ಮಹಾಶಿವರಾತ್ರಿ ಹಬ್ಬದ ಆಚರಣೆ ದಿನವೇ ಸದ್ಗುರು ಅವರಿಗೆ ಅನಾರೋಗ್ಯ
ಮಾರ್ಚ್ 15ರಂದು ಸದ್ಗುರು ಅವರಿಗೆ ತಲೆನೋವು ತುಂಬಾ ಹೆಚ್ಚಾಯ್ತು
ಪೇನ್ ಕಿಲ್ಲರ್ ಔಷಧಿ ತೆಗೆದುಕೊಂಡು ಮೀಟಿಂಗ್ ಅಟೆಂಟ್ ಮಾಡಿದ್ದ ಸದ್ಗುರು
ಆಧ್ಮಾತಿಕ ಗುರು, ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಜೀವಕ್ಕೆ ಅಪಾಯ ಎದುರಾಗಿದ್ದು, ಅವರು ಬದುಕಿದ್ದೇ ಒಂದು ಪವಾಡ ಅನ್ನೋ ಮಾತು ಕೇಳಿ ಬರುತ್ತಿದೆ.
ಸದ್ಗುರುವಿಗೆ ಚಿಕಿತ್ಸೆ ನೀಡಿದ ಅಪೋಲೋ ಆಸ್ಪತ್ರೆಯ ನ್ಯೂರಾಲಿಜಿಸ್ಟ್ ಡಾ. ವಿನಿತ್ ಸೂರಿ ಅವರು ಆಧ್ಯಾತ್ಮಿಕ ಗುರುವಿಗೆ ಏನಾಯ್ತು ಅನ್ನೋ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರು ಸದ್ಯ ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ. ಅವರು ಜೀವದ ಅಪಾಯವನ್ನು ದಾಟಿ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಡಾ. ವಿನಿತ್ ಸೂರಿ ನೀಡಿರುವ ಮಾಹಿತಿ ಪ್ರಕಾರ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಕಳೆದ 4 ವಾರಗಳ ಹಿಂದೆಯೇ ತಲೆನೋವು ಬಂದಿತ್ತು. ತುಂಬಾ ತಲೆನೋವು ಇದ್ರೂ ಅದನ್ನ ಅವರು ನಿರ್ಲಕ್ಷ್ಯ ಮಾಡಿದ್ದರು. ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಕಳೆದ ಮಾರ್ಚ್ 8ರಂದು ಮಹಾಶಿವರಾತ್ರಿ ಹಬ್ಬದ ಆಚರಣೆಯಲ್ಲೂ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಆರೋಗ್ಯದ ಸಮಸ್ಯೆ ಎದುರಾಗಿತ್ತು. ಆದರೆ ತಮ್ಮ ಸಮಸ್ಯೆಯನ್ನ ಅವರು ಯಾರಿಗೂ ಹೇಳಿರಲಿಲ್ಲ.
ಕಳೆದ ಮಾರ್ಚ್ 15ರಂದು ಸದ್ಗುರು ಅವರಿಗೆ ತಲೆನೋವು ತುಂಬಾ ಹೆಚ್ಚಾಗಿದೆ. ಅಂದು ಸಂಜೆ 4ಗಂಟೆಗೆ MRI ಸ್ಕ್ಯಾನ್ ಮಾಡಲು ವೈದ್ಯರು ಹೇಳಿದ್ದಾರೆ. ಆಗ ಸದ್ಗುರು ಜಗ್ಗಿ ವಾಸುದೇವ್ ಅವರು ನನಗೆ ಸಂಜೆ 6 ಗಂಟೆಗೆ ಬಹಳ ಮುಖ್ಯವಾದ ಮೀಟಿಂಗ್ ಇದೆ. ಅದಕ್ಕೆ ನಾನು ಅಟೆಂಟ್ ಮಾಡಲೇಬೇಕು. ಕಳೆದ 40 ವರ್ಷದಲ್ಲೇ ಈ 6 ಗಂಟೆಯ ಮೀಟಿಂಗ್ ಅನ್ನು ನಾನು ತಪ್ಪಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
Neurologist Dr. Vinit Suri of @HospitalsApollo gives an update about Sadhguru’s recent Brain Surgery.
A few days ago, Sadhguru underwent brain surgery after life-threatening bleeding in the brain. Sadhguru is recovering very well, and the team of doctors who performed the… pic.twitter.com/UpwfPtAN7p
— Isha Foundation (@ishafoundation) March 20, 2024
ಕೂಡಲೇ ಆಸ್ಪತ್ರೆ ವೈದ್ಯರು MRI ಮಾಡಿಸಿದಾಗ ಮೆದುಳಿನಲ್ಲಿ ರಕ್ತಸ್ರಾವ ಆಗುತ್ತಿರೋದು ಪತ್ತೆಯಾಯಿತು. ಕಳೆದ 3 ವಾರದಿಂದಲೇ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಈ ಸಮಸ್ಯೆ ಇರೋದು ಪತ್ತೆಯಾಗಿತ್ತು. MRI ಸ್ಕ್ಯಾನ್ ಮಾಡಿದ ಮೇಲೂ ಸದ್ಗುರು ಅವರು ಸಂಜೆ 6 ಗಂಟೆಯ ಮೀಟಿಂಗ್ ಅಟೆಂಟ್ ಮಾಡಲು ಹೋಗಿದ್ದಾರೆ. ಅಲ್ಲಿ ಕೂಡ ಯಾರಿಗೂ ಅವರಿಗೆ ಅನಾರೋಗ್ಯ ಇದೆ ಅನ್ನೋದನ್ನ ಹೇಳಲಿಲ್ಲ.
ಇದಾದ ಮರು ದಿನ ಸದ್ಗುರು ಅವರು ಇಂಡಿಯಾ ಟುಡೇ ನಡೆಸಿಕೊಟ್ಟ ಕಾನ್ಕ್ಲೇವ್ಗೆ ಹೋಗಿದ್ದಾರೆ. ಬಹಳಷ್ಟು ನೋವಿನಲ್ಲಿ ಕಾನ್ಕ್ಲೇವ್ ಅಟೆಂಡ್ ಮಾಡಿದ ಸದ್ಗುರು ಅವರು ಪೇನ್ ಕಿಲ್ಲರ್ ಔಷಧಿ ತೆಗೆದುಕೊಂಡಿದ್ದರು. ಅಷ್ಟು ನೋಡವಿನಲ್ಲೂ ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಅದ್ಭುತ ಸಂದರ್ಶನ ನೀಡಿದ್ದಾರೆ.
ಇದನ್ನೂ ಓದಿ: ಮೆದುಳು ಶಸ್ತ್ರ ಚಿಕಿತ್ಸೆ ಯಶಸ್ವಿ.. ಆಸ್ಪತ್ರೆಯ ಬೆಡ್ ಮೇಲಿಂದ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಏನಂದ್ರು?
ಇದಾದ ಬಳಿಕ ಮಾರ್ಚ್ 17ರ ಬೆಳಗ್ಗೆ ಸದ್ಗುರು ಜಗ್ಗಿ ವಾಸುದೇವ್ ಅವರು ತುಂಬಾ ಅಸ್ವಸ್ಥರಾಗಿದ್ದಾರೆ. ಆಗ ತಕ್ಷಣವೇ ಆಸ್ಪತ್ರೆಗೆ ದಾಖಲಾದರು. ತಮ್ಮ ಕರ್ತವ್ಯ, ಜವಾಬ್ದಾರಿಗಳ ಮಧ್ಯೆ ಎಮರ್ಜೆನ್ಸಿ ಸರ್ಜರಿಗೆ ಆಗ ಒಪ್ಪಿಗೆ ನೀಡಿದರು. ಮಾರ್ಚ್ 17ರಂದೇ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಆಗ ಅವರ ಮೆದುಳಿನಲ್ಲಿ ರಕ್ತಸ್ರಾವ ಹೆಚ್ಚಾಗಿತ್ತು. ಜೀವಕ್ಕೆ ಅಪಾಯ ಎದುರಾಗಿತ್ತು. ಆಗ ಎಮೆರ್ಜೆನ್ಸಿ ಬ್ರೈನ್ ಸರ್ಜರಿ ಮಾಡಲಾಗಿದೆ. ಈಗ ನಾವೇ ಸದ್ಗುರು ಜಗ್ಗಿ ವಾಸುದೇವ್ ಅವರ ಆರೋಗ್ಯದ ಸ್ಥಿತಿ ನೋಡಿ ಆಶ್ಚರ್ಯಗೊಂಡಿದ್ದೇವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹಾಶಿವರಾತ್ರಿ ಹಬ್ಬದ ಆಚರಣೆ ದಿನವೇ ಸದ್ಗುರು ಅವರಿಗೆ ಅನಾರೋಗ್ಯ
ಮಾರ್ಚ್ 15ರಂದು ಸದ್ಗುರು ಅವರಿಗೆ ತಲೆನೋವು ತುಂಬಾ ಹೆಚ್ಚಾಯ್ತು
ಪೇನ್ ಕಿಲ್ಲರ್ ಔಷಧಿ ತೆಗೆದುಕೊಂಡು ಮೀಟಿಂಗ್ ಅಟೆಂಟ್ ಮಾಡಿದ್ದ ಸದ್ಗುರು
ಆಧ್ಮಾತಿಕ ಗುರು, ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಜೀವಕ್ಕೆ ಅಪಾಯ ಎದುರಾಗಿದ್ದು, ಅವರು ಬದುಕಿದ್ದೇ ಒಂದು ಪವಾಡ ಅನ್ನೋ ಮಾತು ಕೇಳಿ ಬರುತ್ತಿದೆ.
ಸದ್ಗುರುವಿಗೆ ಚಿಕಿತ್ಸೆ ನೀಡಿದ ಅಪೋಲೋ ಆಸ್ಪತ್ರೆಯ ನ್ಯೂರಾಲಿಜಿಸ್ಟ್ ಡಾ. ವಿನಿತ್ ಸೂರಿ ಅವರು ಆಧ್ಯಾತ್ಮಿಕ ಗುರುವಿಗೆ ಏನಾಯ್ತು ಅನ್ನೋ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರು ಸದ್ಯ ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ. ಅವರು ಜೀವದ ಅಪಾಯವನ್ನು ದಾಟಿ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಡಾ. ವಿನಿತ್ ಸೂರಿ ನೀಡಿರುವ ಮಾಹಿತಿ ಪ್ರಕಾರ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಕಳೆದ 4 ವಾರಗಳ ಹಿಂದೆಯೇ ತಲೆನೋವು ಬಂದಿತ್ತು. ತುಂಬಾ ತಲೆನೋವು ಇದ್ರೂ ಅದನ್ನ ಅವರು ನಿರ್ಲಕ್ಷ್ಯ ಮಾಡಿದ್ದರು. ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಕಳೆದ ಮಾರ್ಚ್ 8ರಂದು ಮಹಾಶಿವರಾತ್ರಿ ಹಬ್ಬದ ಆಚರಣೆಯಲ್ಲೂ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಆರೋಗ್ಯದ ಸಮಸ್ಯೆ ಎದುರಾಗಿತ್ತು. ಆದರೆ ತಮ್ಮ ಸಮಸ್ಯೆಯನ್ನ ಅವರು ಯಾರಿಗೂ ಹೇಳಿರಲಿಲ್ಲ.
ಕಳೆದ ಮಾರ್ಚ್ 15ರಂದು ಸದ್ಗುರು ಅವರಿಗೆ ತಲೆನೋವು ತುಂಬಾ ಹೆಚ್ಚಾಗಿದೆ. ಅಂದು ಸಂಜೆ 4ಗಂಟೆಗೆ MRI ಸ್ಕ್ಯಾನ್ ಮಾಡಲು ವೈದ್ಯರು ಹೇಳಿದ್ದಾರೆ. ಆಗ ಸದ್ಗುರು ಜಗ್ಗಿ ವಾಸುದೇವ್ ಅವರು ನನಗೆ ಸಂಜೆ 6 ಗಂಟೆಗೆ ಬಹಳ ಮುಖ್ಯವಾದ ಮೀಟಿಂಗ್ ಇದೆ. ಅದಕ್ಕೆ ನಾನು ಅಟೆಂಟ್ ಮಾಡಲೇಬೇಕು. ಕಳೆದ 40 ವರ್ಷದಲ್ಲೇ ಈ 6 ಗಂಟೆಯ ಮೀಟಿಂಗ್ ಅನ್ನು ನಾನು ತಪ್ಪಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
Neurologist Dr. Vinit Suri of @HospitalsApollo gives an update about Sadhguru’s recent Brain Surgery.
A few days ago, Sadhguru underwent brain surgery after life-threatening bleeding in the brain. Sadhguru is recovering very well, and the team of doctors who performed the… pic.twitter.com/UpwfPtAN7p
— Isha Foundation (@ishafoundation) March 20, 2024
ಕೂಡಲೇ ಆಸ್ಪತ್ರೆ ವೈದ್ಯರು MRI ಮಾಡಿಸಿದಾಗ ಮೆದುಳಿನಲ್ಲಿ ರಕ್ತಸ್ರಾವ ಆಗುತ್ತಿರೋದು ಪತ್ತೆಯಾಯಿತು. ಕಳೆದ 3 ವಾರದಿಂದಲೇ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಈ ಸಮಸ್ಯೆ ಇರೋದು ಪತ್ತೆಯಾಗಿತ್ತು. MRI ಸ್ಕ್ಯಾನ್ ಮಾಡಿದ ಮೇಲೂ ಸದ್ಗುರು ಅವರು ಸಂಜೆ 6 ಗಂಟೆಯ ಮೀಟಿಂಗ್ ಅಟೆಂಟ್ ಮಾಡಲು ಹೋಗಿದ್ದಾರೆ. ಅಲ್ಲಿ ಕೂಡ ಯಾರಿಗೂ ಅವರಿಗೆ ಅನಾರೋಗ್ಯ ಇದೆ ಅನ್ನೋದನ್ನ ಹೇಳಲಿಲ್ಲ.
ಇದಾದ ಮರು ದಿನ ಸದ್ಗುರು ಅವರು ಇಂಡಿಯಾ ಟುಡೇ ನಡೆಸಿಕೊಟ್ಟ ಕಾನ್ಕ್ಲೇವ್ಗೆ ಹೋಗಿದ್ದಾರೆ. ಬಹಳಷ್ಟು ನೋವಿನಲ್ಲಿ ಕಾನ್ಕ್ಲೇವ್ ಅಟೆಂಡ್ ಮಾಡಿದ ಸದ್ಗುರು ಅವರು ಪೇನ್ ಕಿಲ್ಲರ್ ಔಷಧಿ ತೆಗೆದುಕೊಂಡಿದ್ದರು. ಅಷ್ಟು ನೋಡವಿನಲ್ಲೂ ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಅದ್ಭುತ ಸಂದರ್ಶನ ನೀಡಿದ್ದಾರೆ.
ಇದನ್ನೂ ಓದಿ: ಮೆದುಳು ಶಸ್ತ್ರ ಚಿಕಿತ್ಸೆ ಯಶಸ್ವಿ.. ಆಸ್ಪತ್ರೆಯ ಬೆಡ್ ಮೇಲಿಂದ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಏನಂದ್ರು?
ಇದಾದ ಬಳಿಕ ಮಾರ್ಚ್ 17ರ ಬೆಳಗ್ಗೆ ಸದ್ಗುರು ಜಗ್ಗಿ ವಾಸುದೇವ್ ಅವರು ತುಂಬಾ ಅಸ್ವಸ್ಥರಾಗಿದ್ದಾರೆ. ಆಗ ತಕ್ಷಣವೇ ಆಸ್ಪತ್ರೆಗೆ ದಾಖಲಾದರು. ತಮ್ಮ ಕರ್ತವ್ಯ, ಜವಾಬ್ದಾರಿಗಳ ಮಧ್ಯೆ ಎಮರ್ಜೆನ್ಸಿ ಸರ್ಜರಿಗೆ ಆಗ ಒಪ್ಪಿಗೆ ನೀಡಿದರು. ಮಾರ್ಚ್ 17ರಂದೇ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಆಗ ಅವರ ಮೆದುಳಿನಲ್ಲಿ ರಕ್ತಸ್ರಾವ ಹೆಚ್ಚಾಗಿತ್ತು. ಜೀವಕ್ಕೆ ಅಪಾಯ ಎದುರಾಗಿತ್ತು. ಆಗ ಎಮೆರ್ಜೆನ್ಸಿ ಬ್ರೈನ್ ಸರ್ಜರಿ ಮಾಡಲಾಗಿದೆ. ಈಗ ನಾವೇ ಸದ್ಗುರು ಜಗ್ಗಿ ವಾಸುದೇವ್ ಅವರ ಆರೋಗ್ಯದ ಸ್ಥಿತಿ ನೋಡಿ ಆಶ್ಚರ್ಯಗೊಂಡಿದ್ದೇವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ