/newsfirstlive-kannada/media/post_attachments/wp-content/uploads/2025/01/PARAMESHWAR.jpg)
ಕರ್ನಾಟಕ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಸಿಎಂ ಗದ್ದುಗೆಗಾಗಿ ಪೈಪೋಟಿ ನಡೆಯುತ್ತಲೇ ಇದೆ. ಕೆಪಿಸಿಸಿ ಅಧ್ಯಕ್ಷಗಿರಿಗಾಗಿ ಲಾಬಿಯೂ ಜೋರಾಗಿದೆ. ಇತ್ತೀಚೆಗೆ ಸಚಿವ ಸತೀಶ್​ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಮ್ಮುಖದಲ್ಲೇ ಕೆಲ ಆಪ್ತ ಸಚಿವರು ಔತಣಕೂಟ ಹೆಸರಲ್ಲಿ ಸೇರಿ ಮಾತು ಕಥೆ ನಡೆಸಿದ್ದರು. ಇದು ನಾನಾ ಆಯಾಮದ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಗೃಹಸಚಿವ ಡಾ.ಜಿ.ಪರಮೇಶ್ವರ್ ದಲಿತ ಸಚಿವರು, ಶಾಸಕರಿಗೆ ಡಿನ್ನರ್​ ಆಯೋಜನೆ ಮಾಡಿದ್ರು. ಇದು ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಡಿನ್ನರ್​ ಮೀಟಿಂಗ್​ ದಿಢೀರ್​ ರದ್ದಾಗಿತ್ತು. ಆದ್ರೆ ಈಗ ಮತ್ತೆ ಸಚಿವರು ಒಟ್ಟಾಗಿ ಸೇರಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 1 ರಿಂದ ಈ ತಪ್ಪು ಮಾಡಿದ್ರೆ UPIನಿಂದ ನಡೆಯುವ ವ್ಯವಹಾರಗಳು ಕಂಪ್ಲೀಟ್ ಬಂದ್; ತಪ್ಪದೇ ಸ್ಟೋರಿ ಓದಿ!
ವಿಧಾನಸೌಧದ ಗೃಹ ಸಚಿವರ ಕೊಠಡಿಯಲ್ಲಿ ಸಚಿವರಾದ ಡಾ.ಜಿ ಪರಮೇಶ್ವರ್, ಹೆಚ್​.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ​​, ಕೆ.ಎನ್.ರಾಜಣ್ಣ ಮೀಟಿಂಗ್​​ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್​​ನಲ್ಲಿ ಮತ್ತೆ ನಾಲ್ವರು ಸಚಿವರು ಸಂಚಲನ ಸೃಷ್ಟಿಸಿದ್ದಾರೆ.
ಸಿಎಂ ಗಾದಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇತ್ತೀಚೆಗೆ ಔತಣಕೂಟಕ್ಕೆ ಬ್ರೇಕ್ ಹಾಕಿದ್ದಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದ್ದರು. ಡಿನ್ನರ್​ಗೆ ವರಿಷ್ಠರು ಬ್ರೇಕ್​ ಹಾಕಿದ್ದಕ್ಕೆ ಸಚಿವ ಪರಂ ಮತ್ತು ಆಪ್ತ ಸಚಿವರು ಅಸಮಾಧಾನಗೊಂಡಿದ್ದರು. ಈಗ ಮತ್ತೆ ಒಂದೆಡೆ ಸೇರಿ ಸಚಿವರು ಸಭೆ ನಡೆಸಿದ್ದರಿಂದ ಕುತೂಹಲ ಹೆಚ್ಚಾಗಿದೆ.
ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ಸಭೆಗಳಿಗೆಲ್ಲಾ ಕಾಂಗ್ರೆಸ್ ಹೈಕಮಾಂಡ್ ರೆಡ್ ಸಿಗ್ನಲ್ ತೋರಿಸಿದ್ರೂ ಸಚಿವರು ಸಭೆ ಮಾಡಿ ಮತ್ತೆ ಕುತೂಹಲ ಗರಿಗೆದರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ