ಶಾರುಕ್ ಖಾನ್ ಪರ ಬ್ಯಾಟ್ ಬೀಸಿರುವ SRHನ ಕಾವ್ಯ ಮಾರನ್
ಶಾರುಖ್ ಖಾನ್- ಪಂಜಾಬ್ ಟೀಮ್ ಮಾಲೀಕನ ಮಧ್ಯೆ ವಾರ್
2025ರ ಹರಾಜಿಗೂ ಮೊದಲು IPLನಲ್ಲಿ ಅಪಸ್ವರ ಕೇಳಿ ಬಂದಿತಾ?
ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಪಂಜಾಬ್ ಕಿಂಗ್ಸ್ ಸಹ-ಮಾಲೀಕ ನೆಸ್ ವಾಡಿಯಾ ನಡುವೆ ತೀವ್ರ ವಾಗ್ವಾದ ನಡೆದಿದೆ. ಮುಂದಿನ ಐಪಿಎಲ್ನಲ್ಲಿ ಹೆಚ್ಚಿನ ಪ್ಲೇಯರ್ಗಳನ್ನು ತಂಡದಲ್ಲಿ ಇಟ್ಟುಕೊಳ್ಳಬಾರದು ಎಂಬುದರ ಕುರಿತು ನಡೆದ ಚರ್ಚೆಯ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಒಂದೊಂದು ಪೋಸ್ಟ್ಗೂ ಒಂದೊಂದು ದೇಶದಲ್ಲಿ ಇರ್ತಾರಾ ದೀಪಿಕಾ ದಾಸ್.. ಬ್ಯೂಟಿ ಈಗ ಹೋಗಿದ್ದೇಲ್ಲಿಗೆ?
ಮುಂಬೈನಲ್ಲಿರುವ ಬಿಸಿಸಿಐನ ಪ್ರಧಾನ ಕಚೇರಿಯಲ್ಲಿ ಐಪಿಎಲ್ನ ತಂಡದ ಓನರ್ಗಳ ಸಭೆಯನ್ನು ಏರ್ಪಡಿಸಲಾಗಿತ್ತು. 2025ರ ಐಪಿಎಲ್ ಆಕ್ಷನ್ ಸಂಬಂಧ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ಐಪಿಎಲ್ನ ಎಲ್ಲ ತಂಡಗಳ ಮಾಲೀಕರು ಭಾಗವಹಿಸಿದ್ದರು. ಸಭೆಯಲ್ಲಿ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಪಂಜಾಬ್ ಕಿಂಗ್ಸ್ ಸೇರಿದಂತೆ ಕೆಲ ಫ್ರಾಂಚೈಸಿಗಳು ಹೇಳಿದ್ದವು. ಆದರೆ ಇದಕ್ಕೆ ಶಾರುಖ್ ಖಾನ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಹೀಗಾಗಿಯೇ ಸಭೆಯಲ್ಲಿ ಪಂಜಾಬ್ ಕಿಂಗ್ಸ್ ಮಾಲೀಕ ನೆಸ್ ವಾಡಿಯಾ ಹಾಗೂ ಶಾರುಖ್ ಮಧ್ಯೆ ಭಾರೀ ವಾದ- ವಿವಾದ ನಡೆದಿದೆ. ಅಲ್ಲದೇ ಶಾರುಖ್ ಖಾನ್ ಪರವಾಗಿಯೇ ಹೈದರಾಬಾದ್ ತಂಡದ ಓನರ್ ಕಾವ್ಯ ಮಾರನ್ ಕೂಡ ಬ್ಯಾಟ್ ಬೀಸಿದ್ದಾರೆ. ಹೆಚ್ಚಿನ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಬಿಸಿಸಿಐಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪ್ರಾಂಚೈಸಿ ಮನವಿ ಮಾಡಿದೆ. ಆದರೆ ಇದಕ್ಕೆ ಪಂಜಾಬ್ ಸೇರಿದಂತೆ ಒಂದೆರಡು ಟೀಮ್ಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ಲೇಯರ್ಸ್ ಅನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ಬಿಸಿಸಿಐ ಯಾವ ತೀರ್ಮಾನಕ್ಕೆ ಬರುತ್ತದೆ ಎಂದು ಇನ್ನು ಸ್ಪಷ್ಟವಾಗಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಶಾರುಕ್ ಖಾನ್ ಪರ ಬ್ಯಾಟ್ ಬೀಸಿರುವ SRHನ ಕಾವ್ಯ ಮಾರನ್
ಶಾರುಖ್ ಖಾನ್- ಪಂಜಾಬ್ ಟೀಮ್ ಮಾಲೀಕನ ಮಧ್ಯೆ ವಾರ್
2025ರ ಹರಾಜಿಗೂ ಮೊದಲು IPLನಲ್ಲಿ ಅಪಸ್ವರ ಕೇಳಿ ಬಂದಿತಾ?
ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಪಂಜಾಬ್ ಕಿಂಗ್ಸ್ ಸಹ-ಮಾಲೀಕ ನೆಸ್ ವಾಡಿಯಾ ನಡುವೆ ತೀವ್ರ ವಾಗ್ವಾದ ನಡೆದಿದೆ. ಮುಂದಿನ ಐಪಿಎಲ್ನಲ್ಲಿ ಹೆಚ್ಚಿನ ಪ್ಲೇಯರ್ಗಳನ್ನು ತಂಡದಲ್ಲಿ ಇಟ್ಟುಕೊಳ್ಳಬಾರದು ಎಂಬುದರ ಕುರಿತು ನಡೆದ ಚರ್ಚೆಯ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಒಂದೊಂದು ಪೋಸ್ಟ್ಗೂ ಒಂದೊಂದು ದೇಶದಲ್ಲಿ ಇರ್ತಾರಾ ದೀಪಿಕಾ ದಾಸ್.. ಬ್ಯೂಟಿ ಈಗ ಹೋಗಿದ್ದೇಲ್ಲಿಗೆ?
ಮುಂಬೈನಲ್ಲಿರುವ ಬಿಸಿಸಿಐನ ಪ್ರಧಾನ ಕಚೇರಿಯಲ್ಲಿ ಐಪಿಎಲ್ನ ತಂಡದ ಓನರ್ಗಳ ಸಭೆಯನ್ನು ಏರ್ಪಡಿಸಲಾಗಿತ್ತು. 2025ರ ಐಪಿಎಲ್ ಆಕ್ಷನ್ ಸಂಬಂಧ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಭೆಯಲ್ಲಿ ಐಪಿಎಲ್ನ ಎಲ್ಲ ತಂಡಗಳ ಮಾಲೀಕರು ಭಾಗವಹಿಸಿದ್ದರು. ಸಭೆಯಲ್ಲಿ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಪಂಜಾಬ್ ಕಿಂಗ್ಸ್ ಸೇರಿದಂತೆ ಕೆಲ ಫ್ರಾಂಚೈಸಿಗಳು ಹೇಳಿದ್ದವು. ಆದರೆ ಇದಕ್ಕೆ ಶಾರುಖ್ ಖಾನ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಹೀಗಾಗಿಯೇ ಸಭೆಯಲ್ಲಿ ಪಂಜಾಬ್ ಕಿಂಗ್ಸ್ ಮಾಲೀಕ ನೆಸ್ ವಾಡಿಯಾ ಹಾಗೂ ಶಾರುಖ್ ಮಧ್ಯೆ ಭಾರೀ ವಾದ- ವಿವಾದ ನಡೆದಿದೆ. ಅಲ್ಲದೇ ಶಾರುಖ್ ಖಾನ್ ಪರವಾಗಿಯೇ ಹೈದರಾಬಾದ್ ತಂಡದ ಓನರ್ ಕಾವ್ಯ ಮಾರನ್ ಕೂಡ ಬ್ಯಾಟ್ ಬೀಸಿದ್ದಾರೆ. ಹೆಚ್ಚಿನ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಬಿಸಿಸಿಐಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪ್ರಾಂಚೈಸಿ ಮನವಿ ಮಾಡಿದೆ. ಆದರೆ ಇದಕ್ಕೆ ಪಂಜಾಬ್ ಸೇರಿದಂತೆ ಒಂದೆರಡು ಟೀಮ್ಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ಲೇಯರ್ಸ್ ಅನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ಬಿಸಿಸಿಐ ಯಾವ ತೀರ್ಮಾನಕ್ಕೆ ಬರುತ್ತದೆ ಎಂದು ಇನ್ನು ಸ್ಪಷ್ಟವಾಗಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ