ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹೋದರ ಅರೆಸ್ಟ್.. ಚಂಡಿಗಢದಲ್ಲಿ ಬಂಧಿಸಲು ಕಾರಣವೇನು?

author-image
Gopal Kulkarni
Updated On
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹೋದರ ಅರೆಸ್ಟ್.. ಚಂಡಿಗಢದಲ್ಲಿ ಬಂಧಿಸಲು ಕಾರಣವೇನು?
Advertisment
  • ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹೋದರನ ಬಂಧನ
  • ವಿನೋದ್ ಸೆಹ್ವಾಗ್​ರನ್ನು ಬಂಧಿಸಿದ ಚಂಡಿಗಢ ಪೊಲೀಸರು
  • ಚೆಕ್​ಬೌನ್ಸ್ ಪ್ರಕರಣದಲ್ಲಿ ಪೊಲೀಸರ ಬಂಧಿಯಾದ ವಿನೋದ

ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರೆ ಸೆಹ್ವಾಗ ಸಹೋದರ ವಿನೋದ್ ಸೆಹ್ವಾಗರನ್ನು ಚಂಡಿಗಢ ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷದ ಹಿಂದೆ ನೀಡಿದ್ದ ಚೆಕ್​ಬೌನ್ಸ್​ ಪ್ರಕರಣದಲ್ಲಿ ವಿನೋದ್ ಸೆಹ್ವಾಗರ ಬಂಧನವಾಗಿದೆ. ಚಂಡಿಗಢದ ಮನಿಮಾಜ್ರೊ ಪೊಲೀಸ್​ ಠಾಣೆಯ ಪೊಲೀಸರು ವಿನೋದ್ ಸೆಹ್ವಾಗ್​ರನ್ನು ಬಂಧಿಸಿದ್ದಾರೆ.

ನ್ಯಾಯಲಯದಲ್ಲಿ ಜಾಮೀನಿನ ವಿಚಾರವಾಗಿ ಮಾತನಾಡಿದ ಪೊಲೀಸರು, ಈಗಾಗಲೇ ವಿನೋದ್​ ಸೆಹ್ವಾಗ್​ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮತ್ತೆ ಅದೇ ಅಪರಾಧವನ್ನು ಮಾಡಿದ್ದಾರೆ ಎಂದು ಆರೋಪಿಸಿದೆ. ಸದ್ಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಮಾರ್ಚ್​ 10ಕ್ಕೆ ತೀರ್ಪನ್ನು ಕಾಯ್ದಿರಿಸಿದ್ದು ಸದ್ಯ ಸೆಹ್ವಾಗರ ಸಹೋದರ ಪೊಲೀಸ್ ಬಂಧನದಲ್ಲಿಯೇ ಇದ್ದಾರೆ.

ಇದನ್ನೂ ಹೇಳಿ:ಫೈನಲ್​ ವೇಳೆ ಹೊರ ಬಿದ್ದ ಹೊಸ ಲವ್ ಸ್ಟೋರಿ.. ಇದು ಕ್ರಿಕೆಟರ್​ನ ಸುಂದರ್ ಪ್ರೇಮ್ ಕಹಾನಿ!

ವಿನೋದ್ ಮತ್ತು ಅವರೊಂದಿಗಿನ ಇಬ್ಬರು ಸಹಚರರು M/s Xalta Food Beverages Private Limitedನ ನಿರ್ದೇಶಕರಾಗಿದ್ದರು. ಈ ಒಂದು ಕಂಪನಿ ವಿರುದ್ಧ ಐಪಿಸಿ ಸೆಕ್ಷನ್ 174-A ಅಡಿಯಲ್ಲಿ ಕೇಸ್​ ಬುಕ್ ಆಗಿತ್ತು. ಮನಿಮಾಜ್ರೊ ಪೊಲೀಸ್ ಸ್ಟೇಷನ್​ನಲ್ಲಿ 2023ರಲ್ಲಿ ಪ್ರಕರಣದ ದಾಖಲಾಗಿತ್ತು

ಕೃಷ್ಣರಾವ್ ಮೋಹನ್ ಖನ್ನಾ ಅವರ ದೂರಿನನ್ವಯ ಎಫ್​ಐಆರ್ ದಾಖಲಾಗಿದ್ದು. ಶ್ರೀನೈನಾ ಪ್ಲಾಸ್ಟಿನ್ ಐಎನ್​ಸಿ, ಖಟ್ಟಾ ಬಡ್ಡಿ ಸಂಸ್ಥೆಯ ಮಾಲೀಕರು ನೀಡಿದ್ದ ಚೆಕ್​ ಬೌನ್ಸ್ ಆಗಿದ್ದು. ಖನ್ನಾ ನೀಡಿದ ದೂರಿನ ಮೇಲೆ ಎಫ್​ಐಆರ್ ದಾಖಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment