ಜಸ್ಟ್ 10 ಸೆಕೆಂಡ್​ನಲ್ಲಿ ಭಾರತದ ಷೇರು ಮಾರುಕಟ್ಟೆಗೆ 20 ಲಕ್ಷ ಕೋಟಿ ನಷ್ಟ, ಈ ಮಹಾಕುಸಿತಕ್ಕೆ ಕಾರಣಗಳೇನು?

author-image
Ganesh
Updated On
ಜಸ್ಟ್ 10 ಸೆಕೆಂಡ್​ನಲ್ಲಿ ಭಾರತದ ಷೇರು ಮಾರುಕಟ್ಟೆಗೆ 20 ಲಕ್ಷ ಕೋಟಿ ನಷ್ಟ, ಈ ಮಹಾಕುಸಿತಕ್ಕೆ ಕಾರಣಗಳೇನು?
Advertisment
  • ಟ್ರಂಪ್​ ಹೊಡೆತಕ್ಕೆ ನಡುಗಿದ ಭಾರತದ ಷೇರು ಮಾರುಕಟ್ಟೆ..!
  • ಟ್ರಂಪ್ ದುಬಾರಿ ಆಮದು ಸುಂಕಕ್ಕೆ ಹೆದರಿದ ಹೂಡಿಕೆದಾರರು
  • ಭಾರತದ ಷೇರುಮಾರುಕಟ್ಟೆಯ ಮಹಾಕುಸಿತಕ್ಕೆ ಕಾರಣಗಳೇನು?

ಬೆಂಗಳೂರು: ಡೊನಾಲ್ಡ್​ ಟ್ರಂಪ್​ ಅವರ ‘ಹೊಸ ತೆರಿಗೆ ನೀತಿ’ಯಿಂದಾಗಿ ವಿಶ್ವದ ಷೇರು ಮಾರುಕಟ್ಟೆಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭಾರತೀಯ ಸ್ಟಾಕ್ ಮಾರ್ಕೆಟ್ ಸೇರಿದಂತೆ ವಿಶ್ವದ ದೈತ್ಯ ಮಾರುಕಟ್ಟೆಗಳು ಅಲುಗಾಡಿವೆ.

ಬೆಳಗ್ಗೆ ಭಾರತೀಯ ಷೇರುಪೇಟೆಯಲ್ಲಿ ಸೆನ್ಸೆಕ್ಸ್​ 3000 ಪಾಯಿಂಟ್ಸ್​​ಗಿಂತಲೂ ಕಡಿಮೆ ಕುಸಿತಕಂಡಿದೆ. ನಿಫ್ಟಿ ಸೂಚ್ಯಂಕ 750 ಪಾಯಿಂಟ್ಸ್​ ಕುಸಿದಿದೆ. ಟ್ರಂಪ್​ ಅವರ ಹೊಸ ಆಮದು ನೀತಿಯಿಂದಾಗಿ ಹೂಡಿಕೆದಾರರಿಗೆ ಆತಂಕ ಶುರುವಾಗಿದ್ದು, ಕಂಪನಿಗಳು ತಮ್ಮೆಲ್ಲ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿವೆ.

ಇದನ್ನೂ ಓದಿ: ಟ್ರಂಪ್ ತೆರಿಗೆ ಯುದ್ಧಕ್ಕೆ ನಡುಗಿದ ಜಗತ್ತು.. ಭಾರತ ಸೇರಿ ಜಾಗತಿಕ ಷೇರು ಮಾರುಕಟ್ಟೆಗಳು ತಲ್ಲಣ..!

ಕಳೆದ ವಾರ ಜಾಗತಿಕವಾಗಿ 5 ಟ್ರಿಲಿಯನ್ ಡಾಲರ್ ಕುಸಿತವಾಗಿತ್ತು. ಭಾರತದ ಷೇರುಪೇಟೆಯಲ್ಲಿ 10 ಸೆಕೆಂಡ್​ನಲ್ಲಿ 20 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿಯಾಗಿದೆ. ಭಾರತದ ಷೇರು ಮಾರುಕಟ್ಟೆ ಒಟ್ಟಾರೆ ಮೌಲ್ಯ 403 ಲಕ್ಷ ಕೋಟಿಯಿಂದ 384 ಲಕ್ಷ ಕೋಟಿ ರೂಪಾಯಿಗೆ ಕುಸಿತವಾಗಿದೆ.

ಭಾರತದಲ್ಲಿ ಮಹಾಕುಸಿತಕ್ಕೆ ಕಾರಣಗಳೇನು?

ಜಾಗತಿಕ ಷೇರು ಮಾರಾಟ ಭರಾಟೆ: ಏಷ್ಯಾ, ಯೂರೋಪ್, ಅಮೆರಿಕಾ ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟವಾಗಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟ ಹೆಚ್ಚಾಗಿರೋದ್ರಿಂದ ಸಹಜವಾಗಿಯೇ ಭಾರತದ ಷೇರುಪೇಟೆ ಏರುಪೇರು ಆಗಿದೆ. ಇದನ್ನು ಟ್ರಂಪ್ ‘ಆಮದು ಸುಂಕ ಮೆಡಿಸಿನ್’ ಎಂದು ಬಣ್ಣಿಸಿದ್ದಾರೆ.

ಆಮದು ಸುಂಕದ ಇಂಪ್ಯಾಕ್ಟ್ ಇನ್ನೂ ಖಚಿತವಾಗಿಲ್ಲ: ಟ್ರಂಪ್ ಅವರ ಆಮದು ಸುಂಕಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಇನ್ನೂ ಗೊಂದಲ ಇದೆ. ದುಬಾರಿ ತೆರಿಗೆ ವಿಧಿಸಲು ಟ್ರಂಪ್ ನಿರ್ಧಾರ ಮಾಡಿದ್ದಾರೆ. ಇದನ್ನು ವಿಶ್ವದ ಬಹುತೇಕ ರಾಷ್ಟ್ರಗಳು ವಿರೋಧಿಸಿವೆ. ಈ ಸಂಬಂಧ ಆಯಾ ದೇಶದ ನಾಯಕರು ಅಮೆರಿಕ ಜೊತೆ ಮಾತುಕತೆ ನಡೆಸಿದ್ದರೂ, ಒಂದು ಧನಾತ್ಮಕ ನಿಲುವಿಗೆ ಬಂದಿಲ್ಲ. ಮಾತುಕತೆಯಿಂದ ಪಾಸಿಟಿವ್ ತೀರ್ಮಾನ ಬರದ ಕಾರಣ ಷೇರುಗಳ ಮಾರಾಟ ಹೆಚ್ಚಾಗಿದೆ.

ಇದನ್ನೂ ಓದಿ: ಐಶ್ವರ್ಯ ಸಿಂಧೋಗಿ, ಶಿಶಿರ್​ ಕಡೆಯಿಂದ ಫ್ಯಾನ್ಸ್​ಗೆ ಬಿಗ್​ ಅನೌನ್ಸ್​ಮೆಂಟ್; ಏನದು?

ಆರ್ಥಿಕ ಬೆಳವಣಿಗೆ ಕುಸಿಯುವ ಭೀತಿ: ದುಬಾರಿ ಸುಂಕ ನೀತಿಯಿಂದಾಗಿ ಹಣದುಬ್ಬರ, ಆರ್ಥಿಕ ಬೆಳವಣಿಗೆ ಕುಸಿಯುವ ಭೀತಿಯಾಗಿದೆ. ಹೀಗಾಗಿ ಷೇರು ಮಾರುಕಟ್ಟೆಗಳು ಅಲುಗಾಡಲು ಶುರುವಾಗಿವೆ.

ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ: ಏಪ್ರಿಲ್ ತಿಂಗಳಲ್ಲಿ 13,750 ಕೋಟಿ ರೂಪಾಯಿ ಎಫ್‌ಪಿಐ ಹಿಂತೆಗೆದುಕೊಳ್ಳಲಾಗಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಬಂಡವಾಳ ಹೂಡಲು ಹಿಂದೇಟು ಹಾಕಿದ್ದಾರೆ.
ಆರ್‌ಬಿಐ ಎಂಪಿಸಿ, ನಾಲ್ಕನೇ ತ್ರೈಮಾಸಿಕದ ಆದಾಯದ ಬಗ್ಗೆ ಗಮನ: ಈ ವಾರ ಆರ್‌ಬಿಐ ದ್ವೈಮಾಸಿಕ ಹಣಕಾಸು ಸಮಿತಿ ಸಭೆ ನಿಗದಿಯಾಗಿದೆ. ಈ ವಾರ ರೆಪೋ ದರ ಕಡಿತ ಮಾಡುವ ನಿರೀಕ್ಷೆ ಇದೆ. ಇದರಿಂದ ಬ್ಯಾಂಕ್ ಸಾಲದ ಬಡ್ಡಿದರಗಳು ಕಡಿಮೆಯಾಗುವ ನಿರೀಕ್ಷೆ ಇದೆ. ಇದರಿಂದಲೂ ಭಾರತದ ಷೇರುಪೇಟೆಯಲ್ಲಿ ಷೇರು ಬೆಲೆ ಕುಸಿತವಾಗಿದೆ.

ಇದನ್ನೂ ಓದಿ: ಕರ್ನಾಟಕ ಆರೋಗ್ಯ ಇಲಾಖೆ ಟೆನ್ಷನ್ ಹೆಚ್ಚಿಸಿದ ಈ ಕಾಯಿಲೆ.. ಜನರೇ ಇಂದೇ ಎಚ್ಚೆತ್ತುಕೊಳ್ಳಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment