/newsfirstlive-kannada/media/post_attachments/wp-content/uploads/2024/11/RCB-5.jpg)
ಆರ್ಸಿಬಿ ಫುಲ್ ಟ್ರೆಂಡಿಂಗ್ನಲ್ಲಿದೆ. ಲಾಯಲ್ ಫ್ಯಾನ್ಸ್ ಫುಲ್ ರೊಚ್ಚಿಗೆದ್ದಿದ್ದಾರೆ. ಅದಕ್ಕೆ ಕಾರಣ ಮಾಜಿ ಕ್ರಿಕೆಟಿಗ, ಹಾಲಿ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್.
ವಿವಾದ ಏನು..?
‘ಎಬಿ ಡಿವಿಲಿಯರ್ಸ್ ಅದ್ಭುತವಾದ ಆಟಗಾರ. ಆದ್ರೆ, IPLನಲ್ಲಿ ಎಬಿ ಡಿವಿಲಿಯರ್ಸ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಆತನ ಸಾಮರ್ಥ್ಯ ಅರ್ಥ ಮಾಡಿಕೊಳ್ಳಲಿಲ್ಲ. ಎಬಿಡಿ ತಪ್ಪಾದ ಫ್ರಾಂಚೈಸಿಗೆ ಆಡಿದ್ರು. ಬೇರೆ ಯಾವುದಾದರೂ ಫ್ರಾಂಚೈಸಿಗೆ ಆಡಿದ್ರೆ, ಇನ್ನಷ್ಟು ಶ್ರೇಷ್ಠ ಆಟಗಾರನಾಗಿರುತ್ತಿದ್ರು ಎಂದಿದ್ದಾರೆ ಮಾಂಜ್ರೇಕರ್. ಈ ರೀತಿಯ ವಿವಾದಾತ್ಮಕ ಹೇಳಿಕೆ ಮಾಂಜ್ರೇಕರ್ಗೆ ಹೊಸದಲ್ಲ.
ಅಂದು ವಿರಾಟ್ ಕೊಹ್ಲಿ
ವಿಶ್ವದ ಸಾರ್ವಕಾಲಿಕ ಶ್ರೇಷ್ಟ ಬ್ಯಾಟ್ಸ್ಮನ್ಗಳ ಪೈಕಿ ಒಬ್ಬ ಅನಿಸಿಕೊಂಡಿರೋ ಕೊಹ್ಲಿಯನ್ನೇ ಟೆಸ್ಟ್ ಕ್ರಿಕೆಟ್ಗೆ ಸೂಟ್ ಆಗಲ್ಲ ಎಂದಿದ್ದರು. ಟೆಸ್ಟ್ ಫಾರ್ಮೆಟ್ನಲ್ಲಿ ಕೊಹ್ಲಿ ಆಡಿದ ಮೊದಲ 6 ಪಂದ್ಯಗಳಲ್ಲೇ ಸಾಮರ್ಥ್ಯವನ್ನು ಅಳತೆ ಮಾಡಿದ್ದ ಮಾಂಜ್ರೇಕರ್, ಬಹಿರಂಗವಾಗಿ ಟ್ವೀಟ್ ಮಾಡಿದ್ರು. 2012ರ ಜನವರಿ 6ರಂದು ಟ್ವೀಟ್ ಮಾಡಿದ್ದ ಮಾಂಜ್ರೇಕರ್, ವಿರಾಟ್ಗೆ ಇನ್ನೊಂದು ಅವಕಾಶ ಕೊಡ್ತೀನಿ. ಆತ ಇಲ್ಲಿಗೆ ಸೇರಿದವನಲ್ಲ ಎಂದು ಅರ್ಥ ಮಾಡಿಕೊಳ್ಳಲು ಎಂದು ಬರೆದುಕೊಂಡಿದ್ರು. ಅಂದು ಮಾಂಜ್ರೇಕರ್ ಟೆಸ್ಟ್ ಕ್ರಿಕೆಟ್ಗೆ ಸೂಟ್ ಆಗಲ್ಲ ಎಂದಿದ್ದ ಕೊಹ್ಲಿ ಈಗ ಕ್ರಿಕೆಟ್ ಲೋಕಕ್ಕೆ ಕಿಂಗ್ ಆಗಿದ್ದಾರೆ.
ಇದನ್ನೂ ಓದಿ: ಸ್ಪಿನ್ ಟು ವಿನ್ ಫಾರ್ಮುಲಾ ಚಿಂತೆಯಲ್ಲಿ ಟೀಂ ಇಂಡಿಯಾ.. ರಾಜ್ಕೋಟ್ ಪಿಚ್ ಕತೆ ಬೇರೆಯೇ ಇದೆ..!
ಜಡೇಜಾನ ಕೆಣಕಿ ಮುಖಭಂಗ
2019ರಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾರನ್ನ ಬಿಟ್ಸ್ ಮತ್ತು ಪೀಸಸ್ ಪ್ಲೇಯರ್ ಎಂದು ಮಾಂಜ್ರೇಕರ್ ಜರಿದಿದ್ರು. ಬೆನ್ನಲ್ಲೇ ಅಭಿಮಾನಿಗಳು ಮಾಂಜ್ರೆಕರ್ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ರು. ಆಗ ಟ್ವೀಟ್ ಮಾಡಿದ್ದ ಜಡೇಜಾ, ನಾನು ನೀನು ಆಡಿದ್ದಕ್ಕಿಂತ ದುಪ್ಪಟ್ಟು ಪಂದ್ಯವನ್ನಾಡಿದ್ದೇನೆ. ಈಗಲೂ ಆಡ್ತೀದ್ದೇನೆ. ಸಾಧಿಸಿದವರನ್ನ ಗೌರವಿಸೋದನ್ನ ಕಲಿ ಎಂದು ಕಟುವಾದ ಶಬ್ಧಗಳಲ್ಲಿ ತಿರುಗೇಟು ನೀಡಿದ್ರು. 2019 ವಿಶ್ವಕಪ್ ಸೆಮೀಸ್ನಲ್ಲಿ ಅರ್ಧಶತಕ ಸಿಡಿಸಿದ ಬಳಿಕ ಕಾಂಮೇಟರಿ ಬಾಕ್ಸ್ನಲ್ಲಿ ಮಾಂಜ್ರೇಕರ್ ಕಡೆಗೆ ಬ್ಯಾಟ್ ತೋರಿಸಿ ಸೆಲಬ್ರೇಷನ್ ಮಾಡಿದರು.
ಪೊಲಾರ್ಡ್ಗೆ ಮೆದುಳೇ ಇಲ್ಲ ಎಂದಿದ್ದರು
ಜಡೇಜಾಗೆ ಮಾತ್ರವಲ್ಲ.. ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ಗೆ ಮೆದುಳೇ ಇಲ್ಲದ ಪ್ಲೇಯರ್ ಎಂದು ಸಂಜಯ್ ಮಾಂಜ್ರೇಕರ್ ಹೇಳಿದ್ರು. ಇದಕ್ಕೆ ಟ್ವಿಟ್ಟರ್ನಲ್ಲಿ ಕಿರನ್ ಪೊಲಾರ್ಡ್ ತಿರುಗೇಟು ನೀಡಿದ್ದರು.
ಇದನ್ನೂ ಓದಿ: ತಿರುಗಿಬಿದ್ದ ರೋಹಿತ್ ಶರ್ಮಾ.. ವೈಫಲ್ಯಕ್ಕೆ ಕಾರಣವಾಯ್ತು ಈ ಅಸಲಿ ವಿಚಾರ..!
‘ಬಾಬಾ’ಗೆ ಶಮಿ ಯಾರ್ಕರ್.!
ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಗಾಯಗೊಂಡಿರೋ ಶಮಿ ಅತಿ ಕಡಿಮೆ ಬೆಲೆಗೆ ಸೇಲ್ ಆಗ್ತಾರೆ ಎಂದು ಮಾಂಜ್ರೇಕರ್ ಭವಿಷ್ಯ ನುಡಿದಿದ್ರು. ಇದ್ರಿಂದ ಬೇಸರಗೊಂಡಿದ್ದ ಶಮಿ ಬಾಬಾಗೆ ಜಯವಾಗಲಿ. ನಿಮ್ಮ ಭವಿಷ್ಯದ ಬಗ್ಗೆಯೂ ಯೋಚಿಸಲು ಸ್ವಲ್ಪ ಜ್ಞಾನ ಉಳಿಸಿಕೊಳ್ಳಿ. ಯಾರಾದ್ರೂ ಭವಿಷ್ಯ ಕೇಳೋದಿದ್ರೆ, ಸರ್ನ ಕೇಳಿ ಎಂದು ಖಾರವಾಗಿ ಸ್ಟೋರಿ ಬರೆದುಕೊಂಡಿದ್ದರು.
ಹಲವು ಬಾರಿ ಮಾಂಜ್ರೇಕರ್ ಬಾಯಿ ಹರಿಬಿಟ್ಟ ಉದಾಹರಣೆಗಳಿವೆ. ಕಾಮೆಂಟರಿ ಬಾಕ್ಸ್ನಲ್ಲಿದ್ದು ಆಟಗಾರರನ್ನ ಹೊಗಳಿದ್ದಕ್ಕಿಂತ, ಮಾಂಜ್ರೇಕರ್ ಆಟಗಾರರ ಟೀಕಿಸೋದೇ ಹೆಚ್ಚು. ಆ ಟೀಕಿಸೋ ಭರದಲ್ಲಿ ವಿವಾದಕ್ಕೆ ಪದೇ ಪದೇ ಗುರಿಯಾಗಿದ್ದಾರೆ. ತಪ್ಪನ್ನ ಸರಿಪಡಿಸಿಕೊಂಡಿಲ್ಲ.
ಇದನ್ನೂ ಓದಿ: ಮೌನಿ ಅಮವಾಸ್ಯೆ ಪ್ರಯುಕ್ತ ದಶದಿಕ್ಕುಗಳಿಂದ ಭಕ್ತರ ಆಗಮನ; ರೈಲ್ವೆ ಇಲಾಖೆಯಿಂದ ವ್ಯವಸ್ಥೆಯಾದ ಟ್ರೈನ್ಗಳ ಸಂಖ್ಯೆಯಷ್ಟು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ