ನಂಗೂ 32 ವರ್ಷ, ಅವರಿಗೂ 32 ವರ್ಷ ಎಂದ ನಟಿ
ಸಾವಿನ ಪೋಸ್ಟ್ ಹಾಕಿ ಮೆಸೇಜ್ ಕೊಡೋ ಅಗತ್ಯವಿರಲಿಲ್ಲ
ನನಗೂ ಸಾವಿನ ಸುದ್ದಿ ಕೇಳಿ ಶಾಕ್ ಆಗಿತ್ತು ಎಂದು ತುಪ್ಪದ ಬೆಡಗಿ
ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಸಿನಿಮಾ ನೋಡಿದ್ದೀರಾ? ಈ ಸಿನಿಮಾದಲ್ಲಿ ‘ನಿನ್ನೆ ಸತ್ತನು ನಾ ಇವತ್ತು ಫಂಕ್ಷನ್’ ಹಾಡು ಕೇಳಿದ್ದೀರಾ? ಈ ಹಾಡಿಗೂ ಪೂನಂ ಪಾಂಡೆ ಸತ್ತಿರುವ ಸುದ್ದಿಗು ಮ್ಯಾಚ್ ಆಗುವಂತಿತ್ತು. ಆದರೆ ಆಕೆ ಇಂದು ಕೊಟ್ಟ ಗಿಮಿಕ್ಗೆ ಫ್ಯಾನ್ಸ್ ಶಾಕ್ ಆಗಿದ್ದಾರೆ. ಹಾಕಿರುವ RIP ಸ್ಟೇಟಸ್ ಅನ್ನು ಡಿಲೀಟ್ ಮಾಡಿದ್ದಾರೆ.
ನಿನ್ನೆ ಸತ್ತ ಸುದ್ದಿ ಹೇಳಿ ಕೇಳಿ ಇವತ್ತು ಬದುಕಿದ್ದಾರೆ ಅಂದ್ರೆ ನಂಬೋಕಾಗ್ತದ?. ಅದರಲ್ಲೂ ಇಂದು ವಿಡಿಯೋ ಮೂಲಕ ಬಂದು ನಾನು ಬದುಕಿದ್ದೀನಿ ಅಂದ್ರೆ ಏನರ್ಥ?. ಈ ಗಿಮಿಕ್ ಆಕೆಯ ಫ್ಯಾನ್ಸ್ ಮಾತ್ರವಲ್ಲ, ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು. ಪೂನಂಪಾಂಡೆ ಸಾವಿನ ಪೋಸ್ಟ್ ಹಾಕಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮೆಸೇಜ್ ಕೊಡೋ ಅಗತ್ಯವಿರಲಿಲ್ಲ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ. ನಂಗೂ 32 ವರ್ಷ, ಅವರಿಗೂ 32 ವರ್ಷ. ಈ ರೀತಿ ಮಾಧ್ಯಮಗಳನ್ನ ಬಳಸಿಕೊಳ್ಳುವುದು ಸರಿ ಇಲ್ಲ. ನನಗೂ ಸಾವಿನ ಸುದ್ದಿ ಕೇಳಿ ಶಾಕ್ ಆಗಿತ್ತು ಎಂದು ಹೇಳಿದ್ದಾರೆ.
ಬಳಿಕ, ಪೂನಂಪಾಂಡೆ ನನಗೇನು ಪರಿಚಯವಿಲ್ಲ. ಒಂದು ವೇದಿಕೆಯನ್ನ ಈ ರೀತಿ ಬಳಸಿಕೊಂಡಿದ್ದು ಸರಿ ಇಲ್ಲ. ಬೇರೆ ರೀತಿಯಲ್ಲೂ ಜಾಗೃತಿ ಮೂಡಿಸಬಹುದಾಗಿತ್ತು. ನಿನ್ನೆ ಪೂನಂಪಾಂಡೆ ಸಾವಿನ ಸುದ್ದಿ ಕೇಳಿ ಎಲ್ಲರಿಗೂ ಶಾಕ್ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಂಗೂ 32 ವರ್ಷ, ಅವರಿಗೂ 32 ವರ್ಷ ಎಂದ ನಟಿ
ಸಾವಿನ ಪೋಸ್ಟ್ ಹಾಕಿ ಮೆಸೇಜ್ ಕೊಡೋ ಅಗತ್ಯವಿರಲಿಲ್ಲ
ನನಗೂ ಸಾವಿನ ಸುದ್ದಿ ಕೇಳಿ ಶಾಕ್ ಆಗಿತ್ತು ಎಂದು ತುಪ್ಪದ ಬೆಡಗಿ
ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಸಿನಿಮಾ ನೋಡಿದ್ದೀರಾ? ಈ ಸಿನಿಮಾದಲ್ಲಿ ‘ನಿನ್ನೆ ಸತ್ತನು ನಾ ಇವತ್ತು ಫಂಕ್ಷನ್’ ಹಾಡು ಕೇಳಿದ್ದೀರಾ? ಈ ಹಾಡಿಗೂ ಪೂನಂ ಪಾಂಡೆ ಸತ್ತಿರುವ ಸುದ್ದಿಗು ಮ್ಯಾಚ್ ಆಗುವಂತಿತ್ತು. ಆದರೆ ಆಕೆ ಇಂದು ಕೊಟ್ಟ ಗಿಮಿಕ್ಗೆ ಫ್ಯಾನ್ಸ್ ಶಾಕ್ ಆಗಿದ್ದಾರೆ. ಹಾಕಿರುವ RIP ಸ್ಟೇಟಸ್ ಅನ್ನು ಡಿಲೀಟ್ ಮಾಡಿದ್ದಾರೆ.
ನಿನ್ನೆ ಸತ್ತ ಸುದ್ದಿ ಹೇಳಿ ಕೇಳಿ ಇವತ್ತು ಬದುಕಿದ್ದಾರೆ ಅಂದ್ರೆ ನಂಬೋಕಾಗ್ತದ?. ಅದರಲ್ಲೂ ಇಂದು ವಿಡಿಯೋ ಮೂಲಕ ಬಂದು ನಾನು ಬದುಕಿದ್ದೀನಿ ಅಂದ್ರೆ ಏನರ್ಥ?. ಈ ಗಿಮಿಕ್ ಆಕೆಯ ಫ್ಯಾನ್ಸ್ ಮಾತ್ರವಲ್ಲ, ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು. ಪೂನಂಪಾಂಡೆ ಸಾವಿನ ಪೋಸ್ಟ್ ಹಾಕಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮೆಸೇಜ್ ಕೊಡೋ ಅಗತ್ಯವಿರಲಿಲ್ಲ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ. ನಂಗೂ 32 ವರ್ಷ, ಅವರಿಗೂ 32 ವರ್ಷ. ಈ ರೀತಿ ಮಾಧ್ಯಮಗಳನ್ನ ಬಳಸಿಕೊಳ್ಳುವುದು ಸರಿ ಇಲ್ಲ. ನನಗೂ ಸಾವಿನ ಸುದ್ದಿ ಕೇಳಿ ಶಾಕ್ ಆಗಿತ್ತು ಎಂದು ಹೇಳಿದ್ದಾರೆ.
ಬಳಿಕ, ಪೂನಂಪಾಂಡೆ ನನಗೇನು ಪರಿಚಯವಿಲ್ಲ. ಒಂದು ವೇದಿಕೆಯನ್ನ ಈ ರೀತಿ ಬಳಸಿಕೊಂಡಿದ್ದು ಸರಿ ಇಲ್ಲ. ಬೇರೆ ರೀತಿಯಲ್ಲೂ ಜಾಗೃತಿ ಮೂಡಿಸಬಹುದಾಗಿತ್ತು. ನಿನ್ನೆ ಪೂನಂಪಾಂಡೆ ಸಾವಿನ ಸುದ್ದಿ ಕೇಳಿ ಎಲ್ಲರಿಗೂ ಶಾಕ್ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ