‘ಸ್ಟಾರ್​ ಕ್ರಿಕೆಟರ್​​ ಜೀವನ ಹಾಳು ಮಾಡಿದ ಧೋನಿ, ಕೊಹ್ಲಿ, ರೋಹಿತ್’- ಮೂವರ ವಿರುದ್ಧ ಗಂಭೀರ ಆರೋಪ

author-image
Ganesh Nachikethu
Updated On
‘ಸ್ಟಾರ್​ ಕ್ರಿಕೆಟರ್​​ ಜೀವನ ಹಾಳು ಮಾಡಿದ ಧೋನಿ, ಕೊಹ್ಲಿ, ರೋಹಿತ್’- ಮೂವರ ವಿರುದ್ಧ ಗಂಭೀರ ಆರೋಪ
Advertisment
  • ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಮಧ್ಯೆ 3ನೇ ಟಿ20
  • ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾಗೆ ಗೆಲುವು
  • ಭಾರತ ತಂಡಕ್ಕೆ ಕೈ ಕೊಟ್ಟ ಕ್ರಿಕೆಟರ್​ ಸಂಜು ಸ್ಯಾಮ್ಸನ್​​

ಇತ್ತೀಚೆಗೆ ನಡೆದ 3ನೇ ಟಿ20 ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​​ ಇಂಡಿಯಾ 11 ರನ್​ಗಳಿಂದ ಗೆದ್ದು ಬೀಗಿದೆ. 4 ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಸೌತ್​ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಭಾರೀ ಸುದ್ದಿಯಾದವರು ಸಂಜು ಸ್ಯಾಮ್ಸನ್​​.

ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಸಂಜು ಸ್ಯಾಮ್ಸನ್​​ 50 ಎಸೆತಗಳಲ್ಲಿ 107 ರನ್‌ಗಳ ಅದ್ಭುತ ಶತಕ ಬಾರಿಸಿದ್ರು. ಇದಾದ ಬಳಿಕ ನಡೆದ ಸತತ 2 ಪಂದ್ಯಗಳಲ್ಲೂ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯಕ್ಕೆ ಔಟಾದ್ರು.

publive-image

ಸಂಜು ಸ್ಯಾಮ್ಸನ್​​ ತಂದೆ ಆಕ್ರೋಶ

ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಟಿ20 ಸರಣಿ ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ಕೊನೆಯ ಟಿ20 ಪಂದ್ಯ ನಡೆಯಲಿದೆ. ಇದರ ಮಧ್ಯೆ ​ಸಂಜು ಸ್ಯಾಮ್ಸನ್ ತಂದೆ ವಿಶ್ವನಾಥ್ ಮಾತಾಡಿರೋ ವಿಡಿಯೋ ಒಂದು ವೈರಲ್​ ಆಗಿದೆ. ಭಾರತ ಕ್ರಿಕೆಟ್​​​ ತಂಡದ ಮೂವರು ನಾಯಕರು ಮತ್ತು ಮುಖ್ಯ ಕೋಚ್​ ಆಗಿದ್ದವ್ರು ತಮ್ಮ ಮಗನ ಕ್ರಿಕೆಟ್​ ಜೀವನ ಹಾಳು ಮಾಡಿದ್ರು ಎಂದು ವಿಶ್ವನಾಥ್​ ಆಕ್ರೋಶ ಹೊರಹಾಕಿದ್ದಾರೆ.

ವಿಶ್ವನಾಥ್ ಗಂಭೀರ ಆರೋಪ

ಟೀಮ್ ಇಂಡಿಯಾದ ದಿಗ್ಗಜರಾದ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್​​ ರಾಹುಲ್ ದ್ರಾವಿಡ್ ಸಂಜುವಿನ 10 ವರ್ಷಗಳನ್ನು ವ್ಯರ್ಥ ಮಾಡಿದ್ರು ಎಂದರು ವಿಶ್ವನಾಥ್​​.

ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​​ ಸಂಜು ಸ್ಯಾಮ್ಸನ್​. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸೋ ಮುನ್ನ ಸಂಜುಗೆ ಅವಕಾಶಗಳೇ ಸಿಗುತ್ತಿರಲಿಲ್ಲ. ಬಿಸಿಸಿಐನಿಂದ ಸಂಜು ಸ್ಯಾಮ್ಸನ್​ ಭಾರೀ ಅನ್ಯಾಯಕ್ಕೆ ಒಳಗಾಗಿದ್ರು. ಅದರಲ್ಲೂ ಇವರನ್ನು ಮಹತ್ವದ ಸೀರೀಸ್​ಗಳಿಂದಲೇ ಹೊರ ಹಾಕಲಾಗುತ್ತಿತ್ತು. ಈಗ ಸಂಜು ಸ್ಯಾಮ್ಸನ್​ಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಹಾಗಾಗಿ ಬ್ಯಾಕ್​ ಟು ಬ್ಯಾಕ್​​ ಶತಕಗಳು ಸಿಡಿಸಿದ್ದಾರೆ.

ಇದನ್ನೂ ಓದಿ:ಈ ದೇಶದ ಅಚ್ಚರಿ ಆಟಗಾರರ ಖರೀದಿಗೆ ಬೆಂಗಳೂರು ಪ್ಲಾನ್​​; RCB ರಹಸ್ಯ ಲಿಸ್ಟ್​ ಔಟ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment