/newsfirstlive-kannada/media/post_attachments/wp-content/uploads/2024/10/School-bus.jpg)
ಶಾಲಾ ಬಸ್​ವೊಂದು ನದಿಗೆ ಉರುಳಿದ ಘಟನೆ ಛತ್ತೀಸ್​​ಗಡದ ಶಕ್ತಿ ಜಿಲ್ಲೆಯಲ್ಲಿ ನಡೆದಿದೆ. 18 ಮಕ್ಕಳನ್ನು ಸಾಗಿಸುತ್ತಿದ್ದ ಶಾಲಾ ಬಸ್​ ಸೋನೆ ನದಿಗೆ ಉರುಳಿದೆ. ಗ್ರಾಮಸ್ಥರು ಸರಿಯಾದ ಸಮಯದಲ್ಲಿ ನೀರಿಗೆ ಹಾರಿ ಮಕ್ಕಳನ್ನು ರಕ್ಷಿಸಿದ್ದಾರೆ.
ಪಿಸೌದ್​ ಪ್ರದೇಶದಲ್ಲಿ ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಶಾಲಾ ಬಸ್​ ನದಿಗೆ ಉರುಳಿ ಬಿದ್ದಿದೆ. ಸೋನೆ ನದಿಗೆ ನಿರ್ಮಿಸಲಾದ ಸೇತುವೆ ಮೇಲೆ ಬಸ್​ ಹಾದು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ ಎನ್ನಲಾಗುತ್ತಿದೆ. ಚಾಲಕ ಪಾನಮತ್ತನಾಗಿದ್ದನು ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ರಾಮಸ್ಥರಿಂದ ಉಳಿಯಿತು ಮಕ್ಕಳ ಜೀವ
ಸ್ಥಳೀಯರು ಬಸ್​ ನೀರಿಗೆ ಬಿದ್ದಿರುವುದನ್ನು ಗಮನಿಸಿ ಕೂಡಲೇ ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ನೀರಿಗೆ ಹಾರಿ ಎಲ್ಲಾ ಮಕ್ಕಳನ್ನು ರಕ್ಷಿಸಿದ್ದಾರೆ. ಸದ್ಯ ಎಲ್ಲಾ ಮಕ್ಕಳು ಆಸ್ಪತ್ರೆಯಲ್ಲಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಟೀರಿಂಗ್​ ವೈಫಲ್ಯ ಆರೋಪ
ಸ್ಟೀರಿಂಗ್​ ವೈಫಲ್ಯದಿಂದ ನಿಯಂತ್ರಿಸಲಾಗದೆ ಬಸ್​ ನೀರಿಗೆ ಬಿದ್ದಿದೆ ಎಂದು ಕಸ್ಟಡಿಗೆ ಒಳಗಾದ ಚಾಲಕ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸ್ಥಳೀಯರು ನಾನಾ ಕಾರಣ ಹೇಳುತ್ತಿದ್ದಾರೆ.
ಶಾರ್ಟ್​ಕಟ್​​ ದಾರಿಯಿಂದಾಗಿ ಅನಾಹುತ?
ಬಸ್​ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹಲವರು ದೂರುತ್ತಿದ್ದಾರೆ. ಶಾಲೆಗೆ ಹೋಗಲು ಬೇರೆ ದಾರಿಯಿದ್ದು, ಚಾಲಕ ಶಾರ್ಟ್​​ಕಟ್​ ಆಗಿ ಕಿರಿದಾದ ಸೇತುವೆ ಮೇಲೆ ಬಸ್​ ಚಲಾಯಿಸಿದ್ದಾನೆ ಇದರಿಂದಾಗಿ ಬಸ್​ ಅಪಘಾತಕ್ಕೀಡಾಗಿ ಎಂದು ಆರೋಪಿಸಿದ್ದಾರೆ. ಜೊತೆಗೆ ಚಾಲಕ ಮದ್ಯಪಾನ ಮಾಡಿರಬೇಕು ಎಂದು ದೂರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us