ಮಾಕ್​​ ಆಕ್ಷನ್​​ನಲ್ಲಿ ಬರೋಬ್ಬರಿ 16 ಕೋಟಿ ನೀಡಿ ಪಂತ್​ ಖರೀದಿಸಿದ RCB; ಹೇಗಿತ್ತು ಹರಾಜು..?

author-image
Ganesh Nachikethu
Updated On
27 ಕೋಟಿಗೆ ಸೇಲಾದ ಪಂತ್​​ಗೆ ಸರ್ಕಾರದಿಂದ ಬಿಗ್​ ಶಾಕ್​​; ಕೈಗೆ ಸಿಗೋ ಹಣ ಇಷ್ಟೇನಾ?
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಭರ್ಜರಿ ತಯಾರಿ
  • ಮೆಗಾ ಹರಾಜಿಗೆ ಮುನ್ನ ಮಾಕ್​​​ ಆಕ್ಷನ್​ ನಡೆಸಿದ ಆರ್​​ಸಿಬಿ..!
  • ಮಾಕ್​ ಆಕ್ಷನ್​​ನಲ್ಲಿ ಪಂತ್​​ಗೆ ಮಣೆ ಹಾಕಿದ ಬೆಂಗಳೂರು ತಂಡ

2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆದಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿಗೆ ಮುನ್ನ ಎಲ್ಲಾ ತಂಡಗಳು ರೀಟೈನ್​ ಲಿಸ್ಟ್​ ಬಿಸಿಸಿಐಗೆ ಸಲ್ಲಿಸಿವೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಕ್ಯಾಪ್ಟನ್​​ ರಿಷಬ್​ ಪಂತ್​ ಅವರನ್ನೇ ರಿಲೀಸ್​ ಮಾಡಿದೆ. ಪಂತ್​ಗಾಗಿ ಆರ್​​ಸಿಬಿ ಹದ್ದಿನ ಕಣ್ಣಿಟ್ಟಿದೆ.

ಮಾಕ್​ ಆಕ್ಷನ್​​ನಲ್ಲಿ ಆರ್​​ಸಿಬಿಗೆ ಪಂತ್​​

ಇನ್ನು, ಮೆಗಾ ಹರಾಜಿಗೆ ಮುನ್ನ ಆರ್​​ಸಿಬಿಯಿಂದ ಮಾಕ್​​​ ಆಕ್ಷನ್​​ ನಡೆಸಲಾಯ್ತು. ಮಾಕ್​ ಆಕ್ಷನ್​​ನಲ್ಲಿ ಪಂತ್​ ಅವರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬರೋಬ್ಬರಿ 16 ಕೋಟಿ ನೀಡಿ ಖರೀದಿ ಮಾಡಿದೆ. ಕೆಕೆಆರ್​​, ಚೆನ್ನೈ ಮತ್ತು ಬೆಂಗಳೂರು ಫ್ರಾಂಚೈಸಿ ಮಧ್ಯೆ ಪಂತ್​ ಖರೀದಿಗೆ ಪೈಪೋಟಿ ನಡೆಯಿತು. ಕೊನೆಗೂ ಪಂತ್​​ ಆರ್​​ಸಿಬಿಗೆ ಮಾಕ್​ ಆಕ್ಷನ್​​ನಲ್ಲಿ ಸಿಕ್ಕರು.

ಡೆಲ್ಲಿಯಿಂದ ಪಂತ್​ಗೆ ಕೊಕ್​​

ಮುಂದಿನ ಸೀಸನ್​ಗಾಗಿ ​ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನಿಗಾಗಿ ಹುಡುಕಾಟ ಶುರು ಮಾಡಿದೆ. ಇದರ ಮಧ್ಯೆ ಕ್ಯಾಪ್ಟನ್​ ರಿಷಬ್ ಪಂತ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್​​ನ 2ನೇ ಇನ್ನಿಂಗ್ಸ್‌ನಲ್ಲಿ 99 ರನ್‌ ಚಚ್ಚಿದ ಪಂತ್​​ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಹೊತ್ತಲ್ಲೇ ಪಂತ್​​​ ಅವರನ್ನು ನಾಯಕತ್ವದಿಂದ ಡೆಲ್ಲಿ ಕ್ಯಾಪಿಟಲ್ಸ್ ತೆಗೆದು ಹಾಕಿದೆ. ಹಾಗಾಗಿಯೇ ತಂಡದಿಂದ ಕೈ ಬಿಟ್ಟಿದೆ.


">November 3, 2024

ಪಂತ್​ಗೆ ಆರ್​​ಸಿಬಿ ಮಣೆ

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗಾಗಿ ಸ್ಟಾರ್​ ಕ್ರಿಕೆಟರ್​ ಕೆ.ಎಲ್​ ರಾಹುಲ್​​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬೆನ್ನಲ್ಲೇ ಆರ್​​ಸಿಬಿ ಮತ್ತೋರ್ವ ಸ್ಟಾರ್​ ಕ್ರಿಕೆಟರ್​ಗೆ ಮಣೆ ಹಾಕಲಿದೆ ಎಂದು ತಿಳಿದು ಬಂದಿದೆ. ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್‌ ಸ್ಪೋಟಕ ಬ್ಯಾಟರ್‌ ರಿಷಭ್‌ ಪಂತ್‌ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಪಂತ್​​ ಆರ್​​ಸಿಬಿಗೆ ಬಂದರೆ ಮೂರು ಸ್ಲಾಟ್​ಗಳು ಫಿಲ್​ ಆಗಲಿವೆ ಎಂಬುದು ಮ್ಯಾನೇಜ್ಮೆಂಟ್​ ಪ್ಲಾನ್​​.

ಹರಾಜಿನಲ್ಲಿ ಆರ್​​ಸಿಬಿ ಅನುಭವಿ ಮಿಡಲ್​ ಆರ್ಡರ್​ ವಿಕೆಟ್​ ಕೀಪರ್​ ಬ್ಯಾಟರ್​ಗಾಗಿ ಹುಡುಕಾಟ ನಡೆಸಲಿದೆ. ಹೀಗಾಗಿ ಪಂತ್‌ ಆರ್​​ಸಿಬಿಗೆ ಬರಬಹುದು. ಇದರಿಂದ ಆರ್‌ಸಿಬಿ ತಂಡ ಮಾಡಿಕೊಂಡ ಪ್ಲ್ಯಾನ್‌ ವರ್ಕ್‌ ಆಗುತ್ತದೆ ಅನ್ನೋ ಚರ್ಚೆ ನಡೆಯುತ್ತಿದೆ.

ಪಂತ್​ ಒಳ್ಳೆ ಕ್ಯಾಪ್ಟನ್​​. ಆರ್‌ಸಿಬಿ ಬಲಿಷ್ಠ ತಂಡ ಕಟ್ಟೋ ಉದ್ದೇಶದಿಂದ ಯುವ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಪಂತ್​​ ಸಿಕ್ಕರೆ ಆರ್​​ಸಿಬಿ ಹಣದ ಹೊಳೆಯನ್ನೇ ಹರಿಸಬಹುದು. ಅಲ್ಲದೆ ಇವರು ವಿಕೆಟ್‌ ಕೀಪಿಂಗ್ ಮಿಡಲ್​ ಆರ್ಡರ್​ ಬ್ಯಾಟರ್​ ಆಗಿ ನ್ಯಾಯ ಒದಗಿಸಬಲ್ಲರು. ಹೀಗಾಗಿ ಆರ್‌ಸಿಬಿ ಒಂದೇ ಕಲ್ಲಿಗೆ ಮೂರು ಸ್ಲಾಟ್‌ಗಳನ್ನು ಫಿಲ್‌ ಮಾಡಿಕೊಳ್ಳು ಪ್ಲ್ಯಾನ್‌ ಮಾಡಿಕೊಂಡಿದೆ.

ಇದನ್ನೂ ಓದಿ: ಐಪಿಎಲ್​​ ಹರಾಜಿನಲ್ಲಿ ಬರೋಬ್ಬರಿ 1165 ಮಂದಿ ಭಾರತೀಯರು; ಇವ್ರೇ RCB ಮೈನ್​ ಟಾರ್ಗೆಟ್​​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment