newsfirstkannada.com

ಕ್ಯಾಪ್ಟನ್​ ಖಡಕ್​ ಹೇಳಿಕೆಗೆ ಯಂಗ್​ ಪ್ಲೇಯರ್ಸ್​ ಎದೆಯಲ್ಲಿ ಢವ.. ಢವ; T20 ವರ್ಲ್ಡ್​​​ಕಪ್​ ಬಗ್ಗೆ ರೋಹಿತ್ ಹೇಳಿದ್ದೇನು?

Share :

Published January 20, 2024 at 2:44pm

    ಖುಷಿಯಲ್ಲಿದ್ದ ಆಟಗಾರರ ಎದೆಯಲ್ಲಿ ನಡುಕ ಹುಟ್ಟಿಸಿದ ರೋಹಿತ್

    ಈಗಲೇ ಟಿ20 ವಿಶ್ವಕಪ್​ ತಂಡದ ಆಯ್ಕೆ ಚರ್ಚೆಗಳು ಗರಿಗೆದರಿವೆಯಾ?

    ತಂಡದ ಆಯ್ಕೆ ವಿಚಾರದಲ್ಲಿ ಶಾಕ್​ ಕೊಟ್ಟಿರುವ ರೋಹಿತ್​ ಶರ್ಮಾ

ಅಪ್ಘಾನಿಸ್ತಾನ ಎದುರಿನ ಟಿ20 ಸರಣಿ ಮುಗಿದ ಬೆನ್ನಲ್ಲೇ, ವಿಶ್ವಕಪ್​​ ತಂಡದ ಆಯ್ಕೆಯ ಕಸರತ್ತು ಜೋರಾಗಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ನೀಡಿರುವ ಒಂದೇ ಒಂದು ಖಡಕ್​ ಹೇಳಿಕೆ ಸರಣಿಯನ್ನ ಕ್ಲೀನ್​ಸ್ವೀಪ್​ ಮಾಡಿದ ಖುಷಿಯಲ್ಲಿದ್ದ ಆಟಗಾರರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಷ್ಟಕ್ಕೂ ರೋಹಿತ್​ ಶರ್ಮಾ ಹೇಳಿರೋದೇನು.?

ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಮುಂದಿದ್ದ ಏಕೈಕ ಟಿ20 ಸರಣಿ ಅಂತ್ಯ ಕಂಡಿದೆ. ಅತ್ಯದ್ಭುತ ಪರ್ಫಾಮೆನ್ಸ್​ ನೀಡಿದ ರೋಹಿತ್​ ಶರ್ಮಾ ಪಡೆ ಸರಣಿಯನ್ನ ಕ್ಲೀನ್​​ಸ್ವೀಪ್​ ಮಾಡಿ ಬೀಗಿದೆ. ಇದ್ರ ಬೆನ್ನಲ್ಲೇ, ಟಿ20 ವಿಶ್ವಕಪ್​ ತಂಡದ ಆಯ್ಕೆಯ ಚರ್ಚೆಗಳು ಗರಿಗೆದರಿವೆ. ಈ ಬಗ್ಗೆ ತುಟಿ ಬಿಚ್ಚಿರುವ ಕ್ಯಾಪ್ಟನ್​ ರೋಹಿತ್​, ಆಟಗಾರರ ಎದೆಯಲ್ಲಿ ನಡುಕ ಹುಟ್ಟುವಂತಾ ಹೇಳಿಕೆ ನೀಡಿದ್ದಾರೆ.

ಕಮ್​ಬ್ಯಾಕ್​ ಬಳಿಕ ಬದಲಾಯ್ತು ರೋಹಿತ್​ ವರಸೆ.!

14 ತಿಂಗಳ ಬಳಿಕ ಟಿ20 ಸೆಟಪ್​ಗೆ ಕಮ್​ಬ್ಯಾಕ್​ ಮಾಡಿರೋ ರೋಹಿತ್​ ಶರ್ಮಾ, ಕಂಪ್ಲೀಟ್​ ಬದಲಾಗಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲೂ ತಂಡದ ಸಾರಥ್ಯ ಕನ್​ಫರ್ಮ್​​ ಆಗ್ತಿದ್ದಂತೆ ಖಡಕ್​ ನಿರ್ಧಾರಗಳನ್ನ ತಳೆಯುತ್ತಿದ್ದಾರೆ. ಅಫ್ಘಾನ್​ ವಿರುದ್ಧದ ಸರಣಿಯ ತಂಡದಿಂದ ಏಕಾಏಕಿ ಶ್ರೇಯಸ್​ ಅಯ್ಯರ್​​, ಇಶಾನ್​ ಕಿಶನ್​ಗೆ ಕೊಕ್​ ಕೊಟ್ಟಿದ್ದು ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.

ಅಫ್ಘಾನ್​ ಸರಣಿಯಲ್ಲಿ ಮುಂಬೈಕರ್​​ ನಯಾ ಅವತಾರ.!

ತಂಡದ ಆಯ್ಕೆಯ ವಿಚಾರದಲ್ಲೇ ಶಾಕ್​ ಕೊಟ್ಟಿದ್ದ ರೋಹಿತ್​ ಶರ್ಮಾ, ಸರಣಿಯಲ್ಲೂ ಅಗ್ರೆಸ್ಸಿವ್​ ಅವತಾರದಲ್ಲೇ ಕಾಣಿಸಿಕೊಂಡ್ರು. ಆನ್​​ಫೀಲ್ಡ್​ನಲ್ಲಿ ರೋಹಿತ್​ ಶರ್ಮಾ ಅಪ್ರೋಚ್​ ಬೇರೆನೇ ಇತ್ತು. 3 ಪಂದ್ಯಗಳಲ್ಲಿ ಕಾಂಬಿನೇಷನ್​ಗಳನ್ನ ಚೆಕ್​ ಮಾಡಿದ ಕ್ಯಾಪ್ಟನ್​, ಆನ್​ಫೀಲ್ಡ್​ನಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ರು. ಮೊದಲ 2 ಪಂದ್ಯದಲ್ಲಿ ಡಕೌಟ್​ ಆದ್ರೂ, 3ನೇ ಪಂದ್ಯದಲ್ಲಿ ಅಗ್ರೆಸ್ಸಿವ್​ ಇಂಟೆಂಟ್​ನಲ್ಲಿ ಬ್ಯಾಟಿಂಗ್​ ನಡೆಸಿ ಉಳಿದ ಆಟಗಾರರಿಗೆ ತನ್ನ ಬ್ಯಾಟಿಂಗ್​ ಮಾಡೋದ್ಹೆಗೆ ಅನ್ನೋ ಪಾಠ ಮಾಡಿದ್ರು.

ಯಾರದ್ದೋ ಖುಷಿಗೆ ತಂಡದ ಆಯ್ಕೆ ಮಾಡಲ್ಲ..!

ಅಫ್ಘಾನ್ ವಿರುದ್ಧದ ರಣರೋಚಕ 3ನೇ ಟಿ20 ಕದನ ಮುಗಿದ ಬೆನ್ನಲ್ಲೇ, ರೋಹಿತ್​ ಶರ್ಮಾ, ತಂಡದ ಬಗ್ಗೆ ಮಾತನಾಡಿದ್ದಾರೆ. ಆಟಗಾರರ ಆಟವನ್ನ ಪ್ರಶಂಸಿಸಿರುವ ಕ್ಯಾಪ್ಟನ್​ ರೋಹಿತ್​, ಇದೇ ಸಮಯದಲ್ಲಿ ವಿಶ್ವಕಪ್​ ತಂಡದ ಬಗ್ಗೆ ತುಟಿ ಬಿಚ್ಚಿದ್ದಾರೆ. ವರ್ಲ್ಡ್​​​ಕಪ್​ ತಂಡದ ಆಯ್ಕೆ ಬಗ್ಗೆ ಮಾತನಾಡಿರೋ ರೋಹಿತ್, ಯಾರದೂ ಖುಷಿಗೆ ತಂಡದ ಆಯ್ಕೆ ಮಾಡಲು ಆಗಲ್ಲ. ಯಾರ ಸ್ಥಾನವೂ ಪರ್ಮನೆಂಟ್​ ಅಲ್ಲ ಎಂದು ನೇರ ಮಾತಲ್ಲಿ ಹೇಳಿದ್ದಾರೆ.

ನಾನು ಮತ್ತೆ ಹೇಳ್ತಾ ಇದ್ದೀನಿ. ನಾನು ಮತ್ತೆ ರಾಹುಲ್​ ಭಾಯ್​, ತಂಡದಲ್ಲಿ ಸ್ಪಷ್ಟತೆಯನ್ನ ಕಾಯ್ದುಕೊಳ್ಳುತ್ತೇವೆ. ತಂಡದಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗಬೇಕು. ಪರ್ಫಾಮ್​ ಮಾಡಿದ್ರೂ ಆಟಗಾರರನ್ನ ಡ್ರಾಪ್​ ಮಾಡಿದ್ರೆ ಬೇಸರ ಆಗುತ್ತೆ. ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವಿಲ್ಲ. ನಾನು ನಾಯಕನಾಗಿ ಕಲಿತಿರೋದು ಏನಂದ್ರೆ, 15 ಜನರನ್ನ ಸಂತೋಷ ಪಡಿಸಲು ಸಾಧ್ಯವಿಲ್ಲ. 15ರಲ್ಲಿ 11 ಜನ ಆಡಿ 4 ಜನ ಹೊರಗೆ ಕುಳಿತಿರ್ತಾರೆ. ಅವರೂ ಕೇಳ್ತಾರೆ ನಾವು ಯಾವಾಗ ಆಡ್ತೀವಿ ಅಂತಾ. ಎಲ್ಲರನ್ನ ಖುಷಿಪಡಿಸಲು ಸಾಧ್ಯವಿಲ್ಲ ಅನ್ನೋದು. ಹೀಗಾಗಿ ತಂಡಕ್ಕೆ ಏನು ಅಗತ್ಯವೋ ಅದನ್ನ ಫೋಕಸ್​ ಮಾಡಬೇಕು’

ರೋಹಿತ್​ ಶರ್ಮಾ, ನಾಯಕ

8-10 ಆಟಗಾರರ ಹೆಸರು ಮಾತ್ರ ತಲೆಯಲ್ಲಿದೆ.!

ವೆಸ್ಟ್ ಇಂಡೀಸ್​​ ಹಾಗೂ ಅಮೆರಿಕದಲ್ಲಿ ನಡೆಯೋ ಟಿ20 ವಿಶ್ವಕಪ್​ ಟೂರ್ನಿಗೆ ಇನ್ನೂ ತಂಡದ ಫೈನಲ್​ ಆಗಿಲ್ಲ ಅನ್ನೋದನ್ನೂ ರೋಹಿತ್​ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಕೇವಲ 8ರಿಂದ 10 ಆಟಗಾರರ ಹೆಸರು ಮಾತ್ರ ತಲೆಯಲ್ಲಿದೆ ಎಂದಿರೋ ಹಿಟ್​ಮ್ಯಾನ್​​, ಪ್ಲೇಯಿಂಗ್​​ ಕಂಡೀಷನ್ಸ್​ ಆಧಾರದಲ್ಲಿ ಉಳಿದವರ ಆಯ್ಕೆ ಎಂಬ ಸ್ಪಷ್ಟನೆ ನೀಡಿದ್ದಾರೆ.

ನಾವು ಇನ್ನೂ 15 ಆಟಗಾರರ ವಿಶ್ವಕಪ್​ ತಂಡವನ್ನ ಫೈನಲ್​ ಮಾಡಿಲ್ಲ. ಆದ್ರೆ, ನಾವು ಆಡಿಸೋ 8-10 ಆಟಗಾರರ ಹೆಸರು ತಲೆಯಲ್ಲಿದೆ. ಯಾರು ಆಡ್ತಾರೆ, ಯಾರು ಅಡಲ್ಲ ಅಂತಾ ಗೊತ್ತಿದೆ. ನಾವು ಪ್ರಯಾಣಿಸುವ​ ಮಾಡುವ ಕಂಡಿಷನ್ಸ್​ಗೆ​ ತಕ್ಕಂತೆ ಕಾಂಬಿನೇಷನ್​ ಸೆಟ್​​ ಮಾಡಬೇಕಾಗುತ್ತದೆ. ವೆಸ್ಟ್​ ಇಂಡೀಸ್​ನಲ್ಲಿ ಸ್ಲೋ ಕಂಡಿಷನ್ಸ್​ ಇರುತ್ತೆ. ಅದಕ್ಕೆ ತಕ್ಕಂತೆ ತಂಡದ ಆಯ್ಕೆ ಮಾಡ್ತಿವಿ.

ರೋಹಿತ್​ ಶರ್ಮಾ, ನಾಯಕ

ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಜ್ಜಾಗ್ತಿದ್ದಾರೆ ಅನ್ನೋದು ಅವರ ಮಾತುಗಳಲ್ಲೇ ಸ್ಪಷ್ಟವಾಗಿ ಗೊತ್ತಾಗ್ತಿದೆ. ಜೊತೆಗೆ ಇದೇ ಮಾತುಗಳು ಸ್ಥಾನದ ನಿರೀಕ್ಷೆಯಲ್ಲಿದ್ದ ಆಟಗಾರರಲ್ಲಿ ಢವ ಢವ ಹೆಚ್ಚಿಸಿದೆ. ಟ್ರೋಫಿ ಗೆಲ್ಲಲು ಬ್ಲ್ಯೂಪ್ರಿಂಟ್​ ರೂಪಿಸ್ತಿರೋ ಕ್ಯಾಪ್ಟನ್​, ಯಾವೆಲ್ಲ ಆಟಗಾರರಿಗೆ ಮಣೆಹಾಕ್ತಾರೆ​ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ಯಾಪ್ಟನ್​ ಖಡಕ್​ ಹೇಳಿಕೆಗೆ ಯಂಗ್​ ಪ್ಲೇಯರ್ಸ್​ ಎದೆಯಲ್ಲಿ ಢವ.. ಢವ; T20 ವರ್ಲ್ಡ್​​​ಕಪ್​ ಬಗ್ಗೆ ರೋಹಿತ್ ಹೇಳಿದ್ದೇನು?

https://newsfirstlive.com/wp-content/uploads/2024/01/ROHIT_RINKU.jpg

    ಖುಷಿಯಲ್ಲಿದ್ದ ಆಟಗಾರರ ಎದೆಯಲ್ಲಿ ನಡುಕ ಹುಟ್ಟಿಸಿದ ರೋಹಿತ್

    ಈಗಲೇ ಟಿ20 ವಿಶ್ವಕಪ್​ ತಂಡದ ಆಯ್ಕೆ ಚರ್ಚೆಗಳು ಗರಿಗೆದರಿವೆಯಾ?

    ತಂಡದ ಆಯ್ಕೆ ವಿಚಾರದಲ್ಲಿ ಶಾಕ್​ ಕೊಟ್ಟಿರುವ ರೋಹಿತ್​ ಶರ್ಮಾ

ಅಪ್ಘಾನಿಸ್ತಾನ ಎದುರಿನ ಟಿ20 ಸರಣಿ ಮುಗಿದ ಬೆನ್ನಲ್ಲೇ, ವಿಶ್ವಕಪ್​​ ತಂಡದ ಆಯ್ಕೆಯ ಕಸರತ್ತು ಜೋರಾಗಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ನೀಡಿರುವ ಒಂದೇ ಒಂದು ಖಡಕ್​ ಹೇಳಿಕೆ ಸರಣಿಯನ್ನ ಕ್ಲೀನ್​ಸ್ವೀಪ್​ ಮಾಡಿದ ಖುಷಿಯಲ್ಲಿದ್ದ ಆಟಗಾರರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಷ್ಟಕ್ಕೂ ರೋಹಿತ್​ ಶರ್ಮಾ ಹೇಳಿರೋದೇನು.?

ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಮುಂದಿದ್ದ ಏಕೈಕ ಟಿ20 ಸರಣಿ ಅಂತ್ಯ ಕಂಡಿದೆ. ಅತ್ಯದ್ಭುತ ಪರ್ಫಾಮೆನ್ಸ್​ ನೀಡಿದ ರೋಹಿತ್​ ಶರ್ಮಾ ಪಡೆ ಸರಣಿಯನ್ನ ಕ್ಲೀನ್​​ಸ್ವೀಪ್​ ಮಾಡಿ ಬೀಗಿದೆ. ಇದ್ರ ಬೆನ್ನಲ್ಲೇ, ಟಿ20 ವಿಶ್ವಕಪ್​ ತಂಡದ ಆಯ್ಕೆಯ ಚರ್ಚೆಗಳು ಗರಿಗೆದರಿವೆ. ಈ ಬಗ್ಗೆ ತುಟಿ ಬಿಚ್ಚಿರುವ ಕ್ಯಾಪ್ಟನ್​ ರೋಹಿತ್​, ಆಟಗಾರರ ಎದೆಯಲ್ಲಿ ನಡುಕ ಹುಟ್ಟುವಂತಾ ಹೇಳಿಕೆ ನೀಡಿದ್ದಾರೆ.

ಕಮ್​ಬ್ಯಾಕ್​ ಬಳಿಕ ಬದಲಾಯ್ತು ರೋಹಿತ್​ ವರಸೆ.!

14 ತಿಂಗಳ ಬಳಿಕ ಟಿ20 ಸೆಟಪ್​ಗೆ ಕಮ್​ಬ್ಯಾಕ್​ ಮಾಡಿರೋ ರೋಹಿತ್​ ಶರ್ಮಾ, ಕಂಪ್ಲೀಟ್​ ಬದಲಾಗಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲೂ ತಂಡದ ಸಾರಥ್ಯ ಕನ್​ಫರ್ಮ್​​ ಆಗ್ತಿದ್ದಂತೆ ಖಡಕ್​ ನಿರ್ಧಾರಗಳನ್ನ ತಳೆಯುತ್ತಿದ್ದಾರೆ. ಅಫ್ಘಾನ್​ ವಿರುದ್ಧದ ಸರಣಿಯ ತಂಡದಿಂದ ಏಕಾಏಕಿ ಶ್ರೇಯಸ್​ ಅಯ್ಯರ್​​, ಇಶಾನ್​ ಕಿಶನ್​ಗೆ ಕೊಕ್​ ಕೊಟ್ಟಿದ್ದು ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.

ಅಫ್ಘಾನ್​ ಸರಣಿಯಲ್ಲಿ ಮುಂಬೈಕರ್​​ ನಯಾ ಅವತಾರ.!

ತಂಡದ ಆಯ್ಕೆಯ ವಿಚಾರದಲ್ಲೇ ಶಾಕ್​ ಕೊಟ್ಟಿದ್ದ ರೋಹಿತ್​ ಶರ್ಮಾ, ಸರಣಿಯಲ್ಲೂ ಅಗ್ರೆಸ್ಸಿವ್​ ಅವತಾರದಲ್ಲೇ ಕಾಣಿಸಿಕೊಂಡ್ರು. ಆನ್​​ಫೀಲ್ಡ್​ನಲ್ಲಿ ರೋಹಿತ್​ ಶರ್ಮಾ ಅಪ್ರೋಚ್​ ಬೇರೆನೇ ಇತ್ತು. 3 ಪಂದ್ಯಗಳಲ್ಲಿ ಕಾಂಬಿನೇಷನ್​ಗಳನ್ನ ಚೆಕ್​ ಮಾಡಿದ ಕ್ಯಾಪ್ಟನ್​, ಆನ್​ಫೀಲ್ಡ್​ನಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ರು. ಮೊದಲ 2 ಪಂದ್ಯದಲ್ಲಿ ಡಕೌಟ್​ ಆದ್ರೂ, 3ನೇ ಪಂದ್ಯದಲ್ಲಿ ಅಗ್ರೆಸ್ಸಿವ್​ ಇಂಟೆಂಟ್​ನಲ್ಲಿ ಬ್ಯಾಟಿಂಗ್​ ನಡೆಸಿ ಉಳಿದ ಆಟಗಾರರಿಗೆ ತನ್ನ ಬ್ಯಾಟಿಂಗ್​ ಮಾಡೋದ್ಹೆಗೆ ಅನ್ನೋ ಪಾಠ ಮಾಡಿದ್ರು.

ಯಾರದ್ದೋ ಖುಷಿಗೆ ತಂಡದ ಆಯ್ಕೆ ಮಾಡಲ್ಲ..!

ಅಫ್ಘಾನ್ ವಿರುದ್ಧದ ರಣರೋಚಕ 3ನೇ ಟಿ20 ಕದನ ಮುಗಿದ ಬೆನ್ನಲ್ಲೇ, ರೋಹಿತ್​ ಶರ್ಮಾ, ತಂಡದ ಬಗ್ಗೆ ಮಾತನಾಡಿದ್ದಾರೆ. ಆಟಗಾರರ ಆಟವನ್ನ ಪ್ರಶಂಸಿಸಿರುವ ಕ್ಯಾಪ್ಟನ್​ ರೋಹಿತ್​, ಇದೇ ಸಮಯದಲ್ಲಿ ವಿಶ್ವಕಪ್​ ತಂಡದ ಬಗ್ಗೆ ತುಟಿ ಬಿಚ್ಚಿದ್ದಾರೆ. ವರ್ಲ್ಡ್​​​ಕಪ್​ ತಂಡದ ಆಯ್ಕೆ ಬಗ್ಗೆ ಮಾತನಾಡಿರೋ ರೋಹಿತ್, ಯಾರದೂ ಖುಷಿಗೆ ತಂಡದ ಆಯ್ಕೆ ಮಾಡಲು ಆಗಲ್ಲ. ಯಾರ ಸ್ಥಾನವೂ ಪರ್ಮನೆಂಟ್​ ಅಲ್ಲ ಎಂದು ನೇರ ಮಾತಲ್ಲಿ ಹೇಳಿದ್ದಾರೆ.

ನಾನು ಮತ್ತೆ ಹೇಳ್ತಾ ಇದ್ದೀನಿ. ನಾನು ಮತ್ತೆ ರಾಹುಲ್​ ಭಾಯ್​, ತಂಡದಲ್ಲಿ ಸ್ಪಷ್ಟತೆಯನ್ನ ಕಾಯ್ದುಕೊಳ್ಳುತ್ತೇವೆ. ತಂಡದಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗಬೇಕು. ಪರ್ಫಾಮ್​ ಮಾಡಿದ್ರೂ ಆಟಗಾರರನ್ನ ಡ್ರಾಪ್​ ಮಾಡಿದ್ರೆ ಬೇಸರ ಆಗುತ್ತೆ. ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವಿಲ್ಲ. ನಾನು ನಾಯಕನಾಗಿ ಕಲಿತಿರೋದು ಏನಂದ್ರೆ, 15 ಜನರನ್ನ ಸಂತೋಷ ಪಡಿಸಲು ಸಾಧ್ಯವಿಲ್ಲ. 15ರಲ್ಲಿ 11 ಜನ ಆಡಿ 4 ಜನ ಹೊರಗೆ ಕುಳಿತಿರ್ತಾರೆ. ಅವರೂ ಕೇಳ್ತಾರೆ ನಾವು ಯಾವಾಗ ಆಡ್ತೀವಿ ಅಂತಾ. ಎಲ್ಲರನ್ನ ಖುಷಿಪಡಿಸಲು ಸಾಧ್ಯವಿಲ್ಲ ಅನ್ನೋದು. ಹೀಗಾಗಿ ತಂಡಕ್ಕೆ ಏನು ಅಗತ್ಯವೋ ಅದನ್ನ ಫೋಕಸ್​ ಮಾಡಬೇಕು’

ರೋಹಿತ್​ ಶರ್ಮಾ, ನಾಯಕ

8-10 ಆಟಗಾರರ ಹೆಸರು ಮಾತ್ರ ತಲೆಯಲ್ಲಿದೆ.!

ವೆಸ್ಟ್ ಇಂಡೀಸ್​​ ಹಾಗೂ ಅಮೆರಿಕದಲ್ಲಿ ನಡೆಯೋ ಟಿ20 ವಿಶ್ವಕಪ್​ ಟೂರ್ನಿಗೆ ಇನ್ನೂ ತಂಡದ ಫೈನಲ್​ ಆಗಿಲ್ಲ ಅನ್ನೋದನ್ನೂ ರೋಹಿತ್​ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಕೇವಲ 8ರಿಂದ 10 ಆಟಗಾರರ ಹೆಸರು ಮಾತ್ರ ತಲೆಯಲ್ಲಿದೆ ಎಂದಿರೋ ಹಿಟ್​ಮ್ಯಾನ್​​, ಪ್ಲೇಯಿಂಗ್​​ ಕಂಡೀಷನ್ಸ್​ ಆಧಾರದಲ್ಲಿ ಉಳಿದವರ ಆಯ್ಕೆ ಎಂಬ ಸ್ಪಷ್ಟನೆ ನೀಡಿದ್ದಾರೆ.

ನಾವು ಇನ್ನೂ 15 ಆಟಗಾರರ ವಿಶ್ವಕಪ್​ ತಂಡವನ್ನ ಫೈನಲ್​ ಮಾಡಿಲ್ಲ. ಆದ್ರೆ, ನಾವು ಆಡಿಸೋ 8-10 ಆಟಗಾರರ ಹೆಸರು ತಲೆಯಲ್ಲಿದೆ. ಯಾರು ಆಡ್ತಾರೆ, ಯಾರು ಅಡಲ್ಲ ಅಂತಾ ಗೊತ್ತಿದೆ. ನಾವು ಪ್ರಯಾಣಿಸುವ​ ಮಾಡುವ ಕಂಡಿಷನ್ಸ್​ಗೆ​ ತಕ್ಕಂತೆ ಕಾಂಬಿನೇಷನ್​ ಸೆಟ್​​ ಮಾಡಬೇಕಾಗುತ್ತದೆ. ವೆಸ್ಟ್​ ಇಂಡೀಸ್​ನಲ್ಲಿ ಸ್ಲೋ ಕಂಡಿಷನ್ಸ್​ ಇರುತ್ತೆ. ಅದಕ್ಕೆ ತಕ್ಕಂತೆ ತಂಡದ ಆಯ್ಕೆ ಮಾಡ್ತಿವಿ.

ರೋಹಿತ್​ ಶರ್ಮಾ, ನಾಯಕ

ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಜ್ಜಾಗ್ತಿದ್ದಾರೆ ಅನ್ನೋದು ಅವರ ಮಾತುಗಳಲ್ಲೇ ಸ್ಪಷ್ಟವಾಗಿ ಗೊತ್ತಾಗ್ತಿದೆ. ಜೊತೆಗೆ ಇದೇ ಮಾತುಗಳು ಸ್ಥಾನದ ನಿರೀಕ್ಷೆಯಲ್ಲಿದ್ದ ಆಟಗಾರರಲ್ಲಿ ಢವ ಢವ ಹೆಚ್ಚಿಸಿದೆ. ಟ್ರೋಫಿ ಗೆಲ್ಲಲು ಬ್ಲ್ಯೂಪ್ರಿಂಟ್​ ರೂಪಿಸ್ತಿರೋ ಕ್ಯಾಪ್ಟನ್​, ಯಾವೆಲ್ಲ ಆಟಗಾರರಿಗೆ ಮಣೆಹಾಕ್ತಾರೆ​ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More