/newsfirstlive-kannada/media/post_attachments/wp-content/uploads/2025/04/Suddagunte-Palya-Santosh-arrested-3.jpg)
ಬೆಂಗಳೂರು: ಸುದ್ದಗುಂಟೆ ಪಾಳ್ಯದಲ್ಲಿ ಯುವತಿಯ ಖಾಸಗಿ ಅಂಗ ಮುಟ್ಟಿದ್ದ ಕಾಮುಕನ ಕೈಗೆ ಕೋಳ ಬಿದ್ದಿದೆ. ಇಲ್ಲಿ, ಮಾಡಬಾರದ ಕೆಲಸ ಮಾಡಿ ಊರು ಬಿಟ್ಟಿದ್ದ ಕಿರಾತಕ 10 ದಿನಗಳ ಬಳಿಕ ತಗ್ಲಾಕೊಂಡಿದ್ದಾನೆ. ಲವ್ವರ್ ಜೊತೆ ಕೇರಳ ಬಸ್ ಹತ್ತಿದ್ದ ಆ ನೀಚ ಎಸಿ ಲಾಡ್ಜ್ನಲ್ಲಿ ಲಲ್ಲೆ ಹೊಡೆಯುತ್ತಿದ್ದ. ಕೊನೆಗೂ ಕೊಳಕು ಕೆಲಸ ಮಾಡಿದ್ದ ಕಿರಾತಕನನ್ನ ಲಾಕ್ ಮಾಡಿದ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.
ಎಂತಹ ವಿಕೃತ ಕಣ್ರಿ ಇದು.. ಆ ಕತ್ತಲರಾತ್ರಿಯಲ್ಲಿ ಕಾಮಕ್ರಿಮಿ ಹೆಣ್ಣುಮಗಳಿಗೆ ಕೊಟ್ಟಿದ್ದು ಎಂತಹ ಹಿಂಸೆ ಅಂತೀರಾ. ಇದೊಂದು ಘಟನೆ ಸಿಲಿಕಾನ್ ಸಿಟಿ ಜನ್ರ ನೆಮ್ಮದಿ ಹಾಳು ಮಾಡಿತ್ತು. ಈ ಸಿಸಿಟಿವಿ ಬಿಟ್ರೆ ಪೊಲೀಸರಿಗೆ ಅವನನ್ನ ಹಿಡಿಯೋದು ಚಾಲೆಂಜಿಂಗ್ ಆಗಿತ್ತು. ಕೊನೆಗೂ ಕೇರಳದಲ್ಲಿ ಅವಿತು ಕೂತಿದ್ದ ಇದೇ ನೀಚ ಸಂತೋಷ್ ಡೇನಿಯಲ್ನ ಲಾಕ್ ಮಾಡಿದ್ದಾರೆ.
‘10’ ದಿನ.. 700 ಸಿಸಿಟಿವಿ ಸಾಕ್ಷಿ.. ಕೇರಳದಲ್ಲಿದ್ದ ಕಾಮುಕ ಲಾಕ್..!
ಲವರ್ ಜೊತೆ ಎಸಿ ಲಾಡ್ಜ್ನಲ್ಲಿದ್ದ.. ನೀಚನ ಕ್ಲೂ ಕೊಟ್ಟಿದ್ದೇ ಸಿಮ್..!
ಈ ವಿಕೃತನನ್ನ ಹಿಡಿಯೋದಕ್ಕೆ ಪೊಲೀಸ್ರು ಏನಿಲ್ಲಾಂದ್ರು 700 ಸಿಸಿಟಿವಿಗಳನ್ನ ತಡಕಾಡಿದ್ರು. ಇಷ್ಟಾದ್ರು ಹತ್ತು ದಿನ.. 10 ದಿನ ಒಂದೇ ಒಂದು ಕ್ಲೂ ಬಿಡದೇ ಓಡಾಡಿದ್ದ. ಅಷ್ಟಕ್ಕೂ ಆವತ್ತು ರಾತ್ರಿ ನೀಚ ಕೆಲಸ ಮಾಡಿದ್ದ ಸಂತೋಷ್ ಇದೇ ಬೈಕ್ನಲ್ಲೇ ಎಸ್ಕೇಪ್ ಆದವನು ತಲುಪಿದ್ದು ಕೇರಳಕ್ಕೆ.
ಸಂತೋಷ ಅಲ್ಲ ಇವ್ನು ‘ಕಾಮುಕ’..!
ಅಷ್ಟಕ್ಕೂ ಈ ನೀಚನಿಗೆ ಒಬ್ಳು ಲವರ್ ಇದ್ದಳು. ಅವ್ಳು ಹೋಮ್ಗಾರ್ಡ್ ಆಗಿದ್ಲು.. ಆಕೆನೇ ಸಂತೋಷ್ ತಪ್ಪಿಸಿಕೊಳ್ಳೋದಕ್ಕೆ ಸಹಾಯ ಮಾಡ್ತಿದ್ಲು. ಜಸ್ಟ್ 2 ದಿನದ ಬಳಿಕ ಹೊಸ ಸಿಮ್ ಖರೀದಿಸಿ ಪ್ರಿಯಕರನಿಗೆ ಕೊಟ್ಟಿದ್ಲು. ಅಷ್ಟೇ ಅಲ್ಲ, ಸಂತೋಷನ ಜೊತೆ ಬಸ್ನಲ್ಲಿ ಕೇರಳಕ್ಕೂ ಎಸ್ಕೇಪ್ ಆಗಿದ್ಲು. ಈ ಗ್ಯಾಪಲ್ಲೇ ಹೊಸ ಸಿಮ್ನಲ್ಲಿ ತಾಯಿಗೆ ಕರೆ ಮಾಡಿದ್ದ ಕಿರಾತಕ, ಕೇರಳದಲ್ಲಿದ್ದೇನೆ ಅಂದಿದ್ದ. ಇದನ್ನ ಆಧರಿಸಿ ನಂಬರ್ ಟ್ರೇಸ್ ಮಾಡಿದ್ದ ಪೊಲೀಸ್ರು ಲೋಕೇಷನ್ ಸರ್ಚ್ ಮಾಡಿದ್ರು. ಬಳಿಕ ಅವ್ನು ಕೋಯಿಕ್ಕೋಡ್ ಲಾಡ್ಜ್ನ ಎಸಿ ರೂಮ್ನಲ್ಲಿ ಪ್ರೇಯಸಿ ಜೊತೆ ಇದ್ದ. ಸದ್ಯಕ್ಕೆ ಕಾಮುಕ ಸಂತೋಷ್ ಹಾಗೂ ಹೋಮ್ಗಾರ್ಡ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.
ಸೆರೆಸಿಕ್ಕಿರೋ ಈ ಕೇಡಿ ಕಲಬುರ್ಗಿ ಮೂಲದವನಂತೆ.. ಬೆಂಗಳೂರಿನ ಆಟೋ ಮೊಬೈಲ್ ಕಂಪನಿಯಲ್ಲಿ ಕಾರು ಓಡಿಸ್ಕೊಂಡಿದ್ದ. ಮೂಲಗಳ ಪ್ರಕಾರ ಯುವತಿಗೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಈ ಸಂತೋಷ್ನ ತಾಯಿ ಮನೆ ಕೆಲಸ ಮಾಡಿ ಸಾಕಿದ್ರು. ಇಷ್ಟಾದ್ರು ಇವ್ನಿಗೆ ಮಾತ್ರ ದುರ್ಬುದ್ಧಿ.
ಇದನ್ನೂ ಓದಿ: ಬೆಂಗಳೂರಲ್ಲಿ ಯುವತಿ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿ ಮೆರೆದ ಯುವಕ ಕೊನೆಗೂ ಅರೆಸ್ಟ್; ಆರೋಪಿ ಲಾಕ್ ಆಗಿದ್ದೇ ರೋಚಕ!
ಕೊನೆಗೂ ಅರೆಸ್ಟ್ ಆದ್ನಲ್ಲಾ ಅನ್ನೋದೇನೋ ಸಮಾಧಾನ. ಒಬ್ಬಳು ಹೆಣ್ಣಾಗಿ ಮತ್ತೊಬ್ಬ ಹೆಣ್ಣಿಗೆ ಹಿಂಸೆ ಕೊಟ್ಟವನಿಗೆ ಸಹಾಯ ಮಾಡಿದ ತಪ್ಪಿಗೆ ಹೋಂ ಗಾರ್ಡ್ ಕೂಡ ಲಾಕ್ ಆದ್ಲು. ಆದ್ರೆ, ಆವತ್ತು ರಾತ್ರಿ ಎಸ್.ಜಿ ಪಾಳ್ಯಕ್ಕೆ ಯಾಕ್ ಬಂದಿದ್ದ? ಈ ಪ್ರಶ್ನೆ ಪೊಲೀಸರ ತನಿಖೆ ಉತ್ತರ ಕೊಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ