/newsfirstlive-kannada/media/media_files/2025/11/28/chaitra-kundapura-2025-11-28-13-47-10.jpg)
ಈ ವಾರ ಬಿಗ್​ ಬಾಸ್ ಮನೆಗೆ ಸೀಸನ್ 11ರಲ್ಲಿ ಸ್ಪರ್ಧಿಗಳಾಗಿದ್ದ ತ್ರಿವಿಕ್ರಂ, ಮೋಕ್ಷಿತಾ ಪೈ, ರಜತ್ ಕಿಶನ್, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಬಂದಿದ್ದರು. ಉಗ್ರಂ ಮಂಜು ಅವರ ಮದುವೆ ಫಿಕ್ಸ್ ಆಗಿದೆ. ಬ್ಯಾಚುಲರ್ ಪಾರ್ಟಿ ಮಾಡಿಕೊಳ್ಳಲು ಈ ಟೀಂ ಬಿಗ್​ಬಾಸ್ ಮನೆಗೆ ದೌಡಾಯಿಸಿತ್ತು.
ಹಳೇ ಸ್ಪರ್ಧಿಗಳ ಆಗಮನ ಹಿನ್ನೆಲೆಯಲ್ಲಿ ಬಿಗ್​ ಬಾಸ್ ಮನೆಯನ್ನು ಅತಿಥಿಗಳ ಪ್ಯಾಲೆಸ್ ಆಗಿ ಪರವರ್ತನೆ ಮಾಡಲಾಯಿತು. ಹಾಲಿ ಸ್ಪರ್ಧಿಗಳು, ಮಾಜಿ ಸ್ಪರ್ಧಿಗಳನ್ನು ಅತಿಥಿ ಸತ್ಕಾರ ಮಾಡೋದೇ ಈ ವಾರದ ಕೇಂದ್ರ ಬಿಂದುವಾಗಿತ್ತು.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಾಲ್ಕೈದು ದಿನಗಳ ಕಾಲ ಬಿಗ್​ಬಾಸ್ ಮನೆಯಲ್ಲಿ ತಮ್ಮದೇ ಸ್ಟ್ರಾಟರ್ಜಿ ಮೂಲಕ ಎಂಟರ್ಟೈನ್ ಮಾಡಿದ್ದ ಮಾಜಿ ಸದಸ್ಯರು, ದೊಡ್ಮನೆಯನ್ನು ಖಾಲಿ ಮಾಡಿದ್ದಾರೆ. ಅದರ ಎಪಿಸೋಡ್​ ಇಂದು ರಾತ್ರಿ ಪ್ರಸಾರವಾಗಲಿದೆ. ಮನೆಯಿಂದ ಹೊರಡುವ ವೇಳೆ ಬಿಗ್​ ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ ಉಗ್ರಂ ಮಂಜು, ರಜತ್ ಕಿಶನ್ ಸೇರಿದಂತೆ ಐವರೂ ಕೂಡ ಭಾವುಕರಾದರು. ಬಿಗ್​ ಬಾಸ್ ವೇದಿಕೆಗೆ ಇರುವ ಶಕ್ತಿ ಎಂಥದ್ದು ಅನ್ನೋದನ್ನು ಮತ್ತೊಮ್ಮೆ ಅನಾವರಣ ಮಾಡಿದರು.
ಯಾರು ಏನು ಹೇಳಿದರು..?
ನಾವು ಸತ್ತ ಮೇಲೂ, ನಮ್ಮ ವಂಶ ಪಾರಂಪರ್ಯ ನೋಡುವಂತಹ ಮೆಮೋರಿಗಳನ್ನು ನೀಡಿದೆ. ಬಿಗ್ ಬಾಸ್ ಲವ್ ಯೂ ಸೋ ಮಚ್.
-ರಜತ್ ಕಿಶನ್, ಮಾಜಿ ಸ್ಪರ್ಧಿ
ಕಾರಲ್ಲಿ ಹೋಗ್ತಿರಬೇಕಾದರೆ, ಅಲ್ಲೇ ಹೋಗ್ತಿರೋ ಗವರ್ನಮೆಂಟ್ ಬಸ್ ನಿಲ್ಲಿಸ್ತಾರೆ. ಪ್ರೀತಿ ಕೊಡ್ತಾರೆ. ಎಲ್ಲೋ ಹೋಗಬೇಕಾದರೆ ಮಂಜಣ್ಣ ಅಂತಾರೆ. ಅಷ್ಟು ಕೊಟ್ಟಿದೆ ಬಿಗ್ ಬಾಸ್. ಸೀಸನ್ 11ಕ್ಕೆ ನಾನು ಬಂದಿಲ್ಲ ಅಂದಿದ್ರೆ ನನ್ನ ಲೈಫ್ನಲ್ಲಿ ಇಷ್ಟೊಂದು ಬದಲಾವಣೆ ಸಾಧ್ಯವೆ ಆಗ್ತಿರಲಿಲ್ಲ-ಉಗ್ರಂ ಮಂಜು, ಮಾಜಿ ಸ್ಪರ್ಧಿ
ಈ ಮನೆ ನನಗೆ ತಲೆ ಎತ್ತಿ ನಿಲ್ಲೋ ಹಾಗೆ ಮಾಡಿದೆ-ಮೋಕ್ಷಿತಾ ಪೈ, ಮಾಜಿ ಸ್ಪರ್ಧಿ
ಕರ್ಮಗಳನ್ನ ಕಳೆದಂಥ ಜಾಗ ಇದು- ತ್ರಿವಿಕ್ರಂ, ರನ್ನರ್ ಅಪ್
ಬಿಗ್ ಬಾಸ್ ಯಾರಿಗೆ ಏನು ಕೊಟ್ಟಿದ್ಯೋ ಗೊತ್ತಿಲ್ಲ. ನನಗೆ ಪುನರ್ಜನ್ಮವೇ ಕೊಟ್ಟಿದೆ-ಚೈತ್ರಾ ಕುಂದಾಪುರ
ಅತಿಥಿಗಳ ಮನದಾಳದ ಮಾತುಗಳು!
— Colors Kannada (@ColorsKannada) November 28, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/mGijCeeeDu
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us