/newsfirstlive-kannada/media/post_attachments/wp-content/uploads/2025/04/RAJAT_SANJU.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಜೊತೆ ಆಡಲಿದೆ. ಈ ಹೈವೋಲ್ಟೇಜ್ ಮ್ಯಾಚ್ಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಅಲೆಯಲ್ಲಿರುವ ಆರ್ಸಿಬಿಗೆ ಮುಂದಿನ ಪಂದ್ಯ ಅತ್ಯಂತ ಮುಖ್ಯವಾಗಿದೆ. ಆರ್ಸಿಬಿಗೆ ಖುಷಿ ಸಂಗತಿ ಎಂದರೆ ಎದುರಾಳಿ ತಂಡ ನಾಯಕ ಮುಂದಿನ ಪಂದ್ಯ ಆಡುತ್ತಿಲ್ಲ.
ಆರ್ಸಿಬಿ ಮುಂದಿನ ಪಂದ್ಯವನ್ನು ರಾಜಸ್ಥಾನ್ ವಿರುದ್ಧ ಏಪ್ರಿಲ್ 24 ಅಂದರೆ ಇದೇ ಗುರುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ 7:30ಕ್ಕೆ ಅಖಾಡಕ್ಕೆ ಇಳಿಯಲಿದೆ. ಈಗಾಗಲೇ ಆರ್ಸಿಬಿ ತವರಿನ ಮೈದಾನದಲ್ಲಿ 3 ಪಂದ್ಯಗಳನ್ನು ಸೋತು ಭಾರೀ ಅವಮಾನಕ್ಕೆ ಒಳಗಾಗಿದೆ. ಇದರಿಂದ ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ರಜತ್ ಪಡೆ ಗೆಲ್ಲಲೇಬೇಕಿದೆ.
ತವರಿನಲ್ಲಿ ಹ್ಯಾಟ್ರಿಕ್ ಸೋಲಿನ ಕಹಿಯಲ್ಲಿರುವ ಆರ್ಸಿಬಿಗೆ ಮುಂದಿನ ಪಂದ್ಯ ಗೆಲ್ಲಲು ಒಂದೊಳ್ಳೆ ಅವಕಾಶ ಇದೆ ಎನ್ನಬಹುದು. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ, ವಿಕೆಟ್ ಕೀಪರ್ ಕಮ್ ಬ್ಯಾಟರ್ ಸಂಜು ಸ್ಯಾಮ್ಸನ್ ಆಡುತ್ತಿಲ್ಲ. ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿ ಇಳಿಯುತ್ತಿದ್ದ ಸಂಜು ಬ್ಯಾಟಿಂಗ್ನಲ್ಲಿ ಅಬ್ಬರಿಸುತ್ತಿದ್ದರು. ಅದು ಚಿನ್ನಸ್ವಾಮಿಯಲ್ಲಿ ಪಂದ್ಯವೆಂದರೆ ಸಂಜುಗೆ ಹೇಳಿ ಮಾಡಿಸಿದಂತ ಪಿಚ್ ಆಗಿತ್ತು.
ಇದನ್ನೂ ಓದಿ:ಪಂದ್ಯದ ನಡುವೆ ಯುವ ಸ್ಪಿನ್ನರ್ಗೆ ಕಿಂಗ್ ಕೊಹ್ಲಿ ಆವಾಜ್.. ಬ್ರಾರ್ಗೆ ತಿರುಗೇಟು ಕೊಟ್ಟ ವಿರಾಟ್!
ಆದರೆ ಡೆಲ್ಲಿ ಜೊತೆ ಬ್ಯಾಟಿಂಗ್ ಮಾಡುವಾಗ ಸಂಜು ಸ್ಯಾಮ್ಸನ್ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರು ಇನ್ನು ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗುತ್ತದೆ ಎನ್ನಲಾಗಿದೆ. ಹೀಗಾಗಿ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಜೊತೆ ನಡೆಯುವ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಖಾಡಕ್ಕೆ ಧುಮುಕಲ್ಲ ಎಂದು ರಾಜಸ್ಥಾನ ತಂಡ ಅಧಿಕೃತವಾಗಿ ಮಾಹಿತಿ ನೀಡಿದೆ.
ಸಂಜು ಸ್ಯಾಮ್ಸನ್ ಪ್ರಯಾಣ ಮಾಡುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಅವರು ಬೆಂಗಳೂರಿಗೆ ಬರುವುದಿಲ್ಲ. ಚಿಕಿತ್ಸೆ ಪಡೆಯುತ್ತ ರಾಜಸ್ಥಾನದಲ್ಲೇ ಉಳಿದುಕೊಳ್ಳಲ್ಲಿದ್ದಾರೆ. ಸಂಜು ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಟೂರ್ನಿ ಆರಂಭದಲ್ಲಿ 3 ಪಂದ್ಯಗಳನ್ನು ರಿಯಾನ್ ಪರಾಗ್ ಕ್ಯಾಪ್ಟನ್ ಆಗಿದ್ದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ