6,6,6,6,6,6,6,6; ಸಂಜು ಸ್ಫೋಟಕ ಶತಕಕ್ಕೆ ಕಾರಣ ಯಾರು? ಈ ಬಗ್ಗೆ ಸ್ಯಾಮ್ಸನ್​ ಏನಂದ್ರು?

author-image
Ganesh Nachikethu
Updated On
ಸಂಜು ಸ್ಯಾಮ್ಸನ್ ಸೆಂಚುರಿ, ಸೂರ್ಯ ಕುಮಾರ್‌ ಅಬ್ಬರ.. ಬಾಂಗ್ಲಾಗೆ ಟೀಂ ಇಂಡಿಯಾ ಬಿಗ್ ಟಾರ್ಗೆಟ್‌!
Advertisment
  • ಬಾಂಗ್ಲಾ ವಿರುದ್ಧ ಕೊನೆ ಟಿ20 ಪಂದ್ಯದಲ್ಲಿ ಸ್ಯಾಮ್ಸನ್​ ಅಬ್ಬರದ ಬ್ಯಾಟಿಂಗ್
  • ಅಂದು ಸಂಜು ಸ್ಯಾಮ್ಸನ್​​ ವೇಗದ ಶತಕ ಸಿಡಿಸಲು ಕಾರಣ ಯಾರು ಗೊತ್ತಾ?
  • ಬರೋಬ್ಬರಿ 11 ಬೌಂಡರಿ, 8 ಸಿಕ್ಸರ್​ ಸಿಡಿಸಿದ್ದ ಸ್ಯಾಮ್ಸನ್​ ಆಟ ಹೇಗಿತ್ತು..?

ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ದಸರಾ ಹಬ್ಬದಂದು ರನ್​ಗಳ ಹೊಳೆಯನ್ನೇ ಹರಿಸಿದ ಸಂಜು ಸ್ಯಾಮ್ಸನ್​ 40 ಎಸೆತಗಳಲ್ಲಿ ಶತಕ ಸಿಡಿಸಿದ್ರು.

ಇನ್ನು, 236.17 ಸ್ಟ್ರೈಕ್​ ರೇಟ್​ನೊಂದಿಗೆ ರನ್​ ಕಲೆ ಹಾಕಿದ ಸಂಜು ಸ್ಯಾಮ್ಸನ್​ 47 ಎಸೆತಗಳಲ್ಲಿ 111 ರನ್​ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 11 ಬೌಂಡರಿ, 8 ಸಿಕ್ಸರ್​ ಸಿಡಿಸಿದರು. ಒಂದು ಓವರ್​ನಲ್ಲಿ ಸತತ 4 ಬೌಂಡರಿ, ಇನ್ನೊಂದು ಓವರ್​ನಲ್ಲಿ ಸತತ 5 ಸಿಕ್ಸರ್​ ಬಾರಿಸಿದ್ದು ಇನ್ನಿಂಗ್ಸ್​ನ ಮತ್ತೊಂದು ಹೈಲೈಟ್​.

ಸಂಜು ಸ್ಯಾಮ್ಸನ್​ ಶತಕ ಸಿಡಿಸುವಾಗ ನಾನ್ ಸ್ಟ್ರೈಕರ್​ನಲ್ಲಿ ಸೂರ್ಯಕುಮಾರ್ ಯಾದವ್ ಇದ್ದರು. 90 ರನ್​ ಗಳಿಸಿದ್ದ ಸಂಜು ಸ್ಯಾಮ್ಸನ್ ಬಳಿ ಬಂದ ಸೂರ್ಯ, ಶತಕಕ್ಕೆ ಹತ್ತಿರದಲ್ಲಿದ್ದೀಯಾ! ನೋಡಿ ಆಡು ಎಂದಿದ್ದರಂತೆ. ಆದರೆ ಸಂಜು ಸ್ಯಾಮ್ಸನ್ ತಲೆಯಲ್ಲಿ ಬೇರೆ ಓಡುತ್ತಿತ್ತು.

ಈ ಬಗ್ಗೆ ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ಸಂಜುಗೆ ಪ್ರಶ್ನೆ ಕೇಳಿದ್ರು. ನೀವು 96 ರನ್ ಗಳಿಸಿದ್ದಾಗ ನೇರವಾಗಿ ನುಗ್ಗಿ ಹೊಡೆಯುತ್ತಿದ್ದಿರಿ. ಈ ರೀತಿಯ ರಿಸ್ಕ್ ಯಾಕೆ ತೆಗೆದುಕೊಂಡಿರಿ? ಎಂದರು. ಇದಕ್ಕೆ ಸಂಜು ಸ್ಯಾಮ್ಸನ್​ ಉತ್ತರ ಹೀಗಿತ್ತು.

ಸಂಜು ನೀಡಿದ ಉತ್ತರ ಏನು?

ಕಳೆದ ಕೆಲವು ವಾರಗಳಿಂದ ಟೀಮ್​​ನಲ್ಲಿ ಈ ರೀತಿಯದ್ದೇ ವಾತಾರವಣ ಇತ್ತು. ಆಕ್ರಮಣಕಾರಿ ಬ್ಯಾಟಿಂಗ್​​ ಮಾಡಿ ಎಂದೇ ಕ್ಯಾಪ್ಟನ್​ ಮತ್ತು ಕೋಚ್​​ ತಿಳಿಸಿದ್ದರು. ನನ್ನ ತಲೆಯಲ್ಲಿ ಅದೇ ಇತ್ತು. ಅದು ನನಗೆ ಸರಿಯಾಗಿ ಹೊಂದುತ್ತದೆ ಎಂದು ಭಾವಿಸಿದ್ದೆ. ಹಾಗಾಗಿ ಅದೇ ಪ್ರಯತ್ನ ಮುಂದುವರಿಸಿದೆ. ದೊಡ್ಡ ಹೊಡೆತಕ್ಕೆ ಕೈ ಹಾಕಿದೆ ಎಂದರು ಸಂಜು. ಸ್ಯಾಮ್ಸನ್​ ಈ ಉತ್ತರಕ್ಕೆ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: ‘ಟೀಮ್​ ಇಂಡಿಯಾ ಗೆಲುವಿಗೆ ಈ ಆಟಗಾರ ಕಾರಣ’ ಎಂದ ಕ್ಯಾಪ್ಟನ್​; ಏನಂದ್ರು ಸೂರ್ಯ?​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment