ನಿಸ್ವಾರ್ಥಿ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಸಿಕ್ಕಿದ್ದೇ ಪುಣ್ಯನಾ?
ಪ್ಲೇಯರ್ಸ್ಗೆ ಸದಾ ಬೆಂಬಲ, ಬೇರೆಯವರ ಸಕ್ಸಸ್ಗೆ ಸಖತ್ ಸಂಭ್ರಮ
ದಾಖಲೆಗಳಿಗಾಗಿ ಆಡುವ ಜಾಯಮಾನ ರೋಹಿತ್ದು ಅಲ್ಲವೇ ಅಲ್ಲ
ಟೀಮ್ ಇಂಡಿಯಾದಲ್ಲಿ ಯಂಗ್ಸ್ಟರ್ಸ್ ದರ್ಬಾರ್ ಜೋರಾಗಿದೆ. ಸೀನಿಯರ್ಗಳೇ ನಾಚುವಂತಹ ಪ್ರದರ್ಶನ ನೀಡ್ತಿದ್ದಾರೆ. ಇದಕ್ಕೆಲ್ಲ ಕಾರಣ ಕ್ಯಾಪ್ಟನ್ ರೋಹಿತ್ ಶರ್ಮಾ. ಹಿಟ್ಮ್ಯಾನ್ರಂತ ನಾಯಕನನ್ನ ಪಡೆದ ಯಂಗ್ಸ್ಟರ್ಸ್ ನಿಜಕ್ಕೂ ಅದೃಷ್ಟವಂತರು. ಯಾಕೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿರಬಹುದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಎಂ.ಎಸ್ ಧೋನಿ.. ಟೀಮ್ ಇಂಡಿಯಾದ ಹಿರಿಯಣ್ಣನಾಗಿ, ನಾಯಕನಾಗಿ, ಮೆಂಟರ್ ಆಗಿ ತಂಡವನ್ನ ಯಶಸ್ಸಿನ ಉತ್ತುಂಗಕ್ಕೇರಿಸಿದ್ರು. ಸದ್ಯ ಧೋನಿ ನಿರ್ಗಮಿಸಿದ್ದಾರೆ. ಮಾಹಿಯಂತೆ ಎಲ್ಲ ಗುಣಗಳುಳ್ಳ ಮತ್ತೋರ್ವ ಕ್ಯಾಪ್ಟನ್ ಟೀಮ್ ಇಂಡಿಯಾಗೆ ಸಿಕ್ಕಿದ್ದಾರೆ. ಆತ ಮತ್ಯಾರು ಅಲ್ಲ, ರೋಹಿತ್ ಶರ್ಮಾ.
ರೋಹಿತ್ ನಾಯಕತ್ವದಲ್ಲಿ ಯಂಗ್ಸ್ಟರ್ಸ್ ಧಮ್ದಾರ್ ಪ್ರದರ್ಶನ ನೀಡ್ತಿದ್ದಾರೆ. ಯಾಕಂದ್ರೆ, ರೋಹಿತ್ ಎಲ್ಲರಂತೆ ಸಾಮಾನ್ಯ ನಾಯಕನಲ್ಲ. ದಾಖಲೆಗಳಿಗಾಗಿ ಆಡುವ ಜಾಯಮಾನ ರೋಹಿತ್ದ್ ಅಲ್ಲವೇ ಅಲ್ಲ. ನಿಸ್ವಾರ್ಥತೆ ರೋಹಿತ್ರ ಮಹಾಗುಣ. ಬೇರೆಯವರ ಯಶಸ್ಸನ್ನ ಸಂಭ್ರಮಿಸೋದ್ರಲ್ಲಿ ಸದಾ ಮುಂದು. ಹೀಗಾಗಿಯೇ ಹೇಳಿದ್ದು ಯಂಗ್ಸ್ಟರ್ಸ್ ನಿಜಕ್ಕೂ ಅದೃಷ್ಟವಂತರು ಅಂತಾ.
ಜೈಸ್ವಾಲ್ ಸಾಧನೆಗೆ ತಾನೇ ಸಾಧಿಸಿದಷ್ಟು ಸಂಭ್ರಮ..!
ಇಂತಹ ಗುಣ ಎಷ್ಟು ಜನರಲ್ಲಿ ಇದ್ದಿರಬಹುದು ಹೇಳಿ? ರಾಜ್ಕೋಟ್ ಟೆಸ್ಟ್ನ 3ನೇ ದಿನ ಡೇರ್ ಡೆವಿಲ್ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ರು. ಅತ್ತ ಜೈಸ್ವಾಲ್ ಆನ್ ಫೀಲ್ಡ್ನಲ್ಲಿ ಐಕಾನಿಕ್ ಜಂಪಿಂಗ್ ಸ್ಟ್ರೈಲ್ನಲ್ಲಿ ಶತಕದ ಸಂಭ್ರಮದಲ್ಲಿ ಮುಳುಗಿದ್ರೆ, ಇತ್ತ ಡ್ರೆಸ್ಸಿಂಗ್ ರೂಮ್ನಲ್ಲಿ ರೋಹಿತ್ ತಾವೇ ಶತಕ ಸಿಡಿಸಿದಂತೆ ಸಂಭ್ರಮಿಸಿದ್ರು. ದ್ವಿತಕ ಕಂಪ್ಲೀಟ್ ಮಾಡಿದಾಗಲೂ ಹೀಗೆ ಖುಷಿಪಟ್ರು.
ಸರ್ಫರಾಜ್ ರನೌಟಾಗಿದ್ದಕ್ಕೆ ಕ್ಯಾಪ್ ಬಿಸಾಡಿ ಆಕ್ರೋಶ
ಡೆಬ್ಯುಟಂಟ್ ಸರ್ಫರಾಜ್ ಜಡೇಜಾ ಮಾಡಿದ ಎಡವಟ್ಟಿನಿಂದ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿ ರನೌಟಾಗಿದ್ರು. ಸರ್ಫರಾಜ್ ಔಟಾಗ್ತಿದ್ದಂತೆ ಡ್ರೆಸ್ಸಿಂಗ್ ರೂಮ್ನಲ್ಲಿ ಕೂತಿದ್ದ ಕ್ಯಾಪ್ಟನ್ ರೋಹಿತ್ ಕೆರಳಿ ಕೆಂಡವಾದ್ರು. ಧರಿಸಿದ್ದ ಕ್ಯಾಪ್ ಅನ್ನ ಬಿಸಾಡಿ ಆಕ್ರೋಶ ವ್ಯಕ್ರಪಡಿಸಿದ್ರು. ಅಷ್ಟಕ್ಕೂ ಇಲ್ಲಿ ಹಿಟ್ಮ್ಯಾನ್ ಬೇಸರಗೊಳ್ಳುವ ಅವಶ್ಯವಿರಲಿಲ್ಲ. ಆದ್ರೆ, ಸರ್ಫರಾಜ್ಗಾದ ನೋವು ರೋಹಿತ್ಗೆ ಅರ್ಥವಾಗಿತ್ತು.
ತಾನು ಶತಕ ಸಿಡಿಸಿದಾಗ ಸಿಂಪಲ್ ಸೆಲಬ್ರೇಶನ್
ರಾಜ್ಕೋಟ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಭರ್ಜರಿ ಶತಕ ಸಿಡಿಸಿ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರು. ಇಂಗ್ಲೆಂಡ್ ವಿರುದ್ಧ 2 ವರ್ಷಗಳ ನಂತ್ರ ಶತಕ ಹೊಡೆದ್ರೂ, ಸ್ವಲ್ಪವೂ ಅತಿಯಾಗಿ ಸಂಭ್ರಮಿಸಲಿಲ್ಲ. ಸಿಂಪಲ್ ಆಗಿ ಬ್ಯಾಟ್ ಮೇಲೆಕ್ಕೆತ್ತಿ ಖುಷಿಪಟ್ಟರು.
Rohit Sharma congratulated #SarfarazKhan father and Wife before Match!🙏🙏🙏#RohitSharma #TestCricket#INDvsENGTest #selfish #Hitman pic.twitter.com/vLRjSTwvxT
— MB (@mb_barmer) February 15, 2024
ಸರ್ಫರಾಜ್ ಅರ್ಧಶತಕಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮ
ಡೆಬ್ಯುಟಂಟ್ ಸರ್ಫರಾಜ್ಗೆ ಕ್ಯಾಪ್ಟನ್ ರೋಹಿತ್ ಪ್ರತಿ ಹಂತದಲ್ಲ ಬೆಂಬಲವಾಗಿ ನಿಂತರು. ರನೌಟಾದಾಗ ಬೇಸರ ವ್ಯಕ್ತಪಡಿಸಿದ್ದ ರೋಹಿತ್ ಅದೇ ಸರ್ಫರಾಜ್ ಚೊಚ್ಚಲ ಅರ್ಧಶತಕ ಸಿಡಿಸಿದಾಗ ಚಪ್ಪಾಳೆ ಹೊಡೆದು ಹುರಿದುಂಬಿಸಿದ್ರು.
ಯಂಗ್ಸ್ಟರ್ಸ್ ಪಾಲಿನ ಮಾರ್ಗದರ್ಶಕ ರೋಹಿತ್..!
ತನ್ನದ ಚುಕ್ಕಾಣಿ ಹಿಡಿದಿರೋ ರೋಹಿತ್ ಯುವ ಆಟಗಾರರಿಗೆ ಉತ್ತಮ ಗೈಡ್ ನೀಡ್ತಿದ್ದಾರೆ. ಸ್ವಲ್ವವು ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದಲೇ ಅವರನ್ನ ಹುರಿದುಂಬಿಸ್ತಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಟಿಪ್ಸ್ ನೀಡೋದ್ರ ಜೊತೆ ಮಾಡುವ ತಪ್ಪುಗಳನ್ನ ತಿದ್ದುವ ಕೆಲಸ ಮಾಡ್ತಿದ್ದಾರೆ. ಯಂಗ್ಸ್ಟರ್ಸ್ ನಿರ್ಭಯವಾಗಿ ಆಡುವ ಸ್ವಾತಂತ್ರ್ಯ ನೀಡ್ತಾ, ಕ್ರಿಕೆಟ್ ಪ್ರೇಮಿಗಳ ದಿಲ್ ಗೆಲ್ತಿದ್ದಾರೆ. ಇಂತಹ ನಾಯಕರನ್ನ ಪಡೆದ ಯಂಗ್ಸ್ಟರ್ಸ್ ಅದೃಷ್ಟವಂತರೇ ಸರಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಸ್ವಾರ್ಥಿ ರೋಹಿತ್ ಶರ್ಮಾ ಟೀಮ್ ಇಂಡಿಯಾಗೆ ಸಿಕ್ಕಿದ್ದೇ ಪುಣ್ಯನಾ?
ಪ್ಲೇಯರ್ಸ್ಗೆ ಸದಾ ಬೆಂಬಲ, ಬೇರೆಯವರ ಸಕ್ಸಸ್ಗೆ ಸಖತ್ ಸಂಭ್ರಮ
ದಾಖಲೆಗಳಿಗಾಗಿ ಆಡುವ ಜಾಯಮಾನ ರೋಹಿತ್ದು ಅಲ್ಲವೇ ಅಲ್ಲ
ಟೀಮ್ ಇಂಡಿಯಾದಲ್ಲಿ ಯಂಗ್ಸ್ಟರ್ಸ್ ದರ್ಬಾರ್ ಜೋರಾಗಿದೆ. ಸೀನಿಯರ್ಗಳೇ ನಾಚುವಂತಹ ಪ್ರದರ್ಶನ ನೀಡ್ತಿದ್ದಾರೆ. ಇದಕ್ಕೆಲ್ಲ ಕಾರಣ ಕ್ಯಾಪ್ಟನ್ ರೋಹಿತ್ ಶರ್ಮಾ. ಹಿಟ್ಮ್ಯಾನ್ರಂತ ನಾಯಕನನ್ನ ಪಡೆದ ಯಂಗ್ಸ್ಟರ್ಸ್ ನಿಜಕ್ಕೂ ಅದೃಷ್ಟವಂತರು. ಯಾಕೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿರಬಹುದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಎಂ.ಎಸ್ ಧೋನಿ.. ಟೀಮ್ ಇಂಡಿಯಾದ ಹಿರಿಯಣ್ಣನಾಗಿ, ನಾಯಕನಾಗಿ, ಮೆಂಟರ್ ಆಗಿ ತಂಡವನ್ನ ಯಶಸ್ಸಿನ ಉತ್ತುಂಗಕ್ಕೇರಿಸಿದ್ರು. ಸದ್ಯ ಧೋನಿ ನಿರ್ಗಮಿಸಿದ್ದಾರೆ. ಮಾಹಿಯಂತೆ ಎಲ್ಲ ಗುಣಗಳುಳ್ಳ ಮತ್ತೋರ್ವ ಕ್ಯಾಪ್ಟನ್ ಟೀಮ್ ಇಂಡಿಯಾಗೆ ಸಿಕ್ಕಿದ್ದಾರೆ. ಆತ ಮತ್ಯಾರು ಅಲ್ಲ, ರೋಹಿತ್ ಶರ್ಮಾ.
ರೋಹಿತ್ ನಾಯಕತ್ವದಲ್ಲಿ ಯಂಗ್ಸ್ಟರ್ಸ್ ಧಮ್ದಾರ್ ಪ್ರದರ್ಶನ ನೀಡ್ತಿದ್ದಾರೆ. ಯಾಕಂದ್ರೆ, ರೋಹಿತ್ ಎಲ್ಲರಂತೆ ಸಾಮಾನ್ಯ ನಾಯಕನಲ್ಲ. ದಾಖಲೆಗಳಿಗಾಗಿ ಆಡುವ ಜಾಯಮಾನ ರೋಹಿತ್ದ್ ಅಲ್ಲವೇ ಅಲ್ಲ. ನಿಸ್ವಾರ್ಥತೆ ರೋಹಿತ್ರ ಮಹಾಗುಣ. ಬೇರೆಯವರ ಯಶಸ್ಸನ್ನ ಸಂಭ್ರಮಿಸೋದ್ರಲ್ಲಿ ಸದಾ ಮುಂದು. ಹೀಗಾಗಿಯೇ ಹೇಳಿದ್ದು ಯಂಗ್ಸ್ಟರ್ಸ್ ನಿಜಕ್ಕೂ ಅದೃಷ್ಟವಂತರು ಅಂತಾ.
ಜೈಸ್ವಾಲ್ ಸಾಧನೆಗೆ ತಾನೇ ಸಾಧಿಸಿದಷ್ಟು ಸಂಭ್ರಮ..!
ಇಂತಹ ಗುಣ ಎಷ್ಟು ಜನರಲ್ಲಿ ಇದ್ದಿರಬಹುದು ಹೇಳಿ? ರಾಜ್ಕೋಟ್ ಟೆಸ್ಟ್ನ 3ನೇ ದಿನ ಡೇರ್ ಡೆವಿಲ್ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ರು. ಅತ್ತ ಜೈಸ್ವಾಲ್ ಆನ್ ಫೀಲ್ಡ್ನಲ್ಲಿ ಐಕಾನಿಕ್ ಜಂಪಿಂಗ್ ಸ್ಟ್ರೈಲ್ನಲ್ಲಿ ಶತಕದ ಸಂಭ್ರಮದಲ್ಲಿ ಮುಳುಗಿದ್ರೆ, ಇತ್ತ ಡ್ರೆಸ್ಸಿಂಗ್ ರೂಮ್ನಲ್ಲಿ ರೋಹಿತ್ ತಾವೇ ಶತಕ ಸಿಡಿಸಿದಂತೆ ಸಂಭ್ರಮಿಸಿದ್ರು. ದ್ವಿತಕ ಕಂಪ್ಲೀಟ್ ಮಾಡಿದಾಗಲೂ ಹೀಗೆ ಖುಷಿಪಟ್ರು.
ಸರ್ಫರಾಜ್ ರನೌಟಾಗಿದ್ದಕ್ಕೆ ಕ್ಯಾಪ್ ಬಿಸಾಡಿ ಆಕ್ರೋಶ
ಡೆಬ್ಯುಟಂಟ್ ಸರ್ಫರಾಜ್ ಜಡೇಜಾ ಮಾಡಿದ ಎಡವಟ್ಟಿನಿಂದ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿ ರನೌಟಾಗಿದ್ರು. ಸರ್ಫರಾಜ್ ಔಟಾಗ್ತಿದ್ದಂತೆ ಡ್ರೆಸ್ಸಿಂಗ್ ರೂಮ್ನಲ್ಲಿ ಕೂತಿದ್ದ ಕ್ಯಾಪ್ಟನ್ ರೋಹಿತ್ ಕೆರಳಿ ಕೆಂಡವಾದ್ರು. ಧರಿಸಿದ್ದ ಕ್ಯಾಪ್ ಅನ್ನ ಬಿಸಾಡಿ ಆಕ್ರೋಶ ವ್ಯಕ್ರಪಡಿಸಿದ್ರು. ಅಷ್ಟಕ್ಕೂ ಇಲ್ಲಿ ಹಿಟ್ಮ್ಯಾನ್ ಬೇಸರಗೊಳ್ಳುವ ಅವಶ್ಯವಿರಲಿಲ್ಲ. ಆದ್ರೆ, ಸರ್ಫರಾಜ್ಗಾದ ನೋವು ರೋಹಿತ್ಗೆ ಅರ್ಥವಾಗಿತ್ತು.
ತಾನು ಶತಕ ಸಿಡಿಸಿದಾಗ ಸಿಂಪಲ್ ಸೆಲಬ್ರೇಶನ್
ರಾಜ್ಕೋಟ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಭರ್ಜರಿ ಶತಕ ಸಿಡಿಸಿ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರು. ಇಂಗ್ಲೆಂಡ್ ವಿರುದ್ಧ 2 ವರ್ಷಗಳ ನಂತ್ರ ಶತಕ ಹೊಡೆದ್ರೂ, ಸ್ವಲ್ಪವೂ ಅತಿಯಾಗಿ ಸಂಭ್ರಮಿಸಲಿಲ್ಲ. ಸಿಂಪಲ್ ಆಗಿ ಬ್ಯಾಟ್ ಮೇಲೆಕ್ಕೆತ್ತಿ ಖುಷಿಪಟ್ಟರು.
Rohit Sharma congratulated #SarfarazKhan father and Wife before Match!🙏🙏🙏#RohitSharma #TestCricket#INDvsENGTest #selfish #Hitman pic.twitter.com/vLRjSTwvxT
— MB (@mb_barmer) February 15, 2024
ಸರ್ಫರಾಜ್ ಅರ್ಧಶತಕಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮ
ಡೆಬ್ಯುಟಂಟ್ ಸರ್ಫರಾಜ್ಗೆ ಕ್ಯಾಪ್ಟನ್ ರೋಹಿತ್ ಪ್ರತಿ ಹಂತದಲ್ಲ ಬೆಂಬಲವಾಗಿ ನಿಂತರು. ರನೌಟಾದಾಗ ಬೇಸರ ವ್ಯಕ್ತಪಡಿಸಿದ್ದ ರೋಹಿತ್ ಅದೇ ಸರ್ಫರಾಜ್ ಚೊಚ್ಚಲ ಅರ್ಧಶತಕ ಸಿಡಿಸಿದಾಗ ಚಪ್ಪಾಳೆ ಹೊಡೆದು ಹುರಿದುಂಬಿಸಿದ್ರು.
ಯಂಗ್ಸ್ಟರ್ಸ್ ಪಾಲಿನ ಮಾರ್ಗದರ್ಶಕ ರೋಹಿತ್..!
ತನ್ನದ ಚುಕ್ಕಾಣಿ ಹಿಡಿದಿರೋ ರೋಹಿತ್ ಯುವ ಆಟಗಾರರಿಗೆ ಉತ್ತಮ ಗೈಡ್ ನೀಡ್ತಿದ್ದಾರೆ. ಸ್ವಲ್ವವು ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದಲೇ ಅವರನ್ನ ಹುರಿದುಂಬಿಸ್ತಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಟಿಪ್ಸ್ ನೀಡೋದ್ರ ಜೊತೆ ಮಾಡುವ ತಪ್ಪುಗಳನ್ನ ತಿದ್ದುವ ಕೆಲಸ ಮಾಡ್ತಿದ್ದಾರೆ. ಯಂಗ್ಸ್ಟರ್ಸ್ ನಿರ್ಭಯವಾಗಿ ಆಡುವ ಸ್ವಾತಂತ್ರ್ಯ ನೀಡ್ತಾ, ಕ್ರಿಕೆಟ್ ಪ್ರೇಮಿಗಳ ದಿಲ್ ಗೆಲ್ತಿದ್ದಾರೆ. ಇಂತಹ ನಾಯಕರನ್ನ ಪಡೆದ ಯಂಗ್ಸ್ಟರ್ಸ್ ಅದೃಷ್ಟವಂತರೇ ಸರಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ