ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಎನ್ನುವುದು ಊಹಾಪೋಹನಾ?
ಪೊಲೀಸರಿಗೆ ಸೌಂದರ್ಯ ಜಗದೀಶ್ ಕುಟುಂಬ ಕೊಟ್ಟ ಮಾಹಿತಿ ಏನು?
ಸಿನಿಮಾ ನಿರ್ಮಾಣದ ಜೊತೆಗೆ ಬೆಂಗಳೂರಿನ ಉದ್ಯಮಗಳಲ್ಲಿ ಭಾಗಿಯಾಗಿದ್ದರು
ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸೌಂದರ್ಯ ಜಗದೀಶ್ ಸಾವಿನ ಬಗ್ಗೆ ಆತ್ಮಹತ್ಯೆ ಎನ್ನುವುದು ಊಹಾಪೋಹ ಅನ್ನೋ ವದಂತಿ ಹಬ್ಬಿತ್ತು. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಕುಟುಂಬಸ್ಥರಿಂದ ಯಾವುದೇ ಮಾಹಿತಿ ಇರಲಿಲ್ಲ. ಹೃದಯಾಘಾತವಾಗಿ ಸೌಂದರ್ಯ ಜಗದೀಶ್ ಮೃತಪಟ್ಟಿದ್ದಾರೆಂದು ಸೌಂದರ್ಯ ಜಗದೀಶ್ ಕುಟುಂಬ ಪೊಲೀಸರಿಗೆ ತಿಳಿಸಿದ್ದರು.
ಮತ್ತೊಂದು ಮಾಹಿತಿಯ ಪ್ರಕಾರ ಸೌಂದರ್ಯ ಜಗದೀಶ್ ಅವರು ಮಹಾಲಕ್ಷ್ಮಿ ಲೇಔಟ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳಲ್ಲಿ ಸೌಂದರ್ಯ ಜಗದೀಶ್ ಸಾವಿನ ಬಗ್ಗೆ ವರದಿ ಬಿತ್ತರವಾದ ನಂತರ ಪೊಲೀಸ್ ಅಧಿಕಾರಿಗಳು ಕುಟುಂಬಸ್ಥರನ್ನು ಸಂಪರ್ಕ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಅನುಮಾನಸ್ಪದ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: BREAKING: ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಇನ್ನಿಲ್ಲ
ಜೆಟ್ ಲಾಗ್ ಮಾಲೀಕ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸಿನಿಮಾ ನಿರ್ಮಾಣದ ಜೊತೆಗೆ ಬೆಂಗಳೂರಿನ ಬೇರೆ ಬೇರೆ ಉದ್ಯಮಗಳಲ್ಲಿ ಸೌಂದರ್ಯ ಜಗದೀಶ್ ತೊಡಗಿಸಿಕೊಂಡಿದ್ದರು.
ಅಪ್ಪು ಪಪ್ಪು ಸಿನಿಮಾ ಮೂಲಕ ತಮ್ಮ ಮಗನನ್ನೇ ಚಿತ್ರರಂಗಕ್ಕೆ ಪರಿಚಯಿಸಿದ್ದ ಸೌಂದರ್ಯ ಜಗದೀಶ್ ಅವರು ರಾಮ್ ಲೀಲಾ, ಸ್ನೇಹಿತರು ಸೇರಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಎನ್ನುವುದು ಊಹಾಪೋಹನಾ?
ಪೊಲೀಸರಿಗೆ ಸೌಂದರ್ಯ ಜಗದೀಶ್ ಕುಟುಂಬ ಕೊಟ್ಟ ಮಾಹಿತಿ ಏನು?
ಸಿನಿಮಾ ನಿರ್ಮಾಣದ ಜೊತೆಗೆ ಬೆಂಗಳೂರಿನ ಉದ್ಯಮಗಳಲ್ಲಿ ಭಾಗಿಯಾಗಿದ್ದರು
ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸೌಂದರ್ಯ ಜಗದೀಶ್ ಸಾವಿನ ಬಗ್ಗೆ ಆತ್ಮಹತ್ಯೆ ಎನ್ನುವುದು ಊಹಾಪೋಹ ಅನ್ನೋ ವದಂತಿ ಹಬ್ಬಿತ್ತು. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಕುಟುಂಬಸ್ಥರಿಂದ ಯಾವುದೇ ಮಾಹಿತಿ ಇರಲಿಲ್ಲ. ಹೃದಯಾಘಾತವಾಗಿ ಸೌಂದರ್ಯ ಜಗದೀಶ್ ಮೃತಪಟ್ಟಿದ್ದಾರೆಂದು ಸೌಂದರ್ಯ ಜಗದೀಶ್ ಕುಟುಂಬ ಪೊಲೀಸರಿಗೆ ತಿಳಿಸಿದ್ದರು.
ಮತ್ತೊಂದು ಮಾಹಿತಿಯ ಪ್ರಕಾರ ಸೌಂದರ್ಯ ಜಗದೀಶ್ ಅವರು ಮಹಾಲಕ್ಷ್ಮಿ ಲೇಔಟ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳಲ್ಲಿ ಸೌಂದರ್ಯ ಜಗದೀಶ್ ಸಾವಿನ ಬಗ್ಗೆ ವರದಿ ಬಿತ್ತರವಾದ ನಂತರ ಪೊಲೀಸ್ ಅಧಿಕಾರಿಗಳು ಕುಟುಂಬಸ್ಥರನ್ನು ಸಂಪರ್ಕ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಅನುಮಾನಸ್ಪದ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: BREAKING: ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಇನ್ನಿಲ್ಲ
ಜೆಟ್ ಲಾಗ್ ಮಾಲೀಕ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸಿನಿಮಾ ನಿರ್ಮಾಣದ ಜೊತೆಗೆ ಬೆಂಗಳೂರಿನ ಬೇರೆ ಬೇರೆ ಉದ್ಯಮಗಳಲ್ಲಿ ಸೌಂದರ್ಯ ಜಗದೀಶ್ ತೊಡಗಿಸಿಕೊಂಡಿದ್ದರು.
ಅಪ್ಪು ಪಪ್ಪು ಸಿನಿಮಾ ಮೂಲಕ ತಮ್ಮ ಮಗನನ್ನೇ ಚಿತ್ರರಂಗಕ್ಕೆ ಪರಿಚಯಿಸಿದ್ದ ಸೌಂದರ್ಯ ಜಗದೀಶ್ ಅವರು ರಾಮ್ ಲೀಲಾ, ಸ್ನೇಹಿತರು ಸೇರಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ