ನದಿಗೆ ಉರುಳಿದ 18 ಮಕ್ಕಳಿದ್ದ ಶಾಲಾ ಬಸ್​.. ಚಾಲಕನ ನಿರ್ಲಕ್ಷವೇ ಕಾರಣ ಎಂದ ಸ್ಥಳೀಯರು

author-image
AS Harshith
Updated On
ನದಿಗೆ ಉರುಳಿದ 18 ಮಕ್ಕಳಿದ್ದ ಶಾಲಾ ಬಸ್​.. ಚಾಲಕನ ನಿರ್ಲಕ್ಷವೇ ಕಾರಣ ಎಂದ ಸ್ಥಳೀಯರು
Advertisment
  • 18 ಮಕ್ಕಳನ್ನು ತುಂಬಿದ್ದ ಶಾಲಾ ಬಸ್​ ಅಪಘಾತ
  • ಸ್ಟೀರಿಂಗ್​ ಫೈಪಲ್ಯವೇ? ಅಥವಾ ಚಾಲಕ ಮದ್ಯಪಾನ ಮಾಡಿದ್ದನೇ?
  • ಶಾರ್ಟ್​ಕಟ್​ ದಾರಿ ಅನುಸರಿಸಿ ಸೇತುವೆ ಮೇಲೆ ಕೊಂಡೊಯ್ದ ಚಾಲಕ

ಶಾಲಾ ಬಸ್​ವೊಂದು ನದಿಗೆ ಉರುಳಿದ ಘಟನೆ ಛತ್ತೀಸ್​​ಗಡದ ಶಕ್ತಿ ಜಿಲ್ಲೆಯಲ್ಲಿ ನಡೆದಿದೆ. 18 ಮಕ್ಕಳನ್ನು ಸಾಗಿಸುತ್ತಿದ್ದ ಶಾಲಾ ಬಸ್​ ಸೋನೆ ನದಿಗೆ ಉರುಳಿದೆ. ಗ್ರಾಮಸ್ಥರು ಸರಿಯಾದ ಸಮಯದಲ್ಲಿ ನೀರಿಗೆ ಹಾರಿ ಮಕ್ಕಳನ್ನು ರಕ್ಷಿಸಿದ್ದಾರೆ.

ಪಿಸೌದ್​ ಪ್ರದೇಶದಲ್ಲಿ ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಶಾಲಾ ಬಸ್​ ನದಿಗೆ ಉರುಳಿ ಬಿದ್ದಿದೆ. ಸೋನೆ ನದಿಗೆ ನಿರ್ಮಿಸಲಾದ ಸೇತುವೆ ಮೇಲೆ ಬಸ್​ ಹಾದು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ ಎನ್ನಲಾಗುತ್ತಿದೆ. ಚಾಲಕ ಪಾನಮತ್ತನಾಗಿದ್ದನು ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗ್ರಾಮಸ್ಥರಿಂದ ಉಳಿಯಿತು ಮಕ್ಕಳ ಜೀವ

ಸ್ಥಳೀಯರು ಬಸ್​ ನೀರಿಗೆ ಬಿದ್ದಿರುವುದನ್ನು ಗಮನಿಸಿ ಕೂಡಲೇ ರಕ್ಷಣೆಗೆ ಮುಂದಾಗಿದ್ದಾರೆ. ಕೂಡಲೇ ನೀರಿಗೆ ಹಾರಿ ಎಲ್ಲಾ ಮಕ್ಕಳನ್ನು ರಕ್ಷಿಸಿದ್ದಾರೆ. ಸದ್ಯ ಎಲ್ಲಾ ಮಕ್ಕಳು ಆಸ್ಪತ್ರೆಯಲ್ಲಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಾನ್​ ಮಸಾಲಾ ಜಾಹೀರಾತನ್ನು ತಿರಸ್ಕರಿಸಿದ ಖ್ಯಾತ ನಟ!​ 10 ಕೋಟಿ ರೂಪಾಯಿ ಆಫರ್​ ಕೊಟ್ರು ಬೇಡ ಎಂದ್ರು!

ಸ್ಟೀರಿಂಗ್​ ವೈಫಲ್ಯ ಆರೋಪ

ಸ್ಟೀರಿಂಗ್​ ವೈಫಲ್ಯದಿಂದ ನಿಯಂತ್ರಿಸಲಾಗದೆ ಬಸ್​ ನೀರಿಗೆ ಬಿದ್ದಿದೆ ಎಂದು ಕಸ್ಟಡಿಗೆ ಒಳಗಾದ ಚಾಲಕ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸ್ಥಳೀಯರು ನಾನಾ ಕಾರಣ ಹೇಳುತ್ತಿದ್ದಾರೆ.

ಇದನ್ನೂ ಓದಿ: Cyclone Dana: ಸ್ಮಾರ್ಟ್​ಫೋನ್​​ನಲ್ಲಿ ಚಂಡಮಾರುತ ಚಲನೆಯನ್ನೇ ಟ್ರ್ಯಾಕ್​ ಮಾಡಿ! ಹೇಗೆ ಗೊತ್ತಾ?

ಶಾರ್ಟ್​ಕಟ್​​ ದಾರಿಯಿಂದಾಗಿ ಅನಾಹುತ?

ಬಸ್​ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹಲವರು ದೂರುತ್ತಿದ್ದಾರೆ. ಶಾಲೆಗೆ ಹೋಗಲು ಬೇರೆ ದಾರಿಯಿದ್ದು, ಚಾಲಕ ಶಾರ್ಟ್​​ಕಟ್​ ಆಗಿ ಕಿರಿದಾದ ಸೇತುವೆ ಮೇಲೆ ಬಸ್​ ಚಲಾಯಿಸಿದ್ದಾನೆ ಇದರಿಂದಾಗಿ ಬಸ್​ ಅಪಘಾತಕ್ಕೀಡಾಗಿ ಎಂದು ಆರೋಪಿಸಿದ್ದಾರೆ. ಜೊತೆಗೆ ಚಾಲಕ ಮದ್ಯಪಾನ ಮಾಡಿರಬೇಕು ಎಂದು ದೂರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment