/newsfirstlive-kannada/media/post_attachments/wp-content/uploads/2024/11/RCB-5.jpg)
ಹೊಸ ವರ್ಷ.. ಹೊಸ ಸೀಸನ್.. ಹೊಸ ಹುರುಪು.. ಪ್ರತಿ ಬಾರಿ ಕಪ್ ನಮ್ದೇ ಅನ್ನೋ ಫ್ಯಾನ್ಸ್ ಕನಸನ್ನ ನನಸು ಮಾಡೋದೆ ಈ ಬಾರಿಯ ಗುರಿ. 2025ಕ್ಕೆ ಗ್ರ್ಯಾಂಡ್ ವೆಲ್ಕಮ್ ಹೇಳಿರುವ ಆರ್ಸಿಬಿ ತಂಡ ಚಾಂಪಿಯನ್ ಪಟ್ಟಕ್ಕೇರಲು ಪಣ ತೊಟ್ಟಿದೆ. 17 ಸೀಸನ್ಗಳಿಂದ ಆಗದ ಸಾಧನೆಯನ್ನ 18ನೇ ಸೀಸನ್ನಲ್ಲಿ ಮಾಡಲು ಕನಸು ಕಂಡಿದೆ.
ಹೊಸ ವರ್ಷ, ಹೊಸ ಅಧ್ಯಾಯ.. ಹೊಸ ಲೆಕ್ಕಾಚಾರದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ ಸೀಸನ್ 18ಕ್ಕೆ ಕಾಲಿಡಲು ಸಜ್ಜಾಗಿದೆ. ಮೆಗಾ ಹರಾಜಿನಲ್ಲಿ ಪಕ್ಕಾ ಲೆಕ್ಕಾ ಹಾಕಿ ಆಟಗಾರರನ್ನ ಖರೀದಿಸಿರುವ ಆರ್ಸಿಬಿ, ಈ ಸಲ ಕಪ್ ಗೆಲ್ಲೋಕೆ ಶಪಥ ಮಾಡಿದಂತಿದೆ. ಅದಕ್ಕಾಗಿ ತೆರೆ ಹಿಂದೆ ಆರ್ಸಿಬಿಯ ಥಿಂಕ್ ಟ್ಯಾಂಕರ್ಸ್, ಭರ್ಜರಿ ಸ್ಟ್ರಾಟಜಿ ಮಾಡ್ತಿದ್ದಾರೆ. 17 ವರ್ಷಗಳ ವನವಾಸಕ್ಕೆ ಗುಡ್ಬೈ ಹೇಳಲು ಆರ್ಸಿಬಿ, ಮುಂದಾಗಿದೆ.
ಇದನ್ನೂ ಓದಿ:ಬದುಕಿ ಬರಲಿಲ್ಲ ಕಂದಮ್ಮ.. ಈ ಬಾಲಕಿಯ ವಿಧಿ ಬರಹ ಇದೆಂಥ ಘೋರ..
ಕಿಂಗ್ ಕೊಹ್ಲಿಗೆ ಮತ್ತೆ ಪಟ್ಟ.!
ರಿಯಲ್ ಹೊಸ ಅಧ್ಯಾಯ ಈ ಸೀಸನ್ನಿಂದ ಶುರುವಾಗಲಿದೆ. ಕಳೆದ ಸೀಸನ್ನಲ್ಲಿ ಫ್ಲಾಪ್ ಶೋ ನೀಡಿದ ಫ್ಲಾಪ್ ಡುಪ್ಲೆಸಿ ಆರ್ಸಿಬಿಯಿಂದ ಹೊರ ಬಿದ್ದಾಗಿದೆ. ಇದೀಗ ಹೊಸ ನಾಯಕನ ಪಟ್ಟಾಭಿಷೇಕಕ್ಕೆ ಕೌಂಟ್ಡೌನ್ ಶುರುವಾಗಿದೆ. ಕೊಹ್ಲಿಗೆ ಮತ್ತೆ ಪಟ್ಟ ಕಟ್ಟಲು ಆರ್ಸಿಬಿ ಫ್ರಾಂಚೈಸಿ ರೆಡಿಯಾಗಿದೆ. ವಿರಾಟ್ ಕೂಡ ತಂಡವನ್ನು ಮುನ್ನಡೆಸಲು ಉತ್ಸುಕರಾಗಿದ್ದು, ನಾಯಕತ್ವ ಜವಾಬ್ದಾರಿ ಹೊರಲು ಯೆಸ್ ಎಂದಿದ್ದಾಗಿದೆ. ಅಧಿಕೃತ ಘೋಷಣೆಯೊಂದೆ ಬಾಕಿ.
ಹೊಸ ತಂಡ.. ಹೊಸ ಹುರುಪು..
ಮೆಗಾ ಆಕ್ಷನ್ನಲ್ಲಿ ಅಳೆದು ತೂಗಿ ಲೆಕ್ಕಾಚಾರ ಹಾಕಿ ಬಲಿಷ್ಟ ತಂಡವನ್ನೇ ಆರ್ಸಿಬಿ ಕಟ್ಟಿದೆ. ಮೆಗಾ ಆಕ್ಷನ್ಗೂ ಮುನ್ನ ಅಂದುಕೊಂಡಂತೆ ಆಟಗಾರರ ಖರೀದಿ ಮಾಡಿರೋ ರೆಡ್ ಆರ್ಮಿ, ಹೊಸ ಖದರ್ನಲ್ಲಿ ಅಂಗಳಕ್ಕೆ ಇಳಿಯಲು ಸಜ್ಜಾಗಿದೆ. ಡಿಫೆನ್ಸಿವ್ ಆಟ ಮುಗೀತು. ಈ ಸೀಸನ್ನಿಂದ ಆರ್ಸಿಬಿ ಸಿಂಹ ಘರ್ಜಿಸೋದು ಪಕ್ಕಾ. ಅಗ್ರೆಸ್ಸಿವ್ ಬ್ರ್ಯಾಂಡ್ ಆಫ್ ಕ್ರಿಕೆಟ್ ಆರ್ಸಿಬಿ ಆಡಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇಂದಿನಿಂದ 2 ದಿನ ಭರ್ಜರಿ ಮಳೆ; ನೀವು ಮನೆಯಿಂದ ಹೊರ ಬರೋ ಮುನ್ನ ಓದಲೇಬೇಕಾದ ಸ್ಟೋರಿ!
ಪವರ್ಪ್ಯಾಕ್ಡ್ ಮಿಡಲ್ ಆರ್ಡರ್.!
ಆರ್ಸಿಬಿ ತಂಡದ ಟಾಪ್ ಆರ್ಡರ್ ಸಖತ್ ಡೇಂಜರಸ್. ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್ ಹಾಗೂ ರಜತ್ ಪಟಿದಾರ್ರಂತ ಸಿಡಿಲಬ್ಬರದ ಬ್ಯಾಟರ್ಸ್ ಬಲ ಆರ್ಸಿಬಿಗಿದೆ. ಲಿಯಮ್ ಲಿವಿಂಗ್ ಸ್ಟೋನ್, ಟಿಮ್ ಡೆವಿಡ್, ರೊಮಾರಿಯೋ ಶೆಫರ್ಡ್ ಒಳಗೊಂಡ ಮಿಡಲ್ ಆರ್ಡರ್ ಪವರ್ ಪ್ಯಾಕ್ಡ್ ಆಗಿದೆ. ಲೋವರ್ ಆರ್ಡರ್ನಲ್ಲಿ ಕೃನಾಲ್ ಪಾಂಡ್ಯ ಸಿಡಿದೆದ್ರೆ, ಆರ್ಸಿಬಿಯನ್ನ ತಡೆಯೋದು ಅಸಾಧ್ಯದ ಮಾತು.
ಚಾಲೆಂಜ್ ಟ್ರಬಲ್ ಶೂಟ್ಗೆ ಪರ್ಫೆಕ್ಟ್ ಪ್ಲಾನ್
RCB ತಂಡಕ್ಕೆ ದೊಡ್ಡ ಹಿನ್ನಡೆಯಾಗಿರೋದೆ ಚಿನ್ನಸ್ವಾಮಿ ಚಾಲೆಂಜ್. ಈ ಚಾಲೆಂಜ್ ಗೆದ್ರೆ ಕ್ವಾಲಿಫೈಯರ್ ದಾರಿ ಸಲೀಸಾಗಲಿದೆ. ಹೋಂ ಗ್ರೌಂಡ್ ಚಿನ್ನಸ್ವಾಮಿ ಸ್ಟೇಡಿಯಂನ ಮರ್ಮವನ್ನ ಇಷ್ಟು ಸೀಸನ್ನಲ್ಲಿ ಆರ್ಸಿಬಿ ಅರ್ಥ ಮಾಡಿಕೊಂಡಿರಲಿಲ್ಲ. ಈ ಬಾರಿ ಚಿಕ್ಕ ಗ್ರೌಂಡ್ನಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರಕ್ಕೆ ಬ್ರೇಕ್ ಹಾಕಬಲ್ಲ ಬೌಲರ್ಗಳಿಗೆ ಮ್ಯಾನೇಜ್ಮೆಂಟ್ ಮಣೆ ಹಾಕಿದೆ. ಸಿಡಿಲಬ್ಬರ ಬ್ಯಾಟಿಂಗ್ ನಡೆಸೋ ಬ್ಯಾಟ್ಸ್ಮನ್ಗಳೂ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಅಲ್ಲಿಗೆ ಚಿನ್ನಸ್ವಾಮಿ ಚಾಲೆಂಜ್ ಟ್ರಬಲ್ ಶೂಟ್ ಆದಂತೆ.
ಇದನ್ನೂ ಓದಿ:ಖ್ಯಾತ ಅಂಕಣಕಾರ ಗಿರೀಶ್ ಲಿಂಗಣ್ಣಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ; ಶುಭ ಕೋರಿದ ನಿರ್ಮಲಾನಂದ ಸ್ವಾಮೀಜಿ
ಈ ಹಿಂದಿನ 17 ಸೀಸನ್ಗಳಲ್ಲಿದ್ದ ಆರ್ಸಿಬಿಗೂ ಈ ಸೀಸನ್ನ ಆರ್ಸಿಬಿಗೂ ಸಾಕಷ್ಟು ಡಿಫರೆನ್ಸ್ ಇದೆ. ಹಿಂದಿಗಿಂತ ಸಾಕಷ್ಟು ಬಲಿಷ್ಟ ಹಾಗೂ ಬ್ಯಾಲೆನ್ಸಿಂಗ್ ಆಗಿ ಆರ್ಸಿಬಿ ಪಡೆ ಕಾಣಿಸ್ತಿದೆ. ಹೀಗಾಗಿ ಅಭಿಮಾನಿಗಳ ವಲಯದಲ್ಲೂ ಕಪ್ ಗೆಲುವಿನ ಕನಸು ಹೆಚ್ಚಾಗಿದೆ. 2025ರಲ್ಲಾದ್ರೂ ಕಪ್ ನಮ್ದಾಗಲಿ ಅನ್ನೋ ಪ್ರಾರ್ಥನೆ ಶುರುವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್