ರಿಷಬ್ ಪಂತ್ ಜೊತೆ ಅಖಾಡಕ್ಕೆ ಇಳಿಯಲಿರೋ ರೋಹಿತ್ ಶರ್ಮಾ
ವರ್ಲ್ಡ್ಕಪ್ ಸೋಲಿನ ಕಹಿ ಅನುಭವದ ಬಗ್ಗೆ ರೋಹಿತ್ ಏನಂದ್ರು?
ಸತತ ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟು ಹೋದ ಮುಂಬೈ ಟೀಮ್
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸದ್ಯ ಐಪಿಎಲ್ ಪಂದ್ಯಗಳ ಬ್ಯುಸಿಯಲ್ಲಿದ್ದಾರೆ. ಇದರ ಜೊತೆಗೆ ಭಾರತ ಏಕದಿನ ವಿಶ್ವಕಪ್ ಸೋತಿರುವ ಹಾಗೂ ಮುಂಬೈ ಟೀಮ್ ನಾಯಕತ್ವ ಕಳೆದುಕೊಂಡ ಕಹಿ ಅನುಭವದಲ್ಲಿದ್ದಾರೆ. ಆದರೆ ಹೋದಲ್ಲಿ, ಬಂದಲ್ಲಿ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ನಾನು ಏನು ಹೇಳೋಕೆ ಆಗುತ್ತಿಲ್ಲ ಎಂದು ಹಿಂದಿಯ ರಿಯಾಲಿಟಿ ಶೋ ಕಪಿಲ್ ಶರ್ಮಾ ಶೋನಲ್ಲಿ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಟೀಮ್ನಲ್ಲಿ ಹಿಟ್ಮ್ಯಾನ್ ರೋಹಿತ್ ಆಡುತ್ತಿದ್ದಾರೆ. ಸತತ ಹ್ಯಾಟ್ರಿಕ್ ಸೋಲುಗಳಿಂದ ತಂಡ ಕಂಗೆಟ್ಟು ಹೋಗಿದ್ದರಿಂದ ಹಾರ್ದಿಕ್ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದಾರೆ. ಇದರ ಬೆನ್ನಲ್ಲೇ ಕಪಿಲ್ ಶರ್ಮಾ ಶೋನಲ್ಲಿ ಹಿಟ್ಮ್ಯಾನ್ ರೋಹಿತ್ ಹಾಗೂ ಕೆಕೆಆರ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಭಾಗಿಯಾಗಿ ಜಾಲಿಯಾಗಿ ಟೈಮ್ಪಾಸ್ ಮಾಡಿ ಶೋನಲ್ಲಿ ನಕ್ಕು, ಕುಣಿದಾಡಿದ್ದಲ್ಲದೇ ಬ್ಯಾಟ್ ಕೂಡ ಬೀಸಿದ್ದಾರೆ.
ಇದನ್ನೂ ಓದಿ: MS ಧೋನಿ ಲಾಂಗ್ ಹೇರ್ಸ್ಟೈಲ್ಗೆ ಫ್ಯಾನ್ಸ್ ಫಿದಾ.. ಮಹಿ ಎಲ್ಲಿಗೆ ಹೋದ್ರೂ ಗ್ರ್ಯಾಂಡ್ ವೆಲ್ಕಮ್
ಇನ್ನು ಇದೇ ವೇಳೆ ಕಪಿಲ್ ಶರ್ಮಾ ಕೇಳಿದ ಪ್ರಶ್ನೆಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಉತ್ತರಿಸಿದ್ದು, ನನ್ನ ನಾಯಕತ್ವದಲ್ಲಿ ವರ್ಲ್ಡ್ಕಪ್ ಸೋತ ಮೇಲೆ ತುಂಬಾ ಚಿಂತಿಸುತ್ತಿದ್ದೇನೆ. ಕ್ರಿಕೆಟ್ ಫ್ಯಾನ್ಸ್ ನಮ್ಮ ಮೇಲೆ ಕೋಪ ಮಾಡಿಕೊಂಡಿರಬಹುದು. ಆದರೆ ಫೈನಲ್ನಲ್ಲಿ ಮುಗ್ಗರಿಸಿದ ಬಳಿಕ ನಾನು ಎಲ್ಲಿಗೆ ಹೋದರು ಜನರು ತುಂಬಾ ಪ್ರೀತಿ ತೋರಿಸುತ್ತಿದ್ದಾರೆ. ಅಲ್ಲದೇ ವರ್ಲ್ಡ್ಕಪ್ನಲ್ಲಿ ಎಲ್ಲರೂ ಚೆನ್ನಾಗಿ ಆಡಿದ್ದೀರಿ ಎಂದು ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
Rohit Sharma said "After WC Final, I was thinking, WC in India & we couldn't win, the nation might be angry with us, the people might be disappointed but wherever I went, after finals, people showed lots of love & heard people praising how well we played". [Kapil Sharma show] pic.twitter.com/hMJu9Z5GmQ
— Johns. (@CricCrazyJohns) April 7, 2024
ಇದನ್ನೂ ಓದಿ: ತುಳಸಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು.. ಮನೆ ಅಂದವಷ್ಟೇ ಅಲ್ಲ, ಆರೋಗ್ಯಕ್ಕೂ ವೃಂದಾ ಬಹುಉಪಕಾರಿ
ಇನ್ನು ಸತತ ಸೋಲುಗಳಿಂದ ಫ್ಯಾನ್ಸ್ಗಳಿಂದ ಬೈಯಿಸಿಕೊಳ್ಳುತ್ತಿರುವ ಮುಂಬೈ ಇನ್ನೇನು ಕೆಲವೇ ಕ್ಷಣದಲ್ಲಿ ಡೆಲ್ಲಿ ವಿರುದ್ಧ ಮೈದಾನಕ್ಕೆ ಇಳಿಯುತ್ತಿದೆ. ಈ 4ನೇ ಪಂದ್ಯವನ್ನಾದ್ರೂ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಕೂಡ 4 ಪಂದ್ಯಗಲ್ಲಿ 1 ಮಾತ್ರ ಗೆದ್ದಿದ್ದರಿಂದ ಅದಕ್ಕೂ ಈ ಪಂದ್ಯ ಗೆಲ್ಲುವುದು ಅನಿವಾರ್ಯ ಎನಿಸಿದೆ. ಇಂದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 3:30ಕ್ಕೆ ಆರಂಭವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ರಿಷಬ್ ಪಂತ್ ಜೊತೆ ಅಖಾಡಕ್ಕೆ ಇಳಿಯಲಿರೋ ರೋಹಿತ್ ಶರ್ಮಾ
ವರ್ಲ್ಡ್ಕಪ್ ಸೋಲಿನ ಕಹಿ ಅನುಭವದ ಬಗ್ಗೆ ರೋಹಿತ್ ಏನಂದ್ರು?
ಸತತ ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟು ಹೋದ ಮುಂಬೈ ಟೀಮ್
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸದ್ಯ ಐಪಿಎಲ್ ಪಂದ್ಯಗಳ ಬ್ಯುಸಿಯಲ್ಲಿದ್ದಾರೆ. ಇದರ ಜೊತೆಗೆ ಭಾರತ ಏಕದಿನ ವಿಶ್ವಕಪ್ ಸೋತಿರುವ ಹಾಗೂ ಮುಂಬೈ ಟೀಮ್ ನಾಯಕತ್ವ ಕಳೆದುಕೊಂಡ ಕಹಿ ಅನುಭವದಲ್ಲಿದ್ದಾರೆ. ಆದರೆ ಹೋದಲ್ಲಿ, ಬಂದಲ್ಲಿ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ನಾನು ಏನು ಹೇಳೋಕೆ ಆಗುತ್ತಿಲ್ಲ ಎಂದು ಹಿಂದಿಯ ರಿಯಾಲಿಟಿ ಶೋ ಕಪಿಲ್ ಶರ್ಮಾ ಶೋನಲ್ಲಿ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಟೀಮ್ನಲ್ಲಿ ಹಿಟ್ಮ್ಯಾನ್ ರೋಹಿತ್ ಆಡುತ್ತಿದ್ದಾರೆ. ಸತತ ಹ್ಯಾಟ್ರಿಕ್ ಸೋಲುಗಳಿಂದ ತಂಡ ಕಂಗೆಟ್ಟು ಹೋಗಿದ್ದರಿಂದ ಹಾರ್ದಿಕ್ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದಾರೆ. ಇದರ ಬೆನ್ನಲ್ಲೇ ಕಪಿಲ್ ಶರ್ಮಾ ಶೋನಲ್ಲಿ ಹಿಟ್ಮ್ಯಾನ್ ರೋಹಿತ್ ಹಾಗೂ ಕೆಕೆಆರ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಭಾಗಿಯಾಗಿ ಜಾಲಿಯಾಗಿ ಟೈಮ್ಪಾಸ್ ಮಾಡಿ ಶೋನಲ್ಲಿ ನಕ್ಕು, ಕುಣಿದಾಡಿದ್ದಲ್ಲದೇ ಬ್ಯಾಟ್ ಕೂಡ ಬೀಸಿದ್ದಾರೆ.
ಇದನ್ನೂ ಓದಿ: MS ಧೋನಿ ಲಾಂಗ್ ಹೇರ್ಸ್ಟೈಲ್ಗೆ ಫ್ಯಾನ್ಸ್ ಫಿದಾ.. ಮಹಿ ಎಲ್ಲಿಗೆ ಹೋದ್ರೂ ಗ್ರ್ಯಾಂಡ್ ವೆಲ್ಕಮ್
ಇನ್ನು ಇದೇ ವೇಳೆ ಕಪಿಲ್ ಶರ್ಮಾ ಕೇಳಿದ ಪ್ರಶ್ನೆಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಉತ್ತರಿಸಿದ್ದು, ನನ್ನ ನಾಯಕತ್ವದಲ್ಲಿ ವರ್ಲ್ಡ್ಕಪ್ ಸೋತ ಮೇಲೆ ತುಂಬಾ ಚಿಂತಿಸುತ್ತಿದ್ದೇನೆ. ಕ್ರಿಕೆಟ್ ಫ್ಯಾನ್ಸ್ ನಮ್ಮ ಮೇಲೆ ಕೋಪ ಮಾಡಿಕೊಂಡಿರಬಹುದು. ಆದರೆ ಫೈನಲ್ನಲ್ಲಿ ಮುಗ್ಗರಿಸಿದ ಬಳಿಕ ನಾನು ಎಲ್ಲಿಗೆ ಹೋದರು ಜನರು ತುಂಬಾ ಪ್ರೀತಿ ತೋರಿಸುತ್ತಿದ್ದಾರೆ. ಅಲ್ಲದೇ ವರ್ಲ್ಡ್ಕಪ್ನಲ್ಲಿ ಎಲ್ಲರೂ ಚೆನ್ನಾಗಿ ಆಡಿದ್ದೀರಿ ಎಂದು ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
Rohit Sharma said "After WC Final, I was thinking, WC in India & we couldn't win, the nation might be angry with us, the people might be disappointed but wherever I went, after finals, people showed lots of love & heard people praising how well we played". [Kapil Sharma show] pic.twitter.com/hMJu9Z5GmQ
— Johns. (@CricCrazyJohns) April 7, 2024
ಇದನ್ನೂ ಓದಿ: ತುಳಸಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು.. ಮನೆ ಅಂದವಷ್ಟೇ ಅಲ್ಲ, ಆರೋಗ್ಯಕ್ಕೂ ವೃಂದಾ ಬಹುಉಪಕಾರಿ
ಇನ್ನು ಸತತ ಸೋಲುಗಳಿಂದ ಫ್ಯಾನ್ಸ್ಗಳಿಂದ ಬೈಯಿಸಿಕೊಳ್ಳುತ್ತಿರುವ ಮುಂಬೈ ಇನ್ನೇನು ಕೆಲವೇ ಕ್ಷಣದಲ್ಲಿ ಡೆಲ್ಲಿ ವಿರುದ್ಧ ಮೈದಾನಕ್ಕೆ ಇಳಿಯುತ್ತಿದೆ. ಈ 4ನೇ ಪಂದ್ಯವನ್ನಾದ್ರೂ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಕೂಡ 4 ಪಂದ್ಯಗಲ್ಲಿ 1 ಮಾತ್ರ ಗೆದ್ದಿದ್ದರಿಂದ ಅದಕ್ಕೂ ಈ ಪಂದ್ಯ ಗೆಲ್ಲುವುದು ಅನಿವಾರ್ಯ ಎನಿಸಿದೆ. ಇಂದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 3:30ಕ್ಕೆ ಆರಂಭವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ