ಮಾರ್ಚ್ 17 ರಂದು ಅವರ ಬ್ರೇನ್ನಲ್ಲಿ ಸಮಸ್ಯೆ ಪತ್ತೆ
ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್
ಸದ್ಗುರು ಜಗ್ಗಿ ವಾಸುದೇವ್ಗೆ ಎಮರ್ಜೆನ್ಸಿ ಬ್ರೇನ್ ಸರ್ಜರಿ
ನವದೆಹಲಿ: ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಬ್ರೇನ್ ಸರ್ಜರಿ ಮಾಡಲಾಗಿದ್ದು ಯಶಸ್ವಿಯಾಗಿದೆ.
ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರು ಜಗ್ಗಿ ವಾಸುದೇವ್ಗೆ ಎಮರ್ಜೆನ್ಸಿ ಬ್ರೇನ್ ಸರ್ಜರಿ ಮಾಡಲಾಗಿದೆ. ಮಾರ್ಚ್ 17 ರಂದು ಅವರ ಬ್ರೇನ್ನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ವಾಂತಿ, ತಲೆನೋವಿನಿಂದ ಬಳಲುತ್ತಿದ್ದ ಅವರಿಗೆ ಎಂಆರ್ಐ ಸ್ಕ್ಯಾನ್ ಮೂಲಕ ಪರೀಕ್ಷೆ ಮಾಡಿದಾಗ ಬ್ರೇನ್ ಸಮಸ್ಯೆ ವೈದ್ಯರು ದೃಢ ಪಡಿಸಿದ್ದರು. ಬಳಿಕ ಅಪೋಲೋ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಸರ್ಜರಿಯನ್ನು ವೈದ್ಯರ ತಂಡ ಮಾಡಿದ್ದಾರೆ.
ಜಗ್ಗಿ ವಾಸುದೇವ್ ಅವರು ಕಳೆದ 4 ವಾರಗಳಿಂದ ತೀವ್ರ ತಲೆ ನೋವಿನಿಂದ ಬಳಲುತ್ತಿದ್ದರು. ಈ ನೋವು ಇದ್ದರು ತಮ್ಮ ಎಂದಿನಂತೆ ಕಾರ್ಯಕ್ರಮಗಳನ್ನು ಮುಂದುವರೆಸಿದ್ದರು. ಅಲ್ಲದೇ ಶಿವರಾತ್ರಿ ಹಬ್ಬದಂದು ಅದ್ಧೂರಿ ಸಮಾರಂಭವನ್ನು ನಡೆಸಿಕೊಟ್ಟಿದ್ದರು. ಆದರೆ ಮಾರ್ಚ್ 15ರ ಹೊತ್ತಿಗೆ ತಲೆ ನೋವು ತೀವ್ರಗೊಂಡಿತ್ತು. ಹೀಗಾಗಿ ವೈದ್ಯರು ಎಂಆರ್ಐ ಸ್ಕ್ಯಾನ್ಗೆ ಒಳಗಾಗುವಂತೆ ಸೂಚಿಸಿದ್ದರು.
ಬಳಿಕ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಸದ್ಗುರುಗಳು ದಾಖಲಾಗಿದ್ದರು. ಆಗ ವೈದ್ಯರು ಅವರ ಬ್ರೇನ್ನಲ್ಲಿ ರಕ್ತಸ್ರಾವ ಆಗುತ್ತಿರುವುದನ್ನ ಕಂಡುಕೊಂಡರು. ವೈದ್ಯರ ತಂಡ ಈಗಾಗಲೇ ಸರ್ಜರಿಯನ್ನು ಮಾಡಲಾಗಿದ್ದು ಸದ್ಗುರುಗಳು ಆರೋಗ್ಯವಾಗಿದ್ದಾರೆ. ಸದ್ಗುರುಗಳು ವಿಡಿಯೋವೊಂದರಲ್ಲಿ ಮಾತನಾಡಿ ನನಗೆ ಏನು ಆಗಿಲ್ಲ, ಸರ್ಜರಿ ಯಶಸ್ವಿಯಾಗಿದೆ. ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಾರ್ಚ್ 17 ರಂದು ಅವರ ಬ್ರೇನ್ನಲ್ಲಿ ಸಮಸ್ಯೆ ಪತ್ತೆ
ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್
ಸದ್ಗುರು ಜಗ್ಗಿ ವಾಸುದೇವ್ಗೆ ಎಮರ್ಜೆನ್ಸಿ ಬ್ರೇನ್ ಸರ್ಜರಿ
ನವದೆಹಲಿ: ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಬ್ರೇನ್ ಸರ್ಜರಿ ಮಾಡಲಾಗಿದ್ದು ಯಶಸ್ವಿಯಾಗಿದೆ.
ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರು ಜಗ್ಗಿ ವಾಸುದೇವ್ಗೆ ಎಮರ್ಜೆನ್ಸಿ ಬ್ರೇನ್ ಸರ್ಜರಿ ಮಾಡಲಾಗಿದೆ. ಮಾರ್ಚ್ 17 ರಂದು ಅವರ ಬ್ರೇನ್ನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ವಾಂತಿ, ತಲೆನೋವಿನಿಂದ ಬಳಲುತ್ತಿದ್ದ ಅವರಿಗೆ ಎಂಆರ್ಐ ಸ್ಕ್ಯಾನ್ ಮೂಲಕ ಪರೀಕ್ಷೆ ಮಾಡಿದಾಗ ಬ್ರೇನ್ ಸಮಸ್ಯೆ ವೈದ್ಯರು ದೃಢ ಪಡಿಸಿದ್ದರು. ಬಳಿಕ ಅಪೋಲೋ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಸರ್ಜರಿಯನ್ನು ವೈದ್ಯರ ತಂಡ ಮಾಡಿದ್ದಾರೆ.
ಜಗ್ಗಿ ವಾಸುದೇವ್ ಅವರು ಕಳೆದ 4 ವಾರಗಳಿಂದ ತೀವ್ರ ತಲೆ ನೋವಿನಿಂದ ಬಳಲುತ್ತಿದ್ದರು. ಈ ನೋವು ಇದ್ದರು ತಮ್ಮ ಎಂದಿನಂತೆ ಕಾರ್ಯಕ್ರಮಗಳನ್ನು ಮುಂದುವರೆಸಿದ್ದರು. ಅಲ್ಲದೇ ಶಿವರಾತ್ರಿ ಹಬ್ಬದಂದು ಅದ್ಧೂರಿ ಸಮಾರಂಭವನ್ನು ನಡೆಸಿಕೊಟ್ಟಿದ್ದರು. ಆದರೆ ಮಾರ್ಚ್ 15ರ ಹೊತ್ತಿಗೆ ತಲೆ ನೋವು ತೀವ್ರಗೊಂಡಿತ್ತು. ಹೀಗಾಗಿ ವೈದ್ಯರು ಎಂಆರ್ಐ ಸ್ಕ್ಯಾನ್ಗೆ ಒಳಗಾಗುವಂತೆ ಸೂಚಿಸಿದ್ದರು.
ಬಳಿಕ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಸದ್ಗುರುಗಳು ದಾಖಲಾಗಿದ್ದರು. ಆಗ ವೈದ್ಯರು ಅವರ ಬ್ರೇನ್ನಲ್ಲಿ ರಕ್ತಸ್ರಾವ ಆಗುತ್ತಿರುವುದನ್ನ ಕಂಡುಕೊಂಡರು. ವೈದ್ಯರ ತಂಡ ಈಗಾಗಲೇ ಸರ್ಜರಿಯನ್ನು ಮಾಡಲಾಗಿದ್ದು ಸದ್ಗುರುಗಳು ಆರೋಗ್ಯವಾಗಿದ್ದಾರೆ. ಸದ್ಗುರುಗಳು ವಿಡಿಯೋವೊಂದರಲ್ಲಿ ಮಾತನಾಡಿ ನನಗೆ ಏನು ಆಗಿಲ್ಲ, ಸರ್ಜರಿ ಯಶಸ್ವಿಯಾಗಿದೆ. ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ