/newsfirstlive-kannada/media/post_attachments/wp-content/uploads/2025/06/PBKS_MI.jpg)
ಮೊದಲ ಕ್ವಾಲಿಫೈಯರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತರೂ 2ನೇ ಕ್ವಾಲಿಫೈಯರ್ನಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಹೋರಾಡಿ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಪಡೆದಿದೆ. ಈ ಮೂಲಕ 2014ರ ಬಳಿಕ ಪಂಜಾಬ್ ಕಿಂಗ್ಸ್ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಜೂನ್ 3 ರಂದು ಆರ್ಸಿಬಿ ವಿರುದ್ಧ ಫೈನಲ್ ಪಂದ್ಯವಾಡಲಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್- 2 ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮಹತ್ವದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಆರಂಭ ಚೆನ್ನಾಗಿ ಇರಲಿಲ್ಲ. ರೋಹಿತ್ ಶರ್ಮಾ ಕೇವಲ 8 ರನ್ಗೆ ವಿಕೆಟ್ ಒಪ್ಪಿಸಿದರು. ಇನ್ನೊಬ್ಬ ಓಪನರ್ ಬೈರ್ಸ್ಟೋವ್ 38 ರನ್ಗೆ ವಿಕೆಟ್ ಕಳೆದುಕೊಂಡರು.
ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಬ್ಯಾಟಿಂಗ್ ತಂಡಕ್ಕೆ ಹೆಚ್ಚು ನೆರವು ಕೊಟ್ಟಿತು. ವಿಚಿತ್ರ ಎಂದರೆ ಈ ಇಬ್ಬರು ತಲಾ 44 ರನ್ ಬಾರಿಸಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ಗೆ ಬಂದ ನಾಯಕ ಹಾರ್ದಿಕ್ ಪಾಂಡ್ಯ 15, ನಮನ್ ಧೀರ್ 37, ರಾಜ್ ಭಾವ 8 ರನ್ ಈ ಎಲ್ಲರ ಬ್ಯಾಟಿಂಗ್ನಿಂದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 203 ರನ್ಗಳ ದೊಡ್ಡ ಗುರಿ ನೀಡಿತ್ತು.
ಈ ಟಾರ್ಗೆಟ್ ಹಿಂದೆ ಬಿದ್ದ ಪಂಜಾಬ್ ಕೂಡ ಆರಂಭದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿತ್ತು. ಓಪನರ್ಸ್ ಪ್ರಭಾಸಿಮ್ರಾನ್ 6, ಪ್ರಿಯಾಂಶ್ ಆರ್ಯ 20 ರನ್ಗೆ ವಿಕೆಟ್ ಕಳೆದುಕೊಂಡರು. ಬಳಿಕ ಜೋಶ್ ಇಂಗ್ಲಿಷ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ಆಡಿದರು. ಈ ವೇಳೆ ಜೋಶ್ ಇಂಗ್ಲಿಷ್ 38 ರನ್ಗಳಿಂದ ಆಡುವಾಗ ಬೈರ್ಸ್ಟೋವ್ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಬಳಿಕ ಬಂದ ನೆಹಾಲ್ ವಧೇರಾ ಕ್ಯಾಪ್ಟನ್ ಅಯ್ಯರ್ಗೆ ಒಳ್ಳೆಯ ಸಾಥ್ ಕೊಟ್ಟರು.
ಇದನ್ನೂ ಓದಿ:ಆಟೋ ಡ್ರೈವರ್ಗೆ ಚಪ್ಪಲಿಯಿಂದ ಹೊಡೆದ ಘಟನೆ.. ಚಾಲಕನ ಕಾಲು ಮುಟ್ಟಿ ಕ್ಷಮೆ ಕೇಳಿದ ಮಹಿಳೆ, ಆಕೆಯ ಗಂಡ
ನೆಹಾಲ್ ವಧೇರಾ ಒಳ್ಳೆಯ ಸಾಥ್ ಕೊಟ್ಟರು ಎನ್ನುವುದಕ್ಕಿಂತ ಅಬ್ಬರದ ಬ್ಯಾಟಿಂಗ್ ಮಾಡಿದರು ಎನ್ನಬಹುದು. ಏಕೆಂದರೆ 29 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ನಿಂದ 48 ರನ್ ಸಿಡಿಸಿ ಗೆಲುವಿನ ಸಮೀಪದಲ್ಲಿ ಇರುವಾಗ ಔಟ್ ಆದರು. ಬಳಿಕ ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್ಗೆ ಆಗಮಿಸಿದರು. ಇನ್ನೊಂದೆಡೆ ಕ್ರೀಸ್ ಕಾಯ್ದುಕೊಂಡಿದ್ದ ಶ್ರೇಯಸ್ ಅಯ್ಯರ್ ಮುಂಬೈ ಬೌಲರ್ಗಳ ಬೆವರಿಳಿಸಿದ್ದರು.
ಶ್ರೇಯಸ್ ಅಯ್ಯರ್ ನಾಯಕನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೇವಲ 27 ಬಾಲ್ಗಳಲ್ಲೇ ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಮುಂದುವರೆಸಿದ್ದರು. ಕೊನೆಗೆ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್ಗಳಿಂದ 87 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂಜಾಬ್ 5 ವಿಕೆಟ್ಗೆ 207 ರನ್ ಗಳಿಸಿ, 5 ವಿಕೆಟ್ಗಳಿಂದ ಗೆಲುವು ಪಡೆಯಿತು. ಶ್ರೇಯಸ್ ಅಯ್ಯರ್ ಪಡೆ ಸಂಭ್ರಮದೊಂದಿಗೆ ಫೈನಲ್ ಟಿಕೆಟ್ ಪಡೆದುಕೊಂಡಿದೆ. ಮುಂಬೈ ಟೀಮ್ ಸೋಲುತ್ತಿದ್ದಂತೆ ಓನರ್ ನೀತಾ ಅಂಬಾನಿ ಹಣೆ ಮೇಲೆ ಕೈ ಇಟ್ಟುಕೊಂಡರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ