ಮದುವೆ ಆಗ್ತೀನಿ ಎಂದು ನಂಬಿಸಿ ಮೋಸ ಮಾಡಿದ ಪೊಲೀಸ್
ಪೊಲೀಸ್ ಕಾನ್ಸ್ಟೇಬಲ್ನಿಂದ ಮೋಸ ಹೋದ ಯುವತಿ!
ನ್ಯಾಯಕ್ಕಾಗಿ ಠಾಣೆ ಮುಂದೆ ಯುವತಿಯಿಂದ ಪ್ರತಿಭಟನೆ
ಬೆಂಗಳೂರು: ಮದುವೆ ಆಗ್ತೀನಿ ಎಂದು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಕೇಳಿ ಬಂದಿದೆ. ತನ್ನನ್ನು ಪೊಲೀಸ್ ಕಾನ್ಸ್ಟೇಬಲ್ ಮದುವೆ ಆಗಲೇಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ ಸಂತ್ರಸ್ತ ಯುವತಿ ಬಸವನಗುಡಿ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಯುವತಿಗೆ ಮೋಸ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ಅನಿಲ್ ಕುಮಾರ್. ಪೊಲೀಸ್ ಕಾನ್ಸ್ಟೇಬಲ್ ಕಡೆಯಿಂದ ಮೋಸ ಹೋದ ಯುವತಿ ನಾಗವೇಣಿ. ನಾಗವೇಣಿ ಚಿತ್ರದುರ್ಗದ ಮೂಲದವರು. ಕಳೆದ 4 ವರ್ಷಗಳಿಂದ ನಾಗವೇಣಿಯನ್ನು ಅನಿಲ್ ಕುಮಾರ್ ಪ್ರೀತಿಸುತ್ತಿದ್ದ.
ಇನ್ನು, ಕೇವಲ ಪ್ರೀತಿ ಮಾಡಿದ್ದಲ್ಲದೇ ಮದುವೆ ಆಗ್ತೀನಿ ಎಂದು ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ. ಈಗ ಮದುವೆ ಆಗು ಎಂದರೆ ಆಗಲ್ಲ, ನನಗೆ ಬೇರೋಬ್ಬರ ಜರೆ ಎಂಗೇಜ್ಮೆಂಟ್ ಆಗಿದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಅನಿಲ್ ಎಂದು ನಾಗವೇಣಿ ಆರೋಪಿಸಿದ್ದಾರೆ.
ಏನಿದು ಕೇಸ್..?
ಅನಿಲ್ ಕುಮಾರ್ ಸಿರ್ಸಿ ಸರ್ಕಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದ. ಹೀಗಾಗಿ ನಾಗವೇಣಿ ಅನಿಲ್ ವಿರುದ್ಧ ಜೆಜೆ ನಗರ ಪೊಲೀಸ್ ಠಾಣೆಯಲ್ಲೇ ಕೇಸ್ ಮಾಡಿದ್ದರು. ಕೋರ್ಟ್ನಿಂದ ನಿರೀಕ್ಷಿತ ಜಾಮೀನು ಪಡೆದು ಅನಿಲ್ ಕೆಲಸಕ್ಕೆ ಹಾಜರಾಗಿದ್ದ. ಈಗ ಅನಿಲ್ ಬಸವನಗುಡಿ ಪೊಲೀಸ್ ಠಾಣೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯುವತಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮದುವೆ ಆಗ್ತೀನಿ ಎಂದು ನಂಬಿಸಿ ಮೋಸ ಮಾಡಿದ ಪೊಲೀಸ್
ಪೊಲೀಸ್ ಕಾನ್ಸ್ಟೇಬಲ್ನಿಂದ ಮೋಸ ಹೋದ ಯುವತಿ!
ನ್ಯಾಯಕ್ಕಾಗಿ ಠಾಣೆ ಮುಂದೆ ಯುವತಿಯಿಂದ ಪ್ರತಿಭಟನೆ
ಬೆಂಗಳೂರು: ಮದುವೆ ಆಗ್ತೀನಿ ಎಂದು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಕೇಳಿ ಬಂದಿದೆ. ತನ್ನನ್ನು ಪೊಲೀಸ್ ಕಾನ್ಸ್ಟೇಬಲ್ ಮದುವೆ ಆಗಲೇಬೇಕು ಎಂದು ಒತ್ತಾಯಿಸಿ ನ್ಯಾಯಕ್ಕಾಗಿ ಸಂತ್ರಸ್ತ ಯುವತಿ ಬಸವನಗುಡಿ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಯುವತಿಗೆ ಮೋಸ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ಅನಿಲ್ ಕುಮಾರ್. ಪೊಲೀಸ್ ಕಾನ್ಸ್ಟೇಬಲ್ ಕಡೆಯಿಂದ ಮೋಸ ಹೋದ ಯುವತಿ ನಾಗವೇಣಿ. ನಾಗವೇಣಿ ಚಿತ್ರದುರ್ಗದ ಮೂಲದವರು. ಕಳೆದ 4 ವರ್ಷಗಳಿಂದ ನಾಗವೇಣಿಯನ್ನು ಅನಿಲ್ ಕುಮಾರ್ ಪ್ರೀತಿಸುತ್ತಿದ್ದ.
ಇನ್ನು, ಕೇವಲ ಪ್ರೀತಿ ಮಾಡಿದ್ದಲ್ಲದೇ ಮದುವೆ ಆಗ್ತೀನಿ ಎಂದು ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ. ಈಗ ಮದುವೆ ಆಗು ಎಂದರೆ ಆಗಲ್ಲ, ನನಗೆ ಬೇರೋಬ್ಬರ ಜರೆ ಎಂಗೇಜ್ಮೆಂಟ್ ಆಗಿದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಅನಿಲ್ ಎಂದು ನಾಗವೇಣಿ ಆರೋಪಿಸಿದ್ದಾರೆ.
ಏನಿದು ಕೇಸ್..?
ಅನಿಲ್ ಕುಮಾರ್ ಸಿರ್ಸಿ ಸರ್ಕಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದ. ಹೀಗಾಗಿ ನಾಗವೇಣಿ ಅನಿಲ್ ವಿರುದ್ಧ ಜೆಜೆ ನಗರ ಪೊಲೀಸ್ ಠಾಣೆಯಲ್ಲೇ ಕೇಸ್ ಮಾಡಿದ್ದರು. ಕೋರ್ಟ್ನಿಂದ ನಿರೀಕ್ಷಿತ ಜಾಮೀನು ಪಡೆದು ಅನಿಲ್ ಕೆಲಸಕ್ಕೆ ಹಾಜರಾಗಿದ್ದ. ಈಗ ಅನಿಲ್ ಬಸವನಗುಡಿ ಪೊಲೀಸ್ ಠಾಣೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯುವತಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ