ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸಿಗಲಿಲ್ಲ ಸ್ಥಾನ
ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ವಿಕೆಟ್ ಕೀಪರ್ ಸ್ಯಾಮ್ಸನ್..!
ದಕ್ಷಿಣ ಆಫ್ರಿಕಾ ವಿರುದ್ದ ಅಬ್ಬರದ ಶತಕ ಸಿಡಿಸಿದ್ದ ಸ್ಟಾರ್ ಪ್ಲೇಯರ್ ಸಂಜು
ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಬಗ್ಗೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ರಿಯಾಕ್ಟ್ ಮಾಡಿದ್ದಾರೆ. ಅವಕಾಶ ನೀಡಿದ್ರೆ ಆಡುತ್ತೇನೆ. ಇಲ್ಲದೆ ಹೋದಲ್ಲಿ ಸುಮ್ಮನೆ ಇರುತ್ತೇನೆ. ನಾನು ಯಾವುದರ ಬಗ್ಗೆ ಕೂಡ ಹೆಚ್ಚು ಯೋಚನೆ ಮಾಡುವುದಿಲ್ಲ ಎಂದರು ಸಂಜು ಸ್ಯಾಮ್ಸನ್.
ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕ ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಸ್ಥಾನ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಕೆ.ಎಲ್ ರಾಹುಲ್ ಮತ್ತು ಪಂತ್ ಅವರನ್ನು ಆಯ್ಕೆ ಮಾಡಿದ್ದರು.
ಸಂಜು ಸ್ಯಾಮ್ಸನ್ ರಿಯಾಕ್ಷನ್ ಹೇಗಿತ್ತು..?
ಇನ್ನು, ಇತ್ತೀಚೆಗೆ ಖಾಸಗಿ ಚಾನೆಲ್ ಒಂದರಲ್ಲಿ ಭಾಗಿವಾಹಿಸಿದ್ದ ಸಂಜು ಸ್ಯಾಮ್ಸನ್ ಈ ಬಗ್ಗೆ ಮಾತಾಡಿದ್ದಾರೆ. ನಾನು ಇದರ ಬಗ್ಗೆ ಯೋಚಿಸುವುದಿಲ್ಲ. ಅವಕಾಶ ಸಿಕ್ಕರೆ ಆಡುತ್ತೇನೆ, ಇಲ್ಲವಾದಲ್ಲಿ ಇಲ್ಲ. ಯಾವಾಗಲೂ ನನಗೆ ತಂಡದ ಮುಖ್ಯ ಎಂದರು.
ಟೀಮ್ ಇಂಡಿಯಾ ಪರ ಯಾವಾಗ ಬೇಕಾದ್ರೂ ಆಡುತ್ತೇನೆ. ನನ್ನನ್ನು ಅವರು ಕರೆಯಲೇಬೇಕು ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ನನಗೆ ಯಾವುದೇ ಸಮಸ್ಯೆ ಇಲ್ಲ. ಸದಾ ಸಕಾರಾತ್ಮಕವಾಗಿ ಇರಲು ಪ್ರಯತ್ನಿಸುತ್ತೇನೆ ಎಂದರು.
ಇದನ್ನೂ ಓದಿ: IPL 2025: ಆರ್ಸಿಬಿಗೆ ಸ್ಫೋಟಕ ಬ್ಯಾಟರ್ ಎಂಟ್ರಿ.. ಬೆಂಗಳೂರು ತಂಡದಿಂದ ಮಾಸ್ಟರ್ ಪ್ಲಾನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸಿಗಲಿಲ್ಲ ಸ್ಥಾನ
ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ವಿಕೆಟ್ ಕೀಪರ್ ಸ್ಯಾಮ್ಸನ್..!
ದಕ್ಷಿಣ ಆಫ್ರಿಕಾ ವಿರುದ್ದ ಅಬ್ಬರದ ಶತಕ ಸಿಡಿಸಿದ್ದ ಸ್ಟಾರ್ ಪ್ಲೇಯರ್ ಸಂಜು
ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಬಗ್ಗೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ರಿಯಾಕ್ಟ್ ಮಾಡಿದ್ದಾರೆ. ಅವಕಾಶ ನೀಡಿದ್ರೆ ಆಡುತ್ತೇನೆ. ಇಲ್ಲದೆ ಹೋದಲ್ಲಿ ಸುಮ್ಮನೆ ಇರುತ್ತೇನೆ. ನಾನು ಯಾವುದರ ಬಗ್ಗೆ ಕೂಡ ಹೆಚ್ಚು ಯೋಚನೆ ಮಾಡುವುದಿಲ್ಲ ಎಂದರು ಸಂಜು ಸ್ಯಾಮ್ಸನ್.
ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕ ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಸ್ಥಾನ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿ ಕೆ.ಎಲ್ ರಾಹುಲ್ ಮತ್ತು ಪಂತ್ ಅವರನ್ನು ಆಯ್ಕೆ ಮಾಡಿದ್ದರು.
ಸಂಜು ಸ್ಯಾಮ್ಸನ್ ರಿಯಾಕ್ಷನ್ ಹೇಗಿತ್ತು..?
ಇನ್ನು, ಇತ್ತೀಚೆಗೆ ಖಾಸಗಿ ಚಾನೆಲ್ ಒಂದರಲ್ಲಿ ಭಾಗಿವಾಹಿಸಿದ್ದ ಸಂಜು ಸ್ಯಾಮ್ಸನ್ ಈ ಬಗ್ಗೆ ಮಾತಾಡಿದ್ದಾರೆ. ನಾನು ಇದರ ಬಗ್ಗೆ ಯೋಚಿಸುವುದಿಲ್ಲ. ಅವಕಾಶ ಸಿಕ್ಕರೆ ಆಡುತ್ತೇನೆ, ಇಲ್ಲವಾದಲ್ಲಿ ಇಲ್ಲ. ಯಾವಾಗಲೂ ನನಗೆ ತಂಡದ ಮುಖ್ಯ ಎಂದರು.
ಟೀಮ್ ಇಂಡಿಯಾ ಪರ ಯಾವಾಗ ಬೇಕಾದ್ರೂ ಆಡುತ್ತೇನೆ. ನನ್ನನ್ನು ಅವರು ಕರೆಯಲೇಬೇಕು ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ನನಗೆ ಯಾವುದೇ ಸಮಸ್ಯೆ ಇಲ್ಲ. ಸದಾ ಸಕಾರಾತ್ಮಕವಾಗಿ ಇರಲು ಪ್ರಯತ್ನಿಸುತ್ತೇನೆ ಎಂದರು.
ಇದನ್ನೂ ಓದಿ: IPL 2025: ಆರ್ಸಿಬಿಗೆ ಸ್ಫೋಟಕ ಬ್ಯಾಟರ್ ಎಂಟ್ರಿ.. ಬೆಂಗಳೂರು ತಂಡದಿಂದ ಮಾಸ್ಟರ್ ಪ್ಲಾನ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ