ಅರ್ಜುನ್ ಹುಡುಕಾಟಕ್ಕೆ ಆಧುನಿಕ ತಂತ್ರಜ್ಞಾನಗಳ ಬಳಕೆ
ಲಾರಿ ಚಾಲಕನ ಪತ್ತೆಗೆ ಐಬಾಡ್ ಡ್ರೋನ್ ಬಳಕೆ.. ಇದರಲ್ಲಿದೆ ಜಿಪಿಆರ್ ಟೆಕ್ನಾಲಜಿ
ಜುಲೈ 16ರಂದು ಗುಡ್ಡ ಕುಸಿತ.. ಅರ್ಜುನ್ ನಾಪತ್ತೆಯಾಗಿ ಇಂದಿಗೆ 11 ದಿನಗಳು
ಆಧುನಿಕ ತಂತ್ರಜ್ಞಾನಗಳ ಮೂಲಕ ಎದುರಾಗುವ ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಅಪಘಾತ ನಡೆದರೂ ಸಹ ಕೆಲವೊಮ್ಮೆ ನೂತನ ತಂತ್ರಜ್ಞಾನಗಳ ಮೂಲಕ ಚಾಲಕ, ಸವಾರರನ್ನು ಬದುಕಿಸಬಹುದಾಗಿದೆ. ಆದರೆ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್ನನ್ನು ಪತ್ತೆಹಚ್ಚಲು ಇನ್ನೂ ಸಹ ಕಾರ್ಯ ಮುಂದುವರೆದಿದೆ. ಮಳೆ ಹಾಗೂ ರಭಸವಾಗಿ ಹರಿಯುವ ನದಿ ನೀರಿನಿಂದಾಗಿ ಅರ್ಜುನ್ನನ್ನು ಪತ್ತೆ ಹಚ್ಚುವುದು ಸಾಹಸದ ಕೆಲಸವಾಗಿದೆ.
ಸಾಮಾನ್ಯವಾಗಿ ಪ್ರತಿಯೊಂದು ಟ್ರಕ್ಗಳಲ್ಲಿ ಜಿಪಿಎಸ್ ನ್ಯಾವಿಗೇಷನ್ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಇದಲ್ಲದೇ ನಾಪತ್ತೆಯಾದ ಟ್ರಕ್ ಅನ್ನು ರಾಡಾರ್ ಡಿಟೆಕ್ಟರ್, ಉಪಗ್ರಹ ರೇಡಿಯೋ, ಮೊಬೈಲ್ ಅಪ್ಲಿಕೇಶನ್ ಮೂಲಕ ಹುಡುಕಬಹುದಾಗಿದೆ.
ರಾಡಾರ್ ಡಿಟೆಕ್ಟರ್ ಟ್ರಕ್ಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ರಾಡಾರ್ ಡಿಟೆಕ್ಟರ್ ರೇಡಿಯೋ ತರಂಗಗಳ ಮೂಲಕ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಅಂದಹಾಗೆಯೇ ಇದು ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಆಗಿದ್ದು, ಟ್ರಕ್ ಚಾಲಕನಿಗೆ ಇದು ತುರ್ತು ಸಮಯದಲ್ಲಿ ಮಾಹಿತಿಯನ್ನು ರವಾನಿಸುತ್ತದೆ. ಇದರಲ್ಲಿ ಸೂಪರ್ಹೆಟೆರೊಡೈನ್ ರಿಸೀವರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಅರ್ಜುನ್ ಹುಡುಕಲು ಬಂದ ಐಬಾಡ್.. ನೀರು, ಮಣ್ಣು, ಹಿಮದಲ್ಲಿದ್ರು ಹುಡುಕುತ್ತೆ ಈ ಡ್ರೋನ್
ಟ್ರಕ್ಗಳಲ್ಲಿ ವೇಗದ ಅರಿವನ್ನು ಕಾಪಾಡಲು, ಸುರಕ್ಷಿತವಾದ ಚಾಲನೆ ಮಾಡಲು ರಾಡಾರ್ ಡಿಟೆಕ್ಟರ್ ಸಹಾಯಕವಾಗಿದೆ.
ಇದನ್ನೂ ಓದಿ: ತನ್ನ ಒಡವೆ ಮಾರಿ KRS ಡ್ಯಾಂ ನಿರ್ಮಿಸಿದ ತಾಯಿ.. ಇಂದು ರಾಜ್ಯದ ಜನರ ದಾಹ ತೀರಿಸುತ್ತಿರೋದು ಆಕೆ ಮಾಡಿದ ತ್ಯಾಗದಿಂದ!
ಶಿರೂರು ಲಾರಿ ಚಾಲಕ ಅರ್ಜುನ್ ನಾಪತ್ತೆ ಕೇಸ್ನಲ್ಲಿ ಲಾರಿಯಲ್ಲಿ ಜಿಪಿಎಸ್ ಗರಿಷ್ಠ 19 ನಿಮಿಷಗಳವರೆಗೆ ಕೆಲಸ ಮಾಡಿದೆ. ಆ ಬಳಿಕ ಕೆಲಸವನ್ನು ನಿಲ್ಲಿಸಿದೆ. ಜುಲೈ 16ರಂದು ಗುಡ್ಡ ಕುಸಿತದ ವೇಳೆ ಬೆಳಗ್ಗೆ 8.49ಕ್ಕೆ ಕೊನೆಯದಾಗಿ ಜಿಪಿಎಸ್ ಕೆಲಸ ನಿಲ್ಲಿಸಿದೆ. ಬಳಿಕ ಲಾರಿ ಆಫ್ಲೈನ್ನಲ್ಲಿ ಕಾಣಿಸಿದೆ.
ಇದನ್ನೂ ಓದಿ: BBK10 ಮುಗಿದ ಬಳಿಕ ವಿನ್ನರ್ ಕಾರ್ತಿಕ್ ಮಹೇಶ್ ಏನ್ಮಾಡ್ತಿದ್ದಾರೆ ಗೊತ್ತಾ?
ಮೊಬೈಲ್ ಟವರ್ ಸಿಗ್ನಲ್, ಲೊಕೇಶನ್ ಮತ್ತು ಕರೆಯ ಮೂಲಕ ಸ್ಥಳವನ್ನು ಪತ್ತೆ ಹಚ್ಚಬಹುದಾಗಿದೆ. ನಾಪತ್ತೆಯಾದ ಅರ್ಜುನ್ ವಿಚಾರದಲ್ಲೂ ಜುಲೈ 16ರಂದು ಶುಕ್ರವಾರ ಗುಡ್ಡ ಕುಸಿದ ಜಾಗದಲ್ಲಿ ಮೊಬೈಲ್ ರಿಂಗಣಿಸಿದೆ. ಆ ಬಳಿಕ ಸಿಗ್ನಲ್ ಆಫ್ ಆಗಿದೆ. ಅರ್ಜುನ್ ಪೋಷಕರು ಮಗನ ಫೋನ್ ರಿಂಗಣಿಸಿದೆ ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಅದರಂತೆಯೇ ಶಿರೂರಿನಲ್ಲಿ ಕಾರ್ಯಗಳು ಚುರುಕಿನಿಂದ ಆರಂಭವಾದವು.
ಐಬಾಡ್ ಡ್ರೋನ್
ಸದ್ಯ ಅರ್ಜುನನ್ನು ಹುಡುಕಾಡಲು ಐಬಾಡ್ ಹೆಸರಿನ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್ ಸ್ಥಳದಲ್ಲಿದೆ. ಇದರಲ್ಲಿ ರೆಡಾರ್ ಮತ್ತು ಜಿಪಿಆರ್ ಟೆಕ್ನಾಲಜಿ ಇದೆ. ಸಿವಿಲ್ ಇಂಜಿನಿಯರಿಂಗ್ ಕೆಲಸಗಳಲ್ಲಿ ಈ ಜಿಪಿಆರ್ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಅಡಿಪಾಯದಲ್ಲಿ ಹಾಕಿದ್ದ ಕಾಂಕ್ರೀಟ್ಗಳಲ್ಲಿ ಒಡಕು ಕಾಣಿಸಿಕೊಂಡಾಗ ಅಥವಾ ಪೈಪ್ಲೈನ್ಗಳಲ್ಲಿ ಒಡಕು ಕಾಣಿಸಿಕೊಂಡಾಗ ಈ ಜಿಪಿಆರ್ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಇದಲ್ಲದೇ, ಸೆರಡಾರ್ ತಂತ್ರಜ್ಞಾನವಿದೆ. ಆದರೆ ಇದು 2 ಮೀಟರ್ ಮತ್ತು 3 ಮೀಟರ್ನಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅರ್ಜುನ್ ಹುಡುಕಾಟಕ್ಕೆ ಆಧುನಿಕ ತಂತ್ರಜ್ಞಾನಗಳ ಬಳಕೆ
ಲಾರಿ ಚಾಲಕನ ಪತ್ತೆಗೆ ಐಬಾಡ್ ಡ್ರೋನ್ ಬಳಕೆ.. ಇದರಲ್ಲಿದೆ ಜಿಪಿಆರ್ ಟೆಕ್ನಾಲಜಿ
ಜುಲೈ 16ರಂದು ಗುಡ್ಡ ಕುಸಿತ.. ಅರ್ಜುನ್ ನಾಪತ್ತೆಯಾಗಿ ಇಂದಿಗೆ 11 ದಿನಗಳು
ಆಧುನಿಕ ತಂತ್ರಜ್ಞಾನಗಳ ಮೂಲಕ ಎದುರಾಗುವ ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಅಪಘಾತ ನಡೆದರೂ ಸಹ ಕೆಲವೊಮ್ಮೆ ನೂತನ ತಂತ್ರಜ್ಞಾನಗಳ ಮೂಲಕ ಚಾಲಕ, ಸವಾರರನ್ನು ಬದುಕಿಸಬಹುದಾಗಿದೆ. ಆದರೆ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್ನನ್ನು ಪತ್ತೆಹಚ್ಚಲು ಇನ್ನೂ ಸಹ ಕಾರ್ಯ ಮುಂದುವರೆದಿದೆ. ಮಳೆ ಹಾಗೂ ರಭಸವಾಗಿ ಹರಿಯುವ ನದಿ ನೀರಿನಿಂದಾಗಿ ಅರ್ಜುನ್ನನ್ನು ಪತ್ತೆ ಹಚ್ಚುವುದು ಸಾಹಸದ ಕೆಲಸವಾಗಿದೆ.
ಸಾಮಾನ್ಯವಾಗಿ ಪ್ರತಿಯೊಂದು ಟ್ರಕ್ಗಳಲ್ಲಿ ಜಿಪಿಎಸ್ ನ್ಯಾವಿಗೇಷನ್ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಇದಲ್ಲದೇ ನಾಪತ್ತೆಯಾದ ಟ್ರಕ್ ಅನ್ನು ರಾಡಾರ್ ಡಿಟೆಕ್ಟರ್, ಉಪಗ್ರಹ ರೇಡಿಯೋ, ಮೊಬೈಲ್ ಅಪ್ಲಿಕೇಶನ್ ಮೂಲಕ ಹುಡುಕಬಹುದಾಗಿದೆ.
ರಾಡಾರ್ ಡಿಟೆಕ್ಟರ್ ಟ್ರಕ್ಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ರಾಡಾರ್ ಡಿಟೆಕ್ಟರ್ ರೇಡಿಯೋ ತರಂಗಗಳ ಮೂಲಕ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಅಂದಹಾಗೆಯೇ ಇದು ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಆಗಿದ್ದು, ಟ್ರಕ್ ಚಾಲಕನಿಗೆ ಇದು ತುರ್ತು ಸಮಯದಲ್ಲಿ ಮಾಹಿತಿಯನ್ನು ರವಾನಿಸುತ್ತದೆ. ಇದರಲ್ಲಿ ಸೂಪರ್ಹೆಟೆರೊಡೈನ್ ರಿಸೀವರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಅರ್ಜುನ್ ಹುಡುಕಲು ಬಂದ ಐಬಾಡ್.. ನೀರು, ಮಣ್ಣು, ಹಿಮದಲ್ಲಿದ್ರು ಹುಡುಕುತ್ತೆ ಈ ಡ್ರೋನ್
ಟ್ರಕ್ಗಳಲ್ಲಿ ವೇಗದ ಅರಿವನ್ನು ಕಾಪಾಡಲು, ಸುರಕ್ಷಿತವಾದ ಚಾಲನೆ ಮಾಡಲು ರಾಡಾರ್ ಡಿಟೆಕ್ಟರ್ ಸಹಾಯಕವಾಗಿದೆ.
ಇದನ್ನೂ ಓದಿ: ತನ್ನ ಒಡವೆ ಮಾರಿ KRS ಡ್ಯಾಂ ನಿರ್ಮಿಸಿದ ತಾಯಿ.. ಇಂದು ರಾಜ್ಯದ ಜನರ ದಾಹ ತೀರಿಸುತ್ತಿರೋದು ಆಕೆ ಮಾಡಿದ ತ್ಯಾಗದಿಂದ!
ಶಿರೂರು ಲಾರಿ ಚಾಲಕ ಅರ್ಜುನ್ ನಾಪತ್ತೆ ಕೇಸ್ನಲ್ಲಿ ಲಾರಿಯಲ್ಲಿ ಜಿಪಿಎಸ್ ಗರಿಷ್ಠ 19 ನಿಮಿಷಗಳವರೆಗೆ ಕೆಲಸ ಮಾಡಿದೆ. ಆ ಬಳಿಕ ಕೆಲಸವನ್ನು ನಿಲ್ಲಿಸಿದೆ. ಜುಲೈ 16ರಂದು ಗುಡ್ಡ ಕುಸಿತದ ವೇಳೆ ಬೆಳಗ್ಗೆ 8.49ಕ್ಕೆ ಕೊನೆಯದಾಗಿ ಜಿಪಿಎಸ್ ಕೆಲಸ ನಿಲ್ಲಿಸಿದೆ. ಬಳಿಕ ಲಾರಿ ಆಫ್ಲೈನ್ನಲ್ಲಿ ಕಾಣಿಸಿದೆ.
ಇದನ್ನೂ ಓದಿ: BBK10 ಮುಗಿದ ಬಳಿಕ ವಿನ್ನರ್ ಕಾರ್ತಿಕ್ ಮಹೇಶ್ ಏನ್ಮಾಡ್ತಿದ್ದಾರೆ ಗೊತ್ತಾ?
ಮೊಬೈಲ್ ಟವರ್ ಸಿಗ್ನಲ್, ಲೊಕೇಶನ್ ಮತ್ತು ಕರೆಯ ಮೂಲಕ ಸ್ಥಳವನ್ನು ಪತ್ತೆ ಹಚ್ಚಬಹುದಾಗಿದೆ. ನಾಪತ್ತೆಯಾದ ಅರ್ಜುನ್ ವಿಚಾರದಲ್ಲೂ ಜುಲೈ 16ರಂದು ಶುಕ್ರವಾರ ಗುಡ್ಡ ಕುಸಿದ ಜಾಗದಲ್ಲಿ ಮೊಬೈಲ್ ರಿಂಗಣಿಸಿದೆ. ಆ ಬಳಿಕ ಸಿಗ್ನಲ್ ಆಫ್ ಆಗಿದೆ. ಅರ್ಜುನ್ ಪೋಷಕರು ಮಗನ ಫೋನ್ ರಿಂಗಣಿಸಿದೆ ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಅದರಂತೆಯೇ ಶಿರೂರಿನಲ್ಲಿ ಕಾರ್ಯಗಳು ಚುರುಕಿನಿಂದ ಆರಂಭವಾದವು.
ಐಬಾಡ್ ಡ್ರೋನ್
ಸದ್ಯ ಅರ್ಜುನನ್ನು ಹುಡುಕಾಡಲು ಐಬಾಡ್ ಹೆಸರಿನ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್ ಸ್ಥಳದಲ್ಲಿದೆ. ಇದರಲ್ಲಿ ರೆಡಾರ್ ಮತ್ತು ಜಿಪಿಆರ್ ಟೆಕ್ನಾಲಜಿ ಇದೆ. ಸಿವಿಲ್ ಇಂಜಿನಿಯರಿಂಗ್ ಕೆಲಸಗಳಲ್ಲಿ ಈ ಜಿಪಿಆರ್ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಅಡಿಪಾಯದಲ್ಲಿ ಹಾಕಿದ್ದ ಕಾಂಕ್ರೀಟ್ಗಳಲ್ಲಿ ಒಡಕು ಕಾಣಿಸಿಕೊಂಡಾಗ ಅಥವಾ ಪೈಪ್ಲೈನ್ಗಳಲ್ಲಿ ಒಡಕು ಕಾಣಿಸಿಕೊಂಡಾಗ ಈ ಜಿಪಿಆರ್ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಇದಲ್ಲದೇ, ಸೆರಡಾರ್ ತಂತ್ರಜ್ಞಾನವಿದೆ. ಆದರೆ ಇದು 2 ಮೀಟರ್ ಮತ್ತು 3 ಮೀಟರ್ನಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ