ ವಾತಾವರಣವನ್ನೇ ಕೆಡಿಸಿದೆ ಅನ್ನೋ ಸುದ್ದಿ ಸದ್ಯ ಹರಿದಾಡ್ತಿದೆ.
ಕೋಚ್ ಗಂಭೀರ್ ವಿರುದ್ಧ ಸಿಡಿದೆದ್ದ ರಿಷಬ್ ಪಂತ್.!
ರೋಹಿತ್ ಶರ್ಮಾ VS ಗೌತಮ್ ಗಂಭೀರ್, ಮಾತ್ರವಲ್ಲ.. ಗೌತಮ್ ಗಂಭೀರ್ ಹಾಗೂ ರಿಷಬ್ ಪಂತ್ ನಡುವಿನ ಬ್ಯಾಟಲ್ ಕೂಡ ಟೀಮ್ ಇಂಡಿಯಾದಲ್ಲಿ ನಡೀತಿದೆ. ಕೆ.ಎಲ್ ರಾಹುಲ್ ನಮ್ಮ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಎಂದಿರೋ ಗೌತಮ್ ಗಂಭೀರ್ ಮೇಲೆ ಪಂತ್ ಸಿಟ್ಟಾಗಿದ್ದಾರೆ. ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ರೂ ತನಗೆ ಏಕದಿನ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ಪಂತ್ಗೆ ಅಸಮಾಧಾನವಿದೆ. ಈ ಬಗ್ಗೆಯೂ ನನ್ನೊಂದಿಗೆ ಮಾತನಾಡದೇ ಬಹಿರಂಗವಾಗಿ ಕೆ.ಎಲ್ ರಾಹುಲ್ ನಮ್ಮ ಫಸ್ಟ್ ಚಾಯ್ಸ್ ಕೀಪರ್ ಎಂದು ಘೋಷಿಸಿರುವ ಗಂಭೀರ್ ಮೇಲೆ ಪಂತ್ ಸಿಟ್ಟಾಗಿದ್ದಾರೆ ಅನ್ನೋದು ತಂಡದ ಇನ್ಸೈಡ್ ಮಾಹಿತಿಯಾಗಿದೆ.
ಇದನ್ನೂ ಓದಿ:SSLC, PUC ಪರೀಕ್ಷೆಗೆ ಭರ್ಜರಿ ತಯಾರಿ.. ಶಿಕ್ಷಣ ಸಚಿವರಿಂದ ಇಂದು ಮಹತ್ವದ ಮಾಹಿತಿ
ಹ್ಯಾಪಿ ಡ್ರೆಸ್ಸಿಂಗ್ ರೂಮ್ ಎಲ್ಲಿಂದ ಸಾಧ್ಯ.?
ಅಂದ್ಹಾಗೆ ಪಂತ್ ಆಯ್ಕೆ ವಿಚಾರದಲ್ಲೂ ಕ್ಯಾಪ್ಟನ್, ಕೋಚ್ ನಡುವೆ ಭಿನ್ನಾಭಿಪ್ರಾಯವಿದೆ. ರೋಹಿತ್ ಪಂತ್ ಬೆಂಬಲಕ್ಕೆ ನಿಂತಿದ್ರೆ, ಕೋಚ್ ಗಂಭೀರ್ ಕೆ.ಎಲ್ ರಾಹುಲ್ ಪರ ಇದ್ದಾರೆ. ಈಗ ಈ ವಿಚಾರದಲ್ಲಿ ಪಂತ್ ಕೂಡ ಸಿಟ್ಟಾಗಿದ್ದಾರೆ. ಅಸಮಾಧಾನ ಭುಗಿಲೆದ್ದ ಮೇಲೆ HAPPY ಡ್ರೆಸ್ಸಿಂಗ್ ರೂಮ್ ಎಲ್ಲಿಂದ ಸಾಧ್ಯ.?
ಪಂತ್ ಆಯ್ಕೆ ವಿಚಾರದಲ್ಲಿ ರೋಹಿತ್ ಶರ್ಮಾ ಈಗಾಗಾಲೇ ಹಿನ್ನಡೆ ಅನುಭವಿಸಿದ್ದಾರೆ. ಗಂಭೀರ್ ಮಾತೇ ಫೈನಲ್ ಆಗಿದೆ. ಇದೀಗ ಕುಲ್ದೀಪ್, ವರುಣ್ ಚಕ್ರವರ್ತಿ ವಿಚಾರಕ್ಕೆ ಹಗ್ಗಜಗ್ಗಾಟ ಶುರುವಾಗಿದೆ. ಈ ಫೈಟ್ ಎಲ್ಲಿಗೆ ಹೋಗಿ ನಿಲ್ಲುತ್ತೆ.? ಈ ಅಸಮಾಧಾನ ಆನ್ಫೀಲ್ಡ್ ಪರ್ಫಾಮೆನ್ಸ್ ಮೇಲೆ ಎಷ್ಟು ಪರಿಣಾಮ ಬೀರುತ್ತೆ.? ಅನ್ನೋ ಪ್ರಶ್ನೆಗಳು ಸದ್ಯ ಕ್ರಿಕೆಟ್ ವಲಯವನ್ನ ಕಾಡ್ತಿವೆ. ಎಲ್ಲಾ ಸರಿಯಾದ್ರೆ ಓಕೆ. ಇಲ್ಲದಿದ್ರೆ ಐಸಿಸಿ ಟೂರ್ನಿಯಲ್ಲಿ ಹಿನ್ನಡೆ ತಪ್ಪಿದ್ದಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ