/newsfirstlive-kannada/media/post_attachments/wp-content/uploads/2025/03/NItin-Gadkari.jpg)
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಬಹಳ ವಿಶಿಷ್ಟವಾದ ಆದಾಯದ ಮೂಲವನ್ನು ಬಹಿರಂಗಪಡಿಸಿದ್ದಾರೆ. ಖಾಸಗಿ ವಾಹಿನಿ ಒಂದರ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿರುವ ಅವರು.. ತಮ್ಮ ಸಂಸದೀಯ ಕ್ಷೇತ್ರ ನಾಗ್ಪುರವನ್ನು ಉಲ್ಲೇಖಿಸಿ ವಾರ್ಷಿಕವಾಗಿ 300 ಕೋಟಿ ರೂಪಾಯಿ ಆದಾಯವನ್ನು ಹೇಗೆ ಗಳಿಸುತ್ತಿದ್ದಾರೆ ಅಂತಾ ವಿವರಿಸಿದರು.
ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಉತ್ತರ ಪ್ರದೇಶದ ಮಥುರಾದಲ್ಲಿ ಒಂದು ತ್ಯಾಜ್ಯ ನೀರಾವರಿ ಯೋಜನೆ (Waste water project) ಪ್ರಾರಂಭಿಸಿದ್ದೆ. ಇದರಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮಥುರಾ ಸಂಸ್ಕರಣಾಗಾರಕ್ಕೆ ಮಾರಾಟ ಮಾಡಲಾಯಿತು. ಇದಕ್ಕೆ ಸರ್ಕಾರ 40% ಮತ್ತು ಖಾಸಗಿ ಹೂಡಿಕೆದಾರರು 60% ಬಂಡವಾಳ ಹಾಕಿದ್ದಾರೆ. ಮೊದಲ ಬಾರಿಗೆ ಆರಂಭಿಸಿದ ಈ ದ್ರವ ತ್ಯಾಜ್ಯ ನಿರ್ವಹಣೆ ಪ್ಲಾನ್ ಸಾಕಷ್ಟು ಯಶಸ್ವಿಯಾಯಿತು ಎಂದರು.
ಇದನ್ನೂ ಓದಿ: ಸಿಎಸ್ಕೆ ತಂಡದ ಈ ಬ್ರಹ್ಮಾಸ್ತ್ರ ಎದುರಿಸೋದೇ RCBಗೆ ಇವತ್ತು ದೊಡ್ಡ ಚಾಲೆಂಜ್..!
ಅದೇ ರೀತಿ, ನಾಗ್ಪುರ ಮಹಾನಗರ ಪಾಲಿಕೆಯಲ್ಲಿ ಶೌಚಾಲಯದ ನೀರನ್ನು ಮಾರಾಟ ಮಾಡಲಾಗುತ್ತಿದೆ. ಯಾರೂ ಇದನ್ನು ನಂಬಲ್ಲ. ಆದರೆ ನಾವು ಶೌಚಾಲಯದ ನೀರನ್ನು ಮಾರಾಟ ಮಾಡುವ ಮೂಲಕ ವರ್ಷಕ್ಕೆ 300 ಕೋಟಿ ರೂಗಳಿಸ್ತೇವೆ. ದೇಶದ ಪ್ರತಿಯೊಂದು ನಗರದಲ್ಲಿ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿ ಬಳಸಿದರೆ, ಘನತ್ಯಾಜ್ಯ ನಿರ್ವಹಣೆ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಉತ್ತಮ ನೀತಿ ರೂಪುಗೊಳ್ಳುತ್ತದೆ. ಅದನ್ನು ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಹೈಡ್ರೋಜನ್ ಭವಿಷ್ಯದ ಇಂಧನ..!
ಹೈಡ್ರೋಜನ್ ಭವಿಷ್ಯದ ಇಂಧನ ಎಂದರು. ಗಾಜು, ಲೋಹ ಮತ್ತು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಸಾವಯವ ತ್ಯಾಜ್ಯವನ್ನು ಬಯೋಡೈಜೆಸ್ಟರ್ಗೆ ಹಾಕುವುದರಿಂದ ಮೀಥೇನ್ ಬಿಡುಗಡೆಯಾಗುತ್ತದೆ. ಮೀಥೇನ್ಗೆ CO2 ಸೇರಿಸುವ ಮೂಲಕ ಹೈಡ್ರೋಜನ್ ಉತ್ಪಾದಿಸಲಾಗುತ್ತದೆ. ಮತ್ತು ಆ ಹೈಡ್ರೋಜನ್ ಅನ್ನು ವಾಹನಗಳಿಗೆ ವಿಭಿನ್ನ ರೀತಿಯಲ್ಲಿ ಬಳಸಲಾಗುತ್ತದೆ ಎಂದು ತಿಳಿಸಿದರು. ಕಡಿಮೆ ಬೆಲೆಗೆ ಹೈಡ್ರೋಜನ್ ಯಶಸ್ವಿಯಾಗಿ ಉತ್ಪಾದಿಸಿದರೆ ಭಾರತಕ್ಕೆ ಲಾಭ ಆಗಲಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಬರಲಿದೆ ಕರ್ನಾಟಕದ 14 ದೇಗುಲಗಳ ಪ್ರಸಾದ; ಇ-ಪ್ರಸಾದ ಸೇವೆ ಆರಂಭ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ