ರಾಜಸ್ಥಾನ್ ರಾಯಲ್ಸ್​ ತೊರೆಯಲು ಸಂಜು ಸಜ್ಜು.. ಯಾವ ತಂಡ ಸೇರ್ತಾರೆ ಕ್ಯಾಪ್ಟನ್..?

author-image
Ganesh
IPL ಟ್ರೇಡ್​ ವಿಂಡೋ ಓಪನ್​​.. ಬಲಿಷ್ಠ ತಂಡಕ್ಕಾಗಿ ಪ್ಲಾನ್​, ಚೆನ್ನೈಗೆ ಹೊಸ ವಿಕೆಟ್​ ಕೀಪರ್?​
Advertisment
  • 11 ವರ್ಷಗಳ ಸುದೀರ್ಘ ಪಯಣಕ್ಕೆ ಫುಲ್​ ಸ್ಟಾಫ್​..?
  • ರಾಜಸ್ಥಾನ್​​ ತೊರೆಯಲು ಮುಂದಾದ್ರಾ ಸ್ಯಾಮ್ಸನ್.​.?
  • ಸಂಜು ಸ್ಯಾಮ್ಸನ್​ ಮ್ಯಾನೇಜರ್​ ನಡೆ ನೀಡ್ತಿದೆ ಪುಷ್ಠಿ..!

ಒಂದಲ್ಲ.. ಎರಡಲ್ಲ.. ಸುದೀರ್ಘ 11 ವರ್ಷಗಳ ಪ್ರಯಾಣ.. ಸಂಜು ಸ್ಯಾಮ್ಸನ್​ ಅಂದ್ರೆ ರಾಜಸ್ಥಾನ್​ ರಾಯಲ್ಸ್​, ರಾಜಸ್ಥಾನ್​ ರಾಯಲ್ಸ್​ ಅಂದ್ರೆ ಸಂಜು ಸ್ಯಾಮ್ಸನ್​ ಎಂದೇ ಕ್ರಿಕೆಟ್​ ಲೋಕ ಗುರುತಿಸಿದೆ. ಕೇರಳದ ಸಂಜು ಸ್ಯಾಮ್ಸನ್​ ರಾಜಸ್ಥಾನದ ಮನೆ ಮಗ ಅನಿಸಿಬಿಟ್ಟಿದ್ದಾರೆ. ಇಂತಾ ಸಂಜು ಸ್ಯಾಮ್ಸನ್​​ ಇದೀಗ ರಾಜಸ್ಥಾನ್​ ತಂಡವನ್ನ ತೊರೆಯುತ್ತಾರೆ ಎಂಬ ಶಾಕಿಂಗ್​​ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: ABD ಮೇಲೆ ಕೊಹ್ಲಿಗೆ ಕೋಪ.. ತಿಂಗಳುಗಟ್ಟಲೇ ಮಾತಿಲ್ಲ, ಕಥೆಯಿಲ್ಲ.. ಈ ಸ್ಟೋರಿ ಗೊತ್ತಾ ನಿಮಗೆ..?

publive-image

18ನೇ ಸೀಸನ್​​ನ ಐಪಿಎಲ್​ ಅಂತ್ಯ ಕಂಡು ಒಂದು ತಿಂಗಳೂ ಕಂಪ್ಲೀಟ್​ ಆಗಿಲ್ಲ. ಅದಾಗಲೇ ನೆಕ್ಸ್ಟ್​ ಸೀಸನ್​​ ಐಪಿಎಲ್​ಗೆ ಸದ್ದಿಲ್ಲದೇ ಫ್ರಾಂಚೈಸಿಗಳು ಸಿದ್ಧತೆ ನಡೆಸ್ತಿವೆ. ಸೈಲೆಂಟಾಗಿಯೇ ಟ್ರೇಡ್​ ವಿಂಡೋ ಅಡಿ ಆಟಗಾರರ ವರ್ಗಾವಣೆಯ ವ್ಯವಹಾರಗಳು ನಡೀತಿವೆ. ಇದೀಗ ಐಪಿಎಲ್​ನ ಸೂಪರ್​ ಸ್ಟಾರ್​​ ಆಟಗಾರನೊಬ್ಬ ಬೇರೆ ಫ್ರಾಂಚೈಸಿಯ ಸಂಪರ್ಕದಲ್ಲಿರೋ ಬಿಗ್​ ಸುದ್ದಿ ಹೊರಬಿದ್ದಿದೆ. ಅವರೇ ರಾಜಸ್ಥಾನ್​ ರಾಯಲ್ಸ್​ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​.

11 ವರ್ಷಗಳ ಸುದೀರ್ಘ ಪಯಣಕ್ಕೆ ಫುಲ್​ ಸ್ಟಾಫ್​

ಸಂಜು ಸ್ಯಾಮ್ಸನ್​ ರಾಜಸ್ಥಾನ್​ ರಾಯಲ್ಸ್​ ತಂಡದ ಶಕ್ತಿ. ತಂಡದ ಸಾರಥಿ, ತಂಡದ ಕಟ್ಟಾಳು​. ರಾಜಸ್ಥಾನ್​ ರಾಯಲ್ಸ್​ ಹಾಗೂ ಸಂಜು ಸ್ಯಾಮ್ಸನ್​​ದ್ದು ಸುದೀರ್ಘ 11 ವರ್ಷಗಳ ಜರ್ನಿ. 2013ರಲ್ಲಿ ಇದೇ ಫ್ರಾಂಚೈಸಿಯೊಂದಿಗೆ ಐಪಿಎಲ್​ ಕರಿಯರ್​ ಆರಂಭಿಸಿದ ಸಂಜು ಸ್ಯಾಮ್ಸನ್​, 2016-17ರ 2 ಸೀಸನ್​ ಹೊರತುಪಡಿಸಿದ್ರೆ, ಉಳಿದೆಲ್ಲಾ ಸೀಸನ್​ಗಳಲ್ಲಿ ರಾಜಸ್ಥಾನದ ಅವಿಭಾಜ್ಯ ಅಂಗವಾಗಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ಕೇರಳದ ಸಂಜು ಸ್ಯಾಮ್ಸನ್​​ ರಾಜಸ್ಥಾನದ ಮನೆ ಮಗ ಆಗಿಬಿಟ್ಟಿದ್ದಾರೆ. ಈ ಮನೆ ಮಗ ಇದೀಗ ತಂಡವನ್ನ ತೊರೆಯುತ್ತಿರೋ ಶಾಕಿಂಗ್​ ಸುದ್ದಿ ಹೊರಬಿದ್ದಿದೆ.

ಸಿಎಸ್​​ಕೆ ಸೇರ್ತಾರಾ ಸ್ಯಾಮ್ಸನ್?

ಸೀಸನ್​ 18ರ ಅಂತ್ಯದ ಬೆನ್ನಲ್ಲೇ ಆಟಗಾರರ ವರ್ಗಾವಣೆಯ ಮಾಡೋ ಟ್ರೇಡ್​ವಿಂಡೋ ಓಪನ್​ ಆಗಿದೆ. ಅಡಿಯಲ್ಲಿ ಸಂಜು ಸ್ಯಾಮ್ಸನ್​ನ ತಂಡಕ್ಕೆ ಕರೆತರಲು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮುಂದಾಗಿದೆ ಎನ್ನಲಾಗಿದೆ. ಈ ಸೀಸನ್​ನಲ್ಲಿ ಚೆನ್ನೈ ಪ್ರದರ್ಶನ ನೀಡಿತು. ಇದಕ್ಕೆ ಬ್ಯಾಟ್ಸ್​​ಮನ್​ಗಳ ವೈಫಲ್ಯ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಬ್ಯಾಟಿಂಗ್​ ಸ್ಟ್ರೆಂಥ್​​ ಹೆಚ್ಚಿಸಲು ಮುಂದಾಗಿರೋ ಸಿಎಸ್​ಕೆ ಸಂಜುಗೆ ಗಾಳ ಹಾಕಲು ಹೊರಟಿದೆ. ಈಗಾಗಲೇ ಸಂಜು ಜೊತೆಗೆ ಫ್ರಾಂಚೈಸಿ ಮಾತುಕತೆ ನಡೆಸಿದ್ದು, ಮುಂದಿನ ಸೀಸನ್​ನಲ್ಲಿ ಯೆಲ್ಲೋ ಜೆರ್ಸಿ ತೊಡಲು ಸಂಜು ಕೂಡ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: ಪತ್ನಿಯ ಹುಟ್ಟುಹಬ್ಬದಂದು ಕಣ್ಣೀರು.. ಸೋತು ಗೆದ್ದ ಕನ್ನಡಿಗ ಕರುಣ್ ನಾಯರ್..​

publive-image

ಸ್ಯಾಮ್ಸನ್​ ಮ್ಯಾನೇಜರ್​ ನಡೆ ನೀಡ್ತಿದೆ ಪುಷ್ಠಿ

ಸಂಜು ಸ್ಯಾಮ್ಸನ್​​ ವಿಚಾರದಲ್ಲಿ ರಾಜಸ್ಥಾನ್​ ರಾಯಲ್ಸ್​ ಆಗಲಿ, ಚೆನ್ನೈ ಸೂಪರ್​​ ಕಿಂಗ್ಸ್​ ತಂಡವಾಗಲಿ ಯಾವುದೇ ಅಧಿಕೃತವಾದ ಹೇಳಿ ನೀಡಿಲ್ಲ. ಸಂಜು ಸ್ಯಾಮ್ಸನ್​ರ ಮ್ಯಾನೇಜರ್​ ಪ್ರಶೋಬ್​ ಸುದೆವನ್​ ನಡೆ ಈ ಸುದ್ದಿಗೆ ಪುಷ್ಟಿಕೊಡ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ಸಂಜು ಸ್ಯಾಮ್ಸನ್​​ ಸಿಎಸ್​ಕೆ ಸೇರ್ತಾರೆ ಅನ್ನೋ ಪೋಸ್ಟ್​ಗಳನ್ನ ಪ್ರಶೋಬ್​​​ ಲೈಕ್​ ಮಾಡಿದ್ದಾರೆ. ಈ ಗಾಳಿ ಸುದ್ದಿಗೆ ಜೀವ ನೀಡಿದಂತಾಗಿದೆ.

ಸಂಜು ಸ್ಯಾಮ್ಸನ್​ ತಂಡ ತೊರೆಯಲು ಮುಂದಾಗಿದ್ದೇಕೆ?

ಸುದೀರ್ಘ 11 ವರ್ಷಗಳ ಕಾಲ ರಾಜಸ್ಥಾನ್​ ರಾಯಲ್ಸ್​ ತಂಡವನ್ನ ಸಂಜು ಪ್ರತಿನಿಧಿಸಿದ್ದಾರೆ. ಇಂದು ಸಂಜು ಏನೇ ಆಗಿದ್ರೂ ಅದಕ್ಕೆ ಫ್ರಾಂಚೈಸಿ ನೀಡಿದ ಬೆಂಬಲ, ಸಹಕಾರದ್ದು ಪ್ರಮುಖ ಪಾತ್ರವಿದೆ. ಇಂತಾ ಫ್ರಾಂಚೈಸಿಯನ್ನ ಸಂಜು ಸ್ಯಾಮ್ಸನ್​ ತೊರೆಯಲು ಮುಂದಾಗಿರೋದಕ್ಕೆ ಆಂತರಿಕ ಭಿನ್ನಾಭಿಪ್ರಾಯವೇ ಪ್ರಮುಖ ಕಾರಣ ಎನ್ನಲಾಗ್ತಿದೆ. ಈ ಸೀಸನ್​ ಐಪಿಎಲ್​ ವೇಳೆ ಮ್ಯಾನೇಜ್​ಮೆಂಟ್​ - ಸಂಜು ನಡುವೆ ನಡೆದ ಘಟನೆಗಳು ಕೂಡ ಗಟ್ಟಿ ನಿರ್ಧಾರದ ಹಿಂದಿವೆ ಎನ್ನಲಾಗಿದೆ.

ಐಪಿಎಲ್​ನ ರಾಜಸ್ಥಾನ್​ ರಾಯಲ್ಸ್​ vs ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯ ಟೈ ಆಗಿತ್ತು. ಸೂಪರ್​ ಓವರ್​ಗೂ ಮುನ್ನ ಡಗೌಟ್​ ಬಳಿ ನಡೆದ ಮೀಟಿಂಗ್​ ವೇಳೆ ಸಂಜು ಸ್ಯಾಮ್ಸನ್​ನ ಕಡೆಗಣಿಸಲಾಯ್ತು. ಮೀಟಿಂಗ್​ ವೇಳೆ ಪಕ್ಕದಲ್ಲೇ ಓಡಾಡ್ತಿದ್ದ ನಾಯಕ ಸಂಜು ಸ್ಯಾಮ್ಸನ್​ ನೋಡಿಯೂ ನೋಡದಂತೆ ಹೆಜ್ಜೆ ಹಾಕ್ತಿದ್ರು. ಇದೇ ವೇಳೆ ತಂಡದ ಸಹ ಆಟಗಾರ ಯಧುವೀರ್ ಸಿಂಗ್, ಟೀಮ್​​​​​ ಮೀಟಿಂಗ್​ಗೆ ಬರುವಂತೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿದ್ದು ಸಂಜು ಮೀಟಿಂಗ್​ನಿಂದ ದೂರ ಉಳಿದ್ರು. ಈತರದ್ದೇ ಹಲವು ಘಟನೆಗಳು ಡ್ರೆಸ್ಸಿಂಗ್​ ರೂಮ್​ನಲ್ಲಿ ನಡೆದಿವೆ ಎನ್ನಲಾಗ್ತಿದೆ. ಆಟಗಾರರ ಖರೀದಿ, ಪ್ಲೇಯಿಂಗ್​ ಇಲೆವೆನ್​ ಆಯ್ಕೆ, ಗೇಮ್​ಪ್ಲಾನ್​ ಎಲ್ಲಾ ವಿಚಾರದಲ್ಲೂ ಕಡೆಗಣಿಸೋದಕ್ಕೆ ಬೇಸರಗೊಂಡಿರೋ ಸಂಜು ತಂಡ ಬಿಡೋ ನಿರ್ಧಾರ ಮಾಡಿದ್ದಾರೆ ಅನ್ನೋದು ಸದ್ಯದ ಸುದ್ದಿ.

ಇದನ್ನೂ ಓದಿ: ಕ್ರಿಕೆಟ್ ಆಟದ ವೇಳೆ ವಿರಾಟ್ ಕೊಹ್ಲಿ ತಿನ್ನುವ ಚಾಕೊಲೇಟ್ ಬೆಲೆ ಎಷ್ಟು?

publive-image

ಸಂಜುಗೆ ನಾಯಕತ್ವ ಸಿಗುತ್ತಾ.?

ಚೆನ್ನೈ ಸೂಪರ್​​ ಕಿಂಗ್ಸ್​ ತಂಡಕ್ಕೆ ಋತುರಾಜ್​ ಗಾಯಕ್ವಾಡ್​​ ನಾಯಕನಾಗಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್​ ಸಿಎಸ್​ಕೆ ತಂಡ ಸೇರಿದ್ರೂ ನಾಯಕತ್ವ ಸಿಗೋದು ಅನುಮಾನ. ಸಂಜುಗೆ ಪಟ್ಟಕಟ್ಟಿದ್ರೆ, ಋತುರಾಜ್​ನ ಕೈ ಬಿಡಬೇಕಾಗುತ್ತದೆ. ಪ್ರಾಕ್ಟಕಲಿ ಹೀಗಾಗೋದು ಅನುಮಾನವೇ. ಇದ್ರ ನಡುವೆ ಕೆಕೆಆರ್​​ ಫ್ರಾಂಚೈಸಿ ಕೂಡ ಹೊಸ ನಾಯಕನ ಹುಡುಕಾಟ ನಡೆಸ್ತಿದೆ. ಹೀಗಿರೋ ಕೆಕೆಆರ್​ ಫ್ರಾಂಚೈಸಿ ಅನುಭವಿ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​ನ ಕಡೆಗಣಿಸೋಕೆ ಸಾಧ್ಯನೇ ಇಲ್ಲ. ಒಂದು ವೇಳೆ ಸಂಜು ಕೆಕೆಆರ್​ ಆಫರ್​ ನೀಡಿದ್ರೆ ಆಗ ಸಂಜು ಸ್ಯಾಮ್ಸನ್​ ನಿರ್ಧಾರ ಏನಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಜಸ್​ಪ್ರಿತ್​​ ಬೂಮ್ರಾ ಮೊದಲ ಪಂದ್ಯದಲ್ಲಿ ಆಡಲೇಬಾರದು.. ಕ್ರಿಕೆಟರ್​ ಹೀಗೆ ಹೇಳಿದ್ದು ಯಾಕೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment