/newsfirstlive-kannada/media/post_attachments/wp-content/uploads/2025/01/SURYA-KUMAR-YADAV.jpg)
ಐಪಿಎಲ್ನ ಕ್ಯಾಪ್ಟನ್ ಫೆಂಟಾಸ್ಟಿಕ್ ಶ್ರೇಯಸ್ ಅಯ್ಯರ್ಗೆ ಶುಭಕಾಲ ಶುರುವಾದಂತಿದೆ. ಟೀಮ್ ಇಂಡಿಯಾಗೆ ಬೇಡವಾಗಿದ್ದ ಶ್ರೇಯಸ್ ಅಯ್ಯರ್ಗೆ ಇದೀಗ ಬಂಪರ್ ಲಾಟರಿ ಹೊಡೆಯೋ ದಿನ ಹತ್ತಿರವಾಗಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ಗೆ ಶಾಕ್ ಕೊಡಲು ಮುಂದಾಗಿರೋ ಬಿಸಿಸಿಐ, ಶ್ರೇಯಸ್ ಅಯ್ಯರ್ ಪಟ್ಟ ಕಟ್ಟೋಕೆ ಸಿದ್ಧವಾಗಿದೆ.
ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಜೋರಾಗಿ ನಡೀತಿದೆ. ಟಿ20 ಫಾರ್ಮೆಟ್ ಬಳಿಕ ಟೆಸ್ಟ್ ಮಾದರಿಗೆ ಸೀನಿಯರ್ಗಳು ಗುಡ್ ಬೈ ಹೇಳಿದ್ದಾಯ್ತು. ಸೀನಿಯರ್ಗಳ ನಿರ್ಗಮನದ ಬಳಿಕ ಹೊಸ ಆಟಗಾರರು ತಂಡಕ್ಕೆ ಎಂಟ್ರಿ ಕೊಟ್ಟಿದ್ದಾಯ್ತು. ನೂತನ ನಾಯಕನ ನೇಮಕವೂ ಆಯ್ತು. ಇದೀಗ ವೈಟ್ಬಾಲ್ ಫಾರ್ಮೆಟ್ನತ್ತ ಬಿಸಿಸಿಐ ಬಾಸ್ಗಳ ಚಿತ್ತ ಹರಿದಿದೆ.
ಇದನ್ನೂ ಓದಿ: ನೀರಿಲ್ಲದೆ ನರಳುವ ಮೊದಲ ನಗರ.. 2030ಕ್ಕೆ ಸಂಪೂರ್ಣ ಒಣಗಿ ಹೋಗುವ ರಾಜಧಾನಿ ಇದೇ!
ವೈಟ್ಬಾಲ್ ಫಾರ್ಮೆಟ್ಗೆ ಶ್ರೇಯಸ್ ಸಾರಥಿ?
ಪಂಜಾಬ್ ಕಿಂಗ್ಸ್ ತಂಡವನ್ನ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಶ್ರೇಯಸ್ ಅಯ್ಯರ್ ಈ ಸೀಸನ್ನಲ್ಲಿ ಮುನ್ನಡೆಸಿದ್ರು. ಶ್ರೇಯಸ್ ಅಯ್ಯರ್ ತಂಡವನ್ನ ಮುನ್ನಡೆಸಿದ ರೀತಿ ದಿಗ್ಗಜರು, ಕ್ರಿಕೆಟ್ ಎಕ್ಸ್ಪರ್ಟ್ಸ್ ಫುಲ್ ಮಾರ್ಕ್ಸ್ ನೀಡಿದ್ದಾರೆ. ಐಪಿಎಲ್ನಲ್ಲಿ, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ನಾಯಕನಾಗಿ ಸಕ್ಸಸ್ ಕಂಡಿರೋ ಕ್ಯಾಪ್ಟನ್ ಫೆಂಟಾಸ್ಟಿಕ್ ಶ್ರೇಯಸ್ ಅಯ್ಯರ್ ಇದೀಗ ಟೀಮ್ ಇಂಡಿಯಾದ ಮುಂದಿನ ನಾಯಕನ ರೇಸ್ಗೆ ರಾಯಲ್ ಎಂಟ್ರಿ ಕೊಟ್ಟಿದ್ದಾರೆ. ಏಕದಿನ, ಟಿ20 ಫಾರ್ಮೆಟ್ನ ನಾಯಕತ್ವ ಶ್ರೇಯಸ್ಗೆ ಒಲಿಯೋ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದು: ಕಾಲ್ತುಳಿತದಲ್ಲಿ RCB ಅಭಿಮಾನಿ ನಿಧನ.. ಮೊಮ್ಮಗನ ಅಗಲಿಕೆ ನೋವಿನಲ್ಲಿದ್ದ ಅಜ್ಜಿಯೂ ಕೊನೆಯುಸಿರು
ಏಕದಿನ ನಾಯಕನ ರೇಸ್ಗೆ ಮುಂಬೈಕರ್ ಎಂಟ್ರಿ
ಟೆಸ್ಟ್, ಟಿ20ಗೆ ಗುಡ್ ಬೈ ಹೇಳಿರುವ ರೋಹಿತ್ ಶರ್ಮಾ ಸದ್ಯ ಏಕದಿನ ಫಾರ್ಮೆಟ್ಗೆ ಮಾತ್ರ ಸೀಮಿತವಾಗಿದ್ದಾರೆ. ಫಾರ್ಮ್ ಸಮಸ್ಯೆ, ಫಿಟ್ನೆಸ್ ಸಮಸ್ಯೆಯನ್ನ ಎದುರಿಸ್ತಾ ಇರೋದ್ರಿಂದ ರೋಹಿತ್ ನಾಯಕನಾಗಿ ಮುಂದುವರೆಯೋದಿರಲಿ, ತಂಡದಲ್ಲಿ ಉಳಿದುಕೊಳ್ಳೋದೆ ಅನುಮಾನವಾಗಿದೆ. 2027ರ ಏಕದಿನ ವಿಶ್ವಕಪ್ವರೆಗೆ ರೋಹಿತ್ ಶರ್ಮಾನೇ ಮೆನ್ ಇನ್ ಬ್ಲೂ ಪಡೆಯ ಸಾರಥಿ ಎಂಬ ಮಾತು ಚಾಲ್ತಿಯಲ್ಲಿದ್ರೂ, ಸದ್ದಿಲ್ಲದೇ ಉತ್ತರಾಧಿಕಾರಿಯ ಹುಡುಕಾಟ ನಡೀತಿದೆ. ಮುಂದಿನ ನಾಯಕನ ಸ್ಥಾನಕ್ಕೆ ಮುಂಬೈಕರ್ ಶ್ರೇಯಸ್ ಅಯ್ಯರ್ ಹೆಸರು ಚರ್ಚೆಯಲ್ಲಿದೆ.
ರೋಹಿತ್ ಬಳಿಕ ಶ್ರೇಯಸ್ ಅಯ್ಯರ್ಗೆ ಚುಕ್ಕಾಣಿ?
ಶ್ರೇಯಸ್ ಅಯ್ಯರ್ ಏಕದಿನ ಫಾರ್ಮೆಟ್ಗೆ ಮಾತ್ರ ಸೀಮಿತವಾಗಿದ್ದಾರೆ. 4ನೇ ಕ್ರಮಾಂಕದಲ್ಲಿ ಕನ್ಸಿಸ್ಟೆಂಟ್ ಆಟದ ಮೂಲಕ ಮಿಂಚಿರೋ ಶ್ರೇಯಸ್, ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ರು. ಬ್ಯಾಟಿಂಗ್ ಜೊತೆ ಜೊತೆಗೆ ಇದೀಗ ನಾಯಕನಾಗಿಯೂ ಶೈನ್ ಆಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವನ್ನ ಈ ಸೀಸನ್ ಐಪಿಎಲ್ನಲ್ಲಿ ಮುನ್ನಡೆಸಿದ ಪರಿ ಶ್ರೇಯಸ್ ಹೆಸರನ್ನ ಮುಂದಿನ ನಾಯಕನ ರೇಸ್ನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದೆ. ಬಿಸಿಸಿಐ, ಸೆಲೆಕ್ಷನ್ ಕಮಿಟಿ, ಟೀಮ್ ಮ್ಯಾನೇಜ್ಮೆಂಟ್ ವಲಯದಲ್ಲೂ ಶ್ರೇಯಸ್ ಪರವಾದ ಅಲೆ ಎದ್ದಿದೆ.
ಸೂರ್ಯಕುಮಾರ್ ಯಾದವ್ಗೆ ಕಾದಿದ್ಯಾ ಶಾಕ್?
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಫೈನಲ್ಗೆ ಕೊಂಡೊಯ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಹೊಂದಿರೋ ಶ್ರೇಯಸ್ ಅಯ್ಯರ್, 2024ರಲ್ಲಿ ಕೆಕೆಆರ್ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಈ ಸೀಸನ್ನಲ್ಲಿ ಪಂಜಾಬ್ನ ಫೈನಲ್ವರೆಗೆ ಮುನ್ನಡೆಸಿ ಶ್ರೇಯಸ್, ಟಿ20 ಕ್ರಿಕೆಟ್ನ ಬೆಸ್ಟ್ ಕ್ಯಾಪ್ಟನ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಶ್ರೇಯಸ್ ಶೈನಿಂಗ್ ಪರ್ಫಾಮೆನ್ಸ್, ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಸ್ಥಾನಕ್ಕೂ ಕುತ್ತು ತಂದಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಒಂಟಿ ಕಾಲು ಪತ್ತೆ ಕೇಸ್ನ ರಹಸ್ಯ ಬಯಲು.. ಥ್ರಿಲ್ಲಿಂಗ್ ಕ್ರೈಂ ಇನ್ವೆಸ್ಟಿಗೇಷನ್ ಸ್ಟೋರಿ..
ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಟಿ20 ಫಾರ್ಮೆಟ್ನಲ್ಲಿ ನಾಯಕನಾದ ಬಳಿಕ ಹಳೇ ಖದರ್ ಕಳೆದುಕೊಂಡಿದ್ದಾರೆ. ನಾಯಕನಾಗಿ ಶೈನ್ ಆದ್ರೂ ಬ್ಯಾಟ್ಸ್ಮನ್ ಆಗಿ ಸತತ ವೈಫಲ್ಯ ಅನುಭವಿಸಿದ್ದಾರೆ. ಟಿ20 ಮಾದರಿಯಲ್ಲಿ 44 ರಷ್ಟಿದ್ದ ಸೂರ್ಯಕುಮಾರ್ ಯಾದವ್ ರನ್ಗಳಿಕೆಯ ಸರಾಸರಿ, ಸಾರಥ್ಯ ವಹಿಸಿಕೊಂಡ ಮೇಲೆ 27ಕ್ಕೆ ಕುಸಿದಿದೆ. ಸೂರ್ಯನ ವೈಫಲ್ಯ ಇದೀಗ ಶ್ರೇಯಸ್ಗೆ ನಾಯಕತ್ವದ ಸಿಂಹಾಸದತ್ತ ದಾರಿ ಮಾಡಿಕೊಟ್ಟಿದೆ. 2026ರಲ್ಲಿ ಟಿ20 ವಿಶ್ವಕಪ್ ಬೇರೆ ಇರೋದ್ರಿಂದ ನಾಯಕನ ಬದಲಾವಣೆಯ ಬಗ್ಗೆ ಬಿಸಿಸಿಐ ಚಿಂತಿಸಿದೆ.
ಫೀಲ್ಡ್ನಲ್ಲಿ ಕೂಲ್ ಮತ್ತು ಕಾಮ್ ಆಗಿ ಕಾಣಿಸಿಕೊಳ್ಳೋ ಶ್ರೇಯಸ್ ಅಯ್ಯರ್ ನೆವರ್ ಡೈ ಆ್ಯಟಿಟ್ಯೂಡ್ನಿಂದಲೇ ನಾಯಕನಾಗಿ ಗಮನ ಸೆಳೆದಿದ್ದಾರೆ. ಶ್ರೇಯಸ್ ಬಾರ್ನ್ ಲೀಡರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಒಬ್ಬ ನಾಯಕನಿಗೆ ಇರೋ ಎಲ್ಲಾ ಕ್ವಾಲಿಟಿಗಳು, ಶ್ರೇಯಸ್ ಅಯ್ಯರ್ರಲ್ಲಿದೆ. ಟೀಮ್ ಇಂಡಿಯಾದ ವೈಟ್ಬಾಲ್ ಕ್ಯಾಪ್ಟನ್ ಆಗೋ ಎಲ್ಲಾ ಸಾಮರ್ಥ್ಯ ಹಾಗೂ ಸ್ಕಿಲ್ ಕೂಡ ಇರೋದ್ರಿಂದ ಶ್ರೇಯಸ್ ಮೆನ್ ಇನ್ ಬ್ಲ್ಯೂ ಪಡೆಯ ಮುಂದಿನ ಸಾರಥಿಯಾದ್ರೆ ಅಚ್ಚರಿಪಡುವಂತದ್ದು ಏನೂ ಇಲ್ಲ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರಕ್ಕೆ ಪರಿಶೀಲನೆ -ಸಿದ್ದರಾಮಯ್ಯರಿಂದ ಮಹತ್ವದ ಹೇಳಿಕೆ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ