/newsfirstlive-kannada/media/post_attachments/wp-content/uploads/2025/02/Shreyanka_Patil_MANDHANA.jpg)
ಡಬ್ಲುಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಗುಜರಾತ್ ವಿರುದ್ಧ ರೋಚಕ ಗೆಲುವು ಪಡೆದಿದೆ. ಇಡೀ ಮಹಿಳಾ ಐಪಿಎಲ್ನಲ್ಲೇ ಅತ್ಯಧಿಕ ರನ್ ಚೇಸ್ ಮಾಡುವ ಮೂಲಕ ಆರ್ಸಿಬಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆದರೆ ಇಂತಹ ಮನಮೋಹಕ ತಂಡದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಏಕೆ ಇರಲಿಲ್ಲ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಇದರ ಬೆನ್ನಲ್ಲೇ ಶ್ರೇಯಾಂಕ ಇನ್ಸ್ಟಾದಲ್ಲಿ ಪೋಸ್ಟ್ವೊಂದನ್ನ ಶೇರ್ ಮಾಡಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಸದ್ಯ ಶ್ರೇಯಾಂಕ ಪಾಟೀಲ್ ಹೊರಗುಳಿದಿದ್ದಾರೆ. ಅತ್ಯುತ್ತಮ ಸ್ಪಿನ್ ಬೌಲಿಂಗ್ ಮಾಡುವ ಶ್ರೇಯಾಂಕ, ವಿಕೆಟ್ ಕಬಳಿಸುವುದರಲ್ಲಿ ಮುಂದೆ ಇರುತ್ತಾರೆ. ಸ್ಪಿನ್ ಜೊತೆ ಜೊತೆಗೆ ಬ್ಯಾಟಿಂಗ್ನಲ್ಲೂ ತಂಡಕ್ಕೆ ನೆರವಾಗುತ್ತಾರೆ. ಆದರೆ ಈ ಬಾರಿ ಡಬ್ಲುಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ ಇರಲಿಲ್ಲ. ಇವರ ಬದಲಿಗೆ ಆಟಗಾರ್ತಿ ಸ್ನೇಹಾ ರಾಣಾಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ಇದನ್ನೂ ಓದಿ:‘ಈ ತರಹದ ಮದುವೆ ಎಕ್ಸ್ಪೆಕ್ಟ್ ಮಾಡಿರಲಿಲ್ಲ’ -ಧನಂಜಯ ಮದುವೆ ಕುರಿತು ಅಕ್ಕನ ಮಾತುಗಳು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಗುಳಿದಿರುವ ಕುರಿತು ಶ್ರೇಯಾಂಕ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು, ಈಗ ಎದೆಗುಂದಿರಬಹುದು, ಆದರೆ ನಾನು ಮತ್ತೆ ಹಾರಾಬಲ್ಲೇನು (Heartbroken, but I will fly again). ಅಂದರೆ ತಂಡದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತೇನೆ ಎಂದು ಟ್ಯಾಗ್ಲೈನ್ ಬರೆದುಕೊಂಡಿದ್ದಾರೆ. ಈ ಟ್ಯಾಗ್ ಲೈನ್ಗೆ ತಕ್ಕಂತೆ ಕೆರೆಯ ದಡದ ಮೇಲಿನ ಮರಕ್ಕೆ ಕಟ್ಟಿರುವ ಉಯ್ಯಾಲೆಯಲ್ಲಿ ಆಡುತ್ತಿದ್ದಾರೆ. ಸದ್ಯ ಈ ಪೋಟೋ ಸಖತ್ ವೈರಲ್ ಆಗುತ್ತಿದೆ.
ವಡೋದರಾದ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ತಂಡ 201 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟ್ ಬೀಸಿದ ಬೆಂಗಳೂರು ಹುಡುಗಿಯರು, ಗುಜರಾತ್ ಬೌಲರ್ಗಳನ್ನ ಮನ ಬಂದಂತೆ ಚಚ್ಚಿ 202 ರನ್ ಗಳಿಸುವ ಮೂಲಕ ಅಮೋಘವಾದ ಗೆಲುವು ಪಡೆದರು. ಈ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಹಾಗೂ ರಿಚಾ ಘೋಷ್ ಅತ್ಯದ್ಭುತವಾದ ಬ್ಯಾಟಿಂಗ್ ಮಾಡಿ ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ