ಕೆರಳಿದ ರಮ್ಯಾ.. ದರ್ಶನ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್..!

author-image
Ganesh
Updated On
ಕೆರಳಿದ ರಮ್ಯಾ.. ದರ್ಶನ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್..!
Advertisment
  • ಅಂದು ನ್ಯಾಯ ಸಿಗ್ಬೇಕು ಅಂದ್ರು, ಇಂದು ಫ್ಯಾನ್ಸ್​ಗೆ ಎಚ್ಚರಿಕೆ
  • ರಮ್ಯಾ ಡಿ ಬಾಸ್​ ಅಭಿಮಾನಿಗಳಿಗೆ ಹೇಳಿದ್ದೇನು?
  • ರೇಣುಕಾಸ್ವಾಮಿ ಕೇಸ್​ನ ಪ್ರಮುಖ ಆರೋಪಿ ದರ್ಶನ್

ಗುರುವಂತೆ ಶಿಷ್ಯಂದ್ರು ಅಂತ ಸುಮ್ಮನೇ ಹೇಳಲ್ಲ.. ಕೆಟ್ಟದಾಗಿ ಕಾಮೆಂಟ್ ಒತ್ತಿದ ರೇಣುಕಾಸ್ವಾಮಿ ಕಥೆ ಮುಗಿಸಿದ ಆರೋಪ ಹೊತ್ತ ಡಿ ಗ್ಯಾಂಗ್ ಜೈಲು ಟ್ರಿಪ್ ಮುಗಿಸಿ ಬಂದದ್ದು ಹಳೇ ಕಥೆ. ಈಗ ಅದೇ ಕಾಮೆಂಟ್​ ವಿಚಾರಕ್ಕೆ ಡಿ ಬಾಸ್ ಫ್ಯಾನ್ಸ್​ ನ್ಯೂಸ್ ಆಗಿದ್ದು, ಸ್ವತಃ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಇನ್ಸ್​ಸ್ಟಾದಲ್ಲಿ ವಾರ್ನ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್​, ಪವಿತ್ರಾ ಗೌಡ ಬೇಲ್ ಕೇಸ್​; ಇಂದು ಸುಪ್ರೀಂಕೋರ್ಟ್​ನಲ್ಲಿ ಏನೆಲ್ಲಾ ಆಯ್ತು..? ಫುಲ್​ ಡಿಟೇಲ್ಸ್!

‘ನ್ಯಾಯ ಸಿಗಬಹುದು’

ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ- ರಮ್ಯಾ, ನಟಿ

ಮೊದಲಿಗೆ ರಮ್ಯಾ ಪೋಸ್ಟ್ ಮಾಡಿರೋದು ಇಷ್ಟೇ. ಬೆನ್ನಲ್ಲೇ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದರು. ದರ್ಶನ್ ಅಭಿಮಾನಿಗಳು ಹಿಗ್ಗಾಮುಗ್ಗಾ ಅವರನ್ನು ಟ್ರೋಲ್ ಮಾಡಿದರು. ನೋಡೋ ತನಕ ನೋಡಿದ ರಮ್ಯಾ ಅವರು, ನಿನ್ನೆ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ: ಒಂದು ಹೈಡ್ರೋಜನ್ ರೈಲಿನ ಬೆಲೆ ಎಷ್ಟು.. ಹೊಸ ಇತಿಹಾಸ ಬರೆಯಲು ಸಜ್ಜಾದ ಭಾರತ..!

‘ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ’
ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್​ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ - ರಮ್ಯಾ, ನಟಿ

ನ್ಯಾಯ ಸಿಗ್ಬೇಕು ಅನ್ನೋದಕ್ಕೆ ನಿಮ್ಮ ಕಾಮೆಂಟ್ಸ್​ಗಳೇ ಸಾಕ್ಷಿ. ಮೊದಲಿಗೆ ಕೊ*ಲೆ ಆರೋಪಿ ನಟ ದರ್ಶನ್ ಅಭಿಮಾನಿಗಳಿಗೆ ವೆಲ್ಕಂ ಮಾಡಿ, ಆಮೇಲೆ ಕಾಮೆಂಟ್​​ನಿಂದ ಕೊಲೆ*ಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅಂತ ನಿಮ್ಮ ಕಾಮೆಂಟ್ಸ್​ಗಳೇ ಸಾಕ್ಷಿಯಂಥ ಮಾರ್ಮಿಕವಾಗಿ ಕ್ಲಾರಿಟಿ ಕೊಟ್ಟಿದ್ದಾರೆ.

ಈ ಕಾಮೆಂಟ್ಸ್​ ಕಹಾನಿ ಇಲ್ಲಿಗೆ ನಿಲ್ಲೋ ಯಾವ ಲಕ್ಷಣ ಕೂಡ ಕಾಣ್ತಿಲ್ಲ. ಇದೆಲ್ಲಾ ಒಂದ್ಕಡೆಯಾದ್ರೆ, ಸದ್ಯಕ್ಕೆ ಥೈಲಾಂಡ್​ ಶೂಟಿಂಗ್ ಮುಗಿಸಿ ಡಿ ಬಾಸು. ವಾಪಾಸ್ ಆಗಿದ್ದು, ನಾಲ್ಕೈದು ದಿನಗಳಲ್ಲಿ ಸುಪ್ರೀಂ ತೀರ್ಪು ಕೂಡ ಹೊರಬೀಳಲಿದೆ.

ಇದನ್ನೂ ಓದಿ: ಇಂಜಿನಿಯರ್​ಗಳಿಗೆ ಜಾಬ್ ಮಾಡಲು ಯಾವ ದೇಶ ಬೆಸ್ಟ್​.. ಭಾರತ, ದುಬೈ..? ಉತ್ತರ ಯಾವುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment