/newsfirstlive-kannada/media/post_attachments/wp-content/uploads/2024/09/RCB_VIRAT-1.jpg)
2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಭರ್ಜರಿ ಕಮ್ಬ್ಯಾಕ್ ಮಾಡಿ ಪ್ಲೇ ಆಫ್ಗೆ ಎಂಟ್ರಿ ನೀಡಿತ್ತು. ಐಪಿಎಲ್ 2024ರ ಜರ್ನಿ ಮುಗಿಸಿರೋ ಆರ್ಸಿಬಿ 2025ರಲ್ಲಿ ನಡೆಯುವ ಸೀಸನ್ಗಾಗಿ ಈಗಿನಿಂದಲೇ ಪ್ಲಾನ್ ಮಾಡಿಕೊಂಡಿದೆ. ಈ ವರ್ಷ ಪ್ಲೇ-ಆಫ್ಗೆ ಪ್ರವೇಶ ಮಾಡಿದ್ದರೂ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಹೇಗಾದರೂ ಮಾಡಿ ಮುಂದಿನ ವರ್ಷ ಟ್ರೋಫಿ ಗೆಲ್ಲುವ ಇರಾದೆಯೊಂದಿಗೆ ಯೋಜನೆ ರೂಪಿಸುತ್ತಿದೆ.
ಐಪಿಎಲ್ ಸೋತಿರುವ ಫ್ರಾಂಚೈಸಿಗಳ ಚಿತ್ತ ಮೆಗಾ ಹರಾಜಿನತ್ತ ನೆಟ್ಟಿದೆ. ಐಪಿಎಲ್ 2025 ಸೀಸನ್ಗೂ ಮೊದಲು ಫ್ರಾಂಚೈಸಿಗಳು ತಮ್ಮ ತಂಡವನ್ನು ಪುನರ್ ರಚನೆ ಮಾಡಲಿವೆ. ಐಪಿಎಲ್ ನಿಯಮದ ಪ್ರಕಾರ ಒಂದು ಫ್ರಾಂಚೈಸಿ ಗರಿಷ್ಠ 6 ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನು ಕೈಬಿಡಬೇಕು. ಅಂತೆಯೇ ಮೊದಲ IPL ಪ್ರಶಸ್ತಿ ಹುಡುಕಾಟದಲ್ಲಿರುವ ಆರ್ಸಿಬಿ ತಂಡವನ್ನು ಬಲಪಡಿಸುವ ಸಾಧ್ಯತೆ ಇದೆ. ಒಂದು ವೇಳೆ ಆರ್ಸಿಬಿ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ ಅವರು ಯಾರು ಎಂಬ ಪ್ರಶ್ನೆ ಸಜವಾಗಿಯೇ ಮೂಡುತ್ತದೆ.
ಯಾರನ್ನೆಲ್ಲ ಉಳಿಸಿಕೊಳ್ಳುತ್ತೆ ಆರ್ಸಿಬಿ..?
ಯಾವುದೇ ಅನುಮಾನವಿಲ್ಲದೆ ಫ್ರಾಂಚೈಸಿಯ ಭಾಗವಾಗುವ ವ್ಯಕ್ತಿ ಅಂದರೆ ವಿರಾಟ್ ಕೊಹ್ಲಿ. ಪ್ರಸಕ್ತ ಋತುವಿನಲ್ಲಿ 741 ರನ್ ಗಳಿಸಿರುವ ಕೊಹ್ಲಿ, ಆರ್ಸಿಬಿಯ ಸಮರ್ಥ ಆಟಗಾರ. ಅವರನ್ನು ಯಾವುದೇ ಕಾರಣಕ್ಕೂ ಫ್ರಾಂಚೈಸಿಯು ಕೈಬಿಡುವುದಿಲ್ಲ.
RCBಯ ಉದಯೋನ್ಮುಖ ತಾರೆಗಳಲ್ಲಿ ವಿಲ್ ಜಾಕ್ಸ್ ಕೂಡ ಒಬ್ಬರು. ಯುವ ಇಂಗ್ಲಿಷ್ ಬ್ಯಾಟರ್ ತಮ್ಮ ಪವರ್ ಹಿಟ್ಟಿಂಗ್ಗೆ ಹೆಸರುವಾಸಿ. ಇವರನ್ನು ಮತ್ತೆ ರಿಟೈನ್ ಮಾಡಿಕೊಳ್ಳುವ ಪ್ಲಾನ್ನಲ್ಲಿ ಆರ್ಸಿಬಿ ಇದೆ ಎನ್ನಲಾಗುತ್ತಿದೆ.
ಮೊಹಮ್ಮದ್ ಸಿರಾಜ್ RCBಯ ಅನುಭವಿ ಆಟಗಾರ. ಭಾರತ ತಂಡದ ವೇಗಿಯೂ ಆಗಿರುವ ಸಿರಾಜ್, ಈ ಋತುವಿನಲ್ಲಿ ಪ್ರದರ್ಶನ ಅಷ್ಟಕಷ್ಟೇ. ಆದರೆ ಇವರನ್ನು ಕೈಬಿಡುವ ಯಾವುದೇ ಪ್ಲಾನ್ ಆರ್ಸಿಬಿಗೆ ಎಲ್ಲ ಎನ್ನಲಾಗಿದೆ. ಚಹಾಲ್ ಮತ್ತು ಹರ್ಷಲ್ ಪಟೇಲ್ ವಿಚಾರದಲ್ಲಿ ಮಾಡಿದ ತಪ್ಪನ್ನು ಮತ್ತೆ ಆರ್ಸಿಬಿ ಮಾಡಲ್ಲ ಎನ್ನಲಾಗುತ್ತಿದೆ.
ಐಪಿಎಲ್ 2024 ರ ಹರಾಜಿನಲ್ಲಿ ಯಶ್ ದಯಾಳ್ ಅವರನ್ನು RCB ಆಯ್ಕೆ ಮಾಡಿತ್ತು. ಕಳೆದ ವರ್ಷ ಗುಜರಾತ್ ತಂಡ ಅವರನ್ನು ಕೈಬಿಟ್ಟಿತ್ತು. ಆರ್ಸಿಬಿಗೆ ಬಂದ ಬಳಿಕ ದಯಾಳ್ ಮತ್ತೆ ಲಯಕ್ಕೆ ಮರಳಿದ್ದಾರೆ. ಅವರನ್ನು ಮುಂದಿನ ಸೀಸನ್ಗೆ ಉಳಿಸಿಕೊಳ್ಳುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್