/newsfirstlive-kannada/media/post_attachments/wp-content/uploads/2025/02/Shivarajkumar-In-Zee-Kannada-3.jpg)
ಶಿವರಾಜ್ ಕುಮಾರ್ ಅವರನ್ನ ಸರಳತೆಯ ಕಿಂಗ್ ಅಂದ್ರು ತಪ್ಪಲ್ಲ. ಎನರ್ಜಿ ಬೂಸ್ಟರ್, ಮುಗ್ಧ ಮನಸ್ಸಿನ ಒಡೆಯ ಶಿವಣ್ಣ. ಅಭಿಮಾನಿಗಳ ಕೈಗೆ ಸುಲಭವಾಗಿ ಸಿಗೋ ಸ್ಟಾರ್ ಅಂದ್ರೆ ಶಿವಣ್ಣ. ಇವ್ರ ಬಗ್ಗೆ ಎಷ್ಟು ಮಾತ್ನಾಡಿದ್ರು ಕಮ್ಮಿನೇ. ಅನಾರೋಗ್ಯದ ನಡುವೆಯೂ ಸರಿಗಮಪ ವೇದಿಕೆಗೆ ಶಿವಣ್ಣ ದಂಪತಿ ಸಮೇತ ಬಂದಿದ್ದಾರೆ. ಇದರ ಹಿಂದೆ ಒಂದು ಉದ್ದೇಶ ಕೂಡ ಇತ್ತು.
ಪ್ರೀತಿ ಅಭಿಮಾನಕ್ಕೆ ತಲೆಬಾಗೋ ವ್ಯಕ್ತಿತ್ವ ಶಿವಣ್ಣನದು. ಇದಕ್ಕೆ ತಾಜಾ ಉದಾಹರಣೆ ಅನಾರೋಗ್ಯದ ನಡುವೆಯೂ ಸರಿಗಮಪ ವೇದಿಕೆಗೆ ಬಂದಿದ್ದು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಿವಣ್ಣ ಇತ್ತೀಚಿಗಷ್ಟೇ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಅವರ ಆರೋಗ್ಯಕ್ಕೆ ಸಹಸ್ರಾರು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಎಲ್ಲರ ಹಾರೈಕೆಯಿಂದ ಶಿವಣ್ಣ ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣ ಸ್ನೇಹಿತರು, ಬಂಧು ಬಾಂಧವರನ್ನ ಭೇಟಿಯಾಗಿದ್ದಾರೆ. ರಾಜ್ಯದ ವಿವಿಧೆಡೆ ಪ್ರವಾಸ ಕೂಡ ಮಾಡುತ್ತಿದ್ದಾರೆ. ಅದಕ್ಕೆ ಹೇಳೋದು ಇವರ ಎನರ್ಜಿಗೆ ಇವರೇ ಸರಿಸಾಟಿ ಅಂತ.
ಇದರ ಮಧ್ಯೆ ಶಿವಣ್ಣ ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಗೆ ಸರ್ಪ್ರೈಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದ್ಯಾವುದೂ ಮೊದಲೇ ಪ್ಲ್ಯಾನ್ ಮಾಡಿದಲ್ಲ. ಜನವರಿ 25ನೇ ತಾರೀಖು ನಿರೂಪಕಿ ಅನುಶ್ರೀ ಅವರ ಬರ್ತ್ ಡೇ ಇತ್ತು.
ಇದನ್ನೂ ಓದಿ: ಶಿವಣ್ಣನಿಗೆ ಒಂದೇ ಸಲ 6 ಆಪರೇಷನ್, 190 ಹೊಲಿಗೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಮಧು ಬಂಗಾರಪ್ಪ!
ಪ್ರತಿ ವರ್ಷದ ವಾಡಿಕೆಯಂತೆ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ಸ್ಪೆಷಲ್ ಗಿಫ್ಟ್, ಸರ್ಪ್ರೈಸ್ಗಳನ್ನ ಚಾನೆಲ್ ನೀಡುತ್ತಾ ಬಂದಿದೆ. ಈ ವರ್ಷ ಕೂಡ ಶಿವಣ್ಣ ಅವರಿಗೆ ಬರ್ತ್ ಡೇ ವಿಶ್ಗಾಗಿ ವಿಡಿಯೋ ಕಾಲ್ ಮಾಡಲು ಚಾನೆಲ್ ಕೇಳಿತ್ತಂತೆ. ಇದಕ್ಕೆ ಶಿವಣ್ಣ ವಿಡಿಯೋ ಕಾಲ್ ಯಾಕೆ? ನಾನೇ ಬರ್ತಿನಿ ಅಂತ. ಕಾರ್ಯಕ್ರಮದ ಮಧ್ಯದಲ್ಲೇ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿರೋ ಯಾರಿಗೂ ಶಿವಣ್ಣ ಬರೋದು ಗೊತ್ತಿರಲಿಲ್ಲ.
ಎಂತಹ ಅದ್ಭುತ ಸುಮಧುರ ಘಳಿಗೆ ಇದು. ಒಬ್ಬ ಸ್ಟಾರ್ ನಟನ ಸರಳತೆ ಅಂದ್ರೆ ಅದಕ್ಕೆ ಅಭಿಮಾನಿಗಳು ಶಿವಣ್ಣನಿಗೆ ಸರಳತೆಯ ಸಾಮ್ರಾಟ ಅನ್ನೋದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ