/newsfirstlive-kannada/media/post_attachments/wp-content/uploads/2024/11/Dhoni_Kohli_Rohit.jpg)
ಇತ್ತೀಚೆಗೆ ನಡೆದ 3ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 11 ರನ್ಗಳಿಂದ ಗೆದ್ದು ಬೀಗಿದೆ. 4 ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಸೌತ್ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಭಾರೀ ಸುದ್ದಿಯಾದವರು ಸಂಜು ಸ್ಯಾಮ್ಸನ್.
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 107 ರನ್ಗಳ ಅದ್ಭುತ ಶತಕ ಬಾರಿಸಿದ್ರು. ಇದಾದ ಬಳಿಕ ನಡೆದ ಸತತ 2 ಪಂದ್ಯಗಳಲ್ಲೂ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯಕ್ಕೆ ಔಟಾದ್ರು.
ಸಂಜು ಸ್ಯಾಮ್ಸನ್ ತಂದೆ ಆಕ್ರೋಶ
ಟೀಮ್ ಇಂಡಿಯಾ, ಸೌತ್ ಆಫ್ರಿಕಾ ಟಿ20 ಸರಣಿ ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ಕೊನೆಯ ಟಿ20 ಪಂದ್ಯ ನಡೆಯಲಿದೆ. ಇದರ ಮಧ್ಯೆ ಸಂಜು ಸ್ಯಾಮ್ಸನ್ ತಂದೆ ವಿಶ್ವನಾಥ್ ಮಾತಾಡಿರೋ ವಿಡಿಯೋ ಒಂದು ವೈರಲ್ ಆಗಿದೆ. ಭಾರತ ಕ್ರಿಕೆಟ್ ತಂಡದ ಮೂವರು ನಾಯಕರು ಮತ್ತು ಮುಖ್ಯ ಕೋಚ್ ಆಗಿದ್ದವ್ರು ತಮ್ಮ ಮಗನ ಕ್ರಿಕೆಟ್ ಜೀವನ ಹಾಳು ಮಾಡಿದ್ರು ಎಂದು ವಿಶ್ವನಾಥ್ ಆಕ್ರೋಶ ಹೊರಹಾಕಿದ್ದಾರೆ.
ವಿಶ್ವನಾಥ್ ಗಂಭೀರ ಆರೋಪ
ಟೀಮ್ ಇಂಡಿಯಾದ ದಿಗ್ಗಜರಾದ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ರಾಹುಲ್ ದ್ರಾವಿಡ್ ಸಂಜುವಿನ 10 ವರ್ಷಗಳನ್ನು ವ್ಯರ್ಥ ಮಾಡಿದ್ರು ಎಂದರು ವಿಶ್ವನಾಥ್.
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸೋ ಮುನ್ನ ಸಂಜುಗೆ ಅವಕಾಶಗಳೇ ಸಿಗುತ್ತಿರಲಿಲ್ಲ. ಬಿಸಿಸಿಐನಿಂದ ಸಂಜು ಸ್ಯಾಮ್ಸನ್ ಭಾರೀ ಅನ್ಯಾಯಕ್ಕೆ ಒಳಗಾಗಿದ್ರು. ಅದರಲ್ಲೂ ಇವರನ್ನು ಮಹತ್ವದ ಸೀರೀಸ್ಗಳಿಂದಲೇ ಹೊರ ಹಾಕಲಾಗುತ್ತಿತ್ತು. ಈಗ ಸಂಜು ಸ್ಯಾಮ್ಸನ್ಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಹಾಗಾಗಿ ಬ್ಯಾಕ್ ಟು ಬ್ಯಾಕ್ ಶತಕಗಳು ಸಿಡಿಸಿದ್ದಾರೆ.
ಇದನ್ನೂ ಓದಿ:ಈ ದೇಶದ ಅಚ್ಚರಿ ಆಟಗಾರರ ಖರೀದಿಗೆ ಬೆಂಗಳೂರು ಪ್ಲಾನ್; RCB ರಹಸ್ಯ ಲಿಸ್ಟ್ ಔಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ