/newsfirstlive-kannada/media/post_attachments/wp-content/uploads/2025/03/RCB_GREEN_JERSY.jpg)
ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಕೆಕೆಆರ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಈ ವರ್ಷದ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿರುವ ಆರ್​ಸಿಬಿ ಹೊಸ ನಾಯಕನ ನೇತೃತ್ವದಲ್ಲಿ ಟ್ರೋಫಿ ಗೆಲ್ಲುವ ಬಹು ನಿರೀಕ್ಷೆ ಹೊಂದಿದೆ. ಇದರ ಜೊತೆಗೆ ಪರಿಸರಕ್ಕೂ ಹೆಚ್ಚು ಮಹತ್ವ ಕೊಡುವ ರಾಯಲ್ ಚಾಲೆಂಜರ್ಸ್, ಈ ಸಲನೂ ಪಂದ್ಯವೊಂದರಲ್ಲಿ ಗ್ರೀನ್ ಜೆರ್ಸಿ ತೊಡಲು ಮುಂದಾಗಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಗೋ ಗ್ರೀನ್​ ಡೇ ಸಂಪ್ರದಾಯವನ್ನು ಬೆಂಗಳೂರು ಟೀಮ್ ಮುಂದುವರಿಸಲಿದೆ. ಮುಂಬರುವ ಯಾವುದಾದ್ರೂ ಪಂದ್ಯದಲ್ಲಿ ಆರ್​ಸಿಬಿಯ ಎಲ್ಲ ಆಟಗಾರರು ಹಸಿರು ಜೆರ್ಸಿ ಧರಿಸಿ ಅಖಾಡಕ್ಕೆ ಇಳಿಯಲಿದ್ದಾರೆ. ಆದರೆ ಯಾವ ತಂಡದ ಜೊತೆ ಆಡುವಾಗ ಹಸಿರು ಜೆರ್ಸಿ ಧರಿಸುತ್ತಾರೆ ಎನ್ನುವುದು ಇನ್ನು ಅಧಿಕೃತವಾಗಿಲ್ಲ. ಈ ಬಗ್ಗೆ ಫ್ರಾಂಚೈಸಿ ಸದ್ಯದಲ್ಲೇ ಮಾಹಿತಿ ನೀಡಬಹುದು ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2025/03/RCB_GREEN_KOHLI.jpg)
ಸದ್ಯಕ್ಕಂತೂ ಕಾರ್ಯಕ್ರಮ ಒಂದರಲ್ಲಿ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್, ಆಲ್​ರೌಂಡರ್ ಕೃನಾಲ್ ಪಾಂಡ್ಯ, ಓಪನರ್ ಫಿಲಿಫ್ ಸಾಲ್ಟ್​, ದೇವದತ್ತ ಪಡಿಕ್ಕಲ್ ಸೇರಿದಂತೆ ಆರ್​ಸಿಬಿ ಪ್ಲೇಯರ್ಸ್​ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಲ್ಲಿನ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಬರುತ್ತಿದ್ದಂತೆ ಹೋ.. ಎಂದು ಕೂಗಾಡಿದ್ದಾರೆ.
2011ರಿಂದಲೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿಯು ಐಪಿಎಲ್​ ಟೂರ್ನಿಯಲ್ಲಿ ಆಡುವ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸಿ ಅಖಾಡಕ್ಕೆ ಇಳಿಯಲಿದೆ. ಲಾಯಲ್​ ಫ್ಯಾನ್ಸ್ ಹೊಂದಿರುವ ಆರ್​ಸಿಬಿ, ಅಭಿಮಾನಿಗಳಲ್ಲಿ ಸ್ವಚ್ಛ ಹಾಗೂ ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಜೆರ್ಸಿಯನ್ನು ಧರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us