ಚಂದ್ರಪ್ರಭ ಬಿಗ್​ಬಾಸ್ ಮನೆಯಿಂದ ಬಂದಿದ್ದೇಕೆ..? ಅಸಲಿ ಸತ್ಯ ಬಿಚ್ಚಿಟ್ಟ ಕಾಕ್ರೋಚ್ ಸುಧೀ

ಬಿಗ್​ಬಾಸ್ ಮನೆಯಿಂದ ಹೊರ ಬಂದಿರುವ ಕಾಕ್ರೋಚ್ ಸುಧಿ, ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಬಿಗ್​ಬಾಸ್ ಜರ್ನಿ ಬಗ್ಗೆ ಮುಕ್ತವಾಗಿ ಮಾತನ್ನಾಡಿದರು.

author-image
Ganesh Kerekuli
Advertisment

ಬಿಗ್​ಬಾಸ್ ಮನೆಯಿಂದ ಹೊರ ಬಂದಿರುವ ಕಾಕ್ರೋಚ್ ಸುಧಿ, ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಬಿಗ್​ಬಾಸ್ ಜರ್ನಿ ಬಗ್ಗೆ ಮುಕ್ತವಾಗಿ ಮಾತನ್ನಾಡಿದರು. 

ಇದೇ ವೇಳೆ ಚಂದ್ರಪ್ರಭ ಯಾಕೆ ಬಿಗ್​ಬಾಸ್ ಮನೆಯಿಂದ ಇದ್ದಕ್ಕಿದ್ದಂತೆ ಹೊರಬರಲು ನಿರ್ಧರಿಸಿದರು ಅನ್ನೋದನ್ನು ತಿಳಿಸಿದ್ದಾರೆ. ಚಂದ್ರಪ್ರಭ ಅವರಿಗೆ ತುಂಬಾನೇ ಬ್ಯಾಕ್​ಪೇನ್ ಇತ್ತು.  ಅವರು ಸೊಂಟ ನೋವಿನಿಂದ ತುಂಬಾನೆ ಬಳಲುತ್ತಿದ್ದರು. ಈ ವಿಚಾರವನ್ನು ಬಿಗ್​ಬಾಸ್​ ಮನೆಯಲ್ಲಿ ಎಷ್ಟೋ ಸಲ ಮಾತನ್ನಾಡಿಕೊಂಡಿದ್ದರು. 

ಬಿಗ್​ಬಾಸ್​ ಮನೆಯಲ್ಲಿ ನಾವು ಹೇಳುತ್ತಿದ್ದರು. ನನಗೆ ಆಗುತ್ತಿಲ್ಲ, ತುಂಬಾ ನೋವಿದೆ.  ನಿನಗೆ ಗಂಟಲು ಪ್ರಾಬ್ಲಂ, ನನಗೆ ಸೊಂಟ ಪ್ರಾಬ್ಲಂ ಎಂದು ಮನೆಯಲ್ಲಿ ಹೇಳಿದ್ದರು. ಅವರಿಗೆ ತುಂಬಾನೇ ಸೊಂಟ ನೋವು ಇದ್ದಿದ್ದರಿಂದ ಆಡಲು ಆಗುತ್ತಿರಲಿಲ್ಲ. ಕಲಾವಿದನಾಗಿ ತುಂಬಾ ನೋವು ಆಯಿತು ಎಂದು ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ. ನಾನು ಅವರು ತುಂಬಾ ಕ್ಲೋಸ್ ಆಗಿದ್ವಿ. ಬಿಗ್​ಬಾಸ್ ಮನೆಗೆ ಹೋಗುವ ಮೊದಲು ಅವರನ್ನ ಒಂದು ಬಾರಿ ಮಾತ್ರ ಭೇಟಿಯಾಗಿದ್ದೆ ಎಂದಿದ್ದಾರೆ. ಕಾಕ್ರೋಚ್ ಸುಧಿ ಏನೆಲ್ಲ ಮಾತನ್ನಾಡಿದ್ದಾರೆ ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..

ಬಿಗ್​ಬಾಸ್​​ ಕುರಿತ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 cockroach sudhi Bigg boss
Advertisment