/newsfirstlive-kannada/media/post_attachments/wp-content/uploads/2024/07/darshan-29.jpg)
ಡೈಲಾಗ್​ ಕಿಂಗ್​ ಸಾಯಿ ಕುಮಾರ್​ರವರು ಮೊದಲ ಬಾರಿಗೆ ನಟ ದರ್ಶನ್​ ಕೊಲೆ ಪ್ರಕರಣದ ಕುರಿತಾಗಿ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್ ಹೆಸರು ಕೇಳಿ ಶಾಕ್ ಆಯ್ತು ಎಂದು ಹೇಳಿದ್ದಾರೆ.
ಈ ಘಟನೆ ನಂಬೋಕೆ ಆಗ್ತಿಲ್ಲ. ದರ್ಶನ್ ಒಳ್ಳೆ ವ್ಯಕ್ತಿ. ಆತನ ಸಿನಿಮಾ ನೋಡಿ ನಾನು, ರವಿ ಸಾಕಷ್ಟು ಮಾತಾಡಿದ್ದೀವಿ. ಕುರುಕ್ಷೇತ್ರದಲ್ಲಿ ನಾನು ಅರ್ಜುನ ಪಾತ್ರ ಮಾಡ್ಬೇಕಿತ್ತು. ಅಡ್ವಾನ್ಸ್ ಕೂಡ ತಗೊಂಡಿದ್ದೆ. ಕೊನೆಗೆ ನಾನೇ ಈ ಪಾತ್ರದಿಂದ ದೂರ ಉಳಿದೆ. ಅರ್ಜುನನಿಗೆ ಬೇಕಾದ ಫಿಸಿಕ್ ನನಗೆ ಇರಲಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಎಂದು ಹೇಲಿದ್ದಾರೆ.
ಇದನ್ನೂ ಓದಿ: ಆಕೆಗೆ 20, ಆತನಿಗೆ 25 ವರ್ಷ.. ಇವರಿಬ್ಬರ ಲವ್​ಗೆ ಪೋಷಕರ ವಿರೋಧ.. ನಾಪತ್ತೆಯಾದ ಜೋಡಿ ಕೆರೆಯಲ್ಲಿ ಪತ್ತೆ
ಈಗಾಗಲೇ ದರ್ಶನ್​ ಕೊಲೆ ಪ್ರಕರಣ ಕುರಿತಾಗಿ ಅನೇಕರು ರಿಯಾಕ್ಷನ್​ ಕೊಟ್ಟಿದ್ದಾರೆ. ಇನ್ನು ಕೆಲವರು ದರ್ಶನ್​ ನೋಡಲು ಜೈಲಿಗೆ ಭೆಟಿ ಕೊಟ್ಟಿದ್ದಾರೆ. ಸದ್ಯ ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗಾಗಲೇ 13 ದಿನಗಳ ಕಳೆದಿದ್ದು, ನಾಳೆಯೊಂದೇ ಬಾಕಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us