ಆಂಡ್ರಾಯ್ಡ್​ ಫೋನ್​​ ಬಳಸುತ್ತಿದ್ದೀರಾ? ಸರ್ಕಾರದಿಂದ ಖಡಕ್​ ಎಚ್ಚರಿಕೆ; ನೀವು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಆಂಡ್ರಾಯ್ಡ್​ ಫೋನ್​​ ಬಳಸುತ್ತಿದ್ದೀರಾ? ಸರ್ಕಾರದಿಂದ ಖಡಕ್​ ಎಚ್ಚರಿಕೆ; ನೀವು ಓದಲೇಬೇಕಾದ ಸ್ಟೋರಿ
Advertisment
  • ಆಂಡ್ರಾಯ್ಡ್​​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಎಚ್ಚರಿಕೆ ಮಾಹಿತಿ
  • ಗಂಭೀರ ಭದ್ರತಾ ದೋಷಗಳನ್ನು ಪತ್ತೆ ಹಚ್ಚಿದ CERT-In ಟೀಮ್..!
  • ಡೇಟಾ ಕಳ್ಳತನ, ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದು ಎಚ್ಚರ

ನೀವು ಆಂಡ್ರಾಯ್ಡ್​​​ ಸ್ಮಾರ್ಟ್​ಫೋನ್​ ಬಳಸುತ್ತಿದ್ದೀರಾ? ಅದರ ಮೂಲಕ ವ್ಯವಹಾರ ನಡೆಸುತ್ತಿದ್ದೀರಾ? ಹಾಗಿದ್ದರೆ ಅಂತವರಿಗಾಗಿ ಮುಖ್ಯವಾದ ಸುದ್ದಿ ಇಲ್ಲಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲವು ಗಂಭೀರ ಭದ್ರತಾ ದೋಷಗಳನ್ನು ಪತ್ತೆಹಚ್ಚಿದೆ. ಹೀಗಾಗಿ ಸೈಬರ್​ ಸುರಕ್ಷತೆಯ ಬಗ್ಗೆ ಎಚ್ಚರಿಕೆಯನ್ನು ರವಾನಿಸಿದೆ.

12, 12L, 13, 14 ಮತ್ತು 15 ಚಾಲನೆಯಲ್ಲಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಈ ಭದ್ರತಾ ದೋಷಗಳಿಂದ ಅಪಾಯದಲ್ಲಿದೆ ಎಂದು ಎಚ್ಚರಿಸಿದೆ. ಕಂಪ್ಯೂಟರ್​ ಅಥವಾ ನಿತ್ಯ ಬಳಕೆಯ ಲ್ಯಾಪ್​ಟಾಪ್​ಗಳಲ್ಲಿ ದೋಷ ಕಾಣಿಸುವ ಮೊದಲು ಅಪ್ಡೇಟ್​ ಮಾಡಿ ಎಂದು ತಿಳಿಸಿದೆ.

ಏನಿದು ಎಚ್ಚರಿಕೆ?

ಅದರಲ್ಲೂ ಆಂಡ್ರಾಯ್ಡ್‌ನಲ್ಲಿನ ಈ ಭದ್ರತಾ ನ್ಯೂನತೆಗಳು ಬಳಕೆದಾರರಿಗೆ ಸಮಸ್ಯೆಯಾಗಬಹುದು ಎಂದು ಹೇಳಿದೆ. ಇದು ಸೈಬರ್ ದಾಳಿಕೋರರಿಗೆ ಅನಿಯಂತ್ರಿತ ಕೋಡ್ ಅನ್ನು ಸಿಸ್ಟಮ್‌ಗೆ ಸೇರಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಬಳಕೆದಾರ ಸಂಕಷ್ಟಕ್ಕೆ ಸಿಲುಕಿಕೊಳ್ಳಬಹುದು ಎಂದಿದೆ. CERT-In ಈ ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಪರಿಹಾರವನ್ನು ಸಹ ನೀಡಿದೆ.

ಆಂಡ್ರಾಯ್ಡ್‌ನ ಫ್ರೇಮ್‌ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಇಮ್ಯಾಜಿನೇಶನ್ ಟೆಕ್ನಾಲಜೀಸ್ ಕಾಂಪೊನೆಂಟ್‌ಗಳು, ಮೀಡಿಯಾ ಟೆಕ್ ಕಾಂಪೊನೆಂಟ್‌ಗಳು, ಕ್ವಾಲ್ಕಾಮ್ ಕಾಂಪೊನೆಂಟ್‌ಗಳು ಮತ್ತು ಕ್ವಾಲ್ಕಾಮ್ ಕ್ಲೋಸ್ಡ್-ಸೋರ್ಸ್ ಘಟಕಗಳಲ್ಲಿನ ದೋಷಗಳಿಂದಾಗಿ ಈ ಸಮಸ್ಯೆ ಸಂಭವಿಸಿದೆ. ಸೈಬರ್​ ಖದೀಮರು ಈ ನ್ಯೂನತೆಗಳಿಂದಾಗಿ ಡೇಟಾ ಕಳ್ಳತನ, ವೈಯಕ್ತಿಕ ಮಾಹಿತಿ ಮತ್ತು ಹಣ ವಂಚಸಿಬಹುದು. ಅಂತಹ ಸಾಧನಗಳನ್ನು ಆದಷ್ಟು ಬೇಗ ನವೀಕರಿಸಲು ಎಂದು ಸಲಹೆ ನೀಡಿದೆ.

ಇದನ್ನೂ ಓದಿ:ಮದುವೆ ವೇದಿಕೆಯಲ್ಲೇ ನನ್ನನ್ನು ಕ್ಷಮಿಸಿ ಎಂದ ಡಾಲಿ; ಕ್ಷಮೆ ಕೇಳಲು ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment