/newsfirstlive-kannada/media/post_attachments/wp-content/uploads/2025/02/ROHIT.jpg)
ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಿವೆ.
ಇನ್ನು, ಈ ಟೂರ್ನಿ ಮಧ್ಯೆಯೇ ಭಾರತ ಕ್ರಿಕೆಟ್ ತಂಡದಲ್ಲಿ ಭಾರೀ ಬೆಳವಣಿಗೆ ನಡೆಯುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿತ್ತು. 20 ವರ್ಷಗಳ ನಂತರ ತವರಿನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಟೆಸ್ಟ್ ಸೀರೀಸ್ನಲ್ಲಿ ವೈಟ್ ವಾಶ್ ಆಗಿತ್ತು. ಈ ಬೆನ್ನಲ್ಲೇ ಟೀಮ್ ಇಂಡಿಯಾ 3-1 ಅಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಸೋತಿತ್ತು. ಈ ಬೆನ್ನಲ್ಲೀಗ ರೋಹಿತ್ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.
ಭಾರತ ಜೂನ್ ತಿಂಗಳಲ್ಲಿ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ. ಜೊತೆಗೆ ಟೀಮ್ ಇಂಡಿಯಾಗೆ ಮುಂದಿನ ಪ್ರಮುಖ ಏಕದಿನ ಟೂರ್ನಿ 2027ರ ವಿಶ್ವಕಪ್. ಚಾಂಪಿಯನ್ಸ್ ಟ್ರೋಫಿ 2025ರ ಭಾರತದ ಮುಂದಿನ ಟಾರ್ಗೆಟ್ 2027ರ ವಿಶ್ವಕಪ್ ಆಗಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ ಆಗಲಿದೆ.
ಫೈನಲ್ಸ್ ಸೋತರೆ ರೋಹಿತ್ಗೆ ಕೊಕ್
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಸೋತ್ರೂ ಗೆದ್ರೂ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾಗೆ ಕೊಕ್ ನೀಡಬಹುದು. ಹಾಗೆಯೇ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ವೃತ್ತಿಜೀವನ ಕೊನೆ ಆಗಬಹುದು. ನಾಯಕತ್ವದಿಂದ ಕೆಳಗಿಳಿದು ಆಟಗಾರನಾಗಿ ಮುಂದುವರೆಯಬಹುದು.
ರೋಹಿತ್ ಶರ್ಮಾ ನಂತರ ಭಾರತ ಏಕದಿನ ತಂಡದ ನಾಯಕ ಯಾರು? ಅನ್ನೋ ಚರ್ಚೆ ಇದೆ. ಕ್ಯಾಪ್ಟನ್ಸಿ ರೇಸ್ನಲ್ಲಿ ಟೀಮ್ ಇಂಡಿಯಾದ ಇಬ್ಬರು ಹೆಸರು ರೇಸ್ನಲ್ಲಿದೆ. ಉಪ ನಾಯಕ ಶುಭ್ಮನ್ ಗಿಲ್ ಅಥವಾ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಬಹುದು.
ಇದನ್ನೂ ಓದಿ:ಕುಲ್ದೀಪ್, ವರುಣ್ ಸ್ಪಿನ್ ಮ್ಯಾಜಿಕ್.. ಕಿವೀಸ್ನ 3 ವಿಕೆಟ್ ಡಮಾರ್, ಭಾರತ ಸಂಭ್ರಮ!
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ