/newsfirstlive-kannada/media/post_attachments/wp-content/uploads/2025/04/RCB-12.jpg)
ಐಪಿಎಲ್ ಸೀಸನ್ 18 ಆರಂಭವಾಗಿ 10 ದಿನ ಕಳೆದಿದೆ. ಕಲರ್ಫುಲ್ ಕ್ರಿಕೆಟ್ ಲೀಗ್ನ ಕಾವು ಇಡೀ ಭಾರತವನ್ನ ಆವರಿಸಿದೆ. ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಇವತ್ತಿನಿಂದ ಅಸಲಿ ಫೀವರ್ ಶುರುವಾಗಲಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಸೀಸನ್ 18ರ ಮೊದಲ ಪಂದ್ಯವನ್ನಾಡಲು ಪ್ಲೇ ಬೋಲ್ಡ್ ಆರ್ಮಿ ರೆಡಿಯಾಗಿದ್ದು, ಆರ್ಸಿಬಿಗೆ ಅಭಿಮಾನಿಗಳ ನೂರಾನೆ ಬಲ ಸಿಕ್ಕಿದೆ.
ಇದನ್ನೂ ಓದಿ: ಲಕ್ಕಿ ಕ್ಯಾಪ್ಟನ್ ರಜತ್..! ಪಾಟೀದಾರ್ ನಾಯಕತ್ವದಲ್ಲಿ RCB ವಾತಾವರಣ ಫುಲ್ ಚೆಂಜ್..!
ಈಗಾಗಲೇ ಕೊಲ್ಕತ್ತಾ, ಚೆನ್ನೈನಲ್ಲಿ ಗೆದ್ದು ಬೀಗಿರುವ ಆರ್ಸಿಬಿಗೆ ಇಂದು ಮತ್ತಷ್ಟು ಬಲ ಬಂದಿದೆ. ಮೊದಲ ಕಾರಣ, ತವರು ಅಂಗಳದಲ್ಲಿ ಪಂದ್ಯ ನಡೆಯುತ್ತಿರೋದು. ಮೈದಾನ ಹಾಗೂ ಪಿಚ್ನ ಗುಣಲಕ್ಷಣದ ಬಗ್ಗೆ ಇರುವ ಹಿಂಚಿಂಚು ಮಾಹಿತಿಯೇ ಆರ್ಸಿಬಿಗೆ ಆತ್ಮವಿಶ್ವಾಸ ಹೆಚ್ಚಿಸಲಿದೆ.
ಇದನ್ನೂ ಓದಿ: ಲಕ್ಕಿ ಕ್ಯಾಪ್ಟನ್ ರಜತ್..! ಪಾಟೀದಾರ್ ನಾಯಕತ್ವದಲ್ಲಿ RCB ವಾತಾವರಣ ಫುಲ್ ಚೆಂಜ್..!
ಕಳೆದ ಎರಡೂ ಪಂದ್ಯಗಳು ಔಟ್ ಸೈಡ್ ನಡೆದಿದ್ದವು. ಮೊದಲ ಪಂದ್ಯ ಕೋಲ್ಕತ್ತದಲ್ಲಿ ನಡೆದಿತ್ತು. ಈ ವೇಳೆ ಆರ್ಸಿಬಿ ಆಟಗಾರರಿಗೆ ಮೈದಾನದ ಗ್ಯಾಲರಿಯಲ್ಲಿ ಅಭಿಮಾನಿಗಳ ಕೊರತೆ ಕಾಡಿತ್ತು. ಕೋಲ್ಕತ್ತ ಅಭಿಮಾನಿಗಳೇ ಹೆಚ್ಚಿದ್ದರು. ಅದೇ ರೀತಿ ಸಿಎಸ್ಕೆ ವಿರುದ್ಧ ಆಡುವಾಗಲೂ ಚೆನ್ನೈ ಸೂಪರ್ ಕಿಂಗ್ಸ್ನ ಅಭಿಮಾನಿಗಳ ಬಳಗವೇ ದೊಡ್ಡದಿತ್ತು. ಆದರೆ ಇಂದು ಹಾಗೆ ಅಲ್ಲ.
ಇದನ್ನೂ ಓದಿ: GT ವಿರುದ್ಧ ಆರ್ಸಿಬಿಗೆ ಬಿಗ್ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!
ಆರ್ಸಿಬಿಗೆ ಬೆನ್ನೆಲುಬಾಗಿ ನಿಂತಿರುವ ಅಭಿಮಾನಿಗಳ ಸಾಗರ ಇಂದು ಚಿನ್ನಸ್ವಾಮಿಯಲ್ಲಿ ಇರಲಿದೆ. ಅಭಿಮಾನಿಗಳ ಅಭಿಮಾನ, ಬೆಂಬಲವೇ ಆರ್ಸಿಬಿ ಆಟಗಾರರಿಗೆ ಸ್ಫೂರ್ತಿ ಆಗಲಿದೆ. ಹೀಗಾಗಿ ಇವತ್ತು ನಡೆಯವ ಪಂದ್ಯಕ್ಕೆ ಆರ್ಸಿಬಿ ಆತ್ಮವಿಶ್ವಾಸಕ್ಕೆ, ಜಿದ್ದಾಜಿದ್ದಿನ ಪೈಪೋಟಿ ನಡೆಸಲು ಅಭಿಮಾನಿಗಳ ನೂರಾನೆ ಬಲ ಸಿಗಲಿದೆ. ಅಂತೆಯೇ ಎದುರಾಳಿ ಗುಜರಾತ್ಗೆ ಗುನ್ನಾ ಕೊಟ್ಟು ಹ್ಯಾಟ್ರಿಕ್ ಗೆಲುವು ಸಾಧಿಸಲು ತುದಿಗಾಲಲ್ಲಿ ನಿಂತಿದೆ ನಮ್ಮ ಆರ್ಸಿಬಿ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ದತ್ತು ಪುತ್ರನದ್ದೇ ಕಿಂಗ್ಡಮ್; ಶತಕ ಸರದಾರನ ದಾಖಲೆಗಳೇ ಅದ್ಭುತ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್