/newsfirstlive-kannada/media/post_attachments/wp-content/uploads/2025/04/KOHLI_RAJAT_JITESH.jpg)
ಕ್ಯಾಪ್ಟನ್ ರಜತ್ ಪಾಟಿದಾರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಸಿಡಿಲಬ್ಬರದ ಬ್ಯಾಟಿಂಗ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ವಾಂಖೆಡೆ ಸ್ಟೇಡಿಯಂನಲ್ಲಿ 10 ವರ್ಷಗಳ ಬಳಿಕ ಅಮೋಘವಾದ ಜಯ ಪಡೆದಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಕ್ಯಾಪ್ಟನ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಆರ್ಸಿಬಿ ಪರ ಓಪನರ್ಗಳಾದ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕ್ರೀಸ್ಗೆ ಆಗಮಿಸಿದರು. ಆದರೆ ಈ ಇಬ್ಬರೂ ಉತ್ತಮ ಆರಂಭ ಪಡೆಯುವ ಮೊದಲೇ ಮುಂಬೈ ಪರ ಬೌಲರ್ ಟ್ರೆಂಟ್ ಬೋಲ್ಟ್, ಫಿಲಿಪ್ ಸಾಲ್ಟ್ ಅವರನ್ನು 4 ರನ್ಗೆ ಕ್ಲೀನ್ ಬೋಲ್ಡ್ ಮಾಡಿದರು.
ಇದನ್ನೂ ಓದಿ:ಮೊದಲ ಓವರ್ನಲ್ಲೇ RCB ವಿಸ್ಫೋಟಕ ಬ್ಯಾಟರ್ ಕ್ಲೀನ್ ಬೋಲ್ಡ್
ವಿರಾಟ್ ಕೊಹ್ಲಿ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಮಾಡಿ ಹಾಫ್ಸೆಂಚುರಿ ಸಿಡಿಸಿದರು. ಕೇವಲ 29 ಎಸೆತ ಎದುರಿಸಿದ ವಿರಾಟ್ 6 ಬೌಂಡರಿ, 2 ಸಿಕ್ಸರ್ನಿಂದ ಅರ್ಧಶತಕ ಪೂರೈಸಿದರು. ಈ ಮ್ಯಾಚ್ನಲ್ಲಿ ವಿರಾಟ್ ಒಟ್ಟು 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ನಿಂದ 67 ರನ್ ಸಿಡಿಸಿ ಆಡುವಾಗ ಔಟ್ ಆದರು. ಕನ್ನಡಿಗ ದೇವದತ್ ಪಡಿಕ್ಕಲ್ ಕೇವಲ 22 ಎಸೆತಗಳಲ್ಲಿ 37 ರನ್ ಬಾರಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಕ್ಯಾಪ್ಟನ್ ರಜತ್ ಪಾಟಿದಾರ್, 32 ಬಾಲ್ಗಳನ್ನು ಆಡಿದ ರಜತ್ 5 ಬೌಂಡರಿ, 4 ಸಿಕ್ಸರ್ನಿಂದ 64 ರನ್ ಸಿಡಿಸಿದರು. ವಿಕೆಟ್ ಕೀಪರ್ ಜಿತೇಶ್ ಶರ್ಮಾ 40 ರನ್ ಚಚ್ಚಿದರು. ಹೀಗಾಗಿ ಆರ್ಸಿಬಿ 20 ಓವರ್ನಲ್ಲಿ 5 ವಿಕೆಟ್ಗೆ 222 ರನ್ಗಳ ಗುರಿ ನೀಡಿತ್ತು.
ಮುಂಬೈ ಪರವಾಗಿ ಓಪನರ್ ಆಗಿ ಬ್ಯಾಟಿಂಗ್ಗೆ ಬಂದ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ತಲಾ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ವಿಲ್ ಜಾಕ್ಸ್ ಕೂಡ ಮತ್ತೆ ವಿಫಲ ಬ್ಯಾಟಿಂಗ್ ಮಾಡಿ ಕೇವಲ 22 ರನ್ಗೆ ಕೊಹ್ಲಿಗೆ ಕ್ಯಾಚ್ ಕೊಟ್ಟರು. ಸೂರ್ಯಕುಮಾರ್ 28 ರನ್ನಿಂದ ಉತ್ತಮವಾಗಿ ಬ್ಯಾಟಿಂಗ್ ಮಾಡುವಾಗ ಯಶ್ ದಯಾಳ್ ಬೌಲಿಂಗ್ನಲ್ಲಿ ಲಿವಿಂಗ್ಸ್ಟ್ನ್ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ತಿಲಕ್ ವರ್ಮಾ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಮಾಡಿ ಅರ್ಧಶತಕ ಸಿಡಿಸಿ ತಂಡಕ್ಕೆ ಕಾಣಿಕೆ ನೀಡಿದರು.
ತಿಲಕ್ ವರ್ಮಾ 27 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್ನಿಂದ ಅರ್ಧಶತಕ ಗಳಿಸಿ ಆಡುವಾಗ 56 ರನ್ಗೆ ತಿಲಕ್ ವಿಕೆಟ್ ಒಪ್ಪಿಸಿದರು. ಇವರಾದ ಮೇಲೆ ಹೊಡಿಬಡಿ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 15 ಬಾಲ್ಗೆ 4 ಸಿಕ್ಸರ್ನಿಂದ 42 ರನ್ ಬಾರಿಸಿ ಬೌಂಡ್ರಿ ಲೈನ್ ಬಳಿ ಕ್ಯಾಚ್ ಕೊಟ್ಟು ಔಟ್ ಆದರು. ತಿಲಕ್ ಹಾಗೂ ಹಾರ್ದಿಕ್ ಔಟ್ ಆಗಿದ್ದು ಮುಂಬೈ ತಂಡಕ್ಕೆ ಭಾರೀ ಹಿನ್ನಡೆಗೆ ಕಾರಣವಾಯಿತು.
ಮಿಚೆಲ್ ಸ್ಯಾಂಟ್ನರ್ ಸಿಕ್ಸ್ ಬೌಂಡರಿ ಬಳಿ ಔಟ್ ಆದ್ರೆ ದೀಪಕ್ ಚಹಾರ್ ಕೂಡ ಸಿಕ್ಸ್ ಬೌಂಡರಿ ಬಳಿ ವಿಚಿತ್ರ ಕ್ಯಾಚ್ಗೆ ಔಟ್ ಆದರು. ಕೊನೆ ಓವರ್ನ 3 ಬಾಲ್ಗಳಲ್ಲಿ 18 ರನ್ಗಳು ಬೇಕಿದ್ದವು. ಈ ವೇಳೆ ಸ್ಟ್ರೈಕ್ನಲ್ಲಿದ್ದ ನಮನ್ ಧೀರ್ ಬೌಂಡರಿ ಬಾರಿಸಿ ಮುಂದಿನ ಎಸೆತದಲ್ಲಿ ಔಟ್ ಆದರು. ಕೊನೆ ಬಾಲ್ಗೆ 13 ರನ್ ಬೇಕಿದ್ದವು. ಇದು ಸಾಧ್ಯವಾಗದ ಕಾರಣ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ಸೋಲು ಒಪ್ಪಿಕೊಂಡು ಸಪ್ಪೆ ಮುಖದಲ್ಲಿ ಎಲ್ಲರಿಗೂ ಶೇಕ್ ಹ್ಯಾಂಡ್ ಮಾಡಿತು. ಇನ್ನು ಆರ್ಸಿಬಿ 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ರೋಚಕವಾಗಿ ಗೆದ್ದು ಇತಿಹಾಸ ಬರೆಯಿತು
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ