newsfirstkannada.com

ಬ್ರೇಕ್ ಬದಲಾಗಿ ಎಕ್ಸಲೇಟರ್ ಒತ್ತಿದ ಡ್ರೈವರ್; ಬೆಂಗಳೂರಲ್ಲಿ ಸರಣಿ ಅಪಘಾತ, ಅಸಲಿಗೆ ಆಗಿದ್ದೇನು?

Share :

Published April 27, 2024 at 10:27am

    ಆ್ಯಂಬುಲೆನ್ಸ್ ಡ್ರೈವರ್​ನ ಯಡವಟ್ಟಿಗೆ ಅಪಘಾತ ಸಂಭವಿಸಿದೆ

    ಮೂರು ಕಾರು, ಆ್ಯಂಬುಲೆನ್ಸ್​ ಮತ್ತು ಬೈಕ್​ ನಡುವೆ ಅಪಘಾತ

    ಆ್ಯಂಬುಲೆನ್ಸ್​ ಚಾಲಕನ ಬಂಧನ, ಪೊಲೀಸರಿಂದ ತೀವ್ರ ವಿಚಾರಣೆ

ಬೆಂಗಳೂರು: ಆ್ಯಂಬುಲೆನ್ಸ್ ಡ್ರೈವರ್​​ ಮಾಡಿದ ಯಡವಟ್ಟಿನಿಂದಾಗಿ ನಗರದಲ್ಲಿ ನಿನ್ನೆ ಸರಣಿ ಅಪಘಾತ ಸಂಭವಿಸಿದೆ. ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಮೂರು ಕಾರು ಮತ್ತು ಬೈಕ್ ನಡುವೆ ಸರಣಿ ಅಪಘಾತ ನಡೆದಿದೆ.

ಬೈಕ್ ಸವಾರನ ಕಾಲಿಗೆ ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ನಿನ್ನೆ ರಾತ್ರಿ 10.45ರ ಸುಮಾರಿಗೆ ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಬಳಿ ಅಪಘಾತ ಆಗಿದೆ. ಮಾರ್ಕೆಟ್​​ನಿಂದ ಗುಡ್ಡದಹಳ್ಳಿ ಮಾರ್ಗವಾಗಿ ಆಂಬ್ಯುಲೆನ್ಸ್ ಚಾಲಕ ಸುಮಂತ್ ಬರುತ್ತಿದ್ದ. ಈ ವೇಳೆ ನಿಯಂತ್ರಣ ಸಿಗದೇ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ:ಸ್ವಂತ ಮಗನ ಕೊಲ್ಲಲು 75 ಲಕ್ಷಕ್ಕೆ ಸುಪಾರಿ ಕೊಟ್ಟ ಅಪ್ಪ, ಗುಂಡಿನ ದಾಳಿಯಲ್ಲಿ ಬಚಾವ್ ಆಗಿದ್ದೇ ದೊಡ್ಡದು

ಕಾರು ಡಿಕ್ಕಿಯಾದ ಪರಿಣಾಮ ಮುಂದಿದ್ದ ಎರಡು ಕಾರು ಹಾಗೂ ಬೈಕ್ ನಡುವೆ ಸರಣಿ ಅಪಘಾತ ಆಗಿದೆ. ಈ ವೇಳೆ ಟೆಂಕ್ಷನ್​​ಲ್ಲಿ ಬ್ರೇಕ್ ತುಳಿಯದೇ ಎಕ್ಸಲೇಟರ್ ತುಳಿದಿದ್ದಾನೆ ಎನ್ನಲಾಗಿದೆ. ಕಾರಿನಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಬಂಧಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಗ್ರೀನ್ ಇನ್​ಸ್ಟಾ ಪೋಸ್ಟ್​ಗೆ ಹಿಂದಿಯಲ್ಲಿ ಕಮೆಂಟ್​​ ಮಾಡಿದ ವಿಲ್​ ಜಾಕ್ಸ್.. ಅಂಥದ್ದು ಏನ್ ಮಾಡಿದ್ರು?​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರೇಕ್ ಬದಲಾಗಿ ಎಕ್ಸಲೇಟರ್ ಒತ್ತಿದ ಡ್ರೈವರ್; ಬೆಂಗಳೂರಲ್ಲಿ ಸರಣಿ ಅಪಘಾತ, ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/BNG-ACCIDENT-2.jpg

    ಆ್ಯಂಬುಲೆನ್ಸ್ ಡ್ರೈವರ್​ನ ಯಡವಟ್ಟಿಗೆ ಅಪಘಾತ ಸಂಭವಿಸಿದೆ

    ಮೂರು ಕಾರು, ಆ್ಯಂಬುಲೆನ್ಸ್​ ಮತ್ತು ಬೈಕ್​ ನಡುವೆ ಅಪಘಾತ

    ಆ್ಯಂಬುಲೆನ್ಸ್​ ಚಾಲಕನ ಬಂಧನ, ಪೊಲೀಸರಿಂದ ತೀವ್ರ ವಿಚಾರಣೆ

ಬೆಂಗಳೂರು: ಆ್ಯಂಬುಲೆನ್ಸ್ ಡ್ರೈವರ್​​ ಮಾಡಿದ ಯಡವಟ್ಟಿನಿಂದಾಗಿ ನಗರದಲ್ಲಿ ನಿನ್ನೆ ಸರಣಿ ಅಪಘಾತ ಸಂಭವಿಸಿದೆ. ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಮೂರು ಕಾರು ಮತ್ತು ಬೈಕ್ ನಡುವೆ ಸರಣಿ ಅಪಘಾತ ನಡೆದಿದೆ.

ಬೈಕ್ ಸವಾರನ ಕಾಲಿಗೆ ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ನಿನ್ನೆ ರಾತ್ರಿ 10.45ರ ಸುಮಾರಿಗೆ ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಬಳಿ ಅಪಘಾತ ಆಗಿದೆ. ಮಾರ್ಕೆಟ್​​ನಿಂದ ಗುಡ್ಡದಹಳ್ಳಿ ಮಾರ್ಗವಾಗಿ ಆಂಬ್ಯುಲೆನ್ಸ್ ಚಾಲಕ ಸುಮಂತ್ ಬರುತ್ತಿದ್ದ. ಈ ವೇಳೆ ನಿಯಂತ್ರಣ ಸಿಗದೇ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ:ಸ್ವಂತ ಮಗನ ಕೊಲ್ಲಲು 75 ಲಕ್ಷಕ್ಕೆ ಸುಪಾರಿ ಕೊಟ್ಟ ಅಪ್ಪ, ಗುಂಡಿನ ದಾಳಿಯಲ್ಲಿ ಬಚಾವ್ ಆಗಿದ್ದೇ ದೊಡ್ಡದು

ಕಾರು ಡಿಕ್ಕಿಯಾದ ಪರಿಣಾಮ ಮುಂದಿದ್ದ ಎರಡು ಕಾರು ಹಾಗೂ ಬೈಕ್ ನಡುವೆ ಸರಣಿ ಅಪಘಾತ ಆಗಿದೆ. ಈ ವೇಳೆ ಟೆಂಕ್ಷನ್​​ಲ್ಲಿ ಬ್ರೇಕ್ ತುಳಿಯದೇ ಎಕ್ಸಲೇಟರ್ ತುಳಿದಿದ್ದಾನೆ ಎನ್ನಲಾಗಿದೆ. ಕಾರಿನಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಬಂಧಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಗ್ರೀನ್ ಇನ್​ಸ್ಟಾ ಪೋಸ್ಟ್​ಗೆ ಹಿಂದಿಯಲ್ಲಿ ಕಮೆಂಟ್​​ ಮಾಡಿದ ವಿಲ್​ ಜಾಕ್ಸ್.. ಅಂಥದ್ದು ಏನ್ ಮಾಡಿದ್ರು?​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More