Advertisment

ಜಮೀರ್​ ನಿವಾಸದಲ್ಲಿ ಹೈಡ್ರಾಮಾ.. ರೂಪೇಶ್ ರಾಜಣ್ಣನ ವಶಕ್ಕೆ ಪಡೆದ ಪೊಲೀಸರು..!

author-image
Veena Gangani
Updated On
ಅರ್ಜುನ್ ಜನ್ಯ ಸೇರಿ ಅನೇಕ ಸಂಗೀತ ನಿರ್ದೇಶಕರಿಗೆ ವಾರ್ನಿಂಗ್ ಕೊಟ್ಟ ರೂಪೇಶ್ ರಾಜಣ್ಣ
Advertisment
  • ಜಮೀರ್ ಸರ್ಕಾರಿ ನಿವಾಸದ ಮುಂದೆ ಹೈಡ್ರಾಮಾ
  • ರೂಪೇಶ್ ರಾಜಣ್ಣ, ತಂಡದವರು ಪೊಲೀಸ್ ವಶಕ್ಕೆ
  • ಜಮೀರ್ PA ವಿರುದ್ಧ ರೂಪೇಶ್ ರಾಜಣ್ಣ ಕೆಂಡಾಮಂಡಲ

ಬೆಂಗಳೂರು: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ಮೇಲೆ ಸರ್ಫರಾಜ್ ಖಾನ್ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ರೂಪೇಶ್ ರಾಜಣ್ಣ ಅವರು ಸರ್ಫರಾಜ್ ಖಾನ್ ಆರೋಪಕ್ಕೆ ದಾಖಲೆ ಕೇಳಲು ಜಮೀರ್ ಸರ್ಕಾರಿ ನಿವಾಸಕ್ಕೆ ಬಂದಿದ್ದರು.

Advertisment

ಇದನ್ನೂ ಓದಿ:ಶತಕ ಬಾರಿಸ್ತಿದ್ದಂತೆ ಪಲ್ಟಿ ಹೊಡಿ ಎಂದ ಗವಾಸ್ಕರ್​.. ಪಂತ್​​ ಪ್ರತಿಕ್ರಿಯೆ ಹೇಗಿತ್ತು? ಹೃದಯಗೆದ್ದ ವಿಡಿಯೋ..!

publive-image

ಇದೇ ವೇಳೆ ಜಮೀರ್ ಸರ್ಕಾರಿ ನಿವಾಸದ ಮುಂದೆ ಹೈಡ್ರಾಮಾ ನಡೆದಿದೆ. ಅಲ್ಲದೇ ಜಮೀರ್ PA ವಿರುದ್ಧ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಆಗ ರೂಪೇಶ್ ರಾಜಣ್ಣ ಹಾಗೂ ಅವರ ತಂಡವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

publive-image

ಏನಿದು ಕೇಸ್​..?

ಸಚಿವ ಜಮೀರ್ ಅಹ್ಮದ್ ಖಾನ್​ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಸರ್ಫರಾಜ್​ ಖಾನ್ ನನ್ನ ವ್ಯವಹಾರದ ವಿಚಾರದಲ್ಲಿ ಸಚಿವರ ಹೆಸರನ್ನು ತರಬೇಡಿ ಎಂದಿದ್ದರು. ಅಲ್ಲದೇ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕನ್ನಡ ಸಂಘಟನೆ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

Advertisment

ಹೀಗಾಗಿ ರೂಪೇಶ್ ರಾಜಣ್ಣ ಅವರು ಸರ್ಫರಾಜ್ ಖಾನ್ ಆರೋಪಕ್ಕೆ ದಾಖಲೆ ಕೇಳಲು ಅವರ ನಿವಾಸಕ್ಕೆ ಬಂದಿದ್ದರು. ಇದೇ ವೇಳೆ ಪೊಲೀಸರು ರೂಪೇಶ್ ರಾಜಣ್ಣ ಹಾಗೂ ಅವರ ತಂಡವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment