/newsfirstlive-kannada/media/post_attachments/wp-content/uploads/2024/02/MH_FISH_ATTACK.jpg)
ಮುಂಬೈ: ನದಿಗೆ ಹೊಂದಿಕೊಂಡ ತೊರೆಯಲ್ಲಿ ಮೀನು ಹಿಡಿಯಲು ಹೋದಾಗ ವ್ಯಕ್ತಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿ, ಕಾಲನ್ನು ಕಿತ್ತುಕೊಂಡ 200 ಕೆಜಿಯ ಶಾರ್ಕ್​​ವೊಂದು ಬಳಿಕ ಸಾವನ್ನಪ್ಪಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನದಿಗೆ ಸಂಪರ್ಕವಿರುವ ತೊರೆಯಲ್ಲಿ ಈ ಘಟನೆ ನಡೆದಿದೆ.
ಮೀನುಗಾರ ವಿಕ್ಕಿ ಸುರೇಶ್​ ಗೊವಾರಿ (32) ಶಾರ್ಕ್​​ನಿಂದ ಕಾಲನ್ನು ಕಳೆದುಕೊಂಡ ವ್ಯಕ್ತಿ. ವಿಕ್ಕಿ ಸೇರಿ ಕೆಲ ಮೀನುಗಾರರು ರಾತ್ರಿ ಸಮಯದಲ್ಲಿ ಮೀನುಗಳನ್ನು ಹಿಡಿಯಲೆಂದು ತೊರೆಯ ನೀರಿಗೆ ಇಳಿದಿದ್ದಾರೆ. ಈ ವೇಳೆ ಶಾರ್ಕ್​ವೊಂದು ವ್ಯಕ್ತಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದು ಆತನ ಕಾಲನ್ನು ಕಿತ್ತುಕೊಂಡಿದೆ. ಆದರೆ ನಂತರ ಶಾರ್ಕ್​ ಸಾವನ್ನಪ್ಪಿರುವುದು ಅಲ್ಲಿನ ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಇನ್ನು ಶಾರ್ಕ್​ ಅಟ್ಯಾಕ್​ನಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಸ್ಥಿತಿ ತೀವ್ರ ಗಂಭೀರವಾಗಿದೆ. ಅಲ್ಲದೇ ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರೆಲ್ಲ ರಾತ್ರಿಯಲ್ಲೇ ಶಾರ್ಕ್​ ನೋಡಲು ದಡದ ಮೇಲೆ ಜಮಾಯಿಸಿದ್ದರು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ