ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಕೇರಳದ ಅರ್ಜುನ್
ದಡದಿಂದ 40 ಮೀಟರ್ ದೂರದಲ್ಲಿರುವ ನದಿಯಲ್ಲಿ ಅರ್ಜುನ್ ಲಾರಿ ಪತ್ತೆ
22ನೇ ವಯಸ್ಸಿನಲ್ಲೇ ಕುಟುಂಬ ನಿರ್ವಹಣೆಗಾಗಿ ಕಠಿಣ ಕೆಲಸಕ್ಕಿಳಿದಿದ್ದ ಅರ್ಜುನ್
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಇಂದಿಗೆ 10 ದಿನ ಕಳೆದರೂ ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅರ್ಜುನ್ ಚಲಾಯಿಸುತ್ತಿದ್ದ ಲಾರಿ ದಡದಿಂದ 40 ಮೀಟರ್ ದೂರದಲ್ಲಿರುವ ನದಿಯಲ್ಲಿ ಇರುವುದು ಪತ್ತೆಯಾಗಿದೆ. ಮಾಹಿತಿ ಪ್ರಕಾರ 15 ಮೀಟರ್ ಅಳದಲ್ಲಿ ಲಾರಿ ಇದೆ ಎಂದು ಅಂದಾಜಿಸಲಾಗಿದೆ. ಇಂದು ಲಾರಿಯನ್ನು ಮೇಲೆಕೆತ್ತುವಲ್ಲಿ ಪ್ರಯತ್ನ ನಡೆಯಲಿದೆ. ಅದಕ್ಕಾಗಿ ದೆಹಲಿಯಿಂದ ತಜ್ಞರ ತಂಡ ಆಗಮಿಸುತ್ತಿದೆ.
ಅರ್ಜುನ್ ಯಾರು? ಹಿನ್ನೆಲೆ ಏನು?
ಅರ್ಜುನ್ ಶಾಲಾ ಶಿಕ್ಷಣ ಮುಗಿಸಿದ ಬಳಿಕ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಡವರು. ಪ್ರಾರಂಭದಲ್ಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಾರೆ. ಬಳಿಕ ಪೇಟಿಂಗ್ ಕೆಲಸಕ್ಕೆ ಹೋಗುತ್ತಿದ್ದರು.
ಕುಟುಂಬ ನಿರ್ವಹಿಸುತ್ತಿದ್ದ ಆರ್ಜುನ್
22ನೇ ವರ್ಷ ವಯಸ್ಸಿರುವಾಗ ಅರ್ಜುನ್ ಕುಟುಂಬ ನಿರ್ವಹಣೆ ಮಾಡಲು ಸಾಕಷ್ಟು ಕಠಿಣ ಕೆಲಸಗಳನ್ನು ಮಾಡುತ್ತಿದ್ದರು. ಬಳಿಕ ಅವರಿಗೆ ವಾಹನಗಳ ಮೇಲೆ ವಿಶೇಷವಾದ ಒಲವು ಮೂಡುತ್ತದೆ. ನಂತರ ಹೆವಿ ವೆಹಿಕಲ್ ಲೈಸನ್ಸ್ ಮಾಡಿಸಿಕೊಳ್ಳುತ್ತಾರೆ. ಬಳಿಕ ಲಾರಿ ಚಾಲಕರಾಗಿ ಕೆಲಸಕ್ಕೆ ಸೇರುತ್ತಾರೆ. ಟ್ರಕ್ ಡ್ರೈವರಾಗಿ ಕೆಲಸಕ್ಕೆ ಸೇರಿದಾಗ ಅರ್ಜುನ್ ಕಾಶ್ಮೀರದಿಂದ ದಕ್ಷಿಣದವರೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು.
ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆ.. ಇಂದು ಸ್ಥಳಕ್ಕೆ ಆಗಮಿಸಲಿದ್ದಾರೆ ದೆಹಲಿ ತಜ್ಞರ ತಂಡ
ಶಿರೂರಿನಲ್ಲಿ ಸಿಲುಕಿದ ಅರ್ಜುನ್
2 ವರ್ಷಗಳ ಹಿಂದೆ ಅರ್ಜುನ್ ಕೇರಳದಿಂದ ವಿವಿಧ ಸ್ಥಳಗಳಿಗೆ ಟಿಂಬರ್ ಸಾಗಿಸುವ ಕೆಲಸಕ್ಕೆ ಚಾಲಕನಾಗಿ ಸೇರುತ್ತಾರೆ. ಬಳಿಕ ಅದೇ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಜುಲೈ 16ರಂದು ಸಾಗರ್ ಕೋಯಾ ಟಿಂಬರ್ಸ್ ಮಾಲಿಕತ್ವದ ಕೆಎ15 ಎ7427 ನೋಂದಣಿಯ ಭಾರತ್ ಬೆಂಜ್ ಲಾರಿಯನ್ನು ಅರ್ಜುನ್ ಚಲಾಯಿಸಿಕೊಂಡು ಶಿರೂರು ಕಡೆಗೆ ಬಂದಿದ್ದಾರೆ. ಆದರೆ ಈ ವೇಳೆ ಅಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದಿದೆ.
ಕುಟುಂಬದ ಆಧಾರಸ್ತಂಭ
ಆದರೀಗ 30 ವರ್ಷದ ನಾಪತ್ತೆಯಾದ ಅರ್ಜುನ್ಗಾಗಿ ಹುಡುಕಾಟ ನಡೆಯುತ್ತಿದೆ. ಇನ್ನು ಅರ್ಜುನ್ ತಂದೆ ಬಾವಿ ತೋಡುವ ಕೆಲಸ ಮಾಡುತ್ತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆ ಬಳಿಕ ಅರ್ಜುನ್ ಕುಟುಂಬದ ಆಧಾರಸ್ತಂಭವಾದರು. ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು.
ಇದನ್ನೂ ಓದಿ: ಮಕ್ಕಳೇ.. ಈ ಜಿಲ್ಲೆಯ ಶಾಲಾ-ಕಾಲೇಜಿಗಳಿಗೆ ಇಂದು ಮತ್ತು ನಾಳೆ ರಜೆ!
ತಾಯಿ ಮತ್ತು ಹೆಂಡತಿಯನ್ನು ಹೆಚ್ಚು ಪ್ರೀತಿಸುವ ಅರ್ಜುನ್ ದಿನಕ್ಕೆ ಐದಾರು ಬಾರಿ ಕರೆ ಮಾಡುತ್ತಿದ್ದರಂತೆ. ಆದರೀಗ ಅರ್ಜುನ್ ನಾಪತ್ತೆಯಾದ ಬಳಿಕದಿಂದ ಕುಟುಂಬ ಕಣ್ಣೀರಿನಲ್ಲಿ ಕುಳಿತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಕೇರಳದ ಅರ್ಜುನ್
ದಡದಿಂದ 40 ಮೀಟರ್ ದೂರದಲ್ಲಿರುವ ನದಿಯಲ್ಲಿ ಅರ್ಜುನ್ ಲಾರಿ ಪತ್ತೆ
22ನೇ ವಯಸ್ಸಿನಲ್ಲೇ ಕುಟುಂಬ ನಿರ್ವಹಣೆಗಾಗಿ ಕಠಿಣ ಕೆಲಸಕ್ಕಿಳಿದಿದ್ದ ಅರ್ಜುನ್
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಇಂದಿಗೆ 10 ದಿನ ಕಳೆದರೂ ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅರ್ಜುನ್ ಚಲಾಯಿಸುತ್ತಿದ್ದ ಲಾರಿ ದಡದಿಂದ 40 ಮೀಟರ್ ದೂರದಲ್ಲಿರುವ ನದಿಯಲ್ಲಿ ಇರುವುದು ಪತ್ತೆಯಾಗಿದೆ. ಮಾಹಿತಿ ಪ್ರಕಾರ 15 ಮೀಟರ್ ಅಳದಲ್ಲಿ ಲಾರಿ ಇದೆ ಎಂದು ಅಂದಾಜಿಸಲಾಗಿದೆ. ಇಂದು ಲಾರಿಯನ್ನು ಮೇಲೆಕೆತ್ತುವಲ್ಲಿ ಪ್ರಯತ್ನ ನಡೆಯಲಿದೆ. ಅದಕ್ಕಾಗಿ ದೆಹಲಿಯಿಂದ ತಜ್ಞರ ತಂಡ ಆಗಮಿಸುತ್ತಿದೆ.
ಅರ್ಜುನ್ ಯಾರು? ಹಿನ್ನೆಲೆ ಏನು?
ಅರ್ಜುನ್ ಶಾಲಾ ಶಿಕ್ಷಣ ಮುಗಿಸಿದ ಬಳಿಕ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಡವರು. ಪ್ರಾರಂಭದಲ್ಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಾರೆ. ಬಳಿಕ ಪೇಟಿಂಗ್ ಕೆಲಸಕ್ಕೆ ಹೋಗುತ್ತಿದ್ದರು.
ಕುಟುಂಬ ನಿರ್ವಹಿಸುತ್ತಿದ್ದ ಆರ್ಜುನ್
22ನೇ ವರ್ಷ ವಯಸ್ಸಿರುವಾಗ ಅರ್ಜುನ್ ಕುಟುಂಬ ನಿರ್ವಹಣೆ ಮಾಡಲು ಸಾಕಷ್ಟು ಕಠಿಣ ಕೆಲಸಗಳನ್ನು ಮಾಡುತ್ತಿದ್ದರು. ಬಳಿಕ ಅವರಿಗೆ ವಾಹನಗಳ ಮೇಲೆ ವಿಶೇಷವಾದ ಒಲವು ಮೂಡುತ್ತದೆ. ನಂತರ ಹೆವಿ ವೆಹಿಕಲ್ ಲೈಸನ್ಸ್ ಮಾಡಿಸಿಕೊಳ್ಳುತ್ತಾರೆ. ಬಳಿಕ ಲಾರಿ ಚಾಲಕರಾಗಿ ಕೆಲಸಕ್ಕೆ ಸೇರುತ್ತಾರೆ. ಟ್ರಕ್ ಡ್ರೈವರಾಗಿ ಕೆಲಸಕ್ಕೆ ಸೇರಿದಾಗ ಅರ್ಜುನ್ ಕಾಶ್ಮೀರದಿಂದ ದಕ್ಷಿಣದವರೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು.
ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆ.. ಇಂದು ಸ್ಥಳಕ್ಕೆ ಆಗಮಿಸಲಿದ್ದಾರೆ ದೆಹಲಿ ತಜ್ಞರ ತಂಡ
ಶಿರೂರಿನಲ್ಲಿ ಸಿಲುಕಿದ ಅರ್ಜುನ್
2 ವರ್ಷಗಳ ಹಿಂದೆ ಅರ್ಜುನ್ ಕೇರಳದಿಂದ ವಿವಿಧ ಸ್ಥಳಗಳಿಗೆ ಟಿಂಬರ್ ಸಾಗಿಸುವ ಕೆಲಸಕ್ಕೆ ಚಾಲಕನಾಗಿ ಸೇರುತ್ತಾರೆ. ಬಳಿಕ ಅದೇ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಜುಲೈ 16ರಂದು ಸಾಗರ್ ಕೋಯಾ ಟಿಂಬರ್ಸ್ ಮಾಲಿಕತ್ವದ ಕೆಎ15 ಎ7427 ನೋಂದಣಿಯ ಭಾರತ್ ಬೆಂಜ್ ಲಾರಿಯನ್ನು ಅರ್ಜುನ್ ಚಲಾಯಿಸಿಕೊಂಡು ಶಿರೂರು ಕಡೆಗೆ ಬಂದಿದ್ದಾರೆ. ಆದರೆ ಈ ವೇಳೆ ಅಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದಿದೆ.
ಕುಟುಂಬದ ಆಧಾರಸ್ತಂಭ
ಆದರೀಗ 30 ವರ್ಷದ ನಾಪತ್ತೆಯಾದ ಅರ್ಜುನ್ಗಾಗಿ ಹುಡುಕಾಟ ನಡೆಯುತ್ತಿದೆ. ಇನ್ನು ಅರ್ಜುನ್ ತಂದೆ ಬಾವಿ ತೋಡುವ ಕೆಲಸ ಮಾಡುತ್ತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆ ಬಳಿಕ ಅರ್ಜುನ್ ಕುಟುಂಬದ ಆಧಾರಸ್ತಂಭವಾದರು. ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು.
ಇದನ್ನೂ ಓದಿ: ಮಕ್ಕಳೇ.. ಈ ಜಿಲ್ಲೆಯ ಶಾಲಾ-ಕಾಲೇಜಿಗಳಿಗೆ ಇಂದು ಮತ್ತು ನಾಳೆ ರಜೆ!
ತಾಯಿ ಮತ್ತು ಹೆಂಡತಿಯನ್ನು ಹೆಚ್ಚು ಪ್ರೀತಿಸುವ ಅರ್ಜುನ್ ದಿನಕ್ಕೆ ಐದಾರು ಬಾರಿ ಕರೆ ಮಾಡುತ್ತಿದ್ದರಂತೆ. ಆದರೀಗ ಅರ್ಜುನ್ ನಾಪತ್ತೆಯಾದ ಬಳಿಕದಿಂದ ಕುಟುಂಬ ಕಣ್ಣೀರಿನಲ್ಲಿ ಕುಳಿತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ