1 ವರ್ಷ, 5 ಟೂರ್ನಿ, 5 ಟ್ರೋಫಿ; ಶ್ರೇಯಸ್ ಅಯ್ಯರ್ ಮುಟ್ಟಿದ್ದೆಲ್ಲಾ ಚಿನ್ನ.. ತಂಡದಲ್ಲಿದ್ರೆ ಕಪ್ ಪಕ್ಕನಾ?

author-image
Bheemappa
Updated On
1 ವರ್ಷ, 5 ಟೂರ್ನಿ, 5 ಟ್ರೋಫಿ; ಶ್ರೇಯಸ್ ಅಯ್ಯರ್ ಮುಟ್ಟಿದ್ದೆಲ್ಲಾ ಚಿನ್ನ.. ತಂಡದಲ್ಲಿದ್ರೆ ಕಪ್ ಪಕ್ಕನಾ?
Advertisment
  • ಭಾರತ ತಂಡದಿಂದ ಡ್ರಾಪ್​ ಆಗಿದ್ದ ಅಯ್ಯರ್ ಕಮ್​ಬ್ಯಾಕ್​ ಮಾಡಿದ್ದೇಗೆ?
  • 12 ತಿಂಗಳಲ್ಲಿ ಅಯ್ಯರ್ ಗೆದ್ದಂಥ ಟ್ರೋಫಿಗಳು ಯಾವ್ಯಾವು, ಅವು ಇಲ್ಲಿವೆ
  • ಈ ಹಿಂದೆ ಶ್ರೇಯಸ್ ಅಯ್ಯರ್​ BCCI ಕಾಂಟ್ರ್ಯಾಕ್ಟ್​ನಿಂದ ಹೊರಗಿಟ್ಟಿದ್ದೇಕೆ?

ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಈ ಚಾಂಪಿಯನ್​​ ಜರ್ನಿಯಲ್ಲಿ ಮುಂಬೈಕರ್​ ಶ್ರೇಯಸ್​ ಅಯ್ಯರ್​ ಶ್ರಮ ಅಪಾರ. ಇಡೀ ಟೂರ್ನಿಯಲ್ಲಿ ಕನ್ಸಿಸ್ಟೆಂಟ್​​ ಪರ್ಫಾಮೆನ್ಸ್​ನಿಂದ ಮಿಂಚಿದ ಶ್ರೇಯಸ್​​ ಅಯ್ಯರ್​ ಈಗ ಟೀಮ್​ ಇಂಡಿಯಾದ ಹೀರೋ. ಆದ್ರೆ, ಒಂದು ವರ್ಷದ ಹಿಂದೆ ಈತ ಬಿಸಿಸಿಐ ಪಾಲಿಗೆ ವಿಲನ್​ ಆಗಿದ್ದ. ಈ ವಿಲನ್​​ ಟು ಹೀರೋ ಜರ್ನಿಯಲ್ಲಿ 5 ಟ್ರೋಫಿಗಳ ಇಂಟರೆಸ್ಟಿಂಗ್​ ಕತೆಯಿದೆ.

2023ರ ಏಕದಿನ ವಿಶ್ವಕಪ್​ ಟೂರ್ನಿ. ಟೀಮ್​ ಇಂಡಿಯಾ ಭರ್ಜರಿ ಪರ್ಫಾಮೆನ್ಸ್​ ನೀಡಿ ಅಜೇಯವಾಗಿ ಫೈನಲ್​ಗೆ ಬಂದಿತ್ತು. ದುರಾದೃಷ್ಟವಶಾತ್​ ಫೈನಲ್​ ಸೋಲುಂಡಿತ್ತು. ಟೀಮ್​ ಇಂಡಿಯಾ ಆಡಿದ ಆಟ ಕ್ರಿಕೆಟ್​ ಪ್ರೇಮಿಗಳ ಮನ ಗೆದ್ದಿತ್ತು. ಅದರಲ್ಲೂ ಮುಂಬೈಕರ್​ ಶ್ರೇಯಸ್​​ ಅಯ್ಯರ್​ ನೀಡಿದ್ದ ಪರ್ಫಾಮೆನ್ಸ್​​ಗೆ ಕ್ರಿಕೆಟ್​ ಪಂಡಿತರು, ಫ್ಯಾನ್ಸ್​ ಎಲ್ಲಾ ಸಲಾಂ ಅಂದಿದ್ದರು. ಆದ್ರೆ, ಈ ವಿಶ್ವಕಪ್​​ ಮುಗಿದ ಬೆನ್ನಲ್ಲೇ ಹೀರೋ ಆಗಿದ್ದ ಶ್ರೇಯಸ್​ ವಿಲನ್​ ಆಗಿದ್ದರು.

publive-image

ವಿಶ್ವಕಪ್​ನಲ್ಲಿ ಸಾಲಿಡ್​ ಆಟವಾಡಿ ಮಿಂಚಿದ ಶ್ರೇಯಸ್​​ ಅಯ್ಯರ್​ ಬಳಿಕ ಕಾಂಟ್ರವರ್ಸಿಯಲ್ಲಿ ತಗಲಾಕಿಕೊಂಡಿದ್ದರು. ಶ್ರೇಯಸ್​​​ ವಿರುದ್ಧ ಗರಂ ಆದ ಬಿಸಿಸಿಐ ಬಾಸ್​ಗಳು ಸೆಂಟ್ರಲ್​ ಕಾಂಟ್ರ್ಯಾಕ್ಟ್​ನಿಂದಲೇ ಕೊಕ್​ ಕೊಟ್ಟಿದ್ದರು. ಟೀಮ್​​ ಇಂಡಿಯಾದಿಂದ ಶ್ರೇಯಸ್​ ಡ್ರಾಪ್​ ಆದ್ರು. ಬೇರೆ ಯಾರೋ ಆದ್ರೆ ಕುಗ್ಗಿ ಹೋಗಿ ಬಿಡುತ್ತಿದ್ದರು. ಆದ್ರೆ, ಶ್ರೇಯಸ್​ ಕರಿಯರ್​ನಲ್ಲಿ ಆಗಿದ್ದೇ ಬೇರೆ. every setback is a setup for a comeback ಅನ್ನೋ ಮೈಂಡ್​​ಸೆಟ್​​ ಯುದ್ಧಕ್ಕಿಳಿದ ಶ್ರೇಯಸ್​​ ಅಯ್ಯರ್​​ ಶ್ರೇಯಸ್ಸು ಏನು ಅನ್ನೋದು ಈಗ ವಿಶ್ವಕ್ಕೆ ಗೊತ್ತಾಗಿದೆ.

1 ವರ್ಷ, 5 ಟೂರ್ನಿ, 5 ಟ್ರೋಫಿ.. ಶ್ರೇಯಸ್​ ಯಶೋಗಾಥೆ.!

ಟೀಮ್​ ಇಂಡಿಯಾ ಡ್ರಾಪ್​ ಆದ ಮೇಲೆ ಶ್ರೇಯಸ್​​ ಅಯ್ಯರ್​ ಅಸಲಿ ಕ್ರಿಕೆಟ್​ ಜೀವನ ಶುರುವಾದಂತಿದೆ. ನ್ಯಾಷನಲ್​ ಟೀಮ್​ನಿಂದ ಡ್ರಾಪ್​​ ಆಗಿ ಡೊಮೆಸ್ಟಿಕ್​ ಅಂಗಳಕ್ಕೆ ಮರಳಿದ ಶ್ರೇಯಸ್​​ ಕಳೆದೊಂದು ವರ್ಷದಲ್ಲಿ ಮಾಡದ ಸಾಧನೆಯೇ ಇಲ್ಲ. ಕಳೆದ ಮಾರ್ಚ್​​ನಿಂದ ಈ ಮಾರ್ಚ್​​ವರೆಗೆ 5 ಟೂರ್ನಿಗಳಲ್ಲಿ ಆಡಿ 5 ಟ್ರೊಫಿ ಗೆದ್ದ ಸಾಧನೆ ಮಾಡಿದ್ದಾರೆ.

ಮಾರ್ಚ್​​​ 14, 2024- ರಣಜಿ ಟ್ರೋಫಿ

ಟೀಮ್​ ಇಂಡಿಯಾದಿಂದ ಡ್ರಾಪ್​ ಆದ ಬಳಿಕ ರಣಜಿ ಅಖಾಡಕ್ಕೆ ಮರಳಿದ ಶ್ರೇಯಸ್​​ ಮುಂಬೈ ತಂಡ ಕೂಡಿಕೊಂಡ್ರು. ರಣಜಿ ಸೀಸನ್​ನಲ್ಲಿ ಸಾಲಿಡ್​ ಬ್ಯಾಟಿಂಗ್​ ನಡೆಸಿ ಶೈನ್​ ಆದ್ರು. ಅದ್ಭುತ ಆಟವಾಡಿದ ಶ್ರೇಯಸ್​​ ಮುಂಬೈ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೇ 26, 2024- ಐಪಿಎಲ್​ ಟ್ರೋಫಿ

ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ನ ನಾಯಕನಾದ ಶ್ರೇಯಸ್​​ ಅಯ್ಯರ್ ಸೀಸನ್​​ 17ರಲ್ಲಿ ಮಿಂಚಿದರು. ಬ್ಯಾಟಿಂಗ್​ನಲ್ಲಿ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿದ ಮುಂಬೈಕರ್​, ನಾಯಕನಾಗಿ ತಂಡವನ್ನ ಸಮರ್ಥವಾಗಿ ಮುನ್ನಡೆಸಿದರು. ಅಂತಿಮವಾಗಿ ಮೇ 26 ರಂದು​​ ಕೆಕೆಆರ್​​ಗೆ ಟ್ರೋಫಿ ಗೆಲ್ಲಿಸಿಕೊಟ್ಟರು.

ಆಕ್ಟೋಬರ್​ 5, 2024- ಇರಾನಿ ಟ್ರೋಫಿ

ಪ್ರತಿಷ್ಠಿತ ಇರಾನಿ ಟ್ರೋಫಿ ಟೂರ್ನಿಯಲ್ಲೂ ಶ್ರೇಯಸ್ ಅಯ್ಯರ್​ ಸಾಲಿಡ್​ ಆಟವಾಡಿದರು. ರೆಸ್ಟ್​​ ಇಂಡಿಯಾ ವಿರುದ್ಧ ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ಶ್ರೇಯಸ್​ ಮುಂಬೈ ಫಸ್ಟ್​ ಇನ್ನಿಂಗ್ಸ್​ ಲೀಡ್​ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಲೀಡ್​ ಆಧಾರದಲ್ಲಿ ಮುಂಬೈ ಟ್ರೋಫಿ ಗೆಲ್ತು. ಅಕ್ಟೋಬರ್​​ 5ರಂದು ಶ್ರೇಯಸ್​​ 3ನೇ ಪ್ರತಿಷ್ಠಿತ ಟ್ರೋಫಿಗೆ ಮುತ್ತಿಕ್ಕಿದರು.

ಡಿಸೆಂಬರ್​ 15, 2024- ಸೈಯದ್​ ಮುಷ್ತಾಕ್​​​ ಅಲಿ ಟ್ರೋಫಿ

2024ರ ಸೈಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲೂ ಶ್ರೇಯಸ್​​ ಅಯ್ಯರ್​​ದು ಡ್ರೀಮ್​ ರನ್​. ಟೂರ್ನಿಯಲ್ಲಿ 188ರ ಸ್ಟ್ರೈಕ್​​ರೇಟ್​​ನಲ್ಲಿ ಘರ್ಜಿಸಿದ ಶ್ರೇಯಸ್​​, 49.28ರ ಸರಾಸರಿಯಲ್ಲಿ ರನ್​​ ಕೊಳ್ಳೆ ಹೊಡೆದ್ರು. ಬ್ಯಾಟಿಂಗ್​ ಜೊತೆಗೆ ನಾಯಕತ್ವದಲ್ಲೂ ಚಾಣಕ್ಯ ನಡೆಯಿಂದ ಗಮನ ಸೆಳೆದರು. ಅಂತಿಮವಾಗಿ ಫೈನಲ್ಸ್​ನಲ್ಲಿ ಮಧ್ಯಪ್ರದೇಶ ವಿರುದ್ಧ ಗೆದ್ದ ಶ್ರೇಯಸ್​​ ನಾಯಕತ್ವದ ಮುಂಬೈ ಚಾಂಪಿಯನ್​ ಆಯಿತು.

ಇದನ್ನೂ ಓದಿ:20 ವರ್ಷಗಳ ಬಳಿಕ ಮತ್ತೆ ಜೀವ ಪಡೆದ ನಟಿ ಸೌಂದರ್ಯ ಕೇಸ್.. 6 ಎಕರೆ ಭೂಮಿಗಾಗಿ ದುರಂತ ನಡೆಸಿದ್ರಾ?

publive-image

ಮಾರ್ಚ್​​ 9, 2025- ಚಾಂಪಿಯನ್ಸ್​ ಟ್ರೋಫಿ

ಐಪಿಎಲ್​, ಡೊಮೆಸ್ಟಿಕ್​ ಕ್ರಿಕೆಟ್​​ನ ಸಕ್ಸಸ್​​ನೊಂದಿಗೆ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ ಶ್ರೇಯಸ್​ ಅಯ್ಯರ್​ ಚಾಂಪಿಯನ್​​ ಟ್ರೋಫಿಯಲ್ಲಿ ಚಾಂಪಿಯನ್​ ಆಟವಾಡಿದರು. ಮಿಡಲ್​ ಆರ್ಡರ್​ನಲ್ಲಿ ಜವಾಬ್ದಾರಿಯುತ ಆಟವಾಡಿದ ಶ್ರೇಯಸ್, ಕನ್ಸಿಸ್ಟೆಂಟ್​ ಆಗಿ ಪರ್ಫಾಮ್​ ಮಾಡಿದರು. 4ನೇ ಕ್ರಮಾಂಕದಲ್ಲಿ ಮಿಂಚಿದ ಮುಂಬೈಕರ್​ ಟೀಮ್​ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಅಂದು ಬಿಸಿಸಿಐ ಬಾಸ್​​ಗಳ ಕೆಂಗಣ್ಣಿಗೆ ಗುರಿಯಾಗಿ ಟೀಮ್​ ಇಂಡಿಯಾದಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್​ ಇದೀಗ 1 ವರ್ಷದ ಅಂತರದಲ್ಲಿ 5 ಪ್ರತಿಷ್ಠಿತ ಟ್ರೋಫಿ ಗೆದ್ದು ಬೀಗಿದ್ದಾರೆ. ಇಂಪ್ರೆಸ್ ಆಗಿರೋ ಬಾಸ್​​ಗಳು ಕೂಡ ಮತ್ತೆ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ನೀಡಲು ಮುಂದಾಗಿದ್ದಾರೆ. ನಿಜವಾದ ಕಮ್​ಬ್ಯಾಕ್​ ಅಂದ್ರೆ ಇದೇ ಅಲ್ವಾ.?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment