ಪ್ರತಿ ವರ್ಷ ಹಳ್ಳಿಕಾರ್ ರೇಸ್ ಆಯೋಜಿಸಲಿರೋ ವರ್ತೂರು ಸಂತೋಷ್
ಬಿಗ್ಬಾಸ್ ವರ್ತೂರು ಸಂತೋಷ್ ವಿರುದ್ಧ ಆರೋಪಗಳ ಸುರಿಮಳೆಗೈದ್ರು
ವರ್ತೂರು ಸಂತೋಷ್ ವಿರುದ್ಧ ಸ್ನೇಹಿತ ಬೀರೇಶ್ ಎಂಬುವರಿಂದ ಆರೋಪ
ಬಿಗ್ಬಾಸ್ ಮನೆಯಿಂದ ಹೊರ ಬಂದ ಮೇಲೆ ವರ್ತೂರು ಸಂತೋಷ್ ಯಾವ ಸ್ಟಾರ್ಗೂ ಕಡಿಮೆ ಇಲ್ಲ. ವರ್ತೂರು ಸಂತೋಷ್ ಹೋದಲ್ಲಿ ಬಂದಲ್ಲಿ ಜನರ ನೂಕು ನುಗ್ಗಲು. ಹಳ್ಳಿಕಾರ್ ಸಂತೋಷ್ ಅವರ ಜತೆ ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಹೀಗಾಗಿ ಅವರು ಸೆಲೆಬ್ರಿಟಿ ಆಗಿದ್ದಾರೆ.
ಇನ್ನು, ವರ್ತೂರು ಸಂತೋಷ್ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಹಳ್ಳಿಕಾರ್ ರೇಸ್ ನಡೆಸುತ್ತಾರೆ. ಈ ವರ್ಷ ಕೂಡ ಮಾರ್ಚ್ನಲ್ಲಿ ಹಳ್ಳಿಕಾರ್ ರೇಸ್ ಆಯೋಜಿಸಿದ್ರು. ಈ ರೇಸ್ನಲ್ಲಿ ಗ್ರಾಮೀಣ ಪ್ರತಿಭೆಗಳು ಭಾಗಿಯಾಗಿದ್ರು. ಎಲ್ಲೆಡೆ ಹಳ್ಳಿಕಾರ್ ರೇಸ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಹಳ್ಳಿಕಾರ್ ರೇಸ್ ಆಯೋಜಿಸಿದ್ದ ವರ್ತೂರು ಸಂತೋಷ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ವರ್ತೂರು ಸಂತೋಷ್ ಮತ್ತು ಆಪ್ತ ಸ್ನೇಹಿತರ ನಡುವೆ ಬಿರುಕು ಮೂಡಿದೆ. ಈ ಬಗ್ಗೆ ಜನಶಕ್ತಿ ನ್ಯೂಸ್ ಕನ್ನಡ ಅನ್ನೋ ಸ್ಥಳೀಯ ಚಾನೆಲ್ವೊಂದು ಸುದ್ದಿ ಮಾಡಿದೆ. ಜನಶಕ್ತಿ ನ್ಯೂಸ್ ಚಾನೆಲ್ ಜೊತೆ ಮಾತಾಡಿರೋ ವರ್ತೂರು ಸಂತೋಷ್ ಸ್ನೇಹಿತ ಬೀರೇಶ್ ಎಂಬುವರು ಆರೋಪಗಳ ಸುರಿಮಳೆಗೈದಿದ್ದಾರೆ.
ವರ್ತೂರು ಸಂತೋಷ್ ವಿರುದ್ಧ ಆರೋಪಗಳ ಸುರಿಮಳೆ..!
2022ರಲ್ಲಿ ಹಳ್ಳಿಕಾರ್ ರೇಸ್ ಮಾಡಿದ್ವಿ. ಈ ರೇಸ್ಗೆ ನನ್ನ ಸಹಾಯ ಕೇಳಿದ್ರು. ಅದಕ್ಕೆ ನಾನು ಓಕೆ ಎಂದಿದ್ದೆ. ಅವಾಗ ಸ್ಟೇಷನ್ ಪರ್ಮೀಶನ್ಯಿಂದ ಹಿಡಿದು ಪ್ರತಿಯೊಂದು ನಾವು ಮಾಡಿದ್ವಿ. ಎಲ್ಲಾ ಪರ್ಮೀಷನ್ ನಾನು ತಗೊಂಡಿದ್ದು. ಡಾಕ್ಯೂಮೆಂಟ್ಸ್ ಎಲ್ಲವೂ ನನ್ನ ಹೆಸರಲ್ಲೇ ಇದ್ದಿದ್ದು. ನಮ್ಮ ಯಜಮಾನರ ಹತ್ತಿರ 10 ಲಕ್ಷ ದುಡ್ಡು ಕೊಡಿಸಿದ್ದೆ. ಅದು ಬಿಟ್ಟು ನಾನು ದುಡ್ಡು ಖರ್ಚು ಮಾಡಿದೀನಿ. ಆದ್ರೂ ವರ್ತೂರು ಸಂತೋಷ್ ವಿಡಿಯೋದಲ್ಲಿ ಎಲ್ಲಾ ಮಾಡಿದ್ದು ನಾನೇ ಎಂದು ಹೇಳ್ತಾರೆ. ಕರೆಂಟ್ ವೈರ್ ಕನೆಕ್ಷನ್ಗೆ 50 ಸಾವಿರ, ಬ್ಯಾನರ್ಗೆ 60 ಸಾವಿರ ಖರ್ಚು ಆಯ್ತು. ಅದಕ್ಕೆಲ್ಲಾ ದುಡ್ಡು ಕೊಟ್ಟಿದ್ದು ನಾನು, ಆದ್ರೆ ಹೈಲೆಟ್ ಆಗಿದ್ದು ವರ್ತೂರು ಸಂತೋಷ್. ಎಲ್ಲದಕ್ಕೂ ಅವರೇ ಖರ್ಷು ಮಾಡಿದ್ದು ಅಂತಾರೆ. ಅವರು ಒಂದು ರೂ. ಖರ್ಚು ಮಾಡಿಲ್ಲ. ಆತ ಮಾಡಿರೋ ಅನಾಚಾರ ಒಂದು ಎರಡಲ್ಲ. ಅವರಿಗೆ ಅಹಂ ಇಳಿಸಬೇಕು ಅನ್ನೋ ಕಾರಣಕ್ಕೆ ಮಾತಾಡ್ತಿದೀನಿ. ನಾನು ಹೈಲೆಟ್ ಆಗಬೇಕಿರೋ ಅಗತ್ಯ ಇಲ್ಲ ಎಂದು ಆರೋಪ ಮಾಡಿದ್ದಾರೆ.
400 ಜೋಡಿ ಎತ್ತು ಬರುತ್ತೆ. ಒಂದು ಜೋಡಿ 3 ಸಾವಿರ ಅಂದ್ರೂ 12 ಲಕ್ಷ ಆಯ್ತು. ನಾನು 10 ಲಕ್ಷ ಕೊಡಿಸಿದೀನಿ. ಅದು ಬಿಟ್ಟು ಸಣ್ಣಪುಟ್ಟ ಖರ್ಚು ನಾನೇ ನೋಡಿಕೊಂಡಿದೀನಿ. ರೇಸ್ಗೆ ಖರ್ಚಾಗೋದು 15 ಲಕ್ಷ. ಒಂದು ರೇಸ್ಗೆ ಲಕ್ಷ ಲಕ್ಷ ಕಲೆಕ್ಷನ್ ಆಗುತ್ತೆ, ಎಲ್ಲಾ ದುಡ್ಡು ಎಲ್ಲಿ ಹೋಯ್ತು. ವರ್ತೂರ್ ಸಂತೋಷ್ ಒಬ್ಬ ಡೋಂಗಿ ಸರ್.. ಖಾಲಿ ಪಲಾವ್, ಬರೀ ಬಿಲ್ಡಪ್ ತಗೋತಾನೆ. ಅವರು ಏನು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ನಾಲಿಗೆಗೆ ಕಚ್ಚೋ ನಾಗರಹಾವು.. ಕಾರ್ಕೋಟಕ ಸರ್ಪಗಳೇ ಆಟದ ವಸ್ತು; ಏನಿದರ ವಿಶೇಷ? ವಿಡಿಯೋ ನೋಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರತಿ ವರ್ಷ ಹಳ್ಳಿಕಾರ್ ರೇಸ್ ಆಯೋಜಿಸಲಿರೋ ವರ್ತೂರು ಸಂತೋಷ್
ಬಿಗ್ಬಾಸ್ ವರ್ತೂರು ಸಂತೋಷ್ ವಿರುದ್ಧ ಆರೋಪಗಳ ಸುರಿಮಳೆಗೈದ್ರು
ವರ್ತೂರು ಸಂತೋಷ್ ವಿರುದ್ಧ ಸ್ನೇಹಿತ ಬೀರೇಶ್ ಎಂಬುವರಿಂದ ಆರೋಪ
ಬಿಗ್ಬಾಸ್ ಮನೆಯಿಂದ ಹೊರ ಬಂದ ಮೇಲೆ ವರ್ತೂರು ಸಂತೋಷ್ ಯಾವ ಸ್ಟಾರ್ಗೂ ಕಡಿಮೆ ಇಲ್ಲ. ವರ್ತೂರು ಸಂತೋಷ್ ಹೋದಲ್ಲಿ ಬಂದಲ್ಲಿ ಜನರ ನೂಕು ನುಗ್ಗಲು. ಹಳ್ಳಿಕಾರ್ ಸಂತೋಷ್ ಅವರ ಜತೆ ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಹೀಗಾಗಿ ಅವರು ಸೆಲೆಬ್ರಿಟಿ ಆಗಿದ್ದಾರೆ.
ಇನ್ನು, ವರ್ತೂರು ಸಂತೋಷ್ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಹಳ್ಳಿಕಾರ್ ರೇಸ್ ನಡೆಸುತ್ತಾರೆ. ಈ ವರ್ಷ ಕೂಡ ಮಾರ್ಚ್ನಲ್ಲಿ ಹಳ್ಳಿಕಾರ್ ರೇಸ್ ಆಯೋಜಿಸಿದ್ರು. ಈ ರೇಸ್ನಲ್ಲಿ ಗ್ರಾಮೀಣ ಪ್ರತಿಭೆಗಳು ಭಾಗಿಯಾಗಿದ್ರು. ಎಲ್ಲೆಡೆ ಹಳ್ಳಿಕಾರ್ ರೇಸ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಹಳ್ಳಿಕಾರ್ ರೇಸ್ ಆಯೋಜಿಸಿದ್ದ ವರ್ತೂರು ಸಂತೋಷ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ವರ್ತೂರು ಸಂತೋಷ್ ಮತ್ತು ಆಪ್ತ ಸ್ನೇಹಿತರ ನಡುವೆ ಬಿರುಕು ಮೂಡಿದೆ. ಈ ಬಗ್ಗೆ ಜನಶಕ್ತಿ ನ್ಯೂಸ್ ಕನ್ನಡ ಅನ್ನೋ ಸ್ಥಳೀಯ ಚಾನೆಲ್ವೊಂದು ಸುದ್ದಿ ಮಾಡಿದೆ. ಜನಶಕ್ತಿ ನ್ಯೂಸ್ ಚಾನೆಲ್ ಜೊತೆ ಮಾತಾಡಿರೋ ವರ್ತೂರು ಸಂತೋಷ್ ಸ್ನೇಹಿತ ಬೀರೇಶ್ ಎಂಬುವರು ಆರೋಪಗಳ ಸುರಿಮಳೆಗೈದಿದ್ದಾರೆ.
ವರ್ತೂರು ಸಂತೋಷ್ ವಿರುದ್ಧ ಆರೋಪಗಳ ಸುರಿಮಳೆ..!
2022ರಲ್ಲಿ ಹಳ್ಳಿಕಾರ್ ರೇಸ್ ಮಾಡಿದ್ವಿ. ಈ ರೇಸ್ಗೆ ನನ್ನ ಸಹಾಯ ಕೇಳಿದ್ರು. ಅದಕ್ಕೆ ನಾನು ಓಕೆ ಎಂದಿದ್ದೆ. ಅವಾಗ ಸ್ಟೇಷನ್ ಪರ್ಮೀಶನ್ಯಿಂದ ಹಿಡಿದು ಪ್ರತಿಯೊಂದು ನಾವು ಮಾಡಿದ್ವಿ. ಎಲ್ಲಾ ಪರ್ಮೀಷನ್ ನಾನು ತಗೊಂಡಿದ್ದು. ಡಾಕ್ಯೂಮೆಂಟ್ಸ್ ಎಲ್ಲವೂ ನನ್ನ ಹೆಸರಲ್ಲೇ ಇದ್ದಿದ್ದು. ನಮ್ಮ ಯಜಮಾನರ ಹತ್ತಿರ 10 ಲಕ್ಷ ದುಡ್ಡು ಕೊಡಿಸಿದ್ದೆ. ಅದು ಬಿಟ್ಟು ನಾನು ದುಡ್ಡು ಖರ್ಚು ಮಾಡಿದೀನಿ. ಆದ್ರೂ ವರ್ತೂರು ಸಂತೋಷ್ ವಿಡಿಯೋದಲ್ಲಿ ಎಲ್ಲಾ ಮಾಡಿದ್ದು ನಾನೇ ಎಂದು ಹೇಳ್ತಾರೆ. ಕರೆಂಟ್ ವೈರ್ ಕನೆಕ್ಷನ್ಗೆ 50 ಸಾವಿರ, ಬ್ಯಾನರ್ಗೆ 60 ಸಾವಿರ ಖರ್ಚು ಆಯ್ತು. ಅದಕ್ಕೆಲ್ಲಾ ದುಡ್ಡು ಕೊಟ್ಟಿದ್ದು ನಾನು, ಆದ್ರೆ ಹೈಲೆಟ್ ಆಗಿದ್ದು ವರ್ತೂರು ಸಂತೋಷ್. ಎಲ್ಲದಕ್ಕೂ ಅವರೇ ಖರ್ಷು ಮಾಡಿದ್ದು ಅಂತಾರೆ. ಅವರು ಒಂದು ರೂ. ಖರ್ಚು ಮಾಡಿಲ್ಲ. ಆತ ಮಾಡಿರೋ ಅನಾಚಾರ ಒಂದು ಎರಡಲ್ಲ. ಅವರಿಗೆ ಅಹಂ ಇಳಿಸಬೇಕು ಅನ್ನೋ ಕಾರಣಕ್ಕೆ ಮಾತಾಡ್ತಿದೀನಿ. ನಾನು ಹೈಲೆಟ್ ಆಗಬೇಕಿರೋ ಅಗತ್ಯ ಇಲ್ಲ ಎಂದು ಆರೋಪ ಮಾಡಿದ್ದಾರೆ.
400 ಜೋಡಿ ಎತ್ತು ಬರುತ್ತೆ. ಒಂದು ಜೋಡಿ 3 ಸಾವಿರ ಅಂದ್ರೂ 12 ಲಕ್ಷ ಆಯ್ತು. ನಾನು 10 ಲಕ್ಷ ಕೊಡಿಸಿದೀನಿ. ಅದು ಬಿಟ್ಟು ಸಣ್ಣಪುಟ್ಟ ಖರ್ಚು ನಾನೇ ನೋಡಿಕೊಂಡಿದೀನಿ. ರೇಸ್ಗೆ ಖರ್ಚಾಗೋದು 15 ಲಕ್ಷ. ಒಂದು ರೇಸ್ಗೆ ಲಕ್ಷ ಲಕ್ಷ ಕಲೆಕ್ಷನ್ ಆಗುತ್ತೆ, ಎಲ್ಲಾ ದುಡ್ಡು ಎಲ್ಲಿ ಹೋಯ್ತು. ವರ್ತೂರ್ ಸಂತೋಷ್ ಒಬ್ಬ ಡೋಂಗಿ ಸರ್.. ಖಾಲಿ ಪಲಾವ್, ಬರೀ ಬಿಲ್ಡಪ್ ತಗೋತಾನೆ. ಅವರು ಏನು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ನಾಲಿಗೆಗೆ ಕಚ್ಚೋ ನಾಗರಹಾವು.. ಕಾರ್ಕೋಟಕ ಸರ್ಪಗಳೇ ಆಟದ ವಸ್ತು; ಏನಿದರ ವಿಶೇಷ? ವಿಡಿಯೋ ನೋಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ