/newsfirstlive-kannada/media/post_attachments/wp-content/uploads/2024/11/Dhoni_Kohli_Rohit.jpg)
ಇತ್ತೀಚೆಗೆ ನಡೆದ 3ನೇ ಟಿ20 ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​​ ಇಂಡಿಯಾ 11 ರನ್​ಗಳಿಂದ ಗೆದ್ದು ಬೀಗಿದೆ. 4 ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಸೌತ್​ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಭಾರೀ ಸುದ್ದಿಯಾದವರು ಸಂಜು ಸ್ಯಾಮ್ಸನ್​​.
ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಸಂಜು ಸ್ಯಾಮ್ಸನ್​​ 50 ಎಸೆತಗಳಲ್ಲಿ 107 ರನ್ಗಳ ಅದ್ಭುತ ಶತಕ ಬಾರಿಸಿದ್ರು. ಇದಾದ ಬಳಿಕ ನಡೆದ ಸತತ 2 ಪಂದ್ಯಗಳಲ್ಲೂ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯಕ್ಕೆ ಔಟಾದ್ರು.
/newsfirstlive-kannada/media/post_attachments/wp-content/uploads/2024/01/Rohit_Sanju-Samson.jpg)
ಸಂಜು ಸ್ಯಾಮ್ಸನ್​​ ತಂದೆ ಆಕ್ರೋಶ
ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಟಿ20 ಸರಣಿ ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ಕೊನೆಯ ಟಿ20 ಪಂದ್ಯ ನಡೆಯಲಿದೆ. ಇದರ ಮಧ್ಯೆ ​ಸಂಜು ಸ್ಯಾಮ್ಸನ್ ತಂದೆ ವಿಶ್ವನಾಥ್ ಮಾತಾಡಿರೋ ವಿಡಿಯೋ ಒಂದು ವೈರಲ್​ ಆಗಿದೆ. ಭಾರತ ಕ್ರಿಕೆಟ್​​​ ತಂಡದ ಮೂವರು ನಾಯಕರು ಮತ್ತು ಮುಖ್ಯ ಕೋಚ್​ ಆಗಿದ್ದವ್ರು ತಮ್ಮ ಮಗನ ಕ್ರಿಕೆಟ್​ ಜೀವನ ಹಾಳು ಮಾಡಿದ್ರು ಎಂದು ವಿಶ್ವನಾಥ್​ ಆಕ್ರೋಶ ಹೊರಹಾಕಿದ್ದಾರೆ.
ವಿಶ್ವನಾಥ್ ಗಂಭೀರ ಆರೋಪ
ಟೀಮ್ ಇಂಡಿಯಾದ ದಿಗ್ಗಜರಾದ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್​​ ರಾಹುಲ್ ದ್ರಾವಿಡ್ ಸಂಜುವಿನ 10 ವರ್ಷಗಳನ್ನು ವ್ಯರ್ಥ ಮಾಡಿದ್ರು ಎಂದರು ವಿಶ್ವನಾಥ್​​.
ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​​ ಸಂಜು ಸ್ಯಾಮ್ಸನ್​. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸೋ ಮುನ್ನ ಸಂಜುಗೆ ಅವಕಾಶಗಳೇ ಸಿಗುತ್ತಿರಲಿಲ್ಲ. ಬಿಸಿಸಿಐನಿಂದ ಸಂಜು ಸ್ಯಾಮ್ಸನ್​ ಭಾರೀ ಅನ್ಯಾಯಕ್ಕೆ ಒಳಗಾಗಿದ್ರು. ಅದರಲ್ಲೂ ಇವರನ್ನು ಮಹತ್ವದ ಸೀರೀಸ್​ಗಳಿಂದಲೇ ಹೊರ ಹಾಕಲಾಗುತ್ತಿತ್ತು. ಈಗ ಸಂಜು ಸ್ಯಾಮ್ಸನ್​ಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಹಾಗಾಗಿ ಬ್ಯಾಕ್​ ಟು ಬ್ಯಾಕ್​​ ಶತಕಗಳು ಸಿಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us