/newsfirstlive-kannada/media/post_attachments/wp-content/uploads/2025/01/PRAYAGARAJ-STAMPED.jpg)
ಮೌನಿ ಅಮಾವಾಸ್ಯೆಯಂದು ಭಕ್ತರ ಸಂಖ್ಯೆಯಲ್ಲಿ ಏರಿಕೆಯಾದ ಕಾರಣ ಕಾಲ್ತುಳಿತದಂತಹ ದುರಂತ ನಡೆದು 17 ಜನರು ದುರಂತ ಅಂತ್ಯ ಕಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ಕೂಡ ಹೇಳಲಾಗುತ್ತಿದೆ. ಆದ್ರೆ ಈ ಒಂದು ದುರ್ಘಟನೆ ನಡೆಯುವ ಮುಂಚೆಯೇ ಜಿಲ್ಲಾಡಳಿತ ಒಂದು ಎಚ್ಚರಿಕೆಯನ್ನು ಯಾತ್ರಾರ್ಥಿಗಳಿಗೆ ನೀಡಿತ್ತು ಎಂಬ ಸುದ್ದಿ ಈಗ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆಯುವ ಮೊದಲೇ ಬೆಳಗಿನ ಜಾವ ನಸುಕಿನಲ್ಲಿ ಪ್ರಯಾಗರಾಜ್ನ ಡಿವಿಜನಲ್ ಕಮಿಷನರ್ ವಿಜಯ್ ವಿಶ್ವಾಸ್ ಪಂತ್ ಒಂದು ಎಚ್ಚರಿಕೆ ಕೊಟ್ಟಿದ್ದರು. ಅವರು ನೀಡಿದ ಎಚ್ಚರಿಕೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಐಎಎಸ್ ಆಫೀಸರ್ ಘಾಟ್ನಲ್ಲಿ ನಿದ್ರೆಗೆ ಜಾರಿದ್ದ ಜನರಿಗೆ ಬೇಗನೆ ಎದ್ದು ಸ್ನಾನ ಮಾಡುವಂತ ಮನವಿ ಮಾಡಿಕೊಂಡಿದ್ದರು. ಕೂಡಲೇ ಇಲ್ಲಿ ಜಾಗವನ್ನು ಖಾಲಿ ಮಾಡಿ ನೀವು ನಿಮ್ಮ ಸ್ನಾನವನ್ನು ಮುಗಿಸಿಕೊಳ್ಳಿ ಎಂದು ಕೂಡ ಹೇಳಿದ್ದರು. ಮೈಕ್ನಲ್ಲಿ ಈ ಬಗ್ಗೆ ಅವರು ಅನೌನ್ಸ್ ಕೂಡ ಮಾಡಿದ್ದರು. ನಸುಕಿನ ಜಾವದಲ್ಲಿಯೇ ತಮ್ಮ ಸಿಬ್ಬಂದಿಯೊಂದಿಗೆ ಬಂದ ವಿಜಯ್ ವಿಶ್ವಾಸ್ ಪಂತ್ ಅವರು ಮೈಕ್ ಹಿಡಿದುಕೊಂಡು ಎಲ್ಲಾ ಭಕ್ತಾದಿಗಳಲ್ಲಿ ಒಂದು ವಿನಂತಿ, ನೀವು ಇಲ್ಲಿ ಮಲಗುವುದರಿಂದ ಏನು ಪ್ರಯೋಜನವಿಲ್ಲ. ಯಾರೆಲ್ಲಾ ಮಲಗಿದ್ದಿರೋ ಅವರು ಎದ್ದು ಬೇಗನ ಪವಿತ್ರ ಸ್ನಾನವನ್ನು ಮುಗಿಸಿ. ಇದು ನಾವು ನಿಮ್ಮ ಸುರಕ್ಷತೆಗಾಗಿಯೇ ಹೇಳುತ್ತಿದ್ದೇವೆ. ತಡವಾದಲ್ಲಿ ಕಾಲ್ತುಳಿತವಾಗುವ ಸಂಭವವವಿದೆ ಎಂದು ಮೈಕ್ನಲ್ಲಿ ಅನೌನ್ಸ್ಮೆಂಟ್ ನೀಡಿದ್ದರು.
A large number of people were sleeping on the ghat, just before the accident, Commissioner Prayagraj was appealing to the people to vacate the place। To say that the administration was not alert is a complete lie. Swift and corrective measures taken by the @Uppolice & Civil… pic.twitter.com/YgnvHqtb2R
— Pramod Kumar Singh (@SinghPramod2784)
A large number of people were sleeping on the ghat, just before the accident, Commissioner Prayagraj was appealing to the people to vacate the place। To say that the administration was not alert is a complete lie. Swift and corrective measures taken by the @Uppolice & Civil… pic.twitter.com/YgnvHqtb2R
— Pramod Kumar Singh (@SinghPramod2784) January 29, 2025
">January 29, 2025
ಇದನ್ನೂ ಓದಿ:BREAKING ಕುಂಭ ಮೇಳದಲ್ಲಿ ಕರ್ನಾಟಕದ ಇಬ್ಬರು ನಿಧನ.. ಜೀವ ಚೆಲ್ಲಿದ ತಾಯಿ, ಮಗಳು
ಬೇಗನೇ ಎದ್ದೇಳೀ, ಬೇಗನೇ ಎದ್ದೇಳಿ ಎಂದು ಸುಮಾರು ಬಾರಿ ಹೇಳಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ. ಇದಾದ ಕೆಲವೇ ಗಂಟೆಗಳಲ್ಲಿಯೇ ಕಾಲ್ತುಳಿತದಂತಹ ಭೀಕರ ಘಟನೆಯೊಂದು ನಡೆದು ಹೋಗಿದೆ. ಅಲ್ಲಿದ್ದ ಭಕ್ತಾದಿಗಳು ಡಿವಿಜನಲ್ ಕಮಿಷನರ್ ಮಾತಿನಂತೆ ನಡೆದುಕೊಂಡಿದ್ದರೆ ಈ ಒಂದು ಅಪಾಯವನ್ನು ತಪ್ಪಿಸಬಹುದಿತ್ತು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯರಾತ್ರಿ 12.33 ಕ್ಕೆ ಈ ಒಂದು ಅನೌನ್ಸ್ಮೆಂಟ್ ಮಾಡಲಾಗಿತ್ತು. ಇದಾದು ಒಂದೂವರೆ ಗಂಟೆಗೆ ಅಂದ್ರೆ ಮಧ್ಯರಾತ್ರಿ ಸುಮಾರು 2 ಗಂಟೆಗೆ ಕಾಲ್ತುಳಿತದ ದುರಂತ ನಡೆದು ಹೋಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ