ಜುಲೈ 16ರಂದು ನಡೆದ ಶಿರೂರು ಗುಡ್ಡ ಕುಸಿತ ಪ್ರಕರಣ
ಇಂದಿಗೆ 12 ದಿನ.. ನಾಪತ್ತೆಯಾದ ಕೇರಳದ ಅರ್ಜುನ್ಗಾಗಿ ಶೋಧ
ಅರ್ಜುನ್ನನ್ನು ನೀರಿನಾಳದಲ್ಲಿ ಹುಡುಕಲು ಬಂದ ಮುಳುಗು ತಜ್ಞರ ತಂಡ
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಚಾಲಕ ಅರ್ಜುನ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನದಿಯಲ್ಲಿ ನಾಪತ್ತೆಯಾದ ಲಾರಿ ಹುಡುಕಾಟಕ್ಕಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದಾರೆ.
ನದಿಯಲ್ಲಿ ಸುಮಾರು 5 ಮೀಟರ್ ಆಳ, ದಡದಿಂದ 20 ಮೀಟರ್ ದೂರದಲ್ಲಿ ಲಾರಿ ಮಾದರಿಯ ಮೆಟಲ್ ಪತ್ತೆಯಾಗಿದ್ದು, ಲಾರಿ ಮೇಲಕ್ಕೆ ಎತ್ತಲು ನದಿಯೊಳಗೆ ಹೋಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹೋಟೆಲ್ ಅವಶೇಷಗಳು ಪತ್ತೆ
ಶಿರೂರು ಗುಡ್ಡ ಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಬಿದ್ದಿತ್ತು. ರಸ್ತೆಗೆ ಬಿದ್ದ ಮಣ್ಣನ್ನು ಭಾಗಶಃ ತೆಗೆಯಲಾಗಿದೆ. ಆದರೆ ಈ ವೇಳೆ ಲಕ್ಷಣ್ ನಾಯ್ಕ್ ಅವರಿಗೆ ಸೇರಿದ್ದ ಹೋಟೆಲ್ನ ಅವಶೇಷಗಳು ಪತ್ತೆಯಾಗಿವೆ. ಬಕೆಟ್, ಕೆಲ ಪಾತ್ರೆಗಳು ಮಣ್ಣಿನಡಿಯಲ್ಲಿ ಸಿಲುಕಿವೆ.
ಶಿರೂರು ಗುಡ್ಡ ಕುಸಿತವಾಗಿ ಇಂದಿಗೆ 12 ದಿನ
ಜುಲೈ 16ರಂದು ಬೆಳಗ್ಗಿನ ಜಾವ 8.30ರ ಸುಮಾರಿಗೆ ಇದ್ದಕ್ಕಿದ್ದಂತೆಯೇ ಗುಡ್ಡ ಕುಸಿದಿದೆ. ಈ ವೇಳೆ ಅಲ್ಲೇ ಇದ್ದ ಲಕ್ಷ್ಮಣ್ ನಾಯ್ಕರವರ ಹೋಟೆಲ್ ಮೇಲೆ ಮಣ್ಣು ಬಿದ್ದಿದೆ. ಒಂದೇ ಕುಟುಂಬದ ಐವರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ಮತ್ತಿಬ್ಬರ ಮೃತದೇಹವು ಕಾರ್ಯಚರಣೆ ವೇಳೆ ಸಿಕ್ಕಿದೆ. ಸದ್ಯ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಮತ್ತು ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜುಲೈ 16ರಂದು ನಡೆದ ಶಿರೂರು ಗುಡ್ಡ ಕುಸಿತ ಪ್ರಕರಣ
ಇಂದಿಗೆ 12 ದಿನ.. ನಾಪತ್ತೆಯಾದ ಕೇರಳದ ಅರ್ಜುನ್ಗಾಗಿ ಶೋಧ
ಅರ್ಜುನ್ನನ್ನು ನೀರಿನಾಳದಲ್ಲಿ ಹುಡುಕಲು ಬಂದ ಮುಳುಗು ತಜ್ಞರ ತಂಡ
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಚಾಲಕ ಅರ್ಜುನ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನದಿಯಲ್ಲಿ ನಾಪತ್ತೆಯಾದ ಲಾರಿ ಹುಡುಕಾಟಕ್ಕಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದಾರೆ.
ನದಿಯಲ್ಲಿ ಸುಮಾರು 5 ಮೀಟರ್ ಆಳ, ದಡದಿಂದ 20 ಮೀಟರ್ ದೂರದಲ್ಲಿ ಲಾರಿ ಮಾದರಿಯ ಮೆಟಲ್ ಪತ್ತೆಯಾಗಿದ್ದು, ಲಾರಿ ಮೇಲಕ್ಕೆ ಎತ್ತಲು ನದಿಯೊಳಗೆ ಹೋಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹೋಟೆಲ್ ಅವಶೇಷಗಳು ಪತ್ತೆ
ಶಿರೂರು ಗುಡ್ಡ ಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಬಿದ್ದಿತ್ತು. ರಸ್ತೆಗೆ ಬಿದ್ದ ಮಣ್ಣನ್ನು ಭಾಗಶಃ ತೆಗೆಯಲಾಗಿದೆ. ಆದರೆ ಈ ವೇಳೆ ಲಕ್ಷಣ್ ನಾಯ್ಕ್ ಅವರಿಗೆ ಸೇರಿದ್ದ ಹೋಟೆಲ್ನ ಅವಶೇಷಗಳು ಪತ್ತೆಯಾಗಿವೆ. ಬಕೆಟ್, ಕೆಲ ಪಾತ್ರೆಗಳು ಮಣ್ಣಿನಡಿಯಲ್ಲಿ ಸಿಲುಕಿವೆ.
ಶಿರೂರು ಗುಡ್ಡ ಕುಸಿತವಾಗಿ ಇಂದಿಗೆ 12 ದಿನ
ಜುಲೈ 16ರಂದು ಬೆಳಗ್ಗಿನ ಜಾವ 8.30ರ ಸುಮಾರಿಗೆ ಇದ್ದಕ್ಕಿದ್ದಂತೆಯೇ ಗುಡ್ಡ ಕುಸಿದಿದೆ. ಈ ವೇಳೆ ಅಲ್ಲೇ ಇದ್ದ ಲಕ್ಷ್ಮಣ್ ನಾಯ್ಕರವರ ಹೋಟೆಲ್ ಮೇಲೆ ಮಣ್ಣು ಬಿದ್ದಿದೆ. ಒಂದೇ ಕುಟುಂಬದ ಐವರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ಮತ್ತಿಬ್ಬರ ಮೃತದೇಹವು ಕಾರ್ಯಚರಣೆ ವೇಳೆ ಸಿಕ್ಕಿದೆ. ಸದ್ಯ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಮತ್ತು ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ