ರಿಷಭ್​ ಪಂತ್​ಗೆ ಕೊಕ್? ಈ ಎರಡು ತಂಡದ ನಾಯಕನ ಸ್ಥಾನಕ್ಕೆ ಕುತ್ತು; ಡಬಲ್ ಶಾಕಿಂಗ್ ನ್ಯೂಸ್‌!

author-image
admin
Updated On
ಪಂತ್​​ಗೆ ಮತ್ತೊಂದು ಅಗ್ನಿ ಪರೀಕ್ಷೆ.. ಪ್ರಸಿದ್ಧ್ ಮೇಲೆ ಭಾರೀ ನಿರೀಕ್ಷೆ..!
Advertisment
  • ಲಕ್ನೋ ನಾಯಕತ್ವದಿಂದ ರಿಷಭ್​ ಪಂತ್​ಗೆ ಕೊಕ್​..?
  • ಆರೆಂಜ್ ಆರ್ಮಿಯಲ್ಲಿ ನಡೀತಿದೆ ಭವಿಷ್ಯದ ಪ್ಲಾನ್!
  • ಪ್ಯಾಟ್ ಕಮಿನ್ಸ್​ಗೆ ಕೊನೆ ಐಪಿಎಲ್ ಕ್ಯಾಪ್ಟನ್ಸಿ ಆಗುತ್ತಾ?

ದಿನೇ ದಿನೇ ಐಪಿಎಲ್ ರಂಗೇರುತ್ತಿದೆ. ಟ್ವಿಸ್ಟ್​ ಆ್ಯಂಡ್ ಟರ್ನ್ಸ್​ ಜೊತೆಗೆ ರೋಚಕ ಪಂದ್ಯಗಳ ಹಬ್ಬದೂಟವೇ ಫ್ಯಾನ್ಸ್​ಗೆ ಸಿಗುತ್ತಿದೆ. ಈ ನಡುವೆ ಈ ಎರಡು ತಂಡಗಳ ನಾಯಕರ ಬದಲಾವಣೆಯ ಸುದ್ದಿ ಸಖತ್ ಸೌಂಡ್ ಮಾಡ್ತಿದೆ.
ಐಪಿಎಲ್ ಶುರುವಾಗಿ ಎರಡು ವಾರಗಳಷ್ಟೇ ಕಳೆದಿವೆ. ಒಂದಕ್ಕಿಂತ ಒಂದು ಮೆಗಾ ಬ್ಯಾಟಲ್​ ಐಪಿಎಲ್​ನಲ್ಲಿ ನಡೀತಿದೆ. ಬಲಿಷ್ಠ ಹಾಗೂ ಚಾಂಪಿಯನ್ ಟೀಮ್ಸ್​ಗಳು ಮಕಾಡೆ ಮಲಗ್ತಿದ್ರೆ ಟೂರ್ನಿಯಲ್ಲಿ ಟ್ರೋಫಿಯನ್ನೇ ಗೆಲ್ಲದ ಟೀಮ್ಸ್​, ಸಾಲಿಡ್ ಆಟವನ್ನಾಡ್ತಿವೆ. ಆದ್ರೆ, ರೋಚಕ ಪಂದ್ಯಗಳ ಆಟದ ನಡುವೆಯೇ ಕೆಲ ತಂಡಗಳಲ್ಲಿ ನಾಯಕತ್ವದ ಬದಲಾವಣೆಯ ಕೂಗು ಕೇಳಿ ಬರುತ್ತಿದೆ. ಈ ಪೈಕಿ ಒಂದು ಲಕ್ನೋ ಸೂಪರ್ ಜೈಂಟ್ಸ್​.

ಇದನ್ನೂ ಓದಿ: ಮ್ಯಾಚ್​ ಸೋಲು, ರಿಷಭ್ ಪಂತ್ ಹಿಂದೆ ಬಿದ್ದ ಓನರ್ ಸಂಜೀವ್ ಗೋಯೆಂಕಾ.. ಮೈದಾನದಲ್ಲೇ ಫುಲ್ ಕ್ಲಾಸ್? 

ಲಕ್ನೋ ನಾಯಕತ್ವದಿಂದ ರಿಷಭ್​ ಪಂತ್​ಗೆ ಕೊಕ್​..?
ಕಳಪೆ ಆಟ.. ಬದಲಾವಣೆ ಬಗ್ಗೆ ನಡೀತಿದೆ ಚರ್ಚೆ..!
ರಿಷಭ್ ಪಂತ್.. ಐಪಿಎಲ್​ನ 27 ಕೋಟಿ ಒಡೆಯ. ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ. ಈ ಸೀಸನ್​ನಲ್ಲಿ ಪಂತ್​, ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು ಜಸ್ಟ್​ ನಾಲ್ಕೇ ನಾಲ್ಕು ಪಂದ್ಯ. ಆದ್ರೆ, ನಾಲ್ಕು ಪಂದ್ಯಗಳ ಬೆನ್ನಲ್ಲೇ ಪಂತ್ ಪಟ್ಟಾಭಿಷೇಕದಿಂದ ಕೆಳಗಿಳಿಸುವ ಚಿಂತನ, ಮಂಥನಗಳು ನಡೀತಿವೆ. ಇದಕ್ಕೆ ಕಾರಣ ಪಂತ್ ಕ್ಯಾಪ್ಟನ್ಸಿಯ ಜೊತೆ ಕಳಪೆ ಆಟ.

ನಾಯಕನಾಗಿ ರಿಷಭ್ ಪಂತ್, 4 ಪಂದ್ಯಗಳ ಪೈಕಿ ಎರಡನ್ನ ಗೆದ್ದಿದ್ದಾರೆ. ಆದ್ರೆ, ಕ್ಯಾಪ್ಟನ್ಸಿಯಲ್ಲಿ ಇಂಪ್ರೆಸ್ಸಿಂಗ್ ಮಾಡಿದ್ದು ಅಷ್ಟಕ್ಕಷ್ಟೇ. ಇದಿಷ್ಟೇ ಅಲ್ಲ. ಕಳೆದ 4 ಪಂದ್ಯಗಳಿಂದ ಪಂತ್, ಆಟವೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಹೆಜ್ಜೆ ಹಾಕ್ತಿರುವ ಪಂತ್, ಕಳೆದ 4 ಪಂದ್ಯಗಳಿಂದ ಗಳಸಿದ ರನ್ ಜಸ್ಟ್​ 19. ಆದ್ರೀಗ ಇದೇ ಲಕ್ನೋ ಸೂಪರ್ ಜೈಂಟ್ಸ್​ ಮ್ಯಾನೇಜ್​ಮೆಂಟ್​ಗೆ ಹೊಸ ತಲೆನೋವಾಗಿದೆ. ಹೀಗಾಗಿ ಪಂತ್​​​ಗೆ ಕೊಕ್ ನೀಡಿ ಹೊಸ ನಾಯಕನ ನೇಮಿಸುವ ಬಗ್ಗೆ ಗುಸುಗುಸು ನಡೀತಿದೆ.

publive-image

ನಿಕೋಲಸ್ ಪೂರನ್​ಗೆ ಪಟ್ಟ ಕಟ್ಟಲು ಚಿಂತನೆ..!?
ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ತೀವ್ರ ತಲೆಕೆಡಿಸಿಕೊಂಡಿರುವ ಲಕ್ನೋ, ಕರಿಬಿಯನ್ ದೈತ್ಯ ನಿಕೋಲಸ್ ಪೂರನ್​ಗೆ ಪಟ್ಟ ಕಟ್ಟಲು ಉತ್ಸುಕವಾಗಿದೆ. ಯಾಕಂದ್ರೆ, ಇತರೆ ಲೀಗ್​ಗಳಲ್ಲಿ ನಾಯಕತ್ವದ ಜೊತೆಗೆ ಬ್ಯಾಟಿಂಗ್​ನಲ್ಲಿ ಕಮಾಲ್ ಮಾಡಿರುವ ನಿಕೋಲಸ್ ಪೂರನ್, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಿದೆ. ಹೀಗಾಗಿ ಪಂತ್​ ಬದಲಿಗೆ ನಿಕೋಲಸ್ ಪೂರನ್​ಗೆ ಪಟ್ಟ ಕಟ್ಟುವುದು ಒಳಿತು ಅನ್ನೋದು ಮ್ಯಾನೇಜ್​ಮೆಂಟ್ ಲೆಕ್ಕಾಚಾರ. ಆದ್ರೆ, ಈ ಸೀಸನ್​​ನಲ್ಲೇ ಕಟ್ತಾರಾ ಅನ್ನೋದೇ ಪ್ರಶ್ನೆ.

publive-image

ಆರೆಂಜ್ ಆರ್ಮಿಯಲ್ಲಿ ನಡೀತಿದೆ ಭವಿಷ್ಯದ ಪ್ಲಾನ್..!
ಪ್ಯಾಟ್ ಕಮಿನ್ಸ್​ ಬದಲಿಗೆ ನಿತಿಶ್ ರೆಡ್ಡಿಗೆ ಪಟ್ಟ..?
ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲೂ ನಾಯಕತ್ವದ ಬದಲಾವಣೆ ಚರ್ಚೆ ಜೋರಾಗಿದೆ. ಚಾಂಪಿಯನ್ ಕ್ಯಾಪ್ಟನ್​ ಪ್ಯಾಟ್​ ಕಮಿನ್ಸ್​ ಬದಲಿ ನಾಯಕ ಹುಡುಕಾಟಕ್ಕೆ ಮ್ಯಾನೇಜ್​ಮೆಂಟ್, ಈಗಾಗಲೇ ಕೈ ಹಾಕಿದೆ. ಆದ್ರೆ, ಪ್ರಸಕ್ತ ಸೀಸನ್​ನಲ್ಲಿ ಪ್ಯಾಟ್ ಕಮಿನ್ಸ್​ರನ್ನೇ ಮುಂದುವರಿಸುವ ಪ್ಲ್ಯಾನ್​ನಲ್ಲಿರುವ ಸನ್​​ ರೈಸರ್ಸ್, ಭವಿಷ್ಯದ ದೃಷ್ಟಿಯಿಂದ ಯಂಗ್ ಸ್ಟರ್​ ನಿತಿಶ್ ಕುಮಾರ್​ ರೆಡ್ಡಿಗೆ ಪಟ್ಟ ಕಟ್ಟುವ ಇರಾದೆಯಲ್ಲಿದೆ. ಮುಂದಿನ ಸೀಸನ್​ಗೂ ಮುನ್ನ ಈ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗ್ತಿದೆ. ಆದ್ರೆ, ಇದಕ್ಕೆಲ್ಲಾ ಕಾಲವೇ ಉತ್ತರಿಸಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment