ಮೆಗಾ ಹರಾಜಿನಲ್ಲಿ ಈ ಮೂವರೇ ಆರ್​​ಸಿಬಿ ಟಾರ್ಗೆಟ್​​; ಕಪ್​ ಗೆಲ್ಲಲು ಇವ್ರು ಬೇಕೇ ಬೇಕು

author-image
Ganesh Nachikethu
Updated On
ಎದುರಾಳಿಗಳಿಗೆ ನಡುಕ; ಆರ್​​​ಸಿಬಿ ತಂಡಕ್ಕೆ ಡೈನಾಮಿಕ್​​ ಬ್ಯಾಟರ್​ ರೀ ಎಂಟ್ರಿ!
Advertisment
  • 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹರಾಜು
  • ಮೆಗಾ ಹರಾಜಿಗೆ ಆರ್​​ಸಿಬಿ ತಂಡದಿಂದ ಭರ್ಜರಿ ಪ್ಲ್ಯಾನ್​​
  • ಈ ಮೂವರ ಆಟಗಾರರ ಮೇಲೆ ಕಣ್ಣಿಟ್ಟ ಆರ್​​ಸಿಬಿ ಟೀಮ್​​

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹರಾಜಿಗೆ ಮುನ್ನ ಬಿಸಿಸಿಐಗೆ ಎಲ್ಲಾ ತಂಡಗಳು ಮಾಲೀಕರು ರೀಟೈನ್​ ಲಿಸ್ಟ್​ ಸಲ್ಲಿಸಿದ್ದಾರೆ. ಮೆಗಾ ಹರಾಜು ನಡೆಸಲು ಬಿಸಿಸಿಐ ಭರ್ಜರಿ ತಯಾರಿ ನಡೆಸಿಕೊಂಡಿದೆ. ಎಲ್ಲಿ ಮತ್ತು ಯಾವಾಗ ನಡೆಯಲಿದೆ? ಎಂದು ಫೈನಲ್​​ ಆಗಬೇಕಿದೆ. ಇದರ ಮಧ್ಯೆ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು? ಎಂದು ಎಲ್ಲಾ ತಂಡಗಳು ಮಾಸ್ಟರ್​ ಪ್ಲ್ಯಾನ್​ ಮಾಡಿಕೊಂಡಿವೆ.

ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.

ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಇನ್ನು ಉಳಿದ ಸ್ಥಾನಗಳಿಗೆ ಆರ್​​​ಸಿಬಿ ಐಪಿಎಲ್‌ ಮೆಗಾ ಹರಾಜಿನಲ್ಲಿ ಆಟಗಾರರ ಹುಡಕಾಟ ನಡೆಸಲಿದೆ.

ಬೌಲರ್​​ಗಳ ಮೇಲೆ ಆರ್​​ಸಿಬಿ ಕಣ್ಣು

ಕಳೆದ ಹಲವು ಸೀಸನ್​ನಲ್ಲಿ ಆರ್​​ಸಿಬಿ ಕಳಪೆ ಪ್ರದರ್ಶನಕ್ಕೆ ಕಾರಣ ಬೌಲಿಂಗ್​ ವಿಭಾಗ. ಆರ್​​ಸಿಬಿ ತಂಡದ ವೀಕ್ನೆಸ್​​ ಕೂಡ ಬೌಲಿಂಗ್​​ ವಿಭಾಗವೇ. ಬೌಲಿಂಗ್​​ ವಿಭಾಗವನ್ನು ಬಲಪಡಿಸೋ ನಿಟ್ಟಿನಲ್ಲಿ ಆರ್​​ಸಿಬಿ ಕೆಲಸ ಮಾಡಲಿದೆ. ಹಾಗಾಗಿ ಮೆಗಾ ಹರಾಜಿನಲ್ಲಿ ಈ ಮೂವರನ್ನು ಖರೀದಿ ಮಾಡಲು ಮುಂದಾಗಿದೆ.

ಮಿಚೆಲ್ ಸ್ಟಾರ್ಕ್‌ ಮೇಲೆ ಕಣ್ಣು

ಐಪಿಎಲ್‌ 2024ರ ಚಾಂಪಿಯನ್‌ ಕೆಕೆಆರ್​ ತಂಡದ ಸದಸ್ಯ ಮಿಚೆಲ್ ಸ್ಟಾರ್ಕ್‌. ಇವರನ್ನು ಕೆಕೆಆರ್​ ತಂಡದಿಂದ ಕೈ ಬಿಡಲಾಗಿದೆ. ವಿಶ್ವದ ಖ್ಯಾತ ಬೌಲರ್‌ ಆಗಿರೋ ಮಿಚೆಲ್​ ಸ್ಟಾರ್ಕ್​​ಗೆ ಮಣೆ ಹಾಕಲು ಆರ್​​ಸಿಬಿ ಪ್ಲ್ಯಾನ್​ ಮಾಡಿಕೊಂಡಿದೆ. ಇವರು ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಸ್ಟಾರ್​ ಬ್ಯಾಟರ್ಸ್​​ ಅನ್ನು ಕಟ್ಟಿ ಹಾಕಬಲ್ಲರು.

ಬೆಂಗಳೂರು ತಂಡದಿಂದ ಅರ್ಷದೀಪ್​​​ ಟಾರ್ಗೆಟ್​

ಪಂಜಾಬ್​​ನಿಂದ ರಿಲೀಸ್​ ಆಗಿರೋ ವೇಗದ ಬೌಲರ್​​ ಅರ್ಷದೀಪ್‌ ಸಿಂಗ್ ಅವರನ್ನು ಖರೀದಿ ಮಾಡಲು ಆರ್​​ಸಿಬಿ ಮುಂದಾಗಿದೆ. ಇವರು ಡೆತ್‌ ಓವರ್‌ಗಳಲ್ಲಿ ಬೌಲ್‌ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಟಿ20 ವಿಶ್ವಕಪ್‌ ವೇಳೆ ಭಾರತ ತಂಡದ ಪರ ಅಮೋಘ ಪ್ರದರ್ಶನ ನೀಡಿರೋ ಕಾರಣ ಆರ್​​ಸಿಬಿ ಮಣೆ ಹಾಕಲಿದೆ.

ಕೆಕೆಆರ್‌ ಬೌಲರ್‌ ಮೇಲೆ ಕಣ್ಣು

ಕೆಕೆಆರ್​​ ತಂಡದಿಂದ ಕೈ ಬಿಡಲಾದ ವೈಭವ್ ಆರೋರ್‌ ಅವರಿಗೆ ಆರ್‌ಸಿಬಿ ಗಾಳ ಹಾಕುವ ಸಾಧ್ಯತೆ ಇದೆ. ಇವರು ಪಂದ್ಯದ ಯಾವುದೇ ಹಂತದಲ್ಲಾದ್ರೂ ಬೌಲಿಂಗ್​ ಮಾಡಬಲ್ಲರು. ಆರ್‌ಸಿಬಿ ಈ ಪ್ಲೇಯರ್‌ ಅವರನ್ನು ಟಾರ್ಗೆಟ್‌ ಮಾಡಿ ತನ್ನ ಬೌಲಿಂಗ್‌ ವಿಭಾಗವನ್ನು ಬಲಿಷ್ಠಗೊಳಿಸಲು ಮುಂದಾಗಿದೆ.

ಇದನ್ನೂ ಓದಿ: ಆರ್​​ಸಿಬಿಯಿಂದ ಸ್ಟಾರ್​ ಆಟಗಾರನಿಗೆ ಕೊಕ್​​; ತನ್ನನ್ನು ಕೈ ಬಿಟ್ಟ ಬಗ್ಗೆ ಮೌನಮುರಿದ ಮ್ಯಾಕ್ಸಿ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment