/newsfirstlive-kannada/media/post_attachments/wp-content/uploads/2025/03/Kohli_Krunal_Pandya.jpg)
ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಬಗ್ಗು ಬಡಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹೊಸ ಸಿಂಚನ, ಹೊಸ ಅಲೆ ಎದ್ದಿದೆ. ಈ ಬಾರಿ ಟ್ರೋಫಿ ಗೆಲ್ಲುವ ಉತ್ಸಾಹ ಹೆಚ್ಚಾಗಿ ಕಾಣುತ್ತಿದೆ. ಇದಕ್ಕೆಲ್ಲಾ ಕಾರಣ ಕೆಕೆಆರ್ ವಿರುದ್ಧ ಆರ್ಸಿಬಿಯ ಪರ್ಫಾಮೆನ್ಸ್ ಆಗಿದೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಯಾ ಶೇರ್ (ಸಿಂಹ) ಯಾರು ಗೊತ್ತಾ?.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಆರ್ಸಿಬಿ ತಂಡದಲ್ಲಿ ಸಂತಸದ ಕ್ಷಣಗಳು ಮೂಡಿವೆ. ಏಕೆಂದರೆ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮೇಲೆ ಬ್ಯಾಟಿಂಗ್ಗೆ ಬಂದ ಕೆಕೆಆರ್ ದೊಡ್ಡ ಮಟ್ಟದ ರನ್ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದ್ರೆ ಆರ್ಸಿಬಿ ಬೌಲರ್ಸ್ ಅದಕ್ಕೆ ದಾರಿ ಮಾಡಿ ಕೊಡಲಿಲ್ಲ. ಆರ್ಸಿಬಿ ಬೌಲಿಂಗ್ ಮುಂದೆ ಕೆಕೆಆರ್ ಬ್ಯಾಟರ್ಸ್ ವಿಲ ವಿಲ ಒದ್ದಾಡಿದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ RCB ಗೆಲುವಿಗೆ ಕಾರಣ ಅಲ್ಲವೇ ಅಲ್ಲ.. ಕೆಕೆಆರ್ ಕ್ಯಾಪ್ಟನ್ ರಹಾನೆ ಅಚ್ಚರಿ ಹೇಳಿಕೆ!
174 ರನ್ಗಳ ಟಾರ್ಗೆಟ್ ಪಡೆದ ಆರ್ಸಿಬಿ ಆರಂಭದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ಗೆ ಮುಂದಾಯಿತು. ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಭರ್ಜರಿ ಓಪನಿಂಗ್ ಪಡೆದುಕೊಂಡು ಕೆಕೆಆರ್ ಬೌಲರ್ಸ್ಗಳನ್ನ ಬೆಂಡೆತ್ತಿದರು. ಸಾಲ್ಟ್ ಕೇವಲ 31 ಎಸೆತದಲ್ಲಿ 9 ಬೌಂಡರಿ, 2 ಮನ ಮೋಹಕ ಸಿಕ್ಸರ್ ಸಮೇತ 56 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದು ಕೆಕೆಆರ್ಗೆ ನುಂಗಲಾರದ ತುತ್ತಾಗಿತ್ತು. ಇದಾದ ಮೇಲೆ ಕೊಹ್ಲಿ ಕೂಡ 36 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್ನಿಂದ 59 ರನ್ ಸಿಡಿಸಿದರು. ಈ ಇಬ್ಬರ ಆರಂಭಿಕ ಬ್ಯಾಟಿಂಗ್ನಿಂದ 175 ರನ್ಗಳ ಗುರಿಯನ್ನು ಬೇಗನೇ ಮುಟ್ಟಲು ಸಾಧ್ಯವಾಯಿತು.
ಸದ್ಯ ಈ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನ ಹಂಚಿಕೊಂಡಿದೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ನಯಾ ಶೇರ್ ಆಫ್ ದೀ ಮ್ಯಾಚ್ ಫಿಲ್ ಸಾಲ್ಟ್ ಎಂದು ಹೇಳಿದೆ. ಆರ್ಸಿಬಿಯ ಡೆಬ್ಯು ಪಂದ್ಯದಲ್ಲೇ 181 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, ದಾಖಲೆಯ ಹಾಫ್ಸೆಂಚುರಿ ಸಿಡಿಸಿ ಟಾರ್ಗೆಟ್ ಅನ್ನು ಬೇಗನೇ ರೀಚ್ ಮಾಡಲು ಸಾಲ್ಟ್ ಬಹು ಮುಖ್ಯ ಕಾರಣ ಆಗಿದ್ದಾರೆ ಎಂದು ಆರ್ಸಿಬಿ ಫ್ರಾಂಚೈಸಿ ಹೇಳಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ